Advertisement
MIRROR FOCUS

ಪರಿಸರ ಉಳಿಸಲು ಮಹಿಳೆಯರ ಪ್ರಯತ್ನ | 200 ಹೊಂಡಗಳ ಮೂಲಕ ಮಳೆ ನೀರು ಕೊಯ್ಲು | ಬತ್ತಿ ಹೋಗಿದ್ದ ಜಲಮೂಲಗಳಿಗೆ ಜೀವಕಳೆ ತಂದ ನಾರಿಯರು

Share
ಪರಿಸರ ರಕ್ಷಣೆ, ಪರಿಸರ ಕಾಳಜಿ, ಕಾಡು ಉಳಿಸಿ ಇತ್ಯಾದಿ ಘೋಷಣೆ ನಡೆಯುತ್ತಲೇ ಇರುತ್ತದೆ. ವಾಸ್ತವಕ್ಕೆ ಬಂದಾಗ ಅಂತಹದ್ದು ಕಾರ್ಯರೂಪದಲ್ಲಿ ಬೆರಳೆಣಿಕೆಯಷ್ಟೇ..!. ಆದರೆ ಮಹಿಳೆಯರೇ ಇಂತಹ ಅಭಿಯಾನಕ್ಕೆ ಇಳಿದಾಗ ಯಶಸ್ವಿಯೂ ಆಗುತ್ತದೆ.ಅದಕ್ಕೆ ಉದಾಹರಣೆ ಉತ್ತರ ಪ್ರದೇಶದ ರುದ್ರಪ್ರಯಾಗ ಜಿಲ್ಲೆಯ ರಾಣಿಗಢ ಬೆಲ್ಟ್‌ನ ಸಭಾ ಕೋಟ್‌ನ 30 ಮಹಿಳೆಯರು.
ರುದ್ರಪ್ರಯಾಗ ಜಿಲ್ಲೆಯ ರಾಣಿಗಢ ಬೆಲ್ಟ್‌ನ ಸಭಾ ಕೋಟ್‌ನ 30 ಮಹಿಳೆಯರು ಐದು ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಮಳೆ ನೀರು ಸಂರಕ್ಷಣೆಗಾಗಿ ಒಂದು ತಿಂಗಳಿಂದ ನಿರಂತರವಾಗಿ ಶ್ರಮಿಸಿದ ಫಲವಾಗಿ 200 ದೊಡ್ಡ ಹೊಂಡಗಳನ್ನು ನಿರ್ಮಾಣವಾಗಿವೆ.ಮಳೆ ಬಂದರೆ ಈ ಹೊಂಡಗಳಲ್ಲಿ ಅಂದಾಜು ಒಂದು ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತಿದೆ. ಗ್ರಾಮದ ಮೇಲಿರುವ ಅರಣ್ಯ ಪ್ರದೇಶದಲ್ಲಿ ನೀರು ಸಂಗ್ರಹವಾಗುತ್ತಿರುವುದರಿಂದ, ಸುತ್ತಮುತ್ತ ಬತ್ತಿ ಹೋಗಿದ್ದ ಜಲಮೂಲಗಳಿಗೆ ಜೀವ ಕಳೆ ಬಂದಿದೆ.ಇಷ್ಟಕ್ಕೇ ನಿಲ್ಲಲಿಲ್ಲ, ಈ ಗುಂಪು  500 ಹೊಂಡಗಳನ್ನು ತೋಡಲು ಯೋಜನೆಗಳನ್ನು ರೂಪಿಸಿಕೊಂಡಿದೆ.………ಮುಂದೆ ಓದಿ……..
ಉತ್ತರಾಖಂಡದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯು ಹಿಮಾಲಯ ರಾಜ್ಯದಲ್ಲಿ ಅನಾಹುತವನ್ನು ಉಂಟುಮಾಡಿರಬಹುದು, ಆದರೆ ಇದು ಪರಿಸರ ಸಂರಕ್ಷಣೆಗೆ ಇಂತಹ ಅನಾಹುತಗಳು ಅಡ್ಡಿಯಾಗಲಿಲ್ಲ ಎನ್ನುವುದು ಗಮನಾರ್ಹವಾದ ಸಂಗತಿಯಾಗಿದೆ.
ರುದ್ರಪ್ರಯಾಗದ ಈ ಮಹಿಳೆಯರು ಕಳೆದ ಒಂದು ತಿಂಗಳಿಂದ ಮಳೆನೀರು ಕೊಯ್ಲು ಮತ್ತು ಅರಣ್ಯ ಸಂರಕ್ಷಣೆಗಾಗಿ ಕೆಲಸ ಮಾಡಿದ್ದಾರೆ. ನೀರಿನ ಸಂರಕ್ಷಣೆಗಾಗಿ ಕೋಟ್ ಗ್ರಾಮದ ಮಹಿಳೆಯರು ಮಿಶ್ರ ಗಿಡಗಳನ್ನು ನೆಡಲು  ಹೊಂಡಗಳನ್ನೂ ನಿರ್ಮಿಸಿದರು. ಇವುಗಳಲ್ಲಿ ಹರೇಳ ಹಬ್ಬದಂದು ಸಸಿಗಳನ್ನು ನೆಡಲಾಗುವುದು. ಈ ಮಿಶ್ರ ಅರಣ್ಯದಲ್ಲಿ ಆರ್ಥಿಕತೆಯೊಂದಿಗೆ ಸಂಪರ್ಕ ಸಾಧಿಸಲು ಹಾಗೂ ರಿಂಗಲ್ ಸಸಿ ನೆಡುವುದರಿಂದ ಭವಿಷ್ಯದಲ್ಲಿ ಸಣ್ಣ ಕರಕುಶಲ ಉದ್ಯಮ ವೃದ್ಧಿಗೆ ಸಹಾಯವಾಗುತ್ತದೆ. ಅಲ್ಲದೆ ಜಲ ಸಂರಕ್ಷಣೆಯ ಜೊತೆಗೆ ಅರಣ್ಯ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುತ್ತಿದ್ದು, ಇದರಲ್ಲಿ 50 ಜಾತಿಯ ಹಿಮಾಲಯದ ಗಿಡಗಳನ್ನು ನೆಡಲಾಗುತ್ತದೆ.ಈ ಸಸ್ಯಗಳಲ್ಲಿ ಓಕ್, ಬುರಾನ್ಶ್, ಕಫಲ್, ದೇವದಾರ್, ಭಮೋರ್, ಚಮ್ಖಾಡಿ ಪ್ರಮುಖವಾಗಿವೆ.
ಈ ಮಹಿಳಾ ತಂಡಕ್ಕೆ ಮಾರ್ಗದರ್ಶನ ನೀಡುವ ಪರಿಸರ ತಜ್ಞ ದೇವರಾಘವೇಂದ್ರ ಸಿಂಗ್ ಮಾತನಡುತ್ತಾ, ಸಿಂಗಲಾಸ್ ದೇವತಾ ಮಿಶ್ರ ಅರಣ್ಯವನ್ನು ಮಹಿಳೆಯರು ಮತ್ತು ಗ್ರಾಮದ ಮುಖಂಡರ ಸಹಕಾರದೊಂದಿಗೆ ಮಿಶ್ರ ಅರಣ್ಯವನ್ನು ವಿಶ್ವಾದ್ಯಂತ ಪರಿಸರ ಸಂರಕ್ಷಣೆಯ ಮಾದರಿಯನ್ನಾಗಿ ಮಾಡಲಾಗುವುದು ಎನ್ನುತ್ತಾರೆ. ಇಲ್ಲಿ  ಒಂದು ಸಾವಿರ ಮಿಶ್ರ ಸಸ್ಯಗಳನ್ನು ನೆಡಲಾಗುವುದು ಎಂದು ಹೇಳುತ್ತಾರೆ.

ಪರಿಸರ ಸಂರಕ್ಷಣೆಯ ಹಾದಿಯನ್ನು ತೋರಿಸಿಕೊಟ್ಟ ಈ ಮಾರ್ಗವು ನನಗೆ ಸಂತಸದ ಕ್ಷಣವಾಗಿದೆ ಎಂದು ಗ್ರಾಮದ ಮುಖ್ಯಸ್ಥೆ ಕೋಟ್ ಸುಮನ್ ದೇವಿ ಹೇಳುತ್ತಾರೆ. ತಮ್ಮ ಗ್ರಾಮಸಭೆಯಲ್ಲಿ ನೀರು ಮತ್ತು ಅರಣ್ಯ ಸಂರಕ್ಷಣೆಯ ಕೆಲಸವನ್ನು ಮೊದಲ ಬಾರಿಗೆ ಮತ್ತು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ, ಅವರು MNREGA ಯೋಜನೆಗಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇಲ್ಲಿ ಅರಣ್ಯ ಪ್ರದೇಶದ ಸುತ್ತಮುತ್ತ ಸುಮಾರು 100 ಕುಟುಂಬಗಳು ವಾಸವಾಗಿವೆ. ಅವುಗಳಲ್ಲಿ ಹೆಚ್ಚಿನವು ನೈಸರ್ಗಿಕ ನೀರಿನ ಮೂಲಗಳನ್ನು ಅವಲಂಬಿಸಿವೆ. ಆ ಜಲಮೂಲಗಳ ನೀರಿನ ಮಟ್ಟ ಹೆಚ್ಚಿಸುವ ದೃಷ್ಟಿಯಿಂದಲೂ ಈ ಕೆಲಸ ಮಾಡಲಾಗುತ್ತಿದೆ. ನೀರಿನ ಸಂರಕ್ಷಣೆಯನ್ನು ಸಾಂಪ್ರದಾಯಿಕವಾಗಿ ಮಾಡಲಾಗುತ್ತದೆ. ಇದರಲ್ಲಿ ಇಳಿಜಾರಾದ ಸ್ಥಳಗಳು ಮತ್ತು ನೀರಿನ ಮೂಲಗಳ ಸುತ್ತಲೂ ಕಚ್ಚಿ ಚಾಲ್ ಖಲ್, ಖಂತಿಯಾ ಗುಂಡಿಗಳನ್ನು ನಿರ್ಮಾಣ ಮಾಡುವ ಮೂಲಕ ಮಳೆ ನೀರನ್ನು ನಿಲ್ಲಿಸಲಾಗುತ್ತದೆ. ಮಳೆ ನೀರನ್ನು ಭೂಮಿ ಇಂಗುವಂತೆ ಮಾಡಲಾಗುತ್ತದೆ. ಈ ಕಾರಣದಿಂದಾಗಿ, ಮಣ್ಣಿನ ಸವೆತವೂ ನಿಲ್ಲುತ್ತದೆ. ಮತ್ತು ನೈಸರ್ಗಿಕ ನೀರಿನ ಮೂಲಗಳು ಮರುಪೂರಣಗೊಳ್ಳುತ್ತವೆ. ಸುತ್ತಲೂ ತೇವಾಂಶ ಇರುವುದರಿಂದ ಜೀವವೈವಿಧ್ಯವು ಸೃಷ್ಟಿಯಾಗುತ್ತದೆ.

Source : Etv Bharath English

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

5 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

12 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

23 hours ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

1 day ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

2 days ago

ತೆಂಗಿನ ಮರದಿಂದ 3 ಕೋಟಿ ಜನರಿಗೆ ಬದುಕು…!, ಈಗ ₹7,038 ಕೋಟಿ ರಫ್ತು!

ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…

2 days ago