ಬಹಳ ಗಂಭೀರ ಪರಿಸರ ಚರ್ಚೆ ಗಾಡ್ಗೀಳ್(Gadgil), ಕಸ್ತೂರಿ ರಂಗನ್ ವರದಿಗಳು(Kasturi Rangan report) ಮಳೆಗಾಲದಲ್ಲಿ(Rain season) ಗುಡ್ಡ – ಭೂಕುಸಿತ(Land slide) ಆದ ತಕ್ಷಣ ಧುತ್ತೆಂದು ಎದ್ದು ಶುರುವಾಗುತ್ತದೆ. ಜನರ ಮನಸ್ಸನ್ನು ಪರಿಸರ(Environment) ಪರ ಮಾಡುವುದು ಹರ ಸಾಹಸದ ಕೆಲಸ. ಯಾರು ಆದರ್ಶರು… ಈ ದೃಷ್ಟಿಯಿಂದ ಮಾರ್ಗದರ್ಶಿಸಬಲ್ಲರು ಎಂಬ ಪಶ್ನೆಗೆ ಅನೇಕ ಸಲ ಉತ್ತರ ಸಿಗದು. ಅನುಷ್ಠಾನ-ಕಾನೂನು ಜಾರಿ – ನೀತಿ ರೂಪಿಸುವುದು ನಾವೆಲ್ಲರೂ ಒಪ್ಪಿಕೊಂಡ ರಾಜಕಾರಣದ ಮತ್ತು ಅಧಿಕಾರಿಗಳ ವ್ಯವಸ್ಥೆಯಡಿ ಇದೆ.
ಇವತ್ತು ಗ್ರಾಮಗಳಲ್ಲಿ ಜೆಸಿಬಿ(JCB), ದೊಡ್ಡ ಮರಳ ಲಾರಿ-ಟಿಪ್ಪರ್, ಬೋರೆವೆಲ್ ಯಂತ್ರ(Borewell) …ಯಾರ ಕೈಲಿದೆ ? ಇವಕ್ಕೆಲ್ಲ ಕೆಲಸಬೇಕು. ಸುಮ್ಮನೆ ಕೂರುವ ಸ್ವಭಾವ ಅವುಗಳಿಗಿಲ್ಲ ! ಗುಡ್ಡದ ನೆತ್ತಿ ಸವರುವುದೊ, ಗುಡ್ಡದ ಬುಡವನ್ನು ಕೆರೆಯುವುದೊ, ಆಳದ ಕೊಳವೆಬಾವಿ ಕೊರೆಯುವುದೊ ಏನಾದರೊಂದನ್ನು ದಿನನಿತ್ಯ ಮಾಡುತ್ತಿರುತ್ತವೆ.
ಗ್ರಾಮಮಟ್ಟದ ರಾಜಕಾರಣಿಗಳೆ ಬಹುತೇಕ ಇವುಗಳ ಒಡೆಯರು. ಹೆಚ್ಚಿನ ಕಡೆ ಗ್ರಾಮದ ಈ ಪುಟ್ಟ ಪುಡಾರಿಗಳೆ ಇಂದಿನ ಗ್ರಾಮ ಪಂಚಾಯತ್ ಸದಸ್ಯರುಗಳು. ಇವರುಗಳೆ ದೊಡ್ಡ ರಾಜಕಾರಣಿಗಳನ್ನು ಉಳಿಸುವ ಕವಲು ಬೇರುಗಳು. ಪರಸ್ಪರ ಇವರಲ್ಲಿ ಬಹಳ ಸ್ನೇಹ- ಸಂಬಂಧ. ಉಳಿಸುವವರ ದನಿ ಹಾರಾಡುವ ಈ ಪುಡಾರಿಗಳ – ಅಧಿಕಾರಿಗಳ ಮುಂದೆ ಕೇಳುವುದೆ ? ಗೋಮಾಳ, ಹುಲ್ಲುಬನ್ನಿ ಹರಾಜು, ಬ್ಯಾಣ, ಸೊಪ್ಪಿನ ಬೆಟ್ಟ …ಇದು ಆಗಾಗ ಕೇಳುವ ಪದಗಳು. ಕಾಣಲು ಎಲ್ಲಿದೆ ಅದು ? ಸಾತ್ವಿಕ ಜನ ಸಂಘಟನೆಯೊಂದೇ ಪರಿಹಾರ ತರಬಲ್ಲದು… ಉತ್ಸಾಹ ತುಂಬುವ ಭಾಷಣದ ಮಾತು… ಸಂಘಟಿಸುವ ಯುವ ಸಮುದಾಯ ಇಂದು ಗ್ರಾಮದಲ್ಲೆಲ್ಲಿದೆ. ಇದ್ದವರನ್ನು ಒಪ್ಪಿಕೊಳ್ಳುವ ಹಸಿರ ಸಂಗಾತಿ ಗೆಳತಿಯರು ಎಲ್ಲಿದ್ದಾರೆ ?
ಗ್ರಾಮದಲ್ಲಿ ಒಂದು ಕಾಲದಲ್ಲಿ ಸಹೋದರರಂತೆ ಇದ್ದ ವಿವಿಧ ಸಮುದಾಯಗಳ ಒಡೆದು ರಾಜಕಾರಣ ಮಾಡುವ ಪಕ್ಷಗಳಿಗೆ ಹಸಿರು – ಭೂಮಿ ರಾಜಕಾರಣದ, ಮತಗಳಿಕೆಯ ವಸ್ತು. ಗುಡ್ಡ ಕುಸಿದಾಗ – ಮಣ್ಣಿನೊಳಗೆ ಜೀವ ಸಿಕ್ಕಾಗ ಪಶ್ಚಿಮಘಟ್ಟ , ಪಶ್ಚಿಮಘಟ್ಟ ಸುದ್ದಿ ಮಾಧ್ಯಮಗಳ ಮುಖಪುಟದಲ್ಲಿ… ಕುಸಿದಿರುವುದು – ಕುಸಿಯುತ್ತಿರುವುದು ಗುಡ್ಡ – ಬೆಟ್ಟ -ಕಣಿವೆ ಅಲ್ಲ … ನಮ್ಮೆಲ್ಲರಲ್ಲಿದ್ದ ಜೀವಪ್ರಜ್ಞೆ – ಜೀವನ ಪ್ರಜ್ಞೆ ನಿತ್ಯ ಕುಸಿಯುತ್ತಿದೆ. ಯಾವ ಯಂತ್ರ – ಸೈನ್ಯ ಇದನ್ನು ತಡೆದೀತು ? ಸುಸ್ಥಿರ ಅಭಿವೃದ್ಧಿ ಅಂದರೆ ಹೀಗೆ ಅನ್ನುವ ಅಂಶಗಳನ್ನು ಸವಿವರವಾಗಿ ಪಟ್ಟಿಮಾಡಬೇಕು. ಸವಲತ್ತು ಮತ್ತು ಅವಶ್ಯಕತೆಗಳ ನಡುವೆ ಸಮನ್ವಯ ಸಾಧಿಸದಿದ್ದರೆ ಉಳಿವು ಮಾತು ಹಾಗೆಯೆ ಉಳಿದು ಬಿಡುತ್ತದೆ. ಆರಂಭದ ವಾಕ್ಯ ಮತ್ತೆ ನೆನಪಾಗುತ್ತೆ – ಮೇಲ್ಪಂಕ್ತಿ ಯಾರು?
ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ 5 ಸಾವಿರದ 171 ಹೆಕ್ಟೇರ್ ಪ್ರದೇಶದಲ್ಲಿ ಯೋಜನೆ…
ಕಿಸಾನ್ ಸಮ್ಮಾನ್ ನಿಧಿಯಿಂದ 9 ಕೋಟಿ 50 ಲಕ್ಷ ರೈತರಿಗೆ 21 ಸಾವಿರ…
ತುಮಕೂರು ಜಿಲ್ಲೆಯಲ್ಲಿ 1351 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ 9.40…
ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿನ ಜೈವಿಕ ತ್ಯಾಜ್ಯಗಳನ್ನು ನಗರಸಭೆ ಕಸ ಹಾಗೂ ಜನನಿಬಿಡ ಪ್ರದೇಶಗಳಲ್ಲಿ…
ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ 16 ಸಾವಿರದ 114…
ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಪ್ರಸಿದ್ದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ…