Advertisement
Opinion

ಪಶ್ಚಿಮಘಟ್ಟ ಅಂದ ತಕ್ಷಣ ಅತ್ಯಂತ ಸೂಕ್ಷ್ಮ ಪ್ರದೇಶ ಎಂಬ ಧ್ವನಿ ಮಾತ್ರ ಹೊರಡುತ್ತದೆ | ಕಾರ್ಯದಲ್ಲಿ ಇಲ್ಲದ ರಕ್ಷಣೆ

Share

ಬಹಳ ಗಂಭೀರ ಪರಿಸರ ಚರ್ಚೆ ಗಾಡ್ಗೀಳ್(Gadgil), ಕಸ್ತೂರಿ ರಂಗನ್ ವರದಿಗಳು(Kasturi Rangan report) ಮಳೆಗಾಲದಲ್ಲಿ(Rain season) ಗುಡ್ಡ – ಭೂಕುಸಿತ(Land slide) ಆದ ತಕ್ಷಣ ಧುತ್ತೆಂದು ಎದ್ದು ಶುರುವಾಗುತ್ತದೆ. ಜನರ ಮನಸ್ಸನ್ನು ಪರಿಸರ(Environment) ಪರ ಮಾಡುವುದು ಹರ ಸಾಹಸದ ಕೆಲಸ. ಯಾರು ಆದರ್ಶರು… ಈ ದೃಷ್ಟಿಯಿಂದ ಮಾರ್ಗದರ್ಶಿಸಬಲ್ಲರು ಎಂಬ ಪಶ್ನೆಗೆ ಅನೇಕ ಸಲ ಉತ್ತರ ಸಿಗದು. ಅನುಷ್ಠಾನ-ಕಾನೂನು ಜಾರಿ – ನೀತಿ ರೂಪಿಸುವುದು ನಾವೆಲ್ಲರೂ ಒಪ್ಪಿಕೊಂಡ ರಾಜಕಾರಣದ ಮತ್ತು ಅಧಿಕಾರಿಗಳ ವ್ಯವಸ್ಥೆಯಡಿ ಇದೆ.

ಇವತ್ತು ಗ್ರಾಮಗಳಲ್ಲಿ ಜೆಸಿಬಿ(JCB), ದೊಡ್ಡ ಮರಳ ಲಾರಿ-ಟಿಪ್ಪರ್, ಬೋರೆವೆಲ್ ಯಂತ್ರ(Borewell) …ಯಾರ ಕೈಲಿದೆ ? ಇವಕ್ಕೆಲ್ಲ ಕೆಲಸಬೇಕು. ಸುಮ್ಮನೆ ಕೂರುವ ಸ್ವಭಾವ ಅವುಗಳಿಗಿಲ್ಲ ! ಗುಡ್ಡದ ನೆತ್ತಿ ಸವರುವುದೊ, ಗುಡ್ಡದ ಬುಡವನ್ನು ಕೆರೆಯುವುದೊ, ಆಳದ ಕೊಳವೆಬಾವಿ ಕೊರೆಯುವುದೊ ಏನಾದರೊಂದನ್ನು ದಿನನಿತ್ಯ ಮಾಡುತ್ತಿರುತ್ತವೆ.

ಗ್ರಾಮಮಟ್ಟದ ರಾಜಕಾರಣಿಗಳೆ ಬಹುತೇಕ ಇವುಗಳ ಒಡೆಯರು. ಹೆಚ್ಚಿನ ಕಡೆ ಗ್ರಾಮದ ಈ ಪುಟ್ಟ ಪುಡಾರಿಗಳೆ ಇಂದಿನ ಗ್ರಾಮ ಪಂಚಾಯತ್ ಸದಸ್ಯರುಗಳು. ಇವರುಗಳೆ ದೊಡ್ಡ ರಾಜಕಾರಣಿಗಳನ್ನು ಉಳಿಸುವ ಕವಲು ಬೇರುಗಳು. ಪರಸ್ಪರ ಇವರಲ್ಲಿ ಬಹಳ ಸ್ನೇಹ- ಸಂಬಂಧ. ಉಳಿಸುವವರ ದನಿ ಹಾರಾಡುವ ಈ ಪುಡಾರಿಗಳ – ಅಧಿಕಾರಿಗಳ ಮುಂದೆ ಕೇಳುವುದೆ ? ಗೋಮಾಳ, ಹುಲ್ಲುಬನ್ನಿ ಹರಾಜು, ಬ್ಯಾಣ, ಸೊಪ್ಪಿನ ಬೆಟ್ಟ …ಇದು ಆಗಾಗ ಕೇಳುವ ಪದಗಳು. ಕಾಣಲು ಎಲ್ಲಿದೆ ಅದು ? ಸಾತ್ವಿಕ ಜನ ಸಂಘಟನೆಯೊಂದೇ ಪರಿಹಾರ ತರಬಲ್ಲದು… ಉತ್ಸಾಹ ತುಂಬುವ ಭಾಷಣದ ಮಾತು… ಸಂಘಟಿಸುವ ಯುವ ಸಮುದಾಯ ಇಂದು ಗ್ರಾಮದಲ್ಲೆಲ್ಲಿದೆ. ಇದ್ದವರನ್ನು ಒಪ್ಪಿಕೊಳ್ಳುವ ಹಸಿರ ಸಂಗಾತಿ ಗೆಳತಿಯರು ಎಲ್ಲಿದ್ದಾರೆ ?

ಗ್ರಾಮದಲ್ಲಿ ಒಂದು ಕಾಲದಲ್ಲಿ ಸಹೋದರರಂತೆ ಇದ್ದ ವಿವಿಧ ಸಮುದಾಯಗಳ ಒಡೆದು ರಾಜಕಾರಣ ಮಾಡುವ ಪಕ್ಷಗಳಿಗೆ ಹಸಿರು – ಭೂಮಿ ರಾಜಕಾರಣದ, ಮತಗಳಿಕೆಯ ವಸ್ತು. ಗುಡ್ಡ ಕುಸಿದಾಗ – ಮಣ್ಣಿನೊಳಗೆ ಜೀವ ಸಿಕ್ಕಾಗ ಪಶ್ಚಿಮಘಟ್ಟ , ಪಶ್ಚಿಮಘಟ್ಟ ಸುದ್ದಿ ಮಾಧ್ಯಮಗಳ ಮುಖಪುಟದಲ್ಲಿ… ಕುಸಿದಿರುವುದು – ಕುಸಿಯುತ್ತಿರುವುದು ಗುಡ್ಡ – ಬೆಟ್ಟ -ಕಣಿವೆ ಅಲ್ಲ … ನಮ್ಮೆಲ್ಲರಲ್ಲಿದ್ದ ಜೀವಪ್ರಜ್ಞೆ – ಜೀವನ ಪ್ರಜ್ಞೆ ನಿತ್ಯ ಕುಸಿಯುತ್ತಿದೆ. ಯಾವ ಯಂತ್ರ – ಸೈನ್ಯ ಇದನ್ನು ತಡೆದೀತು ? ಸುಸ್ಥಿರ ಅಭಿವೃದ್ಧಿ ಅಂದರೆ ಹೀಗೆ ಅನ್ನುವ ಅಂಶಗಳನ್ನು ಸವಿವರವಾಗಿ ಪಟ್ಟಿಮಾಡಬೇಕು. ಸವಲತ್ತು ಮತ್ತು ಅವಶ್ಯಕತೆಗಳ ನಡುವೆ ಸಮನ್ವಯ ಸಾಧಿಸದಿದ್ದರೆ ಉಳಿವು ಮಾತು ಹಾಗೆಯೆ ಉಳಿದು ಬಿಡುತ್ತದೆ. ಆರಂಭದ ವಾಕ್ಯ ಮತ್ತೆ ನೆನಪಾಗುತ್ತೆ – ಮೇಲ್ಪಂಕ್ತಿ ಯಾರು?

ಬರಹ :
ಆನಂದ ಆ. ಶ್ರೀ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 06-06-2026 | ಮುಂಗಾರು ಬಂದರೂ ಮಳೆ ಇಲ್ಲ! – ಕರ್ನಾಟಕದಲ್ಲಿ ಮುಂದಿನ ವಾರದ ಹವಾಮಾನ ಹೇಗಿರಲಿದೆ?

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…

48 minutes ago

ಭಾರತದ ಚೆಸ್ ಇತಿಹಾಸದಲ್ಲಿ ಹೊಸ ಅಧ್ಯಾಯ – ನಾರ್ವೆ ಚೆಸ್ ಕಿರೀಟ ಗೆದ್ದ ಮೊದಲ ಭಾರತೀಯ ಪ್ರಜ್ಞಾನಂದ

ನಾರ್ವೆ ಚೆಸ್ 2026 ಟೂರ್ನಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸವನ್ನು…

5 hours ago

ಜೇನುಗೂಡುಗಳ ಕೊರತೆಯಿಂದ ಪರಾಗಸ್ಪರ್ಶ ವ್ಯವಸ್ಥೆ ಮೇಲೆ ಪರಿಣಾಮ ; ಕೃಷಿ ಕ್ಷೇತ್ರದಲ್ಲಿ ಆತಂಕ – ಆಹಾರ ಬೆಳೆ ಉತ್ಪಾದನೆಗೆ ಸಂಕಷ್ಟದ ಎಚ್ಚರಿಕೆ

ಆಸ್ಟ್ರೇಲಿಯಾದಲ್ಲಿ ವರೋವಾ ಮೈಟ್ ಹಾವಳಿಯಿಂದ ಜೇನುನೊಣಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದ್ದು, ಆಹಾರ ಬೆಳೆಗಳ…

16 hours ago

ಕಾಸರಗೋಡು ಜಿಲ್ಲೆಯಲ್ಲಿ ನಾಳೆ ಶಾಲಾ-ಕಾಲೇಜುಗಳಿಗೆ ರಜೆ – ರೆಡ್ ಅಲರ್ಟ್ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜೂನ್ 6ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ಶಿಕ್ಷಣ…

18 hours ago

ಮಲೆನಾಡಿನ ಸಂಕಷ್ಟವೇ ಅವಕಾಶವಾಗಬಹುದೇ? : ‘ನಿರಪೇಕ್ಷಿತ ಕಾಡು ಕೃಷಿ’ ಹೊಸ ಪರಿಕಲ್ಪನೆ

ಮಲೆನಾಡಿನ ಕೃಷಿ ಸಮಸ್ಯೆಗಳನ್ನು ಪ್ರವಾಸೋದ್ಯಮದ ಅವಕಾಶಗಳಾಗಿ ಪರಿವರ್ತಿಸುವ ಹೊಸ ಪರಿಕಲ್ಪನೆಯನ್ನು ಪ್ರಬಂಧ ಅಂಬುತೀರ್ಥ…

18 hours ago

ನಿಷೇಧಿತ ಗುಟ್ಕಾ ಮಾರಾಟಕ್ಕೆ ಕಡಿವಾಣ | FDA ದಾಳಿ, 14 ಮಂದಿ ಬಂಧನ – ₹32 ಲಕ್ಷ ಮೌಲ್ಯದ ವಸ್ತು ವಶ

ಮಹಾರಾಷ್ಟ್ರ FDA ದಾಳಿಯಲ್ಲಿ 14 ಮಂದಿ ಬಂಧನವಾಗಿದ್ದು, ₹32 ಲಕ್ಷ ಮೌಲ್ಯದ ನಿಷೇಧಿತ…

18 hours ago