Advertisement
Opinion

ಬಿಸಿಲ ಬೇಗೆ ಏರುತ್ತಿದ್ದಂತೆ ಸಾಮಾನ್ಯವಾಗಿ ಕಾಡುವ ಸಮಸ್ಯೆ | ಉರಿಮೂತ್ರ ಏಕಾಗುತ್ತದೆ? ಮನೆಮದ್ದುಗಳನ್ನು ನೋಡಿ!!

Share

ಬಿಸಿಲು ಬೇಗೆ(Summer) ಏರಿದಂತೆ, ತಾಪ(Temparature) ಹೆಚ್ಚಾದಾಗ ಅನೇಕರಿಗೆ ಹೊಸ ಸಂಕಟ ಶುರುವಾಗುತ್ತದೆ. ಅದೆಂದರೆ ಉರಿಮೂತ್ರ. ಮೂತ್ರ ವಿಸರ್ಜಿಸುವಾಗ ವಿಪರೀತ ಉರಿ, ಮೂತ್ರನಾಳದ ಉರಿಯೂತ ಮತ್ತು ಕೆಲವೊಮ್ಮೆ ರಕ್ತಸ್ರಾವವಾಗುತ್ತದೆ. ಈ ಸಮಸ್ಯೆ ಮುಖ್ಯವಾಗಿ ಬೇಸಿಗೆಯಲ್ಲಿ ಕಂಡುಬರುತ್ತದೆ. ಅಂತಹ ಸಂದರ್ಭಗಳಲ್ಲಿ ಮೂತ್ರದಲ್ಲಿ ರಕ್ತ ಅಥವಾ ಮೋಡದ ಇಲ್ಲವೆ ಕೆಂಪು ಕಂದು ಬಣ್ಣಕ್ಕೆ ತಿರುಗುತ್ತದೆ. ಬೇಸಿಗೆಯ ಈ ಸಮಸ್ಯೆಯನ್ನು ಹೇಗೆ ಎದುರಿಸುವುದು ಮತ್ತು ಅದರ ಮನೆಮದ್ದುಗಳನ್ನು ನಾವು ನೋಡಲಿದ್ದೇವೆ!!

ಉರಿಮೂತ್ರಕ್ಕೆ ಕಾರಣಗಳು..! : ಬೇಸಿಗೆಯಲ್ಲಿ ಬೆವರಿನಿಂದ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ನೀರಿನ ನಷ್ಟವು ಮೂತ್ರದಲ್ಲಿ ಉಪ್ಪಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಮೂತ್ರದಲ್ಲಿ ಈ ಅಧಿಕ ಸಾಂದ್ರತೆಯ ಉಪ್ಪಿನಂಶ ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿತವನ್ನು ಉಂಟುಮಾಡುತ್ತದೆ’. ಈ ಸಮಸ್ಯೆ ಪುರುಷರು ಹಾಗೂ ಮಹಿಳೆಯರಲ್ಲಿ ಸ್ವಲ್ಪ ಭಿನ್ನವಾಗಿ ಕಂಡುಬರುತ್ತದೆ. ಪುರುಷರಲ್ಲಿ, ಮೂತ್ರ ಮತ್ತು ಮೂತ್ರನಾಳದ ಉರಿ ಮತ್ತು ಸುಡುವಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಆದರೆ, ಮಹಿಳೆಯರಲ್ಲಿ, ಅದೇ ರೋಗಲಕ್ಷಣಗಳು ಸ್ವಲ್ಪ ಹೆಚ್ಚು ತೀವ್ರವಾಗಿರುತ್ತವೆ. ಮಹಿಳೆಯರು ಸುಡುವ ಸಂವೇದನೆ ಮತ್ತು ಮೂತ್ರದಲ್ಲಿ ರಕ್ತಸ್ರಾವದಿಂದ ಬಳಲುತ್ತಾರೆ. ಇದರಿಂದ, ಚಿಕ್ಕ ಮಕ್ಕಳೂ ಕೂಡ ಹೊರತಾಗಿಲ್ಲ. , ಈ ಸಮಸ್ಯೆಗೆ ಕೆಲವು ಮನೆಮದ್ದುಗಳಿವೆ. ಬನ್ನಿನೋಡೋಣ!! . . .

ಪರಿಹಾರ
1. ಮೊದಲ ಮತ್ತು ಅಗ್ರಗಣ್ಯ ಪರಿಹಾರವೆಂದರೆ ‘ಸಾಕಷ್ಟು ನೀರು ಕುಡಿಯುವುದು.’
2. ಅಡುಗೆ ಸೋಡಾ ಮತ್ತು ನಿಂಬೆಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ.
3. ಎಳನೀರನ್ನು ಕುಡಿಯಿರಿ.
4. ಕೊತ್ತಂಬರಿ ಬೀಜ, ಜೀರಿಗೆ, ಸೋಂಪನ್ನು ನೆನೆಸಿ, ಅದರಲ್ಲಿ ಕಲ್ಲು ಸಕ್ಕರೆ ಬೆರೆಸಿ ಕುಡಿಯಿರಿ.
5. ಅಧಿಕ ನೀರಿನಂಶ ಇರುವ ಹಂಗಾಮಿ ಹೆಣ್ಣುಗಳ ರಸವನ್ನು ಕುಡಿಯಿರಿ. ಉದಾ. ಕಲ್ಲಂಗಡಿ, ಪುಟ್ಟಿ ಹಣ್ಣು, ಕಿತ್ತಳೆ, ಮೋಸಂಬಿ, ಇತ್ಯಾದಿ. ಹಣ್ಣುಗಳನ್ನು ತಿನ್ನುವುದು ಇನ್ನೂ ಉತ್ತಮ.
6. ಕೊತ್ತಂಬರಿ ಸೊಪ್ಪು ಮತ್ತು ಬೆಲ್ಲದೊಂದಿಗೆ ಎಳೆನೀರನ್ನು ಕುಡಿಯಿರಿ.
7. ನೀರಾ ಕುಡಿಯುವುದು ಕೂಡ ಪ್ರಯೋಜನಕಾರಿ.

8. ಆಮ್ಸೋಲ್ (ಕೋಕಂ) ನೀರು, ಅಥವಾ ಅದರ ಪಾನಕ/ಶರಬತ್ತು ಮಾಡಿ ಕುಡಿಯಬಹುದು.
9. ಕಚ್ಚಾ ಮಾವಿನ ಪಾನಕದಲ್ಲಿ ಏಲಕ್ಕಿ ಬೆರೆಸಿ ಸೇವಿಸಬಹುದು.
10. ಪುದೀನಾ ನೀರು ಕುಡಿಯಿರಿ!!
11. ಪ್ರತಿದಿನ ಒಂದೆರಡು ಏಲಕ್ಕಿಯನ್ನು ತಿನ್ನಬೇಕು.
12. ನೆನೆಸಿದ ಸುಣ್ಣವನ್ನು ಮಕ್ಕಳ ಈ ಲೇಪಿಸಿಕೊಳ್ಳಿ. ಇದರಿಂದ ತಕ್ಷಣದ ಪರಿಹಾರ ದೊರೆಯುತ್ತದೆ.
13 ಒಂದು ಬಕೆಟ್‌ಗೆ ತಣ್ಣೀರು ತುಂಬಿಸಿ ಅದರಲ್ಲಿ ನಿಮ್ಮ ಕಾಲುಗಳನ್ನು ಇಟ್ಟು ಕೆಲ ನಿಮಿಷ ಕುಳಿತುಕೊಳ್ಳಿ…

ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

2 days ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

2 days ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

2 days ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

2 days ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

2 days ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

3 days ago