ಮಕ್ಕಳ(Children) ಪಾಲಿಗೆ ಪರೀಕ್ಷೆ(Exam) ಅನ್ನೋದು ಕಬ್ಬಿಣದ ಕಡಲೇ ಕಾಯಿ. ಜೀವನದ ಪ್ರಮುಖ ಘಟ್ಟಗಳು ಹೌದು, ಹತ್ತನೇ ತರಗತಿ(SSLC) ಹಾಗೂ ಪಿಯುಸಿಯಲ್ಲಿ(PUC) ಮಕ್ಕಳು ಅಗತ್ಯವಾಗಿ ಪರೀಕ್ಷೆಗಳನ್ನು ಎದುರಿಸಲೇ ಬೇಕು. ಹೆಚ್ಚಿನ ಅಂಕ(Marks) ಗಳಿಸಿದರೆ ಅವರ ಮುಂದಿನ ಕಲಿಕೆಯ ಹಾದಿ ಸುಗಮವಾಗುತ್ತದೆ. ಹಾಗಾಂತ ಎಲ್ಲಾ ಮಕ್ಕಳು ಜಾಸ್ತಿ ಅಂಕಗಳನ್ನೇ ಪಡೆಯೋದು ಅಸಾಧ್ಯ. ಅದನ್ನು ಪೋಷಕರು(Parents) ಹಾಗೂ ಮಕ್ಕಳು , ಹಾಗೇ ಶಿಕ್ಷಕರು(Teachers) ಅರಿತಿರಬೇಕು. ಪರೀಕ್ಷೆಯಲ್ಲಿ ಪಾಸು ಫೇಲ್(Pass-Fail) ಆಗೋದು ಸಾಮಾನ್ಯ. ಪಾಸ್ ಆದವ್ರು ಬುದ್ದಿವಂತರಲ್ಲ, ಫೇಲ್ ಆದವರು ದಡ್ಡರಲ್ಲ. ಹಾಗಾಗಿ ಪಾಸ್-ಫೇಲ್ ಎಂಬುದು ಜೀವನದ ಒಂದು ಭಾಗ ಅಷ್ಟೇ. ಫೇಲ್ (Fail) ಆದ ಕೂಡಲೇ ಯಾವುದೇ ಕಾರಣಕ್ಕೂ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಬೇಡ. ನಿಮ್ಮ ಭವಿಷ್ಯ(Future) ಇನ್ನೂ ಸಾಕಷ್ಟಿದೆ ಈ ಕುರಿತು ಮಾನಸಿಕ ಆರೋಗ್ಯ ತಜ್ಞರಾದ(Psychiatrist) ಡಾ. ವಿನಯ್ ಅವರು ತಿಳಿಸಿರುವ ಮಾಹಿತಿ ಇಲ್ಲಿದೆ.
ಆತುರದ ನಿರ್ಧಾರ ಬೇಡ : ಹೌದು, ಪರೀಕ್ಷೆ ಎಂದಿಗೂ ನಮ್ಮ ಜೀವನ ನಿರ್ಧಾರ ಮಾಡುವುದಿಲ್ಲ. ಫೇಲ್ ಆದವರು ಕೂಡ ಜೀವನದಲ್ಲಿ ಸಾಧನೆ ಮಾಡಿದ್ದಾರೆ. ಹಾಗಾಗಿ ಪರೀಕ್ಷೆಯ ಫಲಿತಾಂಶ ಬಂದ ನಂತರದಲ್ಲಿ ಎಂದಿಗೂ ನಾವುಗಳು ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡವೇ ಬೇಡ. ನನ್ನ ಜೀವನ ಮುಗಿಯಿತು ಈ ತರಹದ ನಿರ್ಧಾರಗಳನ್ನ ಎಂದಿಗೂ ದಯವಿಟ್ಟು ತೆಗೆದುಕೊಳ್ಳಬೇಡಿ ಎಂದು ಖ್ಯಾತ ಮಾನಸಿಕ ತಜ್ಞರಾದ ಡಾ. ವಿನಯ್ ಅವ್ರು ತಿಳಿಸುತ್ತಾರೆ.
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…