ಮಕ್ಕಳ(Children) ಪಾಲಿಗೆ ಪರೀಕ್ಷೆ(Exam) ಅನ್ನೋದು ಕಬ್ಬಿಣದ ಕಡಲೇ ಕಾಯಿ. ಜೀವನದ ಪ್ರಮುಖ ಘಟ್ಟಗಳು ಹೌದು, ಹತ್ತನೇ ತರಗತಿ(SSLC) ಹಾಗೂ ಪಿಯುಸಿಯಲ್ಲಿ(PUC) ಮಕ್ಕಳು ಅಗತ್ಯವಾಗಿ ಪರೀಕ್ಷೆಗಳನ್ನು ಎದುರಿಸಲೇ ಬೇಕು. ಹೆಚ್ಚಿನ ಅಂಕ(Marks) ಗಳಿಸಿದರೆ ಅವರ ಮುಂದಿನ ಕಲಿಕೆಯ ಹಾದಿ ಸುಗಮವಾಗುತ್ತದೆ. ಹಾಗಾಂತ ಎಲ್ಲಾ ಮಕ್ಕಳು ಜಾಸ್ತಿ ಅಂಕಗಳನ್ನೇ ಪಡೆಯೋದು ಅಸಾಧ್ಯ. ಅದನ್ನು ಪೋಷಕರು(Parents) ಹಾಗೂ ಮಕ್ಕಳು , ಹಾಗೇ ಶಿಕ್ಷಕರು(Teachers) ಅರಿತಿರಬೇಕು. ಪರೀಕ್ಷೆಯಲ್ಲಿ ಪಾಸು ಫೇಲ್(Pass-Fail) ಆಗೋದು ಸಾಮಾನ್ಯ. ಪಾಸ್ ಆದವ್ರು ಬುದ್ದಿವಂತರಲ್ಲ, ಫೇಲ್ ಆದವರು ದಡ್ಡರಲ್ಲ. ಹಾಗಾಗಿ ಪಾಸ್-ಫೇಲ್ ಎಂಬುದು ಜೀವನದ ಒಂದು ಭಾಗ ಅಷ್ಟೇ. ಫೇಲ್ (Fail) ಆದ ಕೂಡಲೇ ಯಾವುದೇ ಕಾರಣಕ್ಕೂ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಬೇಡ. ನಿಮ್ಮ ಭವಿಷ್ಯ(Future) ಇನ್ನೂ ಸಾಕಷ್ಟಿದೆ ಈ ಕುರಿತು ಮಾನಸಿಕ ಆರೋಗ್ಯ ತಜ್ಞರಾದ(Psychiatrist) ಡಾ. ವಿನಯ್ ಅವರು ತಿಳಿಸಿರುವ ಮಾಹಿತಿ ಇಲ್ಲಿದೆ.
ಆತುರದ ನಿರ್ಧಾರ ಬೇಡ : ಹೌದು, ಪರೀಕ್ಷೆ ಎಂದಿಗೂ ನಮ್ಮ ಜೀವನ ನಿರ್ಧಾರ ಮಾಡುವುದಿಲ್ಲ. ಫೇಲ್ ಆದವರು ಕೂಡ ಜೀವನದಲ್ಲಿ ಸಾಧನೆ ಮಾಡಿದ್ದಾರೆ. ಹಾಗಾಗಿ ಪರೀಕ್ಷೆಯ ಫಲಿತಾಂಶ ಬಂದ ನಂತರದಲ್ಲಿ ಎಂದಿಗೂ ನಾವುಗಳು ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡವೇ ಬೇಡ. ನನ್ನ ಜೀವನ ಮುಗಿಯಿತು ಈ ತರಹದ ನಿರ್ಧಾರಗಳನ್ನ ಎಂದಿಗೂ ದಯವಿಟ್ಟು ತೆಗೆದುಕೊಳ್ಳಬೇಡಿ ಎಂದು ಖ್ಯಾತ ಮಾನಸಿಕ ತಜ್ಞರಾದ ಡಾ. ವಿನಯ್ ಅವ್ರು ತಿಳಿಸುತ್ತಾರೆ.
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…
ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…