ಪರೀಕ್ಷೆ ಭಯದ ನಂತರ ಈಗ ರಿಸಲ್ಟ್‌ ಭಯ | ಫೇಲ್‌, ಕಡಿಮೆ ಅಂಕ ಚಿಂತೆ ಬಿಡಿ | ಮಕ್ಕಳ ಜೊತೆ ನಿಲ್ಲಿ ಪೋಷಕರೇ..

April 12, 2024
9:37 PM

ಮಕ್ಕಳ(Children) ಪಾಲಿಗೆ ಪರೀಕ್ಷೆ(Exam) ಅನ್ನೋದು ಕಬ್ಬಿಣದ ಕಡಲೇ ಕಾಯಿ. ಜೀವನದ ಪ್ರಮುಖ ಘಟ್ಟಗಳು ಹೌದು, ಹತ್ತನೇ ತರಗತಿ(SSLC) ಹಾಗೂ ಪಿಯುಸಿಯಲ್ಲಿ(PUC) ಮಕ್ಕಳು ಅಗತ್ಯವಾಗಿ ಪರೀಕ್ಷೆಗಳನ್ನು ಎದುರಿಸಲೇ ಬೇಕು. ಹೆಚ್ಚಿನ ಅಂಕ(Marks) ಗಳಿಸಿದರೆ ಅವರ ಮುಂದಿನ ಕಲಿಕೆಯ ಹಾದಿ ಸುಗಮವಾಗುತ್ತದೆ. ಹಾಗಾಂತ ಎಲ್ಲಾ ಮಕ್ಕಳು ಜಾಸ್ತಿ ಅಂಕಗಳನ್ನೇ ಪಡೆಯೋದು ಅಸಾಧ್ಯ. ಅದನ್ನು ಪೋಷಕರು(Parents) ಹಾಗೂ ಮಕ್ಕಳು , ಹಾಗೇ ಶಿಕ್ಷಕರು(Teachers) ಅರಿತಿರಬೇಕು. ಪರೀಕ್ಷೆಯಲ್ಲಿ ಪಾಸು ಫೇಲ್(Pass-Fail) ಆಗೋದು ಸಾಮಾನ್ಯ. ಪಾಸ್ ಆದವ್ರು ಬುದ್ದಿವಂತರಲ್ಲ, ಫೇಲ್ ಆದವರು ದಡ್ಡರಲ್ಲ. ಹಾಗಾಗಿ ಪಾಸ್-ಫೇಲ್ ಎಂಬುದು ಜೀವನದ ಒಂದು ಭಾಗ ಅಷ್ಟೇ. ಫೇಲ್ (Fail) ಆದ ಕೂಡಲೇ ಯಾವುದೇ ಕಾರಣಕ್ಕೂ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಬೇಡ. ನಿಮ್ಮ ಭವಿಷ್ಯ(Future) ಇನ್ನೂ ಸಾಕಷ್ಟಿದೆ ಈ ಕುರಿತು ಮಾನಸಿಕ ಆರೋಗ್ಯ ತಜ್ಞರಾದ(Psychiatrist) ಡಾ. ವಿನಯ್ ಅವರು ತಿಳಿಸಿರುವ ಮಾಹಿತಿ ಇಲ್ಲಿದೆ.

ಆತುರದ ನಿರ್ಧಾರ ಬೇಡ : ಹೌದು, ಪರೀಕ್ಷೆ ಎಂದಿಗೂ ನಮ್ಮ ಜೀವನ ನಿರ್ಧಾರ ಮಾಡುವುದಿಲ್ಲ. ಫೇಲ್ ಆದವರು ಕೂಡ ಜೀವನದಲ್ಲಿ ಸಾಧನೆ ಮಾಡಿದ್ದಾರೆ. ಹಾಗಾಗಿ ಪರೀಕ್ಷೆಯ ಫಲಿತಾಂಶ ಬಂದ ನಂತರದಲ್ಲಿ ಎಂದಿಗೂ ನಾವುಗಳು ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡವೇ ಬೇಡ. ನನ್ನ ಜೀವನ ಮುಗಿಯಿತು ಈ ತರಹದ ನಿರ್ಧಾರಗಳನ್ನ ಎಂದಿಗೂ ದಯವಿಟ್ಟು ತೆಗೆದುಕೊಳ್ಳಬೇಡಿ ಎಂದು ಖ್ಯಾತ ಮಾನಸಿಕ ತಜ್ಞರಾದ ಡಾ. ವಿನಯ್ ಅವ್ರು ತಿಳಿಸುತ್ತಾರೆ.

ಪೋಷಕರ ಪಾತ್ರ ಮುಖ್ಯ! : ಪರೀಕ್ಷೆ ಹಾಗೂ ಪರೀಕ್ಷೆಯ ನಂತರದಲ್ಲಿ ಮಕ್ಕಳ ಅಂಕಗಳ ವಿಚಾರ, ಮಕ್ಕಳು ಫೇಲ್ ಆದಾಗ ಅವರನ್ನು ಪೋಷಕರ ಮಾತು, ಪ್ರೋತ್ಸಾಹವೂ ಮುಖ್ಯವಾಗುತ್ತದೆ. ಕಡಿಮೆ ಅಂಕ ಗಳಿಸಿದ್ದಕ್ಕಾಗಿ, ಫೇಲ್‌ ಆದ ಕಾರಣಕ್ಕಾಗಿ ಮಕ್ಕಳನ್ನ ದೂಷಿಸದೇ ಪೋಷಕರು ಅವರು ಜೊತೆಗಿದ್ದು ಆತ್ಮವಿಶ್ವಾಸ ತುಂಬುವುದು ಮುಖ್ಯ.
  • ಅಂತರ್ಜಾಲ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಚೆಸ್ ಚಾಂಪಿಯನ್‌ ಶಿಪ್‌ ಗೆ ಸಜ್ಜು – ಆಗಸ್ಟ್ 2 ರಿಂದ 8 ರವರೆಗೆ ದೇಶದ 600ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ
July 25, 2026
7:44 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ
July 25, 2026
6:46 AM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
July 24, 2026
9:47 PM
by: ದ ರೂರಲ್ ಮಿರರ್.ಕಾಂ
ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ
July 24, 2026
9:05 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror