ಉತ್ತರಾಖಂಡದ ಹಿಮಾಲಯ ಪ್ರದೇಶದ ಕೇದಾರನಾಥ ಹಿಂದೆ ಶನಿವಾರ ಭಾರೀ ಹಿಮಕುಸಿತ (avalanche) ಸಂಭವಿಸಿದೆ. ದೇವಾಲಯಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಮಾಹಿತಿಯ ಪ್ರಕಾರ, ಕೇದಾರನಾಥದ ಹಿಂದಿನ ಹಿಮನದಿಯು ಕಳೆದ ತಿಂಗಳಿನಿಂದ ಎರಡನೇ ಬಾರಿಗೆ ಹಿಮದಿಂದ ಮುಳುಗಿದೆ.ಶನಿವಾರ ಬೆಳಗ್ಗೆ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ದೇಗುಲದಿಂದ ಸುಮಾರು 6-7 ಕಿಲೋಮೀಟರ್ ದೂರದಲ್ಲಿರುವ ಚೋರಬರಿ ಗ್ಲೇಶಿಯಲ್ ಸರೋವರ ಪ್ರದೇಶದ ಕೇದಾರ್ ಶಿಖರ ಪ್ರದೇಶದಲ್ಲಿ ಭಾರಿ ಹಿಮಕುಸಿತ ಸಂಭವಿಸಿತ್ತು. ಕೇದಾರನಾಥ ದೇಗುಲದ ಮೂಲಕ ಹರಿಯುವ ಮಂದಾಕಿನಿ ನದಿಯ ಉಪನದಿಯಾದ ಸರಸ್ವತಿ ನದಿಯಲ್ಲಿ ಯಾವುದೇ ಜೀವಹಾನಿ, ಆಸ್ತಿಪಾಸ್ತಿ ಅಥವಾ ನೀರಿನ ಮಟ್ಟದಲ್ಲಿ ಹೆಚ್ಚಳದ ಬಗ್ಗೆ ವರದಿಯಾಗಿಲ್ಲ ಮತ್ತು ಎಂದಿನಂತೆ ಯಾತ್ರೆ ನಡೆಯುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.ಕಳೆದ ತಿಂಗಳು ಸೆಪ್ಟೆಂಬರ್ 22 ರಂದು ಇದೇ ಪ್ರದೇಶದಲ್ಲಿ ಹಿಮಕುಸಿತ ವರದಿಯಾಗಿತ್ತು.ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…
ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…
ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…