MIRROR FOCUS

ಆರುಷಿ ಮೈ ಡಾಟರ್ ಯೋಜನೆ ಜಾರಿಗಾಗಿ ಜಾಗೃತಿ | ಹೆಣ್ಣು ಭ್ರೂಣ ಹತ್ಯೆ ತಡೆಗೆ ಸಮಾಜ ಸೇವಕನ ಪಾದಯಾತ್ರೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಜಗತ್ತು, ದೇಶ, ತಂತ್ರಜ್ಞಾನ ಎಷ್ಟೇ ಮುಂದುವರೆದರು ಹೆಣ್ಣು, ಗಂಡು ಎಂಬ ಕೀಳು ಭಾವನೆ ಇನ್ನು ಸಂಪೂರ್ಣವಾಗಿ ಹೋದಂತಿಲ್ಲ. ಈಷ್ಟೆಲ್ಲಾ ಶಿಕ್ಷಣ ಇದ್ರೂ ಜನ ಬದಲಾಗಿಲ್ಲ. ಹೆಣ್ಣು-ಗಂಡು ಮಕ್ಕಳು ಒಂದೇ. ಹೆಣ್ಣು (Girl Child)ಕೂಡ ಗಂಡು ಮಕ್ಕಳಷ್ಟೇ ಸಮರ್ಥಳು ಅನ್ನೋದನ್ನು ಅದೆಷ್ಟೋ ಮಂದಿ ಇವಾಗಲೂ ಒಪ್ಪಿಕೊಳ್ಳಲು ತಯಾರಿಲ್ಲ. ಈ ನಿಟ್ಟಿನಲ್ಲಿ ಹೆಣ್ಣು ಭ್ರೂಣ ಹತ್ಯೆ (Fetusicide) ತಡೆಯಲು ಸಮಾಜ ಸೇವಕ ಹೊನ್ನಾಳಿ ನಗರದ ಚನ್ನೇಶ್.ಸಿ.ಎಂ ಜಕ್ಕಾಳಿ ಕನ್ಯಾಕುಮಾರಿಯಿಂದ ಸೆ 23 ರಿಂದ ದೆಹಲಿಯವರೆಗೂ ಪಾದಯಾತ್ರೆ ಮೂಲಕ ಜನ ಜಾಗೃತಿ(Public awareness) ಮೂಡಿಸಿ ದೇಶದ ಗಮನ ಸೆಳೆಯಲು ಮುಂದಾಗಿದ್ದಾರೆ.

Advertisement
Advertisement

ಈ ಹಿನ್ನೆಲೆಯಲ್ಲಿ ದೇಶದ ಗಮನ ಸೆಳೆಯಲು ಆರುಷಿ ಮೈ ಡಾಟರ್ ಅನುಷ್ಠಾನ ಕನ್ಯಾಕುಮಾರಿಯಿಂದ ಪಾದಯಾತ್ರೆ ಹೊರಟಿದ್ದು, ಅ.19ಕ್ಕೆ ದಾವಣಗೆರೆಗೆ ಆಗಮಿಸಲಿದೆ. ಯಶಸ್ವಿ ಇಪ್ಪತ್ತೊಂದನೆ ದಿನದ ಪಾದಯಾತ್ರೆ ಇದಾಗಿದೆ. ಹೆಣ್ಣು ಭ್ರೂಣ ಹತ್ಯೆ ಖಂಡಿಸಿ ಹಲವಾರು ವರ್ಷಗಳಿಂದ ಒಂದಿಲ್ಲೊಂದು ರೀತಿಯ ಹೊರಾಟ ನಡೆಯುತ್ತಿದ್ದರೂ ಅದಕ್ಕೆ ಬೇಕಾದ ಕಾನೂನು ನೆರಳು ಇದ್ದರೂ ಸಹಿತ ಅನುಷ್ಠಾನ ಮಾಡುವಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು, ವಿಫಲವಾಗಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ನಿಂತಿದೆಯೇ ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ದೊರಕಿಲ್ಲ.

ಪ್ರಸ್ತುತ ದಿನಮಾನಗಳಲ್ಲಿ ಯುವಕರಿಗೆ ವಿವಾಹವಾಗಲು ಹೆಣ್ಣು ಸಿಗುತ್ತಿಲ್ಲ ಎಂಬ ಬಲವಾದ ಕೂಗು ಕೇಳಿ ಬರುತ್ತಿದ್ದು ಇದೆ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಉಲ್ಬಣ ಆಗಬಹುದೆಂಬ ಆತಂಕ ಇದ್ದೆ ಇದೆ. ಇದಕ್ಕೆಲ್ಲ ಉತ್ತರ ನೀಡಬೇಕಾದ ಇಲಾಖೆ ಜನಪ್ರತಿನಿಧಿಗಳು ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎನ್ನುವ ಕೂಗು ಸಾರ್ವಜನಿಕರ ವಲಯದಿಂದ ಕೇಳಿಬರುತ್ತಿದೆ. ಇದಕ್ಕೆಲ್ಲ ನವೀನ ಮಾದರಿಯ ಮೂಲಕ ತಾಯಿಯ ಗರ್ಭಾವಸ್ಥೆಯಿಂದಲೇ ಭ್ರೂಣವನ್ನು ಡಿಜಿಟಲ್ ಕೋಡ್ ನೀಡುವ ಮೂಲಕ ಹೆಣ್ಣು ಭ್ರೂಣ ತಡೆಗಟ್ಟುವ ಹಾಗೂ ಹೆಣ್ಣು ಸಂತತಿ ಉಳಿಸುವ ಪಣ ತೊಟ್ಟು ರಾಜ್ಯ ಮತ್ತು ಕೇಂದ್ರ ಸಚಿವರುಗಳ ಗಮನ ಸೆಳೆದು ಚರ್ಚಿಸಿದ್ದಾದರೂ ಅನುಷ್ಠಾನ ಆಗದಿರುವ ಬಗ್ಗೆ ಚನ್ನೇಶ್.ಸಿ.ಬೇಸರ ವ್ಯಕ್ತಪಡಿಸುತ್ತಾರೆ.

ಭ್ರೂಣ ಹತ್ಯೆ ತಡೆಗೆ ನವೀನ ಗುರುತಿನ ಮಾದರಿ ಬೇಕಾಗಿದೆ. ಬಹುತೇಕ ಸೌಲಭ್ಯಕ್ಕಾಗಿ ಪ್ರಸ್ತುತ ಗುರುತಿನ ಚೀಟಿಯಂತೆ ಇರುವ ಆಧಾರ್ ಕಾರ್ಡ್ನಂತೆ ತಾಯಿಯ (ಗರ್ಭಿಣಿಯಾದ ಮಹಿಳೆ) ಭ್ರೂಣದಿಂದಲೆ ಹೆರಿಗೆ ನಂತರದ ಆರೈಕೆಯ ಹಂತದವರೆಗೂ ಈ ನಂಬರ್ ಬಳಕೆ ಮಾಡಬೇಕು. ಆದ್ದರಿಂದ ಆರುಷಿ (ಮೈ ಡಾಟರ್) ನಡಿ ಪ್ರಸ್ತುತ ಸರ್ಕಾರದಲ್ಲಿ ಇರುವ ಆರುಷಿ ಯೋಜನೆಯ ಮೂಲಕ ಆರೋಗ್ಯ ಸಹಾಯಕಿಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸೇವೆಯ ಮೂಲಕ ಈ ಯೋಜನೆಯನ್ನು  ಸುಲಭವಾಗಿ ಅನುಷ್ಠಾನಗೊಳಿಸಬಹುದು ಎನ್ನುತ್ತಾರೆ ಚನ್ನೇಶ್.

To prevent female foeticide, social worker Channesh CM Jakkali of Honnali Nagar has started a walk from Kanyakumari to Delhi from September 23 to raise public awareness and attract the attention of the country. Aarushi My Daughter’s implementation of Padayatra started from Kanyakumari and will arrive at Davangere on 19th. This was a successful twenty-first day trek.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 23.05.2025 | ಮುಂದಿನ 10 ದಿನಗಳವರೆಗೂ ರಾಜ್ಯದಲ್ಲಿ ಉತ್ತಮ ಮಳೆ

24.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

4 hours ago

ತೆಲಿಕೆದ ಬೊಳ್ಳಿ ಅರವಿಂದ್ ಬೋಳಾರ್ ಇವರಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಕಡೆಯಿಂದ ಸನ್ಮಾನ

ಬೆಳ್ತಂಗಡಿಯ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವಿನೂತನ ಶೋರೂಮ್ ಉದ್ಘಾಟನೆ ಸಮಾರಂಭದ ಹಿನ್ನೆಲೆಯಲ್ಲಿ…

4 hours ago

ಅಪಾರ ಏಕಾದಶಿಯ ನಾಲ್ಕು ಶುಭಯೋಗ | ಐದು ರಾಶಿಯವರಿಗೆ ವಿಷ್ಣುವಿನ ಅನುಗ್ರಹ ಪ್ರಾಪ್ತಿ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

13 hours ago

ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ

ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಸಂಪಾಜೆ ಗ್ರಾಮ ಪಂಚಾಯತ್…

21 hours ago

ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ

ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 852.6 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದ್ದು,…

22 hours ago

ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್

ಬೆಂಗಳೂರಿನಲ್ಲಿ  ಈ ಹಿಂದೆ  ಕಸ ವಿಲೇವಾರಿಗೆ 98 ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು. ಈ…

22 hours ago