Opinion

ಬಹುಗುಣಕಾರಿ ಅಂಟುವಾಳಕಾಯಿಯ ಆಯುರ್ವೇದ ಪ್ರಯೋಜನಗಳು | ಅಡ್ಡ ಪರಿಣಾಮಗಳಿಲ್ಲದ ನೈಸರ್ಗಿಕ ಮಾರ್ಜಕ |

Share

ಬಹಳ ಹಿಂದೆ ನಮ್ಮ ಹಿರಿಯರು  ಸ್ವಚ್ಛತೆಗಾಗಿ  ಸೋಪುಗಳ(Soap) ಬದಲು ಅಂಟುವಾಳ ಕಾಯಿಯನ್ನೇ(Soap nut) ಅವಲಂಬಿಸಿದ್ದರು. ಇಂದಿಗೂ ಚಿನ್ನಾಭರಣಗಳನ್ನು(Gold Ornaments) ಸ್ವಚ್ಛಗೊಳಿಸಲು ಅಂಟುವಾಳ ಕಾಯಿಯನ್ನೇ ನೆಚ್ಚಿಕೊಂಡಿದ್ದವರಿದ್ದಾರೆ. ಏಕೆಂದರೆ ಇದೊಂದು ನೈಸರ್ಗಿಕ ಮಾರ್ಜಕವಾಗಿದ್ದು(Natural Detergent) ಯಾವುದೇ ಅಡ್ಡ ಪರಿಣಾಮಗಳಿಲ್ಲದಿರುವುದು, ಯಾವುದೇ ಹಾನಿಕಾರಕ ರಾಸಾಯನಿಕವಿಲ್ಲದಿರುವುದು(Harmful chemical), ಚರ್ಮಕ್ಕೆ(Skin) ಸುರಕ್ಷಿತವಾಗಿರುವುದು ಮೊದಲಾದವು ಹೆಚ್ಚಿನ ಜನಪ್ರಿಯತೆಗೆ ಕಾರಣವಾಗಿತ್ತು.

ಆದರೆ ಇದನ್ನು ಸಂಗ್ರಹಿಸುವುದು ಮತ್ತು ಉಪಯೋಗಿಸುವ ಮುನ್ನ ಕೊಂಚ ಜಜ್ಜಿ ರಸ ತೆಗೆಯುವುದು ಮೊದಲಾದ ಶ್ರಮದ ಕೆಲಸಗಳಿರುವುದರಿಂದ ಇಂದಿನ ಧಾವಂತದ ಯುಗದಲ್ಲಿ ಅಂಟುವಾಳ ಯಾರಿಗೂ ಬೇಡವಾಗಿದೆ. ಆದರೆ ಇಂದಿಗೂ ಹಸಿಯಾಗಿ ಸಿಗದಿದ್ದರೂ ಒಣಫಲಗಳ ರೂಪದಲ್ಲಿ ಅಂಟುವಾಳ ಕಾಯಿ ಗ್ರಂಥಿಗೆ ಅಂಗಡಿಗಳಲ್ಲಿ ದೊರಕುತ್ತದೆ. ನೀರನ್ನು ಸಿಂಪಡಿಸಬಲ್ಲ ವ್ಯವಸ್ಥೆಯಿರುವ ಬಾಟಲಿಯೊಂದರಲ್ಲಿ ಕಾಲು ಲೀಟರ್ ನೀರು, ತಲಾ ಹದಿನೈದು ಮಿಲಿಲೀಟರ್ ನಷ್ಟು ಅಂಟುವಾಳ ರಸ ಸೇರಿಸಿ ಮಿಶ್ರಣ ಮಾಡಿ. ಈ ನೀರನ್ನು ಗಾಜಿನ ಮೇಲೆ ಸಿಂಪಡಿಸಿ ಒಣಗಿರುವ ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಗಾಜುಗಳು ಸ್ಪಟಿಕದಂತೆ ಹೊಳೆಯುತ್ತವೆ.

ಅಂಟುವಾಳ ಕಾಯಿಯನ್ನು ನೀರಿನಲ್ಲಿ ನೆನೆಸಿ ಆ ನೀರಿನಲ್ಲಿ ವಿಗ್ರಹಗಳನ್ನು ಮುಳುಗಿಸಿಡಿ. ಸುಮಾರು ಅರ್ಧ ಗಂಟೆ ಅಥವಾ ಒಂದು ಗಂಟೆಯ ಬಳಿಕ ವಿಗ್ರಹವನ್ನು ಹೊರತೆಗೆದು ಇದೇ ನೀರಿನಲ್ಲಿ ಅದ್ದಿದ ಹತ್ತಿಯ ಒರಟು ಬಟ್ಟೆಯಿಂದ ಕೊಂಚ ಒತ್ತಡ ನೀಡಿ ಒರೆಸಿ. ತುಕ್ಕು ಸುಲಭವಾಗಿ ನಿವಾರಣೆಯಾಗಿ ವಿಗ್ರಹಗಳು ತಮ್ಮ ಮೂಲಬಣ್ಣದಲ್ಲಿ ಹೊಳೆಯುತ್ತವೆ. ಚಿನ್ನಾಭರಣಗಳನ್ನು ಅಂಟುವಾಳ ಕಾಯಿಯ ಪುಡಿ ಬೆರೆಸಿದ ನೀರಿನಲ್ಲಿ ನೆನೆಸಿ  ಸುಮಾರು ಐದು ನಿಮಿಷಗಳ ಬಳಿಕ ಹಳೆಯ ಮೃದುವಾದ ಹಲ್ಲುಜ್ಜುವ ಬ್ರಶ್ ತೆಗೆದುಕೊಂಡು ನಯವಾಗಿ ಉಜ್ಜಿ ಕೊಳೆಯನ್ನು ತೆಗೆಯಿಸಿ. ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿ. ನಿಮ್ಮ ಚಿನ್ನಾಭರಣಗಳು ಹೊಸತರಂತೆ ಹೊಳೆಯುತ್ತವೆ.

ಮನೆಯ ಅಂದ ಹೆಚ್ಚಿಸುವ ರತ್ನಗಂಬಳಿಯ ಸ್ವಚ್ಛತೆಯೇ ದೊಡ್ಡ ಸಮಸ್ಯೆ. ಏಕೆಂದರೆ ನೀರು ಕುಡಿದ ಬಳಿಕ ಈ ಕಂಬಳಿ ಹೆಣಭಾರವಾಗುತ್ತದೆ. ಇದನ್ನು ಹೊರಲು ಹತ್ತಾರು ಜನರ ಸಹಾಯ ಬೇಕಾಗುತ್ತದೆ. ಬದಲಿಗೆ ಅಂಟುವಾಳ ರಸ ಬೆರೆತ ನೀರನ್ನು ರತ್ನಗಂಬಳಿಯ ಎಲ್ಲೆಡೆ ನವಿರಾಗಿ ಸಿಂಪಡಿಸಿ ಕೊಂಚ ಹೊತ್ತಿನ ಬಳಿಕ ಬ್ರಶ್ ಮೂಲಕ ಅಥವಾ ವ್ಯಾಕ್ಯೂಮ್ ಕ್ಲೀನರ್ ಮೂಲಕ ಸ್ವಚ್ಛಗೊಳಿಸಿ. ಇದರಿಂದ ಕಂಬಳಿಯನ್ನು ಅದರ ಸ್ಥಾನದಿಂದ ತೆಗೆಯದೆಯೇ ಸ್ವಚ್ಛಗೊಳಿಸಬಹುದು. ಇದು ಒಣಗಲೂ ಅತಿ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಹೆಚ್ಚೂ ಕಡಿಮೆ ಸ್ವಚ್ಛಗೊಳಿಸಿದ ಮರುಕ್ಷಣವೇ ಇದನ್ನು ಬಳಸಲು ಪ್ರಾರಂಭಿಸಬಹುದು.

ಇನ್ನು ಚರ್ಮ ಹಾಗೂ ಕೂದಲಿಗೆ ಅಂಟುವಾಳ ಕಾಯಿ ಹೇಳಿ ಮಾಡಿಸಿದಂತಾಗಿದೆ. ರಾಸಾಯಿನಕ ವಸ್ತುಗಳನ್ನು ಬಳಸಿದ ಸೋಪು ಅಥವಾ ಶಾಂಪು ಬದಲು ಅಂಟುವಾಳ ಕಾಯಿ ಪುಡಿ ಬಳಸಿದರೆ ಉತ್ತಮ. ಇದಲ್ಲದೆ ಆರೋಗ್ಯ ಸುಧಾರಣೆಗೂ ಅಂಟುವಾಳ ಕಾಯಿ ಬಹಳ ಉಪಯೋಗಿ

  • ದೇಹದ ಉರಿಯೂತವಿದ್ದಲ್ಲಿ ಅಂಟುವಾಳಕಾಯಿ ನೊರೆಯನ್ನು ದೇಹಕ್ಕೆ ಉಜ್ಜಿದರೆ ಉಪಶಮನವಾಗುತ್ತದೆ.
  • ಹೊಟ್ಟೆಯಲ್ಲಿ ಹುಳುಗಳಿರುವ ಕಾರಣ, ಮಕ್ಕಳ ಹೊಟ್ಟೆ ನಿರಂತರವಾಗಿ ನೋವುಂಟುಮಾಡುತ್ತದೆ. ಅಂತಹ ಸಂದರ್ಭದಲ್ಲಿ ಕಾಲು ಗ್ರಾಂ ಅಂಟುವಾಳಕಾಯಿ ಸಿಪ್ಪೆ ಪುಡಿ ಬೆಲ್ಲದಿ ಬೆರೆಸಿ ನೆಕ್ಕಿದರೆ ಹುಳುಗಳು ಬೀಳುತ್ತವೆ.
  • ಕಫ ಅಂಟಿಕೊಂಡಿದ್ದರೆ ಬಾಯಿಯಲ್ಲಿ ಅಂಟುವಾಳಕಾಯಿ ಹಿಡಿದುಕೊಂಡು ಸ್ವಲ್ಪ ಸ್ವಲ್ಪ ಜಗಿಯುತ್ತಿದ್ದರೆ ಕಫ ತೆಳುವಾಗಿ ಹೊರಬರುತ್ತದೆ.
  • ವ್ಯಕ್ತಿಯು ಮೂರ್ಛೆರೋಗದಿಂದ ಬಿದ್ದಿದ್ದರೆ, ಅಂಟುವಾಳಕಾಯಿ ಬೇಯಿಸಿದ ನೀರನ ಹನಿಗಳನ್ನು ಮೂಗಿನಲ್ಲಿ ಬಿಡುವುದು ಉತ್ತಮ ಪರಿಹಾರವಾಗಿದೆ.
  • ಹೊಟ್ಟೆಗೆ ಯಾವುದೇ ರೀತಿಯ ವಿಷ ಸೇರಿದರೆ ಅಂಟುವಾಳಕಾಯಿ ನೀರು ಕುಡಿಯಲು ಕೊಡಬೇಕು. ಇದರಿಂದ ವಾಂತಿಯಾಗುತ್ತದೆ ಮತ್ತು ವಿಷವು ಇಳಿಯುತ್ತದೆ.
  • ಮಸಾಲೆಯುಕ್ತ ಶಿಕೆಕಾಯಿಯನ್ನು ತಯಾರಿಸುವಾಗ ಅಂಟುವಾಳಕಾಯಿ ಬಳಸಲಾಗುತ್ತದೆ. ಇದು ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ.
  • ಅಂಟುವಾಳ ಕಾಯಿಯನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಅರೆದು ಆ ನೀರನ್ನು ದೇಹಕ್ಕೆ ಹಚ್ಚಿದರೆ ದೇಹದಲ್ಲಿ ಮೂಡುವ ಪಿತ್ತದ ಸಮಸ್ಯೆ ಕಡಿಮೆಯಾಗುತ್ತದೆ.
  • ಹಠಾತ್ತನೆ ಮೂತ್ರ ತಡೆ ಉಂಟಾದರೆ, ಉತ್ತತ್ತಿ ಬೀಜಗಳು ಮತ್ತು ಅಂಟುವಾಳಕಾಯಿ ಬೀಜಗಳನ್ನು ನೀರಿನಲ್ಲಿ ತೇಯ್ದು ಕಬ್ಬೊಟ್ಟೆಯ ಮೇಲೆ ಲೇಪಿಸಬೇಕು ಮತ್ತು ಶಾಖ ನೀಡಬೇಕು, ಇದು ಮೂತ್ರವನ್ನು ತೆರವುಗೊಳಿಸುತ್ತದೆ.

ಸಂಗ್ರಹ : ಡಾ. ಜಿತೇಂದ್ರ ಜೋಕಿ

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ

ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…

5 minutes ago

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…

11 minutes ago

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

16 hours ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

16 hours ago

ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…

16 hours ago

ಬೆಳ್ಳಿ ಧರಿಸುವುದು ಎಲ್ಲಾ ರಾಶಿಯವರಿಗೆ ಉತ್ತಮವೇ…? | ಯಾವೆಲ್ಲಾ ರಾಶಿಗಳಿಗಳಿಗೆ ಹಾನಿ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

17 hours ago