ಬದುಕು ಎಂದರೆ ಸಮಸ್ಯೆಗಳ ಪಟ್ಟಿ ಅಲ್ಲ, ಸಾಧ್ಯತೆಗಳ ಸಂಗ್ರಹ. ಪ್ರತಿ ಬೆಳಗ್ಗೆಯೂ ನಮಗೆ ಹೊಸ ಅವಕಾಶವೊಂದನ್ನು ಕೊಡುತ್ತದೆ. ನಿನ್ನೆ ತಪ್ಪಿದುದನ್ನು ಇಂದು ಸರಿಪಡಿಸಲು, ಮನಸ್ಸಿಗೆ ನೆಮ್ಮದಿ ಕೊಡುವುದನರ ಆಯ್ಕೆ ಮಾಡಲು ಮತ್ತು ನಮ್ಮೊಳಗಿನ ಶಕ್ತಿಯನ್ನು ಮತ್ತೆ ನೆನಪಿಸಿಕೊಳ್ಳಲು ಅವಕಾಶ ನೀಡುತ್ತದೆ.
ಸೋಲು ಬದುಕಿನ ಅಂತ್ಯವಲ್ಲ; ಅದು ದಾರಿಯಲ್ಲಿರುವ ಒಂದು ತಿರುವು ಅಷ್ಟೇ. ಕಷ್ಟಗಳು ಶಾಶ್ವತವಲ್ಲ; ಆದರೆ ಅವು ಕಲಿಸುವ ಪಾಠಗಳು ಶಾಶ್ವತ.
ನಾವು ನಿಲ್ಲುವ ಕ್ಷಣಕ್ಕಿಂತ ಮುಂದೆ ಸಾಗುವ ನಿರ್ಧಾರವೇ ಬದುಕನ್ನು ಅರ್ಥಪೂರ್ಣವಾಗಿಸುತ್ತದೆ.
ಇಂದು ದೊಡ್ಡ ಸಾಧನೆ ಮಾಡಲೇಬೇಕೆಂದಿಲ್ಲ. ಒಂದು ಸಣ್ಣ ಒಳ್ಳೆಯ ಚಿಂತನೆ, ಒಂದು ಸಣ್ಣ ನಗು, ಒಂದು ಸಣ್ಣ ಧೈರ್ಯ .. ಇವೇ ಬದುಕಿನ ದೊಡ್ಡ ಶಕ್ತಿ.
ಈ ಕ್ಷಣ ಉಸಿರಾಡುತ್ತಿದ್ದೇವೆ ಅಂದರೆ, ಇನ್ನೂ ಎಲ್ಲವೂ ಸಾಧ್ಯ. ಇಂದಿನ ದಿನ ಒಳ್ಳೆಯದಾಗಲಿ ಎಂದು ನಿರ್ಧರಿಸುವ ಅಧಿಕಾರ ನಮ್ಮ ಕೈಯಲ್ಲೇ ಇದೆ.
ಬದುಕನ್ನು ಭಯದಿಂದಲ್ಲ, ಭರವಸೆಯಿಂದ ನೋಡೋಣ. ಯಾಕೆಂದರೆ ಬದುಕು ನಮ್ಮ ಜೊತೆ ನಡೆದುಕೊಳ್ಳಲು ಸಿದ್ಧವಾಗಿದೆ. ಇಂದಿನ ಶುಭದಿನ ಆರಂಭಿಸೋಣ…. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ….
ಹಲಸಿನ ಹಾಲು, ದಾಳಿಂಬೆ ಸಿಪ್ಪೆಯ ಸಾರ ಮತ್ತು ಸಿಮ್ವಾಸ್ಟಾಟಿನ್ ಬಳಸಿ ವಿಜ್ಞಾನಿಗಳು ವಸಡು…
ಅಡಿಕೆ ನಿಷೇಧಿಸುವ ಬದಲು ಕಲಬೆರಕೆ ಅಡಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ…
ರಂಬುಟಾನ್ ಬೆಲೆ ಕುಸಿದಾಗ ಹಣ್ಣನ್ನು ಫ್ರೀಜ್ ಮಾಡಿ ನಂತರ ಮಾರಾಟ ಮಾಡಿದರೆ ಉತ್ತಮ…
ಕಾಪುವಿನಲ್ಲಿ ನಡೆಯುತ್ತಿರುವ ಕರ್ನಾಟಕ ಸ್ಟೇಟ್ ಸ್ಕೂಲ್ ಚೆಸ್ ಚಾಂಪಿಯನ್ಶಿಪ್ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…
ಕಾಪುವಿನಲ್ಲಿ ಆರಂಭವಾದ ಕರ್ನಾಟಕ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್ಶಿಪ್ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…
ಅಸ್ಸಾಂನ ಇಬ್ಬರು ಅಡಿಕೆ ವ್ಯಾಪಾರಿಗಳಿಗೆ ಸೇರಿದ ₹1.12 ಕೋಟಿ ಮೌಲ್ಯದ 34 ಟನ್…