Opinion

30ಕ್ಕೆ ಮುನ್ನ ಅಮ್ಮನಾಗಿ…!? | ಏಕೆ? ಎಂದು ಕೇಳುವ ಹುಡುಗಿಯರೇ ಇಂದು ಹೆಚ್ಚಾಗಿದ್ದಾರೆ….!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ವಿದ್ಯಾಭ್ಯಾಸ(Education), ನೌಕರಿಯ ಹುಡುಕಾಟ(Searching Job), ಸೂಕ್ತ ವರ(Bride groom) ಸಿಗುತ್ತಿಲ್ಲ, ಹೀಗೆ ನಾನಾ ಕಾರಣಗಳಿಂದಾಗಿ ಹುಡುಗಿಯರು(Girls) ಇಂದು ತಮ್ಮ ಮದುವೆಯನ್ನು(Marriage) ಮುಂದೂಡುತ್ತಾ ಬರುತ್ತಿದ್ದಾರೆ. 30 ವಯಸ್ಸಿನ ನಂತರ ಮದುವೆಯಾಗುವವರ ಸಂಖ್ಯೆಯೂ ಹೆಚ್ಚಾಗಿದೆ. ಮದುವೆಯಾದ ನಂತರ ಕೆಲ ವರ್ಷಗಳ ಕಾಲ ಮಕ್ಕಳ(Child) ಕಿರಿ ಕಿರಿ ಇಲ್ಲದೇ ಹಾಯಾಗಿರೋಣ ಎಂದು ಅಮ್ಮನಾಗುವುದನ್ನು(Mother) ಮುಂದೂಡುವವರೂ ಈಗ ಹೆಚ್ಚಾಗಿದ್ದಾರೆ. ಇಂದಿನ ಯುವತಿಯರಲ್ಲಿ ಅದಾಗಲೇ ಅನಿಯಮಿತ ಮುಟ್ಟು, PCOD ಗಳಂತಹ ಸಂತಾನ ಹೀನತೆಯ ಸಮಸ್ಯೆಗಳು ಹೆಚ್ಹು. ಮದುವೆಯ ಮುಖ್ಯ ಉದ್ದೇಶ ಈ ಎಲ್ಲದರ ನಡುವೆ ಕಳೆದುಹೋಗಿದೆ.

Advertisement
Advertisement

ಇದು ಸರಿಯಾದ ನಿರ್ಧಾರವೇ..?? ಖಂಡಿತವಾಗಿಯೂ ಅಲ್ಲ..! : ನಾವು ಅತ್ಯಂತ ಆರೋಗ್ಯವಂತ – ಶಕ್ತಿವಂತರಾಗಿ ಇದ್ದಾಗ ನಮಗೆ ಮಗು ಜನಿಸಿದರೆ, ಆ ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ. ನಾವು ಅಶಕ್ತರಾದಾಗ, ಅನಾರೋಗ್ಯ ಹೊಂದಿದಾಗ, ಜನಿಸುವ ಮಗು ಖಂಡಿತವಾಗಿಯೂ ಸದೃಢ ಇರುವುದಿಲ್ಲ. 20 ರಿಂದ 25 ವಯಸ್ಸಿನ ನಡುವೆ ನಾವು ಅತ್ಯಂತ ಶಕ್ತಿವಂತರಾಗಿರುತ್ತೇವೆ. ಹೀಗಾಗಿ ಈ ಅವಧಿಯಲ್ಲಿನ ಮದುವೆ – ಮಕ್ಕಳು ಅತ್ಯಂತ ಸೂಕ್ತ. ಸ್ವಲ್ಪ ತಡವಾಗಿದೆ ಎಂದರೂ ಕೂಡ 30ರೊಳಗೆ ಅಮ್ಮನಾಗುವುದು ಒಳ್ಳೆಯದು. ಏಕೆಂದರೆ 30 ರ ನಂತರ ಸಂತಾನ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. 35 ರಷ್ಟು ಹೊತ್ತಿಗೆ ಮಹಿಳೆಯರ ಸಂತಾನ ಶಕ್ತಿ 50 ಪ್ರತಿಶತ ಕಡಿಮೆಯಾಗಿರುತ್ತದೆ. ಅಂದರೆ ಮಕ್ಕಳಾಗುವ ಸಾಧ್ಯತೆ ಕೇವಲ 50 ಪ್ರತಿಶತ ಮಾತ್ರ. 40 ರ ನಂತರ ಹುಟ್ಟುವ ಮಕ್ಕಳು ಇನ್ನೂ ಅಶಕ್ತ. ಮಕ್ಕಳು ಹುಟ್ಟುವ ಸಾಧ್ಯತೆಯೂ ಕೂಡ ಇನ್ನೂ ಕಡಿಮೆ. ನಮ್ಮ ಆರ್ಥಿಕ ಭವಿಷ್ಯವನ್ನು ಗಟ್ಟಿ ಮಾಡಿಕೊಳ್ಳುವ ಅನಿವಾರ್ಯತೆಯಲ್ಲಿ, ನಮ್ಮ Biology ಮತ್ತು ಮಕ್ಕಳ ಭವಿಷ್ಯವನ್ನು ಹಾಳು ಮಾಡುವುದು ಎಷ್ಟು ಸರಿ ಬನ್ನಿ. 30ರೊಳಗೆ ಮದುವೆಯಾಗಿ- ಅಮ್ಮನಾಗಿ. ಇದು ಪುರುಷರಿಗೆ ಕೂಡ ಅನ್ವಯವಾಗುತ್ತದೆ. ಸದೃಢ ಭಾರತವನ್ನು ಕಟ್ಟೋಣ.

ಬರಹ :
ಡಾ. ಶ್ರೀಶೈಲ ಬದಾಮಿ,
ಧಾರವಾಡ, 9480640182
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ

ರಾಮನಗರ ಜಿಲ್ಲೆಯಲ್ಲಿ  ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…

21 hours ago

ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ

ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…

21 hours ago

ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ

ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…

21 hours ago

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ

ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ  ಪೂರೈಕೆಯಾಗಿದ್ದು,…

22 hours ago

ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…

22 hours ago

ಅಮರನಾಥ ಯಾತ್ರೆ ಮುಂದುವರಿಕೆ | 9, 482 ಯಾತ್ರಿಕರಿಂದ ಪೂಜೆ ಸಲ್ಲಿಕೆ | 3.52 ಲಕ್ಷ ತಲುಪಿದ ಭಕ್ತರ ಸಂಖ್ಯೆ

ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ  ಸುಮಾರು…

22 hours ago