Opinion

ಕೃಷಿ ಕ್ರಾಂತಿ ಆರಂಭವಾಗುವುದು ಹೀಗೆ….! | ಆಗ್ರೋ ಸಂಸ್ಥೆಯ ಈ ಕಾರ್ಯಕ್ರಮದಲ್ಲಿ ಇಷ್ಟೊಂದು ಕೃಷಿಕರು ಸೇರಿದ್ದೇಕೆ..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹಲವು ಸಲ ಕೃಷಿ ಕ್ರಾಂತಿಯ ಬಗ್ಗೆ ಮಾತುಗಳು ಕೇಳುತ್ತವೆ. ಒಂದು ಸಂಸ್ಥೆಯೂ ಕೃಷಿ ಕ್ರಾಂತಿಗೆ ಕಾರಣವಾಗುತ್ತದೆ. ಕೃಷಿಕ ತಾನು ಬೆಳೆದ ಹಾಗೂ ತನಗೆ ನೆರವಾದ ಸಂಸ್ಥೆಗಳನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾನೆ. ಇದಕ್ಕೊಂದು ಉದಾಹರಣೆ ಸುಳ್ಯದಲ್ಲಿ ಕಂಡಿತು. ಸುಳ್ಯದ ಭಾರತ್‌ ಆಗ್ರೋ ಸರ್ವೀಸಸ್‌ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಅದು. ನಡು ಮಧ್ಯಾಹ್ನದಿಂದ ತಡರಾತ್ರಿಯವರೆಗೆ ನಡೆದ ಕಾರ್ಯಕ್ರಮದ ಸಭಾಭವನದ ತುಂಬಾ ಕೃಷಿಕರು ಭಾಗವಹಿಸಿದ್ದರು. ಇದು ಕೃಷಿಕ ಹಾಗೂ ಒಂದು ಸಂಸ್ಥೆಯ ನಡುವಿನ ಒಡನಾಟ-ಸಂಬಂಧ.

Advertisement

ಸುಳ್ಯದ ಆಗ್ರೋ ಸರ್ವೀಸಸ್‌ ಸಂಸ್ಥೆ ಆರಂಭವಾಗಿ 50 ವರ್ಷಗಳು ಸಂದವು. ಸುಳ್ಯ ಕೃಷಿ ಪ್ರದಾನವಾದ ಊರು. ಬಹುತೇಕ ಗ್ರಾಮೀಣ ಪ್ರದೇಶವನ್ನು ಹೊಂದಿದೆ. ಸುಮಾರು 50 ವರ್ಷಗಳ ಹಿಂದೆ ಸುಳ್ಯ ಇನ್ನಷ್ಟು ಗ್ರಾಮೀಣ ಭಾಗದಿಂದಲೇ ಇತ್ತು, ಮೂಲಭೂತ ಸೌಲಭ್ಯಗಳ ನಿರೀಕ್ಷೆಯಲ್ಲಿಯೇ ಇತ್ತು. ಇಂದು ಬೆಳೆಯುತ್ತಾ ಸಾಗಿದೆ, ಅದರಲ್ಲಿ ಕೃಷಿಯೂ ಬೆಳೆದಿದೆ. ಉಳಿದೆಲ್ಲಾ ಬೆಳವಣಿಗೆಗೆ ಇಲ್ಲಿನ ವಿವಿಧ ಸಾಮಾಜಿಕ ಮುಖಂಡರು ಕೆಲಸ ಮಾಡಿದ್ದರೆ ಕೃಷಿ ಬೆಳವಣಿಗೆಗೆ ಆಗ್ರೋ ಸಂಸ್ಥೆ ಕಾರಣವಾಗಿದೆ. ಹೊಸ ಹೊಸ ಪ್ರಯೋಗಗಳನ್ನು ಕೃಷಿಕರಿಗೆ ಪರಿಚಯಿಸಿದೆ. ಹೀಗಾಗಿ ರೈತರ ಒಡನಾಟದ ಸಂಸ್ಥೆಯಾಗಿದೆ. ಹೀಗಾಗಿ ಈಗ 50 ನೇ ವರ್ಷದ ಸಂದರ್ಭ ಆಗ್ರೋ ಸಂಸ್ಥೆಯ ಮಾಲಕ ರಾಮಚಂದ್ರ ಪಿ ಅವರ ಆಹ್ವಾನವನ್ನು ಗೌರವಿಸಿ ಅನೇಕ ರೈತರು ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೆ ಭಾಗವಹಿಸಿದರು.

ಕೃಷಿ ಚಿಂತನ

ಇಡೀ ಕಾರ್ಯಕ್ರಮ ಆರಂಭವಾದ್ದೇ ಕೃಷಿ ಚಿಂತನದ ಮೂಲಕ. ಇಂದಿನ ಆವಶ್ಯಕತೆಗಳಲ್ಲಿ ಒಂದಾದ ನೀರಾವರಿ ವಿಷಯವೇ ಚಿಂತನದ ವಿಷಯವಾಗಿತ್ತು. ಮಧ್ಯಾಹ್ನ 3.30 ಕ್ಕೆ ಈ ಕಾರ್ಯಕ್ರಮ ಆರಂಭ. ಕೃಷಿ ಕಾರ್ಯಕ್ರಮ ಎಂದರೆ ಕೃಷಿಕರು ಸೇರುವುದು ಕಷ್ಟ. ತುರ್ತು ಕಾರ್ಯದ ನಡುವೆ ಆಸಕ್ತ ಕೃಷಿಕರು ಬರುತ್ತಾರೆ. ಹಾಗಾಗಿ ಎಲ್ಲೆಡೆಯೂ ಕೃಷಿ ಗೋಷ್ಟಿಗಳು ವಿಫಲ ಕಾಣುತ್ತದೆ. ಆದರೆ ಆಗ್ರೋ ಸುವರ್ಣ ಸಂಭ್ರಮದಲ್ಲಿ ಕೃಷಿ ಗೋಷ್ಟಿಗೇ ಕೃಷಿಕರು ಭಾಗವಹಿಸಿ ಆಸಕ್ತಿಯಿಂದ ಯುವ ಸಂಪನ್ಮೂಲ ವ್ಯಕ್ತಿಗಳ ಅನುಭವ ಕೇಳುತ್ತಿದ್ದರು. ನೀರಾವರಿ ವಿಷಯವೂ ಇಂದು ಕೃಷಿಕರಿಗೆ ಅಗತ್ಯವಾದ ವಿಷಯವೂ ಆಗಿದೆ. ಹೀಗಾಗಿ ಸಂಸ್ಥೆಯೊಂದು ಕೃಷಿಕರ ಪರವಾಗಿ ಹೇಗೆ ಬೆಳೆಯುಬಹುದು ಎನ್ನುದಕ್ಕೂ ಇದೊಂದು ಮಾದರಿ ಕಾರ್ಯಕ್ರಮ.

ಕೃಷಿಕರ ಸಂಸ್ಥೆಯೊಂದು ರೈತಪರವಾಗಿ ಹೇಗೆ ಬೆಳೆಯಬಹುದು ಹಾಗೂ ಆ ಸಂಸ್ಥೆಯ ಪ್ರೀತಿಗೆ ಅಷ್ಟೂ ಜನ ಕಾರ್ಯಕ್ರಮಕ್ಕ ಬರಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ. ಉದ್ಯಮ ಬೆಳೆಯಬೇಕು, ಕೃಷಿಯೂ ಬೆಳೆಯಬೇಕು. ಇದೆರಡೂ ಜೊತೆಯಾಗಿ ಸಾಗಿದರೆ ಮಾತ್ರವೇ ಅಲ್ಲಿ ಪ್ರೀತಿಯೂ ಬೆಳೆಯುತ್ತದೆ. ಅಂತಹದ್ದೊಂದು ಕಾರ್ಯಕ್ರಮ ಸುಳ್ಯದಲ್ಲಿ ನಡೆಯಿತು. ಸುಳ್ಯದ ಕೃಷಿ ಬೆಳೆವಣಿಗೆಯಲ್ಲಿ ಇಂತಹ ಹಲವು ಸಂಸ್ಥೆಗಳ ಪಾಲು ಇದೆ ಎನ್ನುವುದೂ ಸತ್ಯ. ಆಗ್ರೋದಂತಹ ಸಂಸ್ಥೆಗಳು 50 ವರ್ಷಗಳಿಂದ ಕೃಷಿಕರ ಗೂಗಲ್‌ ಆಗಿತ್ತು. ಏನು ಕೇಳಿದರೂ ಅಲ್ಲಿದೆ ಎನ್ನುವುದೇ ಕೃಷಿಕರ ನಂಬಿಕೆಯಾಗಿತ್ತು, ಅದೇ ವಿಶ್ವಾಸ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

7 hours ago

ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…

7 hours ago

ಅಡಿಕೆ ಧಾರಣೆ ಏರಿಕೆಗೆ ಕಾರಣ ಇದೆ | ಈಗ ಅಡಿಕೆ ಮಾರುಕಟ್ಟೆಗೆ ಅನ್ವಯಿಸುವ ಸಿದ್ಧಾಂತಗಳು ಯಾವುದು..?

ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…

13 hours ago

2025: ಲಕ್ಷ್ಮೀನಾರಾಯಣ ಯೋಗ | ಈ ರಾಶಿಗೆ ಅದೃಷ್ಟದ ಬಾಗಿಲು ಓಪನ್

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490

13 hours ago

ರೈತರ ಪಂಪ್ ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿಯೇ ವಿದ್ಯುತ್ ನೀಡಲು ತೀರ್ಮಾನ

ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…

21 hours ago

ಹೀಟ್‌ವೇವ್‌ ಸಂಕಷ್ಟದಲ್ಲಿ ತೆಲಂಗಾಣ-ಹೈದರಾಬಾದ್‌ |

ತೆಲಂಗಾಣ ಹಾಗೂ ಹೈದ್ರಾಬಾದ್‌ ಪ್ರದೇಶದಲ್ಲಿ ಹೀಟ್‌ವೇವ್‌ ಪರಿಸ್ಥಿತಿ ಕಂಡುಬಂದಿದೆ. ಹೀಗಾಗಿ ಹೆಚ್ಚುತ್ತಿರುವ ಉಷ್ಣ…

21 hours ago