Advertisement
MIRROR FOCUS

Arecanut Import | ಅಡಿಕೆ ಬೆಳೆಗಾರರಿಗೆ ಎಚ್ಚರಿಕೆ ಇದು | ಸಿದ್ಧವಾಗುತ್ತಿದೆ ಮೂರು ವರ್ಷಗಳ ಯೋಜನೆ | ಮ್ಯಾನ್ಮಾರ್ ನಿಂದ ಪ್ರತೀ ತಿಂಗಳು ಭಾರತಕ್ಕೆ ಬರಲಿದೆ 200 ಟನ್‌ ಅಡಿಕೆ…! |

Share

ಭಾರತಕ್ಕೆ ಮುಂದಿನ ಮೂರು ವರ್ಷಗಳ ಕಾಲ ಪ್ರತೀ ತಿಂಗಳು 200 ಟನ್‌ ಅಡಿಕೆ ಆಮದಾಗಲಿದೆ. ಈ ಬಗ್ಗೆ ಒಪ್ಪಂದವಾಗಿದೆ ಎಂದು ಮ್ಯಾನ್ಮಾರ್‌ ವರದಿಗಳು ತಿಳಿಸಿವೆ.

Advertisement
Advertisement

ಸುದ್ದಿ ಮೂಲಗಳ ಪ್ರಕಾರ, ಮ್ಯಾನ್ಮಾರ್ ಪ್ರತಿ ತಿಂಗಳು ಸರಿಸುಮಾರು 200 ಟನ್ ಅಡಿಕೆಯನ್ನು ಭಾರತಕ್ಕೆ ರಫ್ತು ಮಾಡಲು ಯೋಜಿಸಿದೆ. ಅಡಿಕೆ ಗುಣಮಟ್ಟಕ್ಕಾಗಿ ಅನುಮೋದನೆ ಪಡೆಯಲು 20 ಕಂಟೇನರ್‌ನಲ್ಲಿ ಮೊದಲ ಬ್ಯಾಚ್‌ನ 17 ಟನ್‌ಗಳಷ್ಟು ಒಣಗಿದ ಅಡಿಕೆಯನ್ನು ಭಾರತಕ್ಕೆ ಸಾಗಿಸಲು ಸಿದ್ಧತೆಗಳು ನಡೆಯುತ್ತಿವೆ.  ವರದಿಗಳ ಪ್ರಕಾರ ಭಾರತದ ಕಂಪನಿ ಮತ್ತು ಮ್ಯಾನ್ಮಾರ್‌ನ ಸ್ಥಳೀಯ ಅಡಿಕೆ ಬೆಳೆಗಾರರ ಸಂಘದ ಸದಸ್ಯರು ಈ ಯೋಜನೆಯನ್ನು ಒಪ್ಪಿಕೊಂಡಿದ್ದಾರೆ.

Advertisement

ಭಾರತದ ಲ್ಯಾಕ್ಸ್ ಕಾರ್ಪೊರೇಷನ್ ಕಂ ಲಿಮಿಟೆಡ್(Lax ) ಮ್ಯಾನ್ಮಾರ್‌ನಿಂದ ಮಾಸಿಕ ಆಧಾರದ ಮೇಲೆ ಅಡಿಕೆಯನ್ನು ಖರೀದಿಸಲು ಆಸಕ್ತಿಯನ್ನು ವ್ಯಕ್ತಪಡಿಸಿದೆ. ಪಾವತಿ ವಿಧಾನಗಳು ಸೇರಿದಂತೆ ಆಮದು-ರಫ್ತಿನ ನಿಯಮಗಳು ಮತ್ತು ಷರತ್ತುಗಳಿಗೆ ಸಂಬಂಧಿಸಿದಂತೆ ಉಭಯ ದೇಶಗಳ ಪ್ರಮುಖರು ಪ್ರಸ್ತುತ ಚರ್ಚೆಯಲ್ಲಿ ತೊಡಗಿವೆ ಎಂದು ವರದಿಯಾಗಿದೆ.  ಜನವರಿಯಲ್ಲಿ, ಮ್ಯಾನ್ಮಾರ್ ಅಡಿಕೆ ಉದ್ಯಮಿಗಳ ಸಂಘವು ಒಣ ಅಡಿಕೆಯ ಮಾದರಿಯನ್ನು ಲ್ಯಾಕ್ಸ್ ಕಾರ್ಪೊರೇಷನ್ ಕಂ ಲಿಮಿಟೆಡ್ ಕಳುಹಿಸಿದೆ . ಮ್ಯಾನ್ಮಾರ್ ಸುಮಾರು 2,30,000 ಟನ್‌ಗಳಷ್ಟು ವಾರ್ಷಿಕವಾಗಿ ಅಡಿಕೆಯನ್ನು  ಉತ್ಪಾದನೆಯನ್ನು ಹೊಂದಿದೆ. ಈಗ ಮ್ಯಾನ್ಮಾರ್‌ ಬೇಡಿಕೆ ಪೂರೈಕೆಯ ಬಳಿಕ ಹೆಚ್ಚುವರಿ ಉತ್ಪಾದನೆಯನ್ನು ರಫ್ತು ಮಾಡುವ ಗುರಿಯನ್ನು  ಹೊಂದಿದೆ. ಈ ಹಿಂದೆ ಬಾಂಗ್ಲಾದೇಶಕ್ಕೂ ರಪ್ತು ಮಾಡಿತ್ತು. ಈಗ ಭಾರತದತ್ತ ಮುಖ ಮಾಡಿದೆ.

ಇದುವರೆಗೂ ಮ್ಯಾನ್ಮಾರ್‌ ಅಡಿಕೆಯು ಕಳ್ಳಸಾಗಾಣಿಕೆಯ ಮೂಲಕ ಭಾರತದೊಳಕ್ಕೆ ಬರುತ್ತಿತ್ತು. ಈಗ ಅಧಿಕೃತವಾಗಿ 200 ಮೆಟ್ರಿಕ್‌ ಟನ್‌ ಪ್ರತೀ ತಿಂಗಳು ಆಮದಾಗುವ ಯೋಜನೆ ಸಿದ್ಧವಾಗುತ್ತಿದೆ ಎನ್ನುವ ವರದಿ ಅಡಿಕೆ ಬೆಳೆಗಾರರು ಯೋಚಿಸಬೇಕಾದ ವಿಷಯವಾಗಿದೆ.

Advertisement

Myanmar Arecanut Entrepreneurs Association, has reported that Myanmar and India have initially agreed to export 200 tonnes of dried Arecanuts from Myanmar to India each month. This agreement will remain in effect for three years.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…

7 hours ago

ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |

ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.

8 hours ago

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

16 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

16 hours ago