Advertisement
ಅನುಕ್ರಮ

ಭಾವಗೀತೆ | ತಂಗಾಳಿ ತಂದ ಬಯಕೆ

Share
ಮಂದ ಮಾರುತ ಬೀಸಿ ಬಂದಿದೆ
ತಂಪು ಹಿತವನು ನೀಡುತ
ಬೆಂದ ಮನಸಿಗೆ ಹಾಸ ತಂದಿದೆ
ಇಂಪು ಗಾನವ ಹಾಡುತ….. ||
ಸುಪ್ತವಾಗಿರೊ ಬಯಕೆ ಉದಿಸಿದೆ
ಹಸ್ತ ಚಾಚುತ ನಿನ್ನೆಡೆ
ಸಪ್ತ ಸ್ವರಗಳ ನಲಿಸಿ ಮೆರೆದಿದೆ
ಚಿಂತೆ ಮರೆಸುತ ಮುನ್ನಡೆ…. ||
ಬಾನಿನಂಚಲಿ ಮೋಡ ಸರಿಯಲು
ಮನಸು ಬೇಗುದಿ ಕಳೆದಿದೆ
ತೇಲಿ ಬಂದಿಹ ಬಾನ ಹಕ್ಕಿಯು
ಕನಸು ಚಿತ್ರಿಸಿ ಹೋಗಿದೆ…. ||
ನಾಳೆ ಬಾಳಿನ ಸುಖವ ಕಾಣುತ
ಮನಕೆ ಸಂತಸ ತಂದಿದೆ
ಹಾಳೆ ಸಾಲಲಿ ಒಲವ ತುಂಬುತ
ಒನಪು ದಿನವಿದು ಎಂದಿದೆ… ||
ಬೇಲಿ ಇಲ್ಲದ ಬದುಕು ಎನ್ನದು
ಬಂಧಿಯಾಗುವ ಆಸೆಯು
ತೋಳ ಚಾಚಲು ಮುಂದೆ ಬರುವೆಯ
ಸೇರಿಕೊಳ್ಳುವ ಬಯಕೆಯು… ||
# ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

11 hours ago

ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?

ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…

11 hours ago

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

19 hours ago

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

1 day ago

ಮಡಿಕೇರಿಯಲ್ಲಿ ಅಡಿಕೆ ಹಾಳೆ ತಟ್ಟೆಗೂ ನಿಷೇಧ..!

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…

1 day ago

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…

2 days ago