Advertisement
ಅನುಕ್ರಮ

ಭಾವಗೀತೆ | ತಂಗಾಳಿ ತಂದ ಬಯಕೆ

Share
ಮಂದ ಮಾರುತ ಬೀಸಿ ಬಂದಿದೆ
ತಂಪು ಹಿತವನು ನೀಡುತ
ಬೆಂದ ಮನಸಿಗೆ ಹಾಸ ತಂದಿದೆ
ಇಂಪು ಗಾನವ ಹಾಡುತ….. ||
ಸುಪ್ತವಾಗಿರೊ ಬಯಕೆ ಉದಿಸಿದೆ
ಹಸ್ತ ಚಾಚುತ ನಿನ್ನೆಡೆ
ಸಪ್ತ ಸ್ವರಗಳ ನಲಿಸಿ ಮೆರೆದಿದೆ
ಚಿಂತೆ ಮರೆಸುತ ಮುನ್ನಡೆ…. ||
ಬಾನಿನಂಚಲಿ ಮೋಡ ಸರಿಯಲು
ಮನಸು ಬೇಗುದಿ ಕಳೆದಿದೆ
ತೇಲಿ ಬಂದಿಹ ಬಾನ ಹಕ್ಕಿಯು
ಕನಸು ಚಿತ್ರಿಸಿ ಹೋಗಿದೆ…. ||
ನಾಳೆ ಬಾಳಿನ ಸುಖವ ಕಾಣುತ
ಮನಕೆ ಸಂತಸ ತಂದಿದೆ
ಹಾಳೆ ಸಾಲಲಿ ಒಲವ ತುಂಬುತ
ಒನಪು ದಿನವಿದು ಎಂದಿದೆ… ||
ಬೇಲಿ ಇಲ್ಲದ ಬದುಕು ಎನ್ನದು
ಬಂಧಿಯಾಗುವ ಆಸೆಯು
ತೋಳ ಚಾಚಲು ಮುಂದೆ ಬರುವೆಯ
ಸೇರಿಕೊಳ್ಳುವ ಬಯಕೆಯು… ||
# ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ

ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…

4 hours ago

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್‌ನಲ್ಲಿ ಆಮದು…

4 hours ago

ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ

ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…

5 hours ago

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

20 hours ago

ಹವಾಮಾನ ವರದಿ | 26-07-2026 | ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು – ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ | ಕರಾವಳಿ–ಮಲೆನಾಡಿನಲ್ಲಿ 10 ದಿನ ಮಳೆಯ ಸಾಧ್ಯತೆ

ಪಶ್ಚಿಮ ಬಂಗಾಳ ಕರಾವಳಿಯಲ್ಲಿ ರೂಪುಗೊಳ್ಳಲಿರುವ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳುವ…

20 hours ago