ಭಾವಗೀತೆ | ತಂಗಾಳಿ ತಂದ ಬಯಕೆ

December 1, 2020
10:59 PM
ಮಂದ ಮಾರುತ ಬೀಸಿ ಬಂದಿದೆ
ತಂಪು ಹಿತವನು ನೀಡುತ
ಬೆಂದ ಮನಸಿಗೆ ಹಾಸ ತಂದಿದೆ
ಇಂಪು ಗಾನವ ಹಾಡುತ….. ||
ಸುಪ್ತವಾಗಿರೊ ಬಯಕೆ ಉದಿಸಿದೆ
ಹಸ್ತ ಚಾಚುತ ನಿನ್ನೆಡೆ
ಸಪ್ತ ಸ್ವರಗಳ ನಲಿಸಿ ಮೆರೆದಿದೆ
ಚಿಂತೆ ಮರೆಸುತ ಮುನ್ನಡೆ…. ||
ಬಾನಿನಂಚಲಿ ಮೋಡ ಸರಿಯಲು
ಮನಸು ಬೇಗುದಿ ಕಳೆದಿದೆ
ತೇಲಿ ಬಂದಿಹ ಬಾನ ಹಕ್ಕಿಯು
ಕನಸು ಚಿತ್ರಿಸಿ ಹೋಗಿದೆ…. ||
ನಾಳೆ ಬಾಳಿನ ಸುಖವ ಕಾಣುತ
ಮನಕೆ ಸಂತಸ ತಂದಿದೆ
ಹಾಳೆ ಸಾಲಲಿ ಒಲವ ತುಂಬುತ
ಒನಪು ದಿನವಿದು ಎಂದಿದೆ… ||
ಬೇಲಿ ಇಲ್ಲದ ಬದುಕು ಎನ್ನದು
ಬಂಧಿಯಾಗುವ ಆಸೆಯು
ತೋಳ ಚಾಚಲು ಮುಂದೆ ಬರುವೆಯ
ಸೇರಿಕೊಳ್ಳುವ ಬಯಕೆಯು… ||
# ರೂಪಾಪ್ರಸಾದ ಕೋಡಿಂಬಳ
Advertisement
Advertisement

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror