ಭೂತಾನ್ ನಿಂದ ಹಸಿ ಅಡಿಕೆ ಆಮದು.. ದೇಶಿ ಅಡಿಕೆ ದರಕ್ಕೆ ಯಾವುದೇ ಪರಿಣಾಮ ಬೀರದು.. ಈ ಹೇಳಿಕೆಯನ್ನು ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರು ಸೇರಿದಂತೆ ಎಲ್ಲಾ ಪ್ರಮುಖ ಸಹಕಾರಿಗಳೂ ನೀಡುತ್ತಿದ್ದಾರೆ. ಆದರೆ ಈ ಭೂತಾನ್ ಅಡಿಕೆ ಆಮದಿನ “ಮುಟ್ಟಸ” ಮಾಡಿದ ದಿನದಿಂದ ಅಡಿಕೆ ದರ ಕುಸಿಯುತ್ತಲೇ ಇದೆ. ಇದು ಏಕೆ?
ಮಲೆನಾಡಿನ ಅಸಂಖ್ಯಾತ ಚಿಕ್ಕ ಅತಿಚಿಕ್ಕ ಅಡಿಕೆ ಬೆಳೆಗಾರರಿಗೆ ಇದೊಂದು ಉಡುಗೊರೆಯನ್ನು ನಮ್ಮ ಸ್ಥಾಪಿತ ಮಾರುಕಟ್ಟೆ ಹಿತಾಸಕ್ತಿಗಳು ನಾವೇ ಅತ್ಯಂತ ಇಷ್ಟಪಟ್ಟು ಗೆಲ್ಲಿಸಿದ ಪಕ್ಷದ ಸರ್ಕಾರದ ಆಡಳಿತ ಯಂತ್ರವನ್ನು “ರಿಪೇರಿ” ಮಾಡಿಕೊಂಡು ಈ “ಬೂತ” ವನ್ನು ಆಮದು ಮಾಡಿ ಅಡಿಕೆ ಬೆಲೆ ಕುಸಿಯುವಂತೆ ಮಾಡುತ್ತಾರೆ. ಹದಿನೇಳು ಸಾವಿರ ಟನ್ ಹಸಿ ಅಡಿಕೆ ಯ ಆಮದಿನ ಜೊತೆಯಲ್ಲಿ ಇನ್ಯಾವ ಯಾವ ತರದ ಆಡಿಕೆ ಆ ಒಪ್ಪಂದ ಅಡಿಯಲ್ಲಿ “ನುಸುಳಿ ಕೊಂಡು “ಆಮದಾಗಿ ಬರುತ್ತದೋ…!! ಗೊತ್ತಿಲ್ಲ..!!
ಬಡ ಮದ್ಯಮ ಚಿಕ್ಕ ಹಿಡುವಳಿಯ ಅಡಿಕೆ ಬೆಳೆಗಾರ ನವೆಂಬರ್ ಡಿಸೆಂಬರ್ ನಲ್ಲಿ ತನ್ನ ಕೃಷಿ ಉತ್ಪನ್ನ ಬಿಸಿ ಬಿಸಿ ಅಡಿಕೆಯನ್ನು ಮಾರುಕಟ್ಟೆಗೆ ಕೊಂಡೊಯ್ದಾಗ ಯಥಾ ಪ್ರಕಾರ ಕೆಂಪಡಿಕೆಗೆ ಕ್ವಿಂಟಾಲ್ ಗೆ ನಲವತ್ತೆರೆಡು ಸಾವಿರ ರೂಪಾಯಿ ಮಾತ್ರ ವಾಗಿರುತ್ತದೆ.. ಈ ಐವತ್ತಾರು ಐವತ್ತೆಂಟು ಸಾವಿರ ರೂಪಾಯಿ ಅಡಿಕೆ ದರ ಅದೃಷ್ಟವಂತ ದೊಡ್ಡ ಅಡಿಕೆ ಬೆಳೆಗಾರರಿಗೆ ಮಾತ್ರ….
ಈಗ ಬಯಲು ಸೀಮೆಯ ಅಡಿಕೆ ಕೊಯ್ಲು ಆರಂಭಿಕವಾಗಿದೆ. ಸೆಪ್ಟೆಂಬರ್ ಅಕ್ಟೋಬರ್ ತಿಂಗಳು ಕಳೆದು ನವೆಂಬರ್ ಹೊತ್ತಿಗೆ ಮಲೆನಾಡಿನ ಅಡಿಕೆ ಬೆಳೆಗಾರ ಸುಗ್ಗಿ ಶುರುಮಾಡುವಾಗ ಬಯಲು ಸೀಮೆಯ ಅಡಿಕೆ ಮಾರುಕಟ್ಟೆ ಗೆ ಬಂದ ಪರಿಣಾಮ ಆಗ ಈ ನೆಪಕ್ಕೆ ಇನ್ನೂ ದರ ಕೆಳಕ್ಕೆ ಕುಸಿದಿರುತ್ತದೆ.
ಒಟ್ಟಿನಲ್ಲಿ ಅಡಿಕೆ ಆಮದಾದರೂ ದರ ಕುಸಿಯೋಲ್ಲ.. ಹುಚ್ಚಾಪಟ್ಟೆ ಅಡಿಕೆ ಬೆಳೆ ವಿಸ್ತರಣೆಯಾದರೂ ಅಡಿಕೆ ದರ ಕುಸಿಯೋಲ್ಲ..
ಆದರೆ ಮಾರುಕಟ್ಟೆಯಲ್ಲಿ ಬೆಲೆ ಮಾತ್ರ ಕಡಿಮೆಯಾಗುತ್ತದೆ. ಈ ಒಗಟಿಗೆ ಯಾರಾದರೂ ಬುದ್ದಿವಂತ ರೈತರು ಉತ್ತರ ಕೊಡುವಿರಾ..?
ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…