Advertisement
Opinion

ಯಾರೀಗೆ ಬೇಕು ಈ ತಲೆ ನೋವು…! | ಮೈಗ್ರೇನ್ ತಲೆನೋವಿಗೆ ಆಯುರ್ವೇದ ಚಿಕಿತ್ಸೆ ಬಗ್ಗೆ ತಿಳಿಯಿರಿ

Share

ತಲೆನೋವು ಬೇರೆ ಬೇರೆ ಕಾರಣಗಳಿಂದ ಬರುತ್ತದೆ. ತಲೆ ನೋವಿಗೆ ಕಾರಣ ತಿಳಿದು ಶಾಶ್ವತ ಚಿಕಿತ್ಸೆನೀಡುವುದು ಅಗತ್ಯ.

ತಲೆ ನೋವಿಗೆ ಸಾಮಾನ್ಯ ಕಾರಣಗಳು: ಅಧಿಕ ಗ್ಯಾಸ್ಟ್ರಿಕ್ ಸಮಸ್ಯೆ ಅಜೀರ್ಣ,ಸೈನಸೈಟಿಸ್ ಮಲಬದ್ಧತೆ ನಿದ್ರೆಯ ಅಭಾವ, ಮಾನಸಿಕ ಒತ್ತಡ, ರಕ್ತದೊತ್ತಡ ಇತ್ಯಾದಿ.
ಮೈಗ್ರೈನ್ #Migraine ಸಾಮಾನ್ಯವಾಗಿ ತಲೆಯ ಒಂದು ಅಥವಾ ಎರಡು ಭಾಗಗಳಲ್ಲೂ ನೋವು ಕಾಣಿಸಿಕೊಳ್ಳುವುದು, ಇದರಲ್ಲಿ ವಾತ ಪಿತ್ತ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮಲಬದ್ಧತೆ, ಮೂಡ್ ಬದಲಾವಣೆ, ಆಹಾರದ ಕಡುಬಯಕೆ, ಕುತ್ತಿಗೆ ನೋವು ಆಯಾಸ, ದೌರ್ಬಲ್ಯ,ಸೂಜಿಯ ಸಂವೇದನೆ ಶಬ್ದಗಳನ್ನು ಕೇಳಿಸಿದ ಹಾಗೆ ಆಗುವುದು ಮಂದದ್ರಷ್ಟಿ ವಾಕರಿಕೆ, ವಾಂತಿ,ತಲೆ ತಿರುಗುವಿಕೆ ಗೊಂದಲ ಮನಸ್ಥಿತಿ, ಬೆಳಕು ಮತ್ತು ಧ್ವನಿಗೆ ಸೂಕ್ಷ್ಮತೆ ಹೀಗೆ ಮೊದಲಾದ ಲಕ್ಷಣಗಳನ್ನು ಮೈಗ್ರೇನ್ ತಲೆನೋವು ನಲ್ಲಿ ಕಾಣಬಹುದು.

ಮೈಗ್ರೇನ್ ತಲೆನೋವು ನಿಭಾಯಿಸುವಾಗ ವಾತ ಪಿತ್ತ ಅಸಮತೋಲನದ ಸಾಮಾನ್ಯ ಕಾರಣಗಳನ್ನು ಕಡಿಮೆ ಮಾಡುವುದು ಅತ್ಯಗತ್ಯ ಮಸಾಲಯುಕ್ತ ಹುಳಿ ಕಾರ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದು ಅತಿಯಾದ ಶೀತ ಅಥವಾ ಅತಿ ಬಿಸಿಲಿಗೆ ದೇಹವನ್ನು ಒಡ್ಡಿಕೊಳ್ಳುವುದು ಅತಿಯಾದ ಶ್ರಮ ರಾತ್ರಿಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು, ಹಸಿವು ಮತ್ತು ಪ್ರಚೋದನೆಗಳನ್ನು ನಿಗ್ರಹಿಸುವುದು,ಅತಿಯಾದ ಒತ್ತಡ ಧೂಮಪಾನ ಮತ್ತು ಬಲವಾದ ವಾಸನೆಗಳಿಗೆ ಒಡ್ಡಿಕೊಳ್ಳುವುದು ಇವುಗಳಿಂದ ದೂರವಿರುವುದರಿಂದ ಮೈಗ್ರೇನ್ ತಲೆನೋವನ್ನು ತಡೆಗಟ್ಟಬಹುದು. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಮೈಗ್ರೇನ್‌ ಗೆ ಮೂಲ ಕಾರಣಕ್ಕೆ ಚಿಕಿತ್ಸೆ ನೀಡಲು ಹಲವು ಮಾರ್ಗಗಳನ್ನು ಸೂಚಿಸಲಾಗಿದೆ.

ಆಹಾರ: ಉಲ್ಬಣಗೊಂಡ ದೋಷವನ್ನು ತಿಳಿದು ಅದನ್ನು ಹೋಗಲಾಡಿಸುವ ಆಹಾರ ಕ್ರಮವನ್ನು ಪಾಲಿಸುವುದು ವಾತಪಿತ್ತಕರ ಆಹಾರಗಳನ್ನು ತ್ಯಜಿಸುವುದು.

ಪಂಚಕರ್ಮ ಚಿಕಿತ್ಸೆ :

ಶಿರೋ ಅಭ್ಯಂಗ: ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಿದ ತೈಲಗಳಿಂದ ತಲೆಗೆ ಮಸಾಜ್ ಮಾಡುವುದು
ಶಿರೋದಾರ:  ಔಷಧಿಯುಕ್ತ ತೈಲ ಅಥವಾ ಕಷಾಯಗಳಿಂದ ಹಣೆಯ ಮೇಲೆ ದಾರಾ ಮಾಡುವುದು
ನಸ್ಯಕರ್ಮ:  ಪ್ರತಿ ಮೂಗಿನ ಹೊಳ್ಳೆಯಲ್ಲಿ ಔಷಧಿಭರಿತ ತುಪ್ಪ ಅಥವಾ ತೈಲಗಳನ್ನು ಮೂರರಿಂದ ಐದು ಹನಿ ಹಾಕುವುದು
ಯೋಗಾಸನ:  ಮಾನಸಿಕ ಒತ್ತಡದಿಂದ ಉಂಟಾಗುವ ಮೈಗ್ರೇನಿಗೆ ಯೋಗವು ಉತ್ತಮ ಚಿಕಿತ್ಸೆ
ಧ್ಯಾನ: ಮಂತ್ರಗಳನ್ನು ಪಠಿಸುವುದರಿಂದ ಹಾಗೂ ಧ್ಯಾನ ಮಾಡುವುದರಿಂದ ಮೈಗ್ರೇನ್ ತಲೆನೋವು ಹಾಗೂ ಒತ್ತಡವು ಕಡಿಮೆಯಾಗುವುದು.

ಪ್ರಾಣಾಯಾಮ: ವಾತ ದೋಷ ಪ್ರಕೋಪದಿಂದ ಉಂಟಾಗುವ ಮೈಗ್ರೇನ್ ತಲೆ ನೋವಿಗೆ ಅನುಲೋಮ ವಿಲೋಮ ಪ್ರಾಣಾಯಾಮ ಹಾಗೂ ಪಿತ್ತ ಕಾರಣದಿಂದ ಉಂಟಾಗಿರುವ ತಲೆ ನೋವಿಗೆ ಶೀತಲಿ ಪ್ರಾಣಯಾಮ ಹಾಗೂ ಕಫದೋಷ ಕಾರಣದಿಂದ ಉಂಟಾಗಿರುವ ತಲೆ ನೋವಿಗೆ ಕಪಾಲಭಾತಿ ಪ್ರಾಣಾಯಾಮ ಮಾಡುವುದರಿಂದ ಮೈಗ್ರೇನ್
ತಲೆನೋವನ್ನು ತಡೆಗಟ್ಟಬಹುದು.

ಆಯುರ್ವೇದದ ಗಿಡಮೂಲಿಕೆಗಳಿಂದ ತಯಾರಿಸಲಾದ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ನಿರ್ದಿಷ್ಟ ಅವಧಿಯವರೆಗೆ ತೆಗೆದುಕೊಳ್ಳುವುದರಿಂದ ಮೈಗ್ರೇನ್ ತಲೆನೋವನ್ನು ತಡೆಗಟ್ಟಬಹುದು

ಬರಹ :
ಡಾ.ಜ್ಯೋತಿ , ಆಯುರ್ವೇದ ವೈದ್ಯರು, ಮಂಗಳೂರು.

ಸಂಪರ್ಕ : 94481 68053

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ

ಈ ವಾರದ ಚಿಂತನೆ - "ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ"

35 minutes ago

ಮುಂಬೈನಲ್ಲಿ ಭಾರೀ ಮಳೆ ಅಬ್ಬರ – ರೆಡ್ ಅಲರ್ಟ್ ಮುಂದುವರಿಕೆ, ಜನಜೀವನ ಅಸ್ತವ್ಯಸ್ತ

ಮುಂಬೈನಲ್ಲಿ ನಿರಂತರ ಭಾರೀ ಮಳೆಯಿಂದ ನಗರದಲ್ಲಿ ಜಲಾವೃತ ಮತ್ತು ಸಂಚಾರ ಅಸ್ತವ್ಯಸ್ತವಾಗಿದೆ. IMD…

10 hours ago

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆಗೆ BIS ಮಾನದಂಡ ಕಾರಣವೇ ? ಯಾವ ಅಡಿಕೆ ಉತ್ತಮ? ಗ್ರೇಡ್ ಹೇಗೆ ನಿರ್ಧಾರ?

ಭಾರತೀಯ BIS ಮಾನದಂಡದ ಪ್ರಕಾರ ಅಡಿಕೆಯ ಗುಣಮಟ್ಟವನ್ನು ತೇವಾಂಶ, ಅಫ್ಲಾಟಾಕ್ಸಿನ್, ಕೀಟ ಹಾನಿ,…

11 hours ago

ಜಾಕ್‌ಫ್ರೂಟ್ ಸ್ಪೈಸಿ – ಹಲಸಿನ ಕಾಯಿಯಿಂದ 5 ನಿಮಿಷದಲ್ಲಿ ರುಚಿಕರ ಸ್ನ್ಯಾಕ್..!

ಸ್ವಲ್ಪ ಸಿಹಿ ರುಚಿಯ ಹಲಸಿನ ಕಾಯಿಗೆ ವಿವಿಧ ಮಸಾಲೆಗಳನ್ನು ಸೇರಿಸಿ ಕೆಲವೇ ನಿಮಿಷಗಳಲ್ಲಿ…

17 hours ago

ಅಡಿಕೆ ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್ ಪರಿಹಾರ ತೀರಾ ಕಡಿಮೆ…! ಪ್ರಕೃತಿ ವಿಕೋಪದಲ್ಲಿ ರೈತರಿಗೆ ಅನ್ಯಾಯ?

ಪ್ರಕೃತಿ ವಿಕೋಪದಿಂದ ಅಡಿಕೆ ತೋಟಗಳಿಗೆ ಆಗುವ ನಷ್ಟಕ್ಕೆ ಸಿಗುತ್ತಿರುವ ಎನ್‌ಡಿಆರ್‌ಎಫ್ ಪರಿಹಾರ ಮೊತ್ತ…

17 hours ago

ಭಾರತದ ಹಲಸಿನ ಹಣ್ಣಿನ ರಾಜಧಾನಿ ಎಲ್ಲಿದೆ ಗೊತ್ತಾ..?

ತಮಿಳುನಾಡಿನ ಪನ್ರುಟಿ ಪಟ್ಟಣವನ್ನು ಭಾರತದ ಹಲಸಿನ ಹಣ್ಣಿನ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿನ…

19 hours ago