Opinion

ಜಗದ ಹುಟ್ಟಿನ ಕಾರಣಕರ್ತ ಸೂರ್ಯದೇವ ಹುಟ್ಟಿದ ದಿನ | ರಥಸಪ್ತಮಿ ದಿನದ ವಿಶೇಷ ಆಚರಣೆ ಏನು..?

Share

ಪ್ರತಿ ವರ್ಷದಂತೆ ಮಾಘ ಮಾಸದಲ್ಲಿ ಬರುವ ಶುಕ್ಲ ಪಕ್ಷದ ಸಪ್ತಮಿ ತಿಥಿಯನ್ನು, ರಥಸಪ್ತಮಿ(Ratha Saptami) ಎಂದು ಆಚರಿಸಲಾಗುತ್ತದೆ, ರಥಸಪ್ತಮಿಯ ದಿನದಂದು ಭಗವಂತ ಶ್ರೀ ಸೂರ್ಯನಾರಾಯಣನನ್ನು(Sun), ಪೂಜಿಸಲಾಗುತ್ತದೆ. ಅಲ್ಲದೇ ರಥಸಪ್ತಮಿಯ ಮತ್ತೊಂದು ವಿಶೇಷವೇನೆಂದರೆ, ಕರ್ನಾಟಕದ ಕೆಲವು ದೇವಸ್ಥಾನಗಳಲ್ಲಿ(Temple) ಈ ದಿನ ವಿಶೇಷ ಪೂಜೆ ನಡೆಯುತ್ತದೆ.

Advertisement

ರಥಸಪ್ತಮಿಯು ಪಂಚಾಂಗದ ಪ್ರಕಾರ ಫೆ.15 ರಂದು ಗುರುವಾರ ಬೆಳಗ್ಗೆ  ಬೆಳಿಗ್ಗೆ,10:12ರಿಂದ, ಫೆ.16 ಶುಕ್ರವಾರ ಬೆಳಿಗ್ಗೆ 08:54ರ ವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ ರಥಸಪ್ತಮಿಯನ್ನು ಫೆಬ್ರವರಿ 16ರಂದು ಆಚರಿಸಲಾಗುತ್ತದೆ.

ಈ ದಿನ ಸ್ನಾನದ ಸಮಯ ಈ ರೀತಿ ಇರುತ್ತದೆ: ಬೆಳಿಗ್ಗೆ 05: 17am ರಿಂದ06:59am ರ ನಡುವೆ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಮಂಗಳಕರವಾಗಿರುತ್ತದೆ, ಈ ದಿನದಂದು ಸ್ನಾನ ಮತ್ತು ದಾನಕ್ಕೆ ಮಹತ್ವವಿದೆ, ರಥಸಪ್ತಮಿಯ ಶುಭ ಯೋಗ ಈ ರೀತಿ ಇರುತ್ತದೆ, ರಥಸಪ್ತಮಿಯ ದಿನ ಮಧ್ಯಾಹ್ನ 03:18pm ರವರೆಗೆ ಬ್ರಹ್ಮ ಯೋಗವು ರೂಪುಗೊಳ್ಳುತ್ತದೆ. ಈ ದಿನ ಇಂದ್ರ ಯೋಗವು ಸಹರೂಪಗೊಳ್ಳುತ್ತದೆ. ರಥಸಪ್ತಮಿಯ ದಿನದಂದು ಭದ್ರನು ಸ್ವರ್ಗದಲ್ಲಿ ನೆಲೆಸುತ್ತಾನೆ ಮತ್ತು ಭೂಲೋಕದ ಜನರಿಗೆ ಕಲ್ಯಾಣವನ್ನು ನೀಡುತ್ತಾನೆ ಎಂದು ನಂಬಲಾಗಿದೆ.

ಪೂಜಾ ನಿಯಮ: ಅಂದು ಮುಂಜಾನೆ  ಪೂರ್ಣ ಹೃದಯದಿಂದ ಸೂರ್ಯ ದೇವರಿಗೆ ನಮಸ್ಕರಿಸಿ ಪೂಜಾ ಕೋಣೆಯನ್ನು ಶುದ್ಧಗೊಳಿಸಿ ಪೂಜಾ ಸಾಮಾನುಗಳನ್ನು ಹೊಂದಿಸಿಕೊಳ್ಳಿ ಹಾಗೂ ಸೂರ್ಯದೇವನನ್ನು ಸ್ಥಾಪಿಸಿ, ಹೂವು, ಹಣ್ಣು, ಕುಂಕುಮ, ನೈವೇದ್ಯ ಎಲ್ಲವನ್ನು ಅರ್ಪಿಸಬೇಕು. ಅಲ್ಲದೆ ಕೆಂಪು ಹೂಗಳನ್ನು ನೀರಿನಲ್ಲಿ ಸೇರಿಸಿ ಅರ್ಗ್ಯವನ್ನು ಅರ್ಪಿಸಬೇಕು ಹಾಗೂ ಈ ದಿನ ಹಳದಿ ಬಟ್ಟೆಗಳನ್ನು ಧರಿಸಿ ನಿಮ್ಮ ಪೂರ್ಣ ಹೃದಯದಿಂದ ಸೂರ್ಯ ಚಾಲಿಸಾ ಅಥವಾ ಸೂರ್ಯ ಕವಚವನ್ನು ಪಠಿಸಿದರೆ ಉತ್ತಮ

ಬರಹ: ಎಲ್.ವಿವೇಕಾನಂದ ಆಚಾರ್ಯ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 07-04-2025 | ಕೆಲವೆಡೆ ಇಂದೂ ಮಳೆ ನಿರೀಕ್ಷೆ | ಎ.9 ರಿಂದ ಅಲ್ಲಲ್ಲಿ ಸಾಧಾರಣ ಮಳೆಯ ಸಾಧ್ಯತೆ |

ಇಂದು ಕೆಲವು ಕಡೆ ಮಳೆ ನಿರೀಕ್ಷೆ ಇದೆ. ಈಗಿನಂತೆ ರಾಜ್ಯದ ಎಪ್ರಿಲ್ 9ರಿಂದ…

18 minutes ago

ಜೇನು ಹುಳಗಳ ಸಂಖ್ಯೆ ಗಣನೀಯ ಇಳಿಕೆ | ಜೇನು ಕುಟುಂಬ ಉಳಿಸುವ ಅಭಿಯಾನ |

ವಿಶ್ವದ ಪ್ರಮುಖವಾದ 107 ಬೆಳೆಗಳಲ್ಲಿ ಸುಮಾರು 70% ಗೆ ಬೆಳೆಗಳು ಜೇನುನೊಣಗಳಂತಹ ಪರಿಸರ…

2 hours ago

ಹುಲಿಸಂರಕ್ಷಿತ ಪ್ರದೇಶಲ್ಲಿ ರಾತ್ರಿ ಸಂಚಾರ ನಿಷೇಧ | ನಿಷೇಧ ತೆರವುಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ

ಬಂಡಿಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ  ತೆರವುಗೊಳಿಸಬಾರದು ಎಂದು…

8 hours ago

ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ನಿರ್ಧಾರ | ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರಗಳನ್ನು ಸ್ಪಾಪಿಸಲಾಗುವುದು ಎಂದು ಇಂಧನ ಸಚಿವ…

8 hours ago

ದೇಶದ ಜಿಡಿಪಿ 4.5ಲಕ್ಷ ಕೋಟಿ ರೂಪಾಯಿ ಏರಿಕೆ ಸಾಧ್ಯತೆ | ನಿರ್ಮಲಾ ಸೀತಾರಾಮನ್‌ ಅಭಿಪ್ರಾಯ

ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ಬಂದರೆ ಭಾರತವು ಶೇಕಡ 1.5…

8 hours ago

ಬೆಂಗಳೂರಿನಲ್ಲಿ ಗುಡುಗು ಸಹಿತ ಹಗುರ ಮಳೆಯ ಸಾಧ್ಯತೆ | ಹವಾಮಾನ ಇಲಾಖೆ

ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಹಗುರ ಮಳೆಯಾಗಲಿದೆ ಎಂದು…

8 hours ago