Advertisement
MIRROR FOCUS

ಮಂಗಳೂರಿಗೆ ನವೋದ್ಯಮದ ಹೊಸ ಬೆಳಕು: ‘ಬೊಲ್ಪು’ ಯೋಜನೆಯಲ್ಲಿ 11 ಸ್ಟಾರ್ಟ್‌ಅಪ್ ಆಯ್ಕೆ

Share

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪರಿಕಲ್ಪನೆಯಡಿ, ಮುಂದಿನ ಐದು ವರ್ಷಗಳಲ್ಲಿ ಮಂಗಳೂರನ್ನು ದೇಶದ ಪ್ರಮುಖ ಸ್ಟಾರ್ಟ್‌ಅಪ್ ಹಾಗೂ ಉದ್ಯಮ ಕೇಂದ್ರವನ್ನಾಗಿ ರೂಪಿಸುವ ಗುರಿಯೊಂದಿಗೆ ಆರಂಭಿಸಿರುವ ‘ಬೊಲ್ಪು – ಅವಕಾಶ ನವೋದಯ’ ಯೋಜನೆ ಮಹತ್ವದ ಹಂತ ತಲುಪಿದೆ.

ನವೋದ್ಯಮ ಸಂಸ್ಥಾಪಕರಿಗೆ ದಿಕ್ಕುನಿರ್ದೇಶನ ಹಾಗೂ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಆರಂಭವಾದ ಈ ಯೋಜನೆಗೆ ಅಪಾರ ಸ್ಪಂದನೆ ವ್ಯಕ್ತವಾಗಿದೆ. ಅಂತಿಮ ದಿನಾಂಕದವರೆಗೆ 850ಕ್ಕೂ ಹೆಚ್ಚು ಸ್ಟಾರ್ಟ್‌ಅಪ್ ಆಲೋಚನೆಗಳ ಅರ್ಜಿಗಳು ಸಲ್ಲಿಕೆಯಾಗಿದ್ದು, ಮೂರು ಹಂತಗಳ ಕಠಿಣ ಆಯ್ಕೆ ಪ್ರಕ್ರಿಯೆಯ ಬಳಿಕ 11 ನವೀನ ಸ್ಟಾರ್ಟ್‌ಅಪ್ ಐಡಿಯಾಗಳು ಅಂತಿಮವಾಗಿ ಆಯ್ಕೆಯಾಗಿವೆ.

ಆಯ್ಕೆಯಾದ ಭಾವಿ ಉದ್ಯಮಿಗಳೊಂದಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಂಗಳೂರಿನ ಯೆಯ್ಯಾಡಿಯ ಖಾಸಗಿ ಹೋಟೆಲ್‌ನಲ್ಲಿ ಸಂವಾದ ನಡೆಸಿ, ಅವರ ಆಲೋಚನೆಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಚೌಟ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 50 ಯಶಸ್ವಿ ಉದ್ಯಮಶೀಲತಾ ಕಥೆಗಳು ನಿರ್ಮಾಣ ಮಾಡುವುದು ‘ಬೊಲ್ಪು’ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ‘ಸ್ಟಾರ್ಟ್-ಅಪ್ ಇಂಡಿಯಾ’ ಯೋಜನೆಯ 11ನೇ ವರ್ಷದಲ್ಲಿ 11 ವಿಭಿನ್ನ ಸ್ಟಾರ್ಟ್‌ಅಪ್ ಆಲೋಚನೆಗಳು ಆಯ್ಕೆಯಾಗಿರುವುದು ವಿಶೇಷ ಸಂಗತಿ ಎಂದು ಅವರು ಅಭಿಪ್ರಾಯಪಟ್ಟರು.

ನವೋದ್ಯಮಿಗಳು ಸವಾಲುಗಳ ಬಗ್ಗೆ ಯೋಚಿಸುವುದಕ್ಕಿಂತ ಅವಕಾಶಗಳತ್ತ ಗಮನಹರಿಸಬೇಕು. ಯಶಸ್ಸು ಅಥವಾ ವೈಫಲ್ಯವು ವ್ಯಕ್ತಿಯ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಯುವ ಉದ್ಯಮಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಮಂಗಳೂರನ್ನು ಮುಂದಿನ ಪ್ರಮುಖ ಸ್ಟಾರ್ಟ್‌ಅಪ್ ಹಬ್ ಆಗಿ ರೂಪಿಸುವ ಗುರಿಯೊಂದಿಗೆ ಯೋಜನೆಯಲ್ಲಿ 50% ಮಹಿಳಾ ಉದ್ಯಮಿಗಳ ಪಾಲ್ಗೊಳ್ಳುವಿಕೆ ಇರಬೇಕೆಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಇದೇ ವೇಳೆ ‘ಬೊಲ್ಪು’ ಯೋಜನೆಯ ಮೆಂಟರ್‌ಗಳಿಗೆ ಕೃತಜ್ಞತೆ ಸಲ್ಲಿಸಿದರು.

‘ಬೊಲ್ಪು’ ಯೋಜನೆಯಡಿ ಆಯ್ಕೆಯಾದ ಸ್ಟಾರ್ಟ್‌ಅಪ್ ಆಲೋಚನೆಗಳು ತಂತ್ರಜ್ಞಾನ, ಆರೋಗ್ಯ, ಪರಿಸರ, ಸಂಸ್ಕೃತಿ ಹಾಗೂ ಆಹಾರ ಕ್ಷೇತ್ರಗಳನ್ನು ಒಳಗೊಂಡಿವೆ.

  • ಝಪ್ಪಲ್ ಲ್ಯಾಬ್ಸ್ – ನೀಲ್ ಕೆವಿನ್ ಮಾರ್ಟಿಸ್ (ಬ್ಲಾಕ್‌ಚೈನ್ ತಂತ್ರಜ್ಞಾನ)

  • ಸತ್ವ ಬೆವರೇಜಸ್ – ಅಭಿನಂದನ (ಡೈರಿ ಪಾನೀಯ ಉತ್ಪನ್ನಗಳು)

  • ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ – ಸಿಂಧೂರ ಟಿ.ಪಿ (ಸಂಸ್ಕೃತಿ ಸಂರಕ್ಷಣೆ)

  • ಜೂಸ್ ಬಾಟಲ್ ಐಡಿಯಾ – ಪ್ರೀತಿ & ಗಣೇಶ್ ನಾಯಕ್ (85% ಮಹಿಳಾ ಉದ್ಯೋಗ ಸಬಲೀಕರಣ)

  • ಎಕೋಪೋಲಿ ಬಯೋಟೆಕ್ – ಡಾ. ಚಂದ್ರಿಕಾ ತಂತ್ರಿ (ಪರಿಸರ ತಂತ್ರಜ್ಞಾನ)

  • ಬಯೋಮೆಡ್ ಇಂಪ್ಲಾಂಟ್ಸ್ – ಡಾ. ನಿಖಿಲ್ ಎಸ್. ಶೆಟ್ಟಿ (ಆರೋಗ್ಯ ತಂತ್ರಜ್ಞಾನ)

  • ಅನಾಹತಂ.ಐ – ಸಾಕ್ಷತ್ ರೈ ಕೆ. & ದುರ್ಗಾದಾಸ್ ಶೆಟ್ಟಿ (AI ಆಧಾರಿತ ಆರೋಗ್ಯ ಸೇವೆ)

  • ವ್ಯಾನಿಕಾ ಇನ್ನೋವೇಶನ್ಸ್ – ಶೇಷಪ್ರಸಾದ್ ಭಟ್ (ಎಂಜಿನಿಯರಿಂಗ್ ಪರಿಹಾರಗಳು)

  • ಹೈಡ್ರೋಗ್ರೀನ್ಸ್ – ವಸಂತ್ ಮಾಧವ್ ಕಾಮತ್ (ಕೃಷಿ ನವೀನತೆ)

  • ದಾಸಪೈಲಟ್ (PLUGFLY) – ಮಿಥುಲ್ ದಾಸ್ (ಡ್ರೋನ್ ತಂತ್ರಜ್ಞಾನ)

  • ಕೆನರಾ ಫಾರ್ಮ್ಸ್ – ಗೌರವ್ ಗಣೇಶ್ ಶೆಟ್ಟಿ (ರಾಸಾಯನಿಕ ಮುಕ್ತ ಡೈರಿ ಉತ್ಪನ್ನಗಳು)

‘ಬೊಲ್ಪು’ ತಂಡವು ಆಯ್ಕೆಯಾದ ಎಲ್ಲಾ ನವೋದ್ಯಮಿಗಳಿಗೆ ಮುಂದಿನ ದಿನಗಳಲ್ಲಿ ತಜ್ಞರಿಂದ ನಿರಂತರ ಮಾರ್ಗದರ್ಶನ, ನೆಟ್ವರ್ಕಿಂಗ್ ಹಾಗೂ ಉದ್ಯಮ ರೂಪಾಂತರಕ್ಕೆ ಅಗತ್ಯ ಸಂಪೂರ್ಣ ಬೆಂಬಲ ಒದಗಿಸಲಿದೆ. ಇದರ ಮೂಲಕ ಆಲೋಚನೆಗಳನ್ನು ನೈಜ ಉದ್ಯಮಗಳಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ.

Under the “Bolpu – Avakasha Navodaya” initiative envisioned by Dakshina Kannada MP Capt. Brijesh Chowta, 11 startup ideas have been selected from over 850 applications after a rigorous three-stage evaluation. The project aims to create at least 50 successful startup stories in Mangaluru within five years and transform the city into a major startup hub, with strong emphasis on mentorship and women entrepreneurship.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು

ಮಾನವನ ಜೀವನವು ನೂರಾರು ಹಂಬಲಗಳಿಂದ ಕೂಡಿದೆ. ಹಂಬಲವಿಲ್ಲದ ಜೀವಮಾನವಿಲ್ಲ. ಆದರೆ ಆ ಹಂಬಲಗಳ…

16 hours ago

ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ

ಗ್ರಾಮೀಣ ಅಡುಗೆಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಎಳೆಯ ಹಲಸಿನ ಕಾಯಿ (ಹಲಸಿನ ಕಾಯಿ…

16 hours ago

ಕಳಪೆ ಬೀಜ ಬಿಟ್ಟು ಸಂಶೋಧಿತ ಬೀಜ ಬಳಸಿ | ಮಣ್ಣಿನ ಆರೋಗ್ಯ ಕಾಪಾಡಿ | ರೈತರಿಗೆ ತೋಟಗಾರಿಕಾ ವಿವಿ ಕುಲಪತಿ ಸಲಹೆ

ಈರುಳ್ಳಿ ಬೆಳೆಯಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡರೆ ಹೆಚ್ಚಿನ ಇಳುವರಿ ಪಡೆಯಲು…

16 hours ago

ಪಿ.ಎಂ. ಕಿಸಾನ್ ಸಹಾಯಧನಕ್ಕೆ ‘FRUITS’ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಿ.ಎಂ. ಕಿಸಾನ್ ಯೋಜನೆಯ ಸಹಾಯಧನ ಪಡೆಯಲು ಗದಗ ಜಿಲ್ಲೆಯ…

16 hours ago

ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮಹತ್ವದ ಬದಲಾವಣೆ ತರುತ್ತಿದೆ

ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯನ್ನು…

16 hours ago

ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ : 7.10 ಲಕ್ಷ ಮಂದಿ ವಿದ್ಯಾರ್ಥಿಗಳು ನೋಂದಣಿ

ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಇಂದು ಆರಂಭವಾಗಲಿದ್ದು, ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು…

16 hours ago