ಐಷಾರಾಮಿ ವಾಹನ, ಹೆಚ್ಚು ಆದಾಯ, ಸರ್ಕಾರಿ ನೌಕರಿ, ಹೆಚ್ಚು ಜಾಗ ಮತ್ತು ಭೂಮಿ ಇರುವ ಕುಟುಂಬಗಳ ಕಾರ್ಡ್ಗಳನ್ನೂ ಗುರುತಿಸಿಕೊಂಡು ಆದಾಯ ತೆರಿಗೆ ಇಲಾಖೆಯು ಪ್ರತಿ ವರ್ಷ ತೆರಿಗೆ ಸಲ್ಲಿಸುತ್ತಿರುವವರ ವಿವರಗಳನ್ನು ಆಹಾರ ಇಲಾಖೆಗೆ ಒದಗಿಸುತ್ತಿದೆ. ಈ ಕಾರಣದಿಂದ ಬಿಪಿಎಲ್ಗಳನ್ನು ಅನರ್ಹ ಎಂಬ ಪಟ್ಟಿಯಲ್ಲಿ ರದ್ದುಗೊಳಿಸಲಾಗುತ್ತಿದೆ. ಹೀಗಾಗಿ ಕೆಲವು ಬಿಪಿಎಲ್ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ರಾಜ್ಯಾದ್ಯಂತ ತೀವ್ರಗೊಂಡಿದೆ. ಈಗಾಗಲೇ ಬೆಂಗಳೂರು, ಹಾವೇರಿ, ಧಾರವಾಡ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾವಿರಾರು ಕಾರ್ಡ್ಗಳು ರದ್ದಾಗಿವೆ.
ಒಂದು ವೇಳೆ ಬಿಪಿಎಲ್ ಕಾರ್ಡ್ಗಳನ್ನು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿರುವವರು ಈ ಷರತ್ತುಗಳನ್ನು ಒಳಗೊಂಡಿರಬೇಕು.
ಸರ್ಕಾರದ ಈ ನಿಯಮಗಳಿಂದ ಕೆಲವೊಮ್ಮೆ ಅನರ್ಹರನ್ನು ತೆಗೆದುಹಾಕೊ ನಿಜವಾದ ಬಡವರ ಕಾರ್ಡ್ ರದ್ದುಗಿಳಿಸಿರುತ್ತದೆ. ಒಂದುವೇಳೆ ಈ ಎಲ್ಲಾ ಷರತ್ತುಗಳು ಒಳಗೊಂಡಿದ್ದರೂ, ಬಿಪಿಎಲ್ ಕಾರ್ಡ್ ಅನರ್ಹ ಎಂದು ರದ್ದಾಗಿದೆ ಎಂದರೆ ಸಮೀಪದ ಆಹಾರ ಇಲಾಖೆ ಕಚೇರಿ ಅಥವಾ ತಾಲೂಕು ಕಚೇರಿಗೆ ದೂರು ಸಲ್ಲಿಸಬಹುದು.
ನಿಮ್ಮ ಕಾರ್ಡ್ ರದ್ದು ಆಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಈ ವಿಧಾನ ನೋಡಿ: https://mahitikanaja.karnataka.gov.in/FCS/MyRationCard ಈ ಲಿಂಕ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ತದನಂತರ ರೇಷನ್ ಕಾರ್ಡ್ ಸಂಖ್ಯೆಯನ್ನು ಟೈಮ್ ಮಾಡಿ ಕ್ಲಿಕ್ ಮಾಡಿದರೆ ಸಾಕು. ಕಾರ್ಡ್ ಸ್ಥಿತಿ ಆಕ್ಟೀವ್ ಎಂದು ಕಾಣಿಸಿದರೆ ನಿಮ್ಮ ಕಾರ್ಡ್ ಸುರಕ್ಷಿತ, ಇನ್ ಆಕ್ಟೀವ್ ಎಂದು ಕಾಣಿಸಿಕೊಂಡರೆ ರದ್ದು ಆಗಿದೆ ಎಂದು ಅರ್ಥ.
ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು…
ಮಧ್ಯಪ್ರದೇಶದಲ್ಲಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು…
ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…
ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್ 1ರಂದು ಪುತ್ತೂರಿನಲ್ಲಿ ನೇರ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…