Advertisement
ರಾಜ್ಯ

ಬಿಪಿಎಲ್ ಕಾರ್ಡ್‍ದಾರರೇ ಎಚ್ಚರಿಕೆ : ಅನರ್ಹ ಕಾರ್ಡ್‍ಗಳ ರದ್ದು

Share

ಐಷಾರಾಮಿ ವಾಹನ, ಹೆಚ್ಚು ಆದಾಯ, ಸರ್ಕಾರಿ ನೌಕರಿ, ಹೆಚ್ಚು ಜಾಗ ಮತ್ತು ಭೂಮಿ ಇರುವ ಕುಟುಂಬಗಳ ಕಾರ್ಡ್‍ಗಳನ್ನೂ ಗುರುತಿಸಿಕೊಂಡು ಆದಾಯ ತೆರಿಗೆ ಇಲಾಖೆಯು ಪ್ರತಿ ವರ್ಷ ತೆರಿಗೆ ಸಲ್ಲಿಸುತ್ತಿರುವವರ ವಿವರಗಳನ್ನು ಆಹಾರ ಇಲಾಖೆಗೆ ಒದಗಿಸುತ್ತಿದೆ. ಈ ಕಾರಣದಿಂದ ಬಿಪಿಎಲ್‍ಗಳನ್ನು ಅನರ್ಹ ಎಂಬ ಪಟ್ಟಿಯಲ್ಲಿ ರದ್ದುಗೊಳಿಸಲಾಗುತ್ತಿದೆ. ಹೀಗಾಗಿ ಕೆಲವು ಬಿಪಿಎಲ್ ರೇಷನ್ ಕಾರ್ಡ್‍ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ರಾಜ್ಯಾದ್ಯಂತ ತೀವ್ರಗೊಂಡಿದೆ. ಈಗಾಗಲೇ ಬೆಂಗಳೂರು, ಹಾವೇರಿ, ಧಾರವಾಡ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾವಿರಾರು ಕಾರ್ಡ್‍ಗಳು ರದ್ದಾಗಿವೆ.

ಒಂದು ವೇಳೆ ಬಿಪಿಎಲ್ ಕಾರ್ಡ್‍ಗಳನ್ನು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿರುವವರು ಈ ಷರತ್ತುಗಳನ್ನು ಒಳಗೊಂಡಿರಬೇಕು.

  • ವಾರ್ಷಿಕ ಆದಾಯ 1.2 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.
  • ಯಾವ ಸದಸ್ಯರು ಸರ್ಕಾರಿ ಹುದ್ದೆ ಅಥವಾ ಖಾಯಂ ನೌಕರಿಯಲ್ಲಿ ಇರಬಾರದು.
  • ನಗರದಲ್ಲಿ 1000 ಚದರ ಅಡಿಗಿಂತ ಹೆಚ್ಚು ಮನೆ ಜಾಗ ಇರಬಾರದು.
  • ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‍ಗಿಂತ ಹೆಚ್ಚು ಭೂಮಿ ಇರಬಾರದು.
  • ನಾಲ್ಕು ಚಕ್ರ ವಾಹನ ಇರಬಾರದು ಹಾಗೂ ಸದಸ್ಯರೂ ಆದಾಯ ತೆರಿಗೆ ಪಾವತಿಸುತ್ತಿರಬಾರದು.

ಸರ್ಕಾರದ ಈ ನಿಯಮಗಳಿಂದ ಕೆಲವೊಮ್ಮೆ ಅನರ್ಹರನ್ನು ತೆಗೆದುಹಾಕೊ ನಿಜವಾದ ಬಡವರ ಕಾರ್ಡ್ ರದ್ದುಗಿಳಿಸಿರುತ್ತದೆ. ಒಂದುವೇಳೆ ಈ ಎಲ್ಲಾ ಷರತ್ತುಗಳು ಒಳಗೊಂಡಿದ್ದರೂ, ಬಿಪಿಎಲ್ ಕಾರ್ಡ್ ಅನರ್ಹ ಎಂದು ರದ್ದಾಗಿದೆ ಎಂದರೆ ಸಮೀಪದ ಆಹಾರ ಇಲಾಖೆ ಕಚೇರಿ ಅಥವಾ ತಾಲೂಕು ಕಚೇರಿಗೆ ದೂರು ಸಲ್ಲಿಸಬಹುದು.

ನಿಮ್ಮ ಕಾರ್ಡ್ ರದ್ದು ಆಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಈ ವಿಧಾನ ನೋಡಿ:  https://mahitikanaja.karnataka.gov.in/FCS/MyRationCard ಈ ಲಿಂಕ್ ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ತದನಂತರ ರೇಷನ್ ಕಾರ್ಡ್ ಸಂಖ್ಯೆಯನ್ನು ಟೈಮ್ ಮಾಡಿ  ಕ್ಲಿಕ್ ಮಾಡಿದರೆ ಸಾಕು.  ಕಾರ್ಡ್ ಸ್ಥಿತಿ ಆಕ್ಟೀವ್ ಎಂದು ಕಾಣಿಸಿದರೆ ನಿಮ್ಮ ಕಾರ್ಡ್ ಸುರಕ್ಷಿತ‌,   ಇನ್‍ ಆಕ್ಟೀವ್ ಎಂದು ಕಾಣಿಸಿಕೊಂಡರೆ ರದ್ದು ಆಗಿದೆ ಎಂದು ಅರ್ಥ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯವೇ ದೊಡ್ಡ ಶಕ್ತಿಮೂಲ

ಇಂಡೋನೇಷ್ಯಾದ ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯದಿಂದ ವರ್ಷಕ್ಕೆ 3.6 ಬಿಲಿಯನ್ ಘನ ಮೀಟರ್…

2 hours ago

ಎಲ್ ನಿನೋ ಆತಂಕದ ನಡುವೆಯೂ ಖಾರಿಫ್ ಬಿತ್ತನೆ 1,000 ಲಕ್ಷ ಹೆಕ್ಟೇರ್ ದಾಟಿದೆ

ಎಲ್ ನಿನೋ ಆತಂಕದ ನಡುವೆಯೂ ಭಾರತದಲ್ಲಿ 2026ರ ಖಾರಿಫ್ ಬಿತ್ತನೆ 1,000 ಲಕ್ಷ…

4 hours ago

ಹವಾಮಾನ ವರದಿ | 19-08-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಮುಂಗಾರು ಏಕೆ ದುರ್ಬಲವಾಗಿದೆ?

ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೆ ಬಿಸಿಲು–ಮೋಡದೊಂದಿಗೆ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆ…

9 hours ago

ತುಮಕೂರಿನಲ್ಲಿ ಭರ್ಜರಿ ಕೈಗಾರಿಕಾ ಹಬ್ – ₹7,000 ಕೋಟಿ ಹೂಡಿಕೆ, 88 ಸಾವಿರ ಉದ್ಯೋಗದ ಗುರಿ

ತುಮಕೂರು ಕೈಗಾರಿಕಾ ನೋಡ್‌ಗೆ 1,736 ಎಕರೆ ಮೀಸಲು. ₹7,000 ಕೋಟಿ ಹೂಡಿಕೆ, 88…

15 hours ago

ಮಂಗಳೂರಿನಲ್ಲಿ ಉದ್ಯೋಗಾವಕಾಶ : ಆ.20 ಮತ್ತು 21ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಮಂಗಳೂರು ಮತ್ತು ಬೆಂಗಳೂರಿನಲ್ಲಿ ವಿವಿಧ ಕಂಪೆನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಆ.20…

15 hours ago

ಹವಾಮಾನ ವರದಿ | 18-08-2026 | ಕರಾವಳಿಯಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ – ಮಲೆನಾಡಿನಲ್ಲಿ ಆಗಸ್ಟ್ 21 ರಿಂದ ಇಳಿಕೆ

ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೂ ಮೋಡ–ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.…

1 day ago