ಬಿಎಸ್‌ಎನ್‌ಎಲ್‌ ನಿಂದ ಭಾರತದ ಮೊದಲ “ಡೈರೆಕ್ಟ್-ಟು-ಡಿವೈಸ್” ಸೇವೆ |

November 14, 2024
6:17 AM
ಭಾರತೀಯ ದೂರಸಂಪರ್ಕ ಇಲಾಖೆ (BSNL) ಭಾರತದ ಮೊದಲ ಉಪಗ್ರಹದಿಂದ ಸಂಪರ್ಕ ಸಾಧನದ ಸೇವೆಯನ್ನು ನೀಡಲು ಸಿದ್ಧವಾಗಿದೆ. ಯಾವುದೇ ಸ್ಥಳಗಳಲ್ಲಿ  ಅಡೆತಡೆಯಿಲ್ಲದ ಸಂವಹನವನ್ನು ಒದಗಿಸುವ ಸಾಮರ್ಥ್ಯವನ್ನು ನೀಡಲು ಇಲ್ಲಿ ಸಾಧ್ಯವಿದೆ.

ಬಿಎಸ್‌ಎನ್‌ ಎಲ್‌ ಸೇವೆಯು ತನ್ನ ಸೇವೆಯ ವ್ಯಾಪ್ತಿಯನ್ನು ವಿಸ್ತಾರಗೊಳಿಸುತ್ತಿದೆ. ದೇಶದ ಗ್ರಾಮೀಣ ಭಾಗದವರೆಗೂ ನೆಟ್ವರ್ಕ್‌ ಹೊಂದಿರುವ ಬಿಎಸ್‌ಎನ್‌ಎಲ್‌ ಇಂದಿಗೂ ಇನ್ನಷ್ಟು ಗ್ರಾಮೀಣ ಭಾಗದವರೆಗೂ ತಪುಪಿಲ್ಲ. ಇದೀಗ ಭಾರತದ ಮೊದಲ ಡೈರೆಕ್ಟ್-ಟು-ಡಿವೈಸ್ ಉಪಗ್ರಹ ಸಂಪರ್ಕ ಸೇವೆಯನ್ನು ಪ್ರಾರಂಭಿಸುತ್ತಿದೆ. ಗ್ರಾಮೀಣ ಭಾಗದ ಬಳಕೆದಾರರಿಗೆ ತಡೆರಹಿತ ಸಂವಹನವನ್ನು ನೀಡುತ್ತದೆ, ಇದನ್ನು  ಯುಸ್‌ ಮೂಲದ ಕಂಪನಿ Viasat ಜೊತೆ ಸೇರಿ ತಂತ್ರಜ್ಞಾನ  ಅಭಿವೃದ್ಧಿಪಡಿಸಲಾಗಿದೆ.

ಭಾರತೀಯ ದೂರಸಂಪರ್ಕ ಇಲಾಖೆ (BSNL) ಭಾರತದ ಮೊದಲ ಉಪಗ್ರಹದಿಂದ ಸಂಪರ್ಕ ಸಾಧನದ ಸೇವೆಯನ್ನು ನೀಡಲು ಸಿದ್ಧವಾಗಿದೆ. ಯಾವುದೇ ಸ್ಥಳಗಳಲ್ಲಿ  ಅಡೆತಡೆಯಿಲ್ಲದ ಸಂವಹನವನ್ನು ಒದಗಿಸುವ ಸಾಮರ್ಥ್ಯವನ್ನು ನೀಡಲು ಇಲ್ಲಿ ಸಾಧ್ಯವಿದೆ.  ಕ್ಯಾಲಿಫೋರ್ನಿಯಾ ಮೂಲದ Viasat ಸಹಯೋಗದೊಂದಿಗೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಭೌಗೋಳಿಕ ಸವಾಲುಗಳನ್ನು ಲೆಕ್ಕಿಸದೆ ಬಳಕೆದಾರರಿಗೆ ಸಂಪರ್ಕ ಒದಗಿಸಲು ಈ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗಿದೆ.

ಈ ಉಪಗ್ರಹ ಸಂಪರ್ಕ ಸೇವೆಯು  ಕಣಿವೆಯ ಪ್ರದೇಶ, ಹಳ್ಳಿಗಳ ಪ್ರದೇಶದಂತಹ ಕಡೆಗಳಲ್ಲಿ ಯಾವುದೇ ನೆಟ್ವರ್ಕ್‌ ಇಲ್ಲದ ಕಡೆಗಳಲ್ಲಿ ಇರುವ ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.  ಉಪಗ್ರಹ ಸಂಪರ್ಕವು ತುರ್ತು ಮತ್ತು ಮಿಲಿಟರಿ ಬಳಕೆಗೆ  ಮಾತ್ರಾ ಲಭ್ಯವಿದ್ದರೂ, ಈ ಸೇವೆಯು ಮೊದಲ ಬಾರಿಗೆ ಜನಸಾಮಾನ್ಯರಿಗೂ ಲಭ್ಯವಾಗುವಂತೆ ಮಾಡಲಾಗುತ್ತಿದೆ.  ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ, ಸೆಲ್ಯುಲಾರ್ ಅಥವಾ ವೈ-ಫೈ ನೆಟ್‌ವರ್ಕ್‌ಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ ಬಳಕೆದಾರರು ಸಂಪರ್ಕ ಸಾಧಿಸಲು ಇನ್ನು ಸಾಧ್ಯವಾಗುತ್ತದೆ. ಈ ಸೇವೆಯು ತುರ್ತು ಕರೆ, SoS ಸಂದೇಶ ಕಳುಹಿಸುವಿಕೆ ಮತ್ತು ಇತರ ನೆಟ್‌ವರ್ಕ್‌ಗಳು ತಲುಪದಿರುವಾಗ UPI ಪಾವತಿಗಳನ್ನು ಕೂಡಾ ಮಾಡಲು ಸಾದ್ಯವಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

Viasat  ಸಹಯೋಗದೊಂದಿಗೆ,ಬಿಎಸ್‌ಎನ್‌ಎಲ್  ದ್ವಿಮುಖ ಉಪಗ್ರಹ ಸಂವಹನವನ್ನು ಸಕ್ರಿಯಗೊಳಿಸಿದೆ, 36,000‌ ಕಿಮೀ  ದೂರದಲ್ಲಿರುವ Viasat  ನ  ಎಲ್-ಬ್ಯಾಂಡ್ ಉಪಗ್ರಹಗಳಿಗೆ ಸಂಪರ್ಕಿಸುತ್ತದೆ. ಆದರೆ ಈ ಉಪಗ್ರಹ ಸಂಪರ್ಕ ಸೇವೆಯನ್ನು ಬಳಕೆದಾರರು ಹೇಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿ ಬಿಎಸ್‌ಎನ್‌ಎಲ್‌ ಉಲ್ಲೇಖಿಸಲಿಲ್ಲ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ
August 6, 2026
11:04 PM
by: ದ ರೂರಲ್ ಮಿರರ್.ಕಾಂ
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ
August 6, 2026
9:23 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಅತ್ಯಾಧುನಿಕ ‘ಸಂಯೋಜಿತ ಡಿಜಿಟಲ್ ಬೆಳೆ ಸಮೀಕ್ಷೆ’ | ಉಪಗ್ರಹ, ಡ್ರೋನ್‌, AI ತಂತ್ರಜ್ಞಾನ ಬಳಕೆಗೆ ಸರ್ಕಾರದ ಚಾಲನೆ
August 6, 2026
9:10 PM
by: ದ ರೂರಲ್ ಮಿರರ್.ಕಾಂ
ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ
August 6, 2026
8:22 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror