ಬಜೆಟ್‌ ಸುದ್ದಿ | ಮುಂಗಡ ಪತ್ರದಲ್ಲಿ ಕೃಷಿ ಬೆಳವಣಿಗೆಗೆ ಹಲವು ಯೋಜನೆ ಘೋಷಣೆ |

February 1, 2022
3:13 PM

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ ನಲ್ಲಿ ರೈತರ ಹಾಗೂ ಕೃಷಿ ಬೆಳವಣಿಗೆ ಕಡೆಗೂ ಗಮನಹರಿಸಿದ್ದಾರೆ.  ರೈತರ ಉತ್ಪನ್ನಗಳನ್ನು ಒಟ್ಟುಗೂಡಿಸಲು ಹೋಮ್ ಡೆಲಿವರಿ ಸ್ಪಾರ್ಟ್ಅಪ್‌ಗಳಿಗೆ ಪ್ರೋತ್ಸಾಹ ಮತ್ತು ರಾಷ್ಟ್ರೀಯ ಉಗ್ರಾಣ ಜಾಲವನ್ನು ಒಳಗೊಂಡಂತೆ ಭಾರತದ ದೀರ್ಘಕಾಲದ ಕೃಷಿ ಸಂಕಷ್ಟವನ್ನು ಎದುರಿಸಲು ವಿವಿಧ ಯೋಜನೆಯನ್ನು ಘೋಷಿಸಿದ್ದಾರೆ.

ರೈತರಿಂದ ನೇರ ಮಾರುಕಟ್ಟೆಗಾಗಿ ಮೊಬೈಲ್ ಅಪ್ಲಿಕೇಶನ್ ಆಧಾರಿತ ವ್ಯವಸ್ಥೆ, ಮೀನು ಮತ್ತು ಜಲಚರ ಸಾಕಣೆಗೆ ವಿಶಿಷ್ಟ ನಿಧಿ, ಕೃಷಿ ಉತ್ಪನ್ನದ ಗ್ರಾಮ ಸಂಗ್ರಹ ಯೋಜನೆ ಮತ್ತು ಸೌರ ಕೃಷಿಗೆ ಆದ್ಯತೆ,  ಕೃಷಿ ಮಾಡದ ಗ್ರಾಮೀಣ ಭೂಮಿಯನ್ನು ಅಭಿವೃದ್ಧಿ ಪಡಿಸಲು ಯೋಜನೆ ಒಳಗೊಂಡಿದೆ. ಕೃಷಿ-ಉಪಕರಣಗಳ ಪೂರೈಕೆದಾರರಿಗೆ ಬಾಡಿಗೆ ಮತ್ತು ಕಸ್ಟಮ್ ನೇಮಕಾತಿ ಆಧಾರದ ಮೇಲೆ ಬಳಸುವ ವಿಶೇಷ ಮೊಬೈಲ್ ಅಪ್ಲಿಕೇಶನ್ ಆಧಾರಿತ ವ್ಯವಸ್ಥೆ ಜಾರಿಯಾಗಲಿದೆ. ಈ ವ್ಯವಸ್ಥೆಯು ವಿವಿಧ ಕೃಷಿ ಉತ್ಪನ್ನಗಳ ಹವಾಮಾನ ಮತ್ತು ಮಾರುಕಟ್ಟೆ ಬೆಲೆಗಳ ಮಾಹಿತಿಯನ್ನು ನೀಡುತ್ತದೆ.

ರಸಗೊಬ್ಬರಗಳ ವಿವೇಕಯುತ ಬಳಕೆಯನ್ನು ಉತ್ತೇಜಿಸಲು “ಫಲೀಕರಣ” ಯೋಜನೆ ಬರಲಿದೆ. ಫಲೀಕರಣವು ಹನಿ ಅಥವಾ ತುಂತುರು ನೀರಾವರಿ ವ್ಯವಸ್ಥೆಯಲ್ಲಿ ರಸಗೊಬ್ಬರವನ್ನು ಕರಗಿಸಿ ನೀರಿನೊಂದಿಗೆ ವಿತರಿಸುವ ಪ್ರಕ್ರಿಯೆಯಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ
April 16, 2026
7:25 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಮುಕ್ತ ಕೃಷಿಗೆ ಪ್ರಧಾನಿ ಮೋದಿ ಕರೆ
April 16, 2026
7:06 AM
by: ಮಿರರ್‌ ಡೆಸ್ಕ್
ವಳಲಂಬೆಯಲ್ಲಿ ಎ.19 ರಂದು ‘ಸಂಗೀತ ಸಂಭ್ರಮ’
April 15, 2026
10:40 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-04-2026 | ಕರ್ನಾಟಕದಲ್ಲಿ ಬಿಸಿಗಾಳಿಯ ನಡುವೆ ಮಳೆಯ ಸುಳಿವು – ಏಪ್ರಿಲ್ 18 ರಿಂದ ಮಳೆ…!
April 15, 2026
2:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror