ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ರೈತರ ಹಾಗೂ ಕೃಷಿ ಬೆಳವಣಿಗೆ ಕಡೆಗೂ ಗಮನಹರಿಸಿದ್ದಾರೆ. ರೈತರ ಉತ್ಪನ್ನಗಳನ್ನು ಒಟ್ಟುಗೂಡಿಸಲು ಹೋಮ್ ಡೆಲಿವರಿ ಸ್ಪಾರ್ಟ್ಅಪ್ಗಳಿಗೆ ಪ್ರೋತ್ಸಾಹ ಮತ್ತು ರಾಷ್ಟ್ರೀಯ ಉಗ್ರಾಣ ಜಾಲವನ್ನು ಒಳಗೊಂಡಂತೆ ಭಾರತದ ದೀರ್ಘಕಾಲದ ಕೃಷಿ ಸಂಕಷ್ಟವನ್ನು ಎದುರಿಸಲು ವಿವಿಧ ಯೋಜನೆಯನ್ನು ಘೋಷಿಸಿದ್ದಾರೆ.
ರೈತರಿಂದ ನೇರ ಮಾರುಕಟ್ಟೆಗಾಗಿ ಮೊಬೈಲ್ ಅಪ್ಲಿಕೇಶನ್ ಆಧಾರಿತ ವ್ಯವಸ್ಥೆ, ಮೀನು ಮತ್ತು ಜಲಚರ ಸಾಕಣೆಗೆ ವಿಶಿಷ್ಟ ನಿಧಿ, ಕೃಷಿ ಉತ್ಪನ್ನದ ಗ್ರಾಮ ಸಂಗ್ರಹ ಯೋಜನೆ ಮತ್ತು ಸೌರ ಕೃಷಿಗೆ ಆದ್ಯತೆ, ಕೃಷಿ ಮಾಡದ ಗ್ರಾಮೀಣ ಭೂಮಿಯನ್ನು ಅಭಿವೃದ್ಧಿ ಪಡಿಸಲು ಯೋಜನೆ ಒಳಗೊಂಡಿದೆ. ಕೃಷಿ-ಉಪಕರಣಗಳ ಪೂರೈಕೆದಾರರಿಗೆ ಬಾಡಿಗೆ ಮತ್ತು ಕಸ್ಟಮ್ ನೇಮಕಾತಿ ಆಧಾರದ ಮೇಲೆ ಬಳಸುವ ವಿಶೇಷ ಮೊಬೈಲ್ ಅಪ್ಲಿಕೇಶನ್ ಆಧಾರಿತ ವ್ಯವಸ್ಥೆ ಜಾರಿಯಾಗಲಿದೆ. ಈ ವ್ಯವಸ್ಥೆಯು ವಿವಿಧ ಕೃಷಿ ಉತ್ಪನ್ನಗಳ ಹವಾಮಾನ ಮತ್ತು ಮಾರುಕಟ್ಟೆ ಬೆಲೆಗಳ ಮಾಹಿತಿಯನ್ನು ನೀಡುತ್ತದೆ.
ರಸಗೊಬ್ಬರಗಳ ವಿವೇಕಯುತ ಬಳಕೆಯನ್ನು ಉತ್ತೇಜಿಸಲು “ಫಲೀಕರಣ” ಯೋಜನೆ ಬರಲಿದೆ. ಫಲೀಕರಣವು ಹನಿ ಅಥವಾ ತುಂತುರು ನೀರಾವರಿ ವ್ಯವಸ್ಥೆಯಲ್ಲಿ ರಸಗೊಬ್ಬರವನ್ನು ಕರಗಿಸಿ ನೀರಿನೊಂದಿಗೆ ವಿತರಿಸುವ ಪ್ರಕ್ರಿಯೆಯಾಗಿದೆ.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…