ಬಜೆಟ್ 2026 | ಭಾರತೀಯ ಕೃಷಿಯ ಪುನರ್ರಚನೆ

January 6, 2026
11:32 AM

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026 ರ ಬಜೆಟ್ ಮಂಡನೆಗೆ ಸಿದ್ಧರಾಗುತ್ತಿದ್ದಂತೆ, ಭಾರತೀಯ ಕೃಷಿಯಲ್ಲಿ ಕೆಲವು ನಿರ್ಣಾಯಕ ಬದಲಾವಣೆಯ ಹಂತದಲ್ಲಿದೆ. ಹೀಗಾಗಿ ಹಣಕಾಸು ಸಚಿವರು ಹಾಗೂ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕಾದ ಹಲವು ಅಂಶಗಳು ಇವೆ. ಇದರಲ್ಲಿ ಸಬ್ಸಿಡಿಗಳಿಂದ ಹಿಡಿದು ಫಲಿತಾಂಶ ಆಧಾರಿತ, ಹವಾಮಾನ ಆಧಾರಿತ,  ಸ್ಮಾರ್ಟ್ ಕೃಷಿಯವರೆಗೆ ಭಾರತದ ಕೃಷಿ-ಆರ್ಥಿಕತೆಯನ್ನು ಗಮನದಲ್ಲಿರಿಸಿಕೊಳ್ಳಬೇಕಿದೆ.

ವಿಕಸಿತ ಭಾರತದ ದೃಷ್ಟಿಕೋನದಿಂದಲೂ ಬಜೆಟ್‌ ಗಮನಿಸಿದರೆ, ರಚನಾತ್ಮಕ ಸುಧಾರಣೆಯ ಕಡೆಗೆ ಗಮನಹರಿಸಬೇಕಾದ ಅಗತ್ಯ ಇದೆ.  ಸಬ್ಸೀಡಿ ಹಂಚಿಕೆಯಲ್ಲೇ ಕಾಲ ಕಳೆಯುವುದರ ಜೊತೆಗೇ ಕೃಷಿಯಲ್ಲಿ ಹೆಚ್ಚಿನ ಉತ್ಪಾದಕತೆ, ಹವಾಮಾನ ವೈಪರೀತ್ಯದಿಂದ ರಕ್ಷಣೆ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಬೆಳವಣಿಗೆಯ ಕಡೆಗೆ ಕೃಷಿಯನ್ನು ಪರಿವರ್ತಿಸಲು ನೆರವು, ಮಾರುಕಟ್ಟೆಗಳು ಮತ್ತು ಆಧುನಿಕ ವಿಜ್ಞಾನವನ್ನು ಜೋಡಿಸುವುದು ಅಗತ್ಯ ಇದೆ.  ಕೃಷಿ ನೀತಿ, ಶೈಕ್ಷಣಿಕ ಮತ್ತು ಕೃಷಿ ಉದ್ಯಮದ ಕಡೆಗೆ ಗಮನಹರಿಸಬೇಕಾಗಿದೆ.  ಸಬ್ಸೀಡಿಗಳನ್ನು ನೀಡಿಯೂ ಕೃಷಿ ಉತ್ಪಾದಕತೆಯಲ್ಲಿ ಹೆಚ್ಚಳವಾಗಿಲ್ಲ, ಹವಾಮಾನ ವಿಪರೀತವಾಗಿ ಸಮಸ್ಯೆ ತಂದಿದೆ.  ಫಲಿತಾಂಶ ಆಧಾರಿತವಾಗಿ ಕೃಷಿ ಬೆಳೆಯುತ್ತಿಲ್ಲ . ಈಗ ಡಿಜಿಟಲ್ ಆಗಿಯೂ ಕೃಷಿ ಬೆಳೆವಣಿಗೆಯನ್ನು ಪರಿಶೀಲಿಸಬಹುದಾದ ಅಗತ್ಯ ಇದೆ.  ರೈತರ ಜೀವನ, ಮಣ್ಣಿನ ದೃಷ್ಟಿಯಿಂದಲೂ ಗಮನಿಸಿದಾಗ ಮಣ್ಣು ಮತ್ತು ನೀರಿನ ಆರೋಗ್ಯದ ರಕ್ಷಣೆಗೆ ಆದ್ಯತೆ ಅಗತ್ಯ ಇದೆ.

ಈ ಎಲ್ಲಾ ಕಾರಣದಿಂದ ಈ ಬಾರಿ ಹವಾಮಾನದ ನಿಖರತೆಗೆ ಎಐ, ನಿಖರ ಪೋಷಣೆ, ಡಿಜಿಟಲ್ ಭೂ ದಾಖಲೆಗಳು, ಮೌಲ್ಯವರ್ಧಿತ ರಫ್ತುಗಳನ್ನು ಸಂಯೋಜಿಸುವ ಮಿಷನ್,  ಪೋಷಕಾಂಶ ದಕ್ಷತೆಯ ಸೂಚ್ಯಂಕಗಳಿಂದ ಕೃಷಿ ಡ್ರೋನ್‌ಗಳು, ಡಿಜಿಟಲ್ ಫಾರ್ಮ್ ಐಡಿಗಳು, ನೀರಾವರಿ ಮತ್ತು ತ್ಯಾಜ್ಯ-ಮುಕ್ತ ಮಾರುಕಟ್ಟೆ ವ್ಯವಸ್ಥೆ,  ಉತ್ಪಾದಕತೆ, ಸುಸ್ಥಿರತೆ ಮತ್ತು ಆದಾಯದ ಫಲಿತಾಂಶಗಳು ಸೇರಿದಂತೆ ಭಾರತೀಯ ಕೃಷಿ ಬೆಳವಣಿಗೆಗೆ ಹೆಚ್ಚಿನ ತಾಂತ್ರಿಕ ಅಗತ್ಯಗಳೂ ಇವೆ. ಬಜೆಟ್‌ ರೂಪಿಸುವ ವೇಳೆ ಇಂತಹ ಆದ್ಯತೆಗಳ ಕಡೆಗೂ ಗಮನ ಅಗತ್ಯವಿದೆ.

ಮೂಲ : ಎಗ್ರೋ ಸ್ಪೆಕ್ಟ್ರಂ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ
August 2, 2026
9:50 PM
by: ದ ರೂರಲ್ ಮಿರರ್.ಕಾಂ
ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ
August 2, 2026
9:41 PM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು
August 2, 2026
8:39 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?
August 2, 2026
6:59 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror