ಅನುಕ್ರಮ

ನೀವೀಗ ಕಾಳುಮೆಣಸು ಕೃಷಿ ಆಸಕ್ತರೇ….?, ಹಾಗಿದ್ದರೆ ಗಮನಿಸಿ….| ಕಾಳುಮೆಣಸು ಕೃಷಿಯ ಕಾರ್ಯ ಚಟುವಟಿಕೆಗಳು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಾಳು ಮೆಣಸು ಬೆಳೆಗಾರರು ಉತ್ತಮ ಇಳುವರಿಯನ್ನು ಪಡೆಯಲು ಪ್ರತೀ ತಿಂಗಳು ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳೇನು? ಯಾವ ರೀತಿಯ ಕೃಷಿ ಪದ್ಧತಿಯನ್ನು ಪಾಲಿಸಬೇಕು? ಬೆಳೆಯುವ ಹಂತದಲ್ಲಿ ಕೊಡಬೇಕಾದ ಪೋಷಕಾಂಶಗಳೆಷ್ಟು? ರೋಗ ಹತೋಟಿ ಮತ್ತು ಮುಂಜಾಗ್ರತಾ ಕ್ರಮಗಳಲ್ಲಿ ಬಳಸುವ ರೋಗನಾಶಕಗಳು, ಕೀಟನಾಶಕಗಳು ಯಾವುವು? ಎಂಬ ಸಮಗ್ರ ಮಾಹಿತಿ ಇಲ್ಲಿದೆ.…… ಮುಂದೆ ಓದಿ……

Advertisement
Advertisement
  • ಜನವರಿ: ಎಳೆಯ ಕಾಳುಮೆಣಸಿನ ಬಳ್ಳಿಗಳಿಗೆ ನೆರಳು ಮತ್ತು ನೀರಿನ ನಿರ್ವಹಣೆ ಮಾಡುವುದು.
  • ಫೆಬ್ರವರಿ:  ಎಳೆಯ ಕಾಳುಮೆಣಸಿನ ಬಳ್ಳಿಗಳಿಗೆ ನೆರಳು ಮತ್ತು ನೀರಿನ ನಿರ್ವಹಣೆ ಮಾಡುವುದು.  ಹಳದಿಯಾದ ಮತ್ತು ಬಿಸಿಲು ಬೀಳುವ ಬಳ್ಳಿಗಳಿಗೆ 3% ಸುಣ್ಣದ ದ್ರಾವಣ ಸಿಂಪಡಣೆ ಮಾಡುವುದು.
  • ಮಾರ್ಚ್:  ಕಾಳು ಮೆಣಸು ಬೆಳೆ ಕೊಯ್ಲು,  10 ದಿವಸಗಳ ಮಧ್ಯಂತರದಲ್ಲಿ 50- 80 ಲೀ ನೀರು ಪ್ರತೀ ಬಳ್ಳಿಗಳಿಗೆ ನೀಡುವುದು.,  ಕೊಯ್ಲಿನ ನಂತರ Scale insect ಗಳ ನಿಯಂತ್ರಣಕ್ಕಾಗಿ Dimethoate (2ml/Ltr) ಅಥವಾ Imidacloprid (0.4ml/Ltr) ಸಿಂಪಡಣೆ ಮಾಡುವುದು.
  • ಎಪ್ರಿಲ್: ಮಳೆ ವಿಳಂಬವಾದಲ್ಲಿ, 10 ದಿನಗಳ ಮಧ್ಯಂತರದಲ್ಲಿ ಪ್ರತೀ ಬಳ್ಳಿಯ ಬುಡಕ್ಕೆ 50-80 ಲೀ ನೀರುಣಿಸುವುದು.,  ಕನಿಷ್ಠ 5-8 ಸಲದ ನೀರಾವರಿಯು ಬೇಗ ಕಾಳುಮೆಣಸಿನ ಗೆರೆ(spike) ಗಳನ್ನು ಬಿಡಲು, ಕಾಳು ಕಟ್ಟುವಿಕೆಗೆ ಮತ್ತು ಕಾಳು ಉದುರದಂತೆ ತಡೆಯಲು ಸಹಕಾರಿಯಾಗಿದೆ., ನೆರಳು ನಿರ್ವಹಣೆ.,  ಪ್ರತೀ ಬಳ್ಳಿಯ ಬುಡದ ಸುತ್ತಲೂ 1Kg ಕೃಷಿ ಸುಣ್ಣವನ್ನು ಹರಡುವುದು.
  • ಮೇ : ನೀರಾವರಿ ಮುಂದುವರೆಸುವುದು.,  ನೆರಳು ನಿರ್ವಹಣೆ., 100g Urea + 50g DAP + 150g MOP ಪ್ರತೀ ಬಳ್ಳಿಗಳ ಬುಡಕ್ಕೆ ನೀಡುವುದು., ಮೈಕ್ರೋನ್ಯೂಟ್ರಿಯೆಂಟ್ (IISR ಪೆಪ್ಪರ್ ಸ್ಪೆಷಲ್ 1Kg) + ಫೋಲಿಯಾರ್ ನ್ಯೂಟ್ರಿಷನ್ (ಮೋನೋ ಅಮೋನಿಯಂ ಫಾಸ್ಫೇಟ್ (MAP) 12:61:0 1Kg) 200 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಣೆ ಮಾಡುವುದು., ಬಳ್ಳಿಯ ಬುಡಕ್ಕೆ ಒಂದು ಬುಟ್ಟಿ ಕಾಂಪೋಸ್ಟ್ ಗೊಬ್ಬರ ಹಾಕಿ ಮಣ್ಣು ಹಾಕುವುದು ಅಥವಾ ಮಲ್ಚಿಂಗ್ ಮಾಡುವುದು.
  • ಜೂನ್ : ರನ್ನರ್ ಗಳು, ಟಾಪ್ ಶೂಟ್ ಗಳು ಅಥವಾ ಬೇರು ಬಂದ ಗಿಡಗಳನ್ನು ನಾಟಿ ಮಾಡುವುದು., ಶೇಕಡಾ 1 ರ ಬೋರ್ಡೋ ದ್ರಾವಣ ಸಿಂಪಡಿಸುವುದು.,  Copper oxy chloride (0.5Kg/barrel) ಅಥವಾ Potassium phosphonate (600ml/barrel) ದ್ರಾವಣವನ್ನು 5 ಲೀಟರ್ ನಂತೆ ಪ್ರತೀ ಬಳ್ಳಿಗಳ ಬುಡ ನೆನೆಯುವಂತೆ ಹಾಕುವುದು.
  • ಜುಲೈ : ನಾಟಿ ಮಾಡಿದ ಬಳ್ಳಿಗಳ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸುವುದು.,  Phytophthora ಸೋಂಕು ಕಂಡುಬಂದಲ್ಲಿ Metalaxyl + Mancozeb (1.2g/Ltr) ದ್ರಾವಣವನ್ನು ಸೋಂಕು ಕಂಡುಬಂದ ಮತ್ತು ಸುತ್ತಮುತ್ತಲಿನ ಬಳ್ಳಿಗಳಿಗೆ ಸಿಂಪಡಿಸಿ (spot spray), ಬುಡ ಒದ್ದೆಯಾಗುವಂತೆ ಹಾಕುವುದು (drenching).,  ಸೋಂಕಿನಿಂದಾಗಿ ಬಿದ್ದ ಎಲೆಗಳು ಮತ್ತು ಗೆರೆಗಳನ್ನು ಸ್ವಚ್ಛಗೊಳಿಸುವುದು.,  10 ದಿನಗಳ ನಂತರ ಸಿಂಪಡಣೆಯನ್ನು ಪುನರಾವರ್ತಿಸುವುದು; ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲಾ ಬಳ್ಳಿಗಳಿಗೆ ಶೇಕಡಾ 1 ರ ಬೋರ್ಡೋ ದ್ರಾವಣದ ಎರಡನೇ ಸಿಂಪಡಣೆಯನ್ನು ಮಾಡುವುದು.
  • ಆಗಸ್ಟ್ : Phytophthora ಸೋಂಕಿನ ಬಗ್ಗೆ ಎಚ್ಚರ ವಹಿಸುವುದು.,  ಶೀತ ಮತ್ತು ನೀರು ನಿಲ್ಲುವ ಪ್ರದೇಶಗಳಲ್ಲಿ ಶೇಕಡಾ 1 ರ ಬೋರ್ಡೋ ದ್ರಾವಣ ಸಿಂಪಡಿಸುವುದು.
  • ಸೆಪ್ಟೆಂಬರ್ :  ಬೇರು ಬಂದ ಕಾಳುಮೆಣಸಿನ ಗಿಡಗಳನ್ನು ನಾಟಿ ಮಾಡುವುದು.,  ಶೇಕಡಾ 1 ರ ಬೋರ್ಡೋ ದ್ರಾವಣ ಸಿಂಪಡಿಸುವುದು ಮತ್ತು Copper oxychloride (0.5Kg/barrel) 5 ಲೀಟರ್ ನಂತೆ ಪ್ರತೀ ಬಳ್ಳಿಯ ಬುಡ ನೆನೆಯುವಂತೆ ಹಾಕುವುದು ಅಥವಾ Potassium phosphonate (600ml/barrel) ಸಿಂಪಡಿಸಿ, 5 ಲೀಟರ್ ನಂತೆ ಪ್ರತೀ ಬಳ್ಳಿಯ ಬುಡ ನೆನೆಯುವಂತೆ ಹಾಕುವುದು., ಪ್ರತೀ ಬಳ್ಳಿಗಳ ಬುಡ ನೆನೆಯುವಂತೆ Flufyrom (1ml/Ltr) ದ್ರಾವಣವನ್ನು 4-5 ಲೀಟರ್ ಹಾಕುವುದು., 100g Urea + 50g DAP + 150g MOP ರಸಗೊಬ್ಬರ ನೀಡುವುದು.,  ಒಂದು ಬುಟ್ಟಿ ಕಾಂಪೋಸ್ಟ್ ಗೊಬ್ಬರ ಮತ್ತು 0.5Kg ಟ್ರೈಕೋಡರ್ಮ ಮಿಶ್ರಿತ ಬೇವಿನ ಹಿಂಡಿ ಹಾಕುವುದು.
  • ಅಕ್ಟೋಬರ್ : ಒಣ ಪ್ರದೇಶಗಳಲ್ಲಿ ಗೆದ್ದಲು ನಿಯಂತ್ರಣಕ್ಕಾಗಿ Chlorophyriphos (0.07%) ಅಥವಾ Imidacloprid (0.3ml/Ltr) ದ್ರಾವಣವನ್ನು 4-5 ಲೀಟರ್ ನಂತೆ ಬುಡದಿಂದ 3 ಅಡಿಗಳ ವರೆಗೆ ನೆನೆಯುವಂತೆ ಹಾಕುವುದು., ಇದು ಗೆದ್ದಲು, ಬೇರು ಹುಳ ಮತ್ತು ಮೆಲಿ ಬಗ್ ಗಳ ನಿಯಂತ್ರಣಕ್ಕೆ ಸಹಕಾರಿ.
  • ನವೆಂಬರ್ : ಸ್ಕೇಲ್ ಇನ್ಸೆಕ್ಟ್ ಗಳು ಕಂಡುಬಂದಲ್ಲಿ Dimethoate (2ml/Ltr) ಅಥವಾ Imidacloprid (0.3ml/Ltr) ದ್ರಾವಣವನ್ನು ಸಿಂಪಡಿಸುವುದು.
  • ಡಿಸೆಂಬರ್ : ಹೆಚ್ಚು ಕಾಳುಮೆಣಸು ಇರುವ ಬಳ್ಳಿಗಳಿಗೆ ರಕ್ಷಣಾತ್ಮಕ ನೀರಾವರಿಯನ್ನು ಒದಗಿಸುವುದು.
ಬರಹ :
ಅರುಣ್ ಕುಮಾರ್ ಕಾಂಚೋಡು

ಆಧಾರ: Calendar of operations in black pepper (Monthly). Published by: Head, IISR, Regional station, Appangala, Madikeri.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅರುಣ್‌ ಕುಮಾರ್ ಕಾಂಚೋಡು

ಅರುಣ್‌ ಕುಮಾರ್‌ ಕಾಂಚೋಡು ಅವರು ಸಸ್ಯಶಾಸ್ತ್ರ ವಿಭಾಗದಲ್ಲಿ ಎಂಎಸ್ಸಿ ಪದವೀಧರರು. ಸದ್ಯ ಕೃಷಿ ಮಾಡುತ್ತಿದ್ದಾರೆ. ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳಿಗೆ ಆದ್ಯತೆ ನೀಡುವ ಯುವ ಕೃಷಿಕ. Arun Kumar Kanchodu is an MSc graduate in Botany. He is currently engaged in farming. He is a young farmer who prefers scientific methods in farming.

Published by
ಅರುಣ್‌ ಕುಮಾರ್ ಕಾಂಚೋಡು

Recent Posts

ಜಾನುವಾರುಗಳನ್ನು ಅರಣ್ಯದಲ್ಲಿ ಮೇವು | ಆದೇಶವನ್ನು ಹಿಂಪಡೆಯುವಂತೆ ರೈತರು ಒತ್ತಾಯ

ರೈತರ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಿಸುವ ವಿಚಾರವಾಗಿ ಹೊರಡಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿವಮೊಗ್ಗ…

5 hours ago

ರಾಜ್ಯದಲ್ಲಿ ಅರಣ್ಯ ಇಲಾಖೆಯಿಂದ 11.50 ಕೋಟಿ ಸಸಿ ನೆಡುವ ಗುರಿ

ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು 11 ಕೋಟಿ 50…

5 hours ago

ರಾಮನ ಆದರ್ಶ ಸರ್ವಕಾಲಿಕ : ರಾಘವೇಶ್ವರ ಶ್ರೀ

ರಾಮ ಎಂದರೆ ಧರ್ಮ; ಸಮಾಜದ ಪ್ರತಿಯೊಬ್ಬರು ರಾಮನ ಅನುಶಾಸನಕ್ಕೆ ಒಳಪಡಬೇಕು ಎಂಬ ಭಾವದಿಂದ…

7 hours ago

ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕ್ಯಾನ್ಸರ್ ಡೇ ಕೇರ್ ಸೆಂಟರ್ ಮಂಜೂರು

ಕ್ಯಾನ್ಸರ್‌ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ…

7 hours ago

ರಾಜ್ಯದಲ್ಲಿ ರಸಗೊಬ್ಬರ ಕೊರತೆ ನೀಗಿಸಲು ಅಗತ್ಯ ಕ್ರಮ

ಕೇಂದ್ರ ಸರ್ಕಾರದಿಂದ ಕಳೆದ ಮೂರು ವರ್ಷಗಳಲ್ಲಿ ಆರಂಭಿಕ ಶುಲ್ಕನ್ನು ಪರಿಗಣಿಸದೇ ಯೂರಿಯಾ ಸೇರಿದಂತೆ…

7 hours ago

2025ರ ನಾಗರಪಂಚಮಿಯಲ್ಲಿ ಈ ರಾಶಿಗಳಿಗೆ ಅದೃಷ್ಟ! :ನಾಗದೇವರ ಕೃಪೆಗಾಗಿ ಹೀಗೆ ಮಾಡಿ…

ನಾಗರಪಂಚಮಿ, ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ಪವಿತ್ರ ಹಬ್ಬವಾಗಿದೆ.…

12 hours ago