ಸುದ್ದಿಗಳು

#arecanut | ಮಾರುಕಟ್ಟೆಗೆ ಬಂದಿದೆ ಅಡಿಕೆ “ಸೌಗಂಧ್‌ ” | ಗಮನಸೆಳೆದ ಕ್ಯಾಂಪ್ಕೋ ಅಡಿಕೆ ಉತ್ಪನ್ನ | ಅಡಿಕೆ ಬಳಕೆ ಮಾರುಕಟ್ಟೆ ಏರಿಕೆಗೂ ಕಾರಣ…! |

Share

ಅಡಿಕೆಯು ಮಲೆನಾಡು ಹಾಗೂ ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆ. ಈ ಅಡಿಕೆಯನ್ನು ದೇಶದ ಬಹುಪಾಲು ಕಡೆಗಳಲ್ಲಿ  ಜಗಿಯುವುದಕ್ಕೆ ಬಳಸುತ್ತಾರೆ. ಆದರೆ ಅಡಿಕೆ ಬೆಳೆಯುವ ನಾಡಿನಲ್ಲಿ ಅಡಿಕೆ ಉಪಯೋಗವೇ ಕಡಿಮೆ ಎಂಬ ಹಂತದಲ್ಲಿತ್ತು. ಬೀಡ ಹಾಗೂ ಪಾನ್‌ ಗಳಲ್ಲಿ ಮಾತ್ರಾ ಅಡಿಕೆ ಬಳಕೆಯಾಗುತ್ತಿತ್ತು. ಕೆಲವು ಹಿರಿಯರು ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಬಳಕೆ ಆಗುತ್ತಿತ್ತು. ಇದೀಗ ಕರಾವಳಿ ಸಹಿತ ಎಲ್ಲಾ ಜನರೂ ಬಳಕೆ ಮಾಡುವಂತಹ ಅಡಿಕೆಯ ಉತ್ಪನ್ನವನ್ನು ಕ್ಯಾಂಪ್ಕೋ ಬಿಡುಗಡೆ ಮಾಡಿದೆ. ಸದ್ಯ ಸ್ಥಳೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಈ ಉತ್ಪನ್ನ “ಸೌಗಂಧ್‌ “

Advertisement

ಅಡಿಕೆ ಬೆಳೆಯುವ ನಾಡಿನಲ್ಲಿ ಕೂಡಾ ಅಡಿಕೆ ಬಳಕೆಯಾಗಬೇಕು ಎನ್ನುವ ಬೇಡಿಕೆ, ಚಿಂತನೆ  ಹಲವು ಸಮಯಗಳಿಂದಲೂ ವ್ಯಕ್ತವಾಗುತ್ತಿತ್ತು. ಆದರೆ ಬೀಡಾ ಮಾದರಿಯಲ್ಲಿ, ಪಾನ್‌ ಮಾದರಿಯಲ್ಲಿ ಅಡಿಕೆ ಬಳಕೆ ಮಾಡುವುದಕ್ಕೆ ಹಲವು ಮಂದಿ ಸಮ್ಮತಿ ತೋರಿಸಿರಲಿಲ್ಲ. ಆದರೆ ದೇಶದ ಹಲವು ಕಡೆಗಳಲ್ಲಿ ಅಡಿಕೆಯನ್ನು ಪಾನ್‌ ಮೂಲಕ ಉಪಯೋಗಿಸುತ್ತಾರೆ. ಕೆಲವು ಅಡಿಕೆಯನ್ನು ಗುಟ್ಕಾ, ಪಾನ್‌ ಮಸಾಲಾಗಳಲ್ಲೂ ಉಪಯೋಗ ಮಾಡುತ್ತಾರೆ. ಆರೋಗ್ಯಕ್ಕೆ ಹಾನಿಕರ ಇಲ್ಲದೆಯೇ ಅಡಿಕೆಯನ್ನು ಬಳಕೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಹಲವು ಸಂಶೋಧನೆಗಳೂ ಹೇಳಿದೆ. ದೇಶದ ಸಾಂಬಾರ ಮಂಡಳಿ ಹಾಗೂ ಆಹಾರ ಸುರಕ್ಷತಾ ವಿಭಾಗವೂ ಅಡಿಕೆ ಮಾತ್ರಾ ಜಗಿಯುವುದು  ಆರೋಗ್ಯ ಉತ್ತಮ ಎಂದೂ ಹೇಳಿರುವ ವರದಿಗಳು ಬಂದಿತ್ತು. ಈ ಎಲ್ಲದರ ನಡುವೆಯೇ ಕ್ಯಾಂಪ್ಕೋ ಎಲ್ಲರೂ ಉಪಯೋಗಿಸಬಹುದಾದಂತಹ ಅಡಿಕೆ ಉತ್ಪನ್ನವನ್ನು ತಯಾರು ಮಾಡಿದೆ. ಈ ಹಿಂದೆ ಕಾಜುಸುಪಾರಿ ಎಂಬ ಹೆಸರಿನಲ್ಲಿ ಅಡಿಕೆ ಉತ್ಪನ್ನ ಬಿಡುಗಡೆ ಮಾಡಿತ್ತು. ಆ ಬಳಿಕ ಕೆಲವು ಕಾರಣಗಳಿಂದ ಉತ್ಪಾದನೆ ಸ್ಥಗಿತ ಮಾಡಲಾಗಿತ್ತು. ಇದೀಗ ಮತ್ತೆ ಕ್ಯಾಂಪ್ಕೋ ಹೊಸ ಹೆಜ್ಜೆ ಇಟ್ಟಿರುವುದು  ಅಡಿಕೆ ಬೆಳೆಗಾರರಿಗೂ ಆಶಾದಾಯಕ.

ಯಾವುದೇ ರಾಸಾಯನಿಕ ಬಳಸದೆ “ಸೌಂಗಧ್‌” ಹೆಸರಿನಲ್ಲಿ ಬಿಡುಗಡೆ ಮಾಡಿರುವ ಈ ಅಡಿಕೆ ಉತ್ಪನ್ನವು, ಅಡಿಕೆಯ ಹುಡಿಯಿಂದ ಕೂಡಿದೆ. ಇದನ್ನು ಮೌತ್‌ ಫ್ರೆಶ್‌ನರ್‌ ಆಗಿಯೂ ಬಳಕೆ ಮಾಡಬಹುದು.ಇದರಲ್ಲಿ ಅಡಿಕೆಯನ್ನು ತೆಳುವಾಗಿ ಕತ್ತರಿಸಿ ಇದಕ್ಕೆ ಲವಂಗ, ಏಲಕ್ಕಿ ಸೇರಿದಂತೆ ಇತರ ವಸ್ತುಗಳ ಜೊತೆ ಫ್ರೈ ಮಾಡಲಾಗಿದೆ. ಹೀಗಾಗಿ ಬಾಯಿ ಸುವಾಸನೆ ಹಾಗೂ ಸಿಹಿಯಾಗಿದ್ದು ರುಚಿಕರವಾಗಿಯೂ ಇದೆ.ಸದ್ಯ 80 ಗ್ರಾಂ ಜಾರ್‌ಗಳಲ್ಲಿ ಲಭ್ಯವಿದ್ದು 100 ರೂಪಾಯಿ ದರ ನಿಗದಿಪಡಿಸಲಾಗಿದೆ. ಈಗ ಸ್ಥಳೀಯ ಮಾರುಕಟ್ಟೆಗಳಲ್ಲಿ ಈ ಸೌಗಂಧ್‌ ಮಾರಾಟಕ್ಕಿದೆ. ಕೃಷಿಕರ ಹಾಗೂ ಸಾರ್ವಜನಿಕರ ಬೇಡಿಕೆಗಳನ್ನು ಗಮನಿಸಿಕೊಂಡು ಕ್ಯಾಂಪ್ಕೋ ಈ ಉತ್ಪನ್ನವನ್ನು ವಿಸ್ತಾರ ಮಾಡುವ ಯೋಜನೆಯನ್ನು ಹೊಂದಿದೆ. ಮುಂದಿನ ಮಹಾಸಭೆಯಲ್ಲಿ ಈ ಉತ್ಪನ್ನವನ್ನು ಕ್ಯಾಂಪ್ಕೋ ಅಧಿಕೃತವಾಗಿ ಬಿಡುಗಡೆ ಕೂಡಾ ಮಾಡಲಿದೆ. ಈ ಉತ್ಪನ್ನವನ್ನು ಸಭೆ, ಸಮಾರಂಭಗಳಲ್ಲಿ ಪಾನ್‌ ಜೊತೆ ಬಳಕೆ ಮಾಡಬಹುದಾಗಿದೆ. ಈ ಕಾರಣದಿಂದ ಸೌಗಂಧ್‌ ಮಾರುಕಟ್ಟೆಯಲ್ಲಿ ಸ್ಥಾನಪಡೆಯುವ ಸಾಧ್ಯತೆ ಇದೆ.

ಈಗಾಗಲೇ ಅಡಿಕೆಯ ಉತ್ಪನ್ನವಾದ ಸೌಗಂಧ್‌ ಸ್ಥಳೀಯ ಮಾರುಕಟ್ಟೆಗಳಲ್ಲಿ ಬಿಡಲಾಗಿದೆ. 80 ಗ್ರಾಂ ಜಾರ್‌ಗೆ 100 ರೂಪಾಯಿ ನಿಗದಿ ಮಾಡಲಾಗಿದೆ. ಸ್ಥಳೀಯ ಮಾರುಕಟ್ಟೆಯ ಫೀಡ್‌ ಬ್ಯಾಕ್‌ ಹಾಗೂ ಬೇಡಿಕೆಯನ್ನು ಗಮನಿಸಿಕೊಂಡು ಮುಂದೆ ಪ್ರತ್ಯೇಕ ವಿಭಾಗದ ಮೂಲಕವೇ ಸೌಗಂಧ್‌ ಬಿಡುಗಡೆ ಮಾಡಲಾಗುತ್ತದೆ.
ಕೃಷ್ಣ ಕುಮಾರ್‌ , ಕ್ಯಾಂಪ್ಕೋ ಎಂಡಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

14 minutes ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

40 minutes ago

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…

55 minutes ago

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…

9 hours ago

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

20 hours ago

ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…

20 hours ago