Advertisement
MIRROR FOCUS

ಪುತ್ತೂರಿನಲ್ಲಿ ಕೃಷಿಯಂತ್ರ ಮೇಳಕ್ಕೆ ಭರದ ಸಿದ್ಧತೆ | 310 ಕ್ಕೂ ಅಧಿಕ ಮಳಿಗೆಗಳು | ವರ್ಚುವಲ್‌ ಟೂರಿಂಗ್‌ ಮೂಲಕ ಮಾಹಿತಿಗೆ ವ್ಯವಸ್ಥೆ |

Share

ಪುತ್ತೂರಿನಲ್ಲಿ ಫೆ.10 ರಿಂದ ಫೆ.12 ರ ವರೆಗೆ ಕೃಷಿಯಂತ್ರ ಮೇಳೆ ನಡೆಯಲಿದೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಸುಮಾರು 310 ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಕೃಷಿ, ವ್ಯಾಪಾರ, ವಾಣಿಜ್ಯ, ಗಿಡ ಹೀಗೇ ವಿವಿಧ ವಿಭಾಗಗಳಲ್ಲಿ ಮಳಿಗೆಗಳ ಸಿದ್ಧತೆಯಾಗಿದೆ. ವಿಶೇಷವಾಗಿ ಈ ಬಾರಿ ವರ್ಚುವಲ್‌ ಟೂರಿಂಗ್‌ ವ್ಯವಸ್ಥೆಯನ್ನು ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ತಯಾರು ಮಾಡಿದ್ದಾರೆ. ಈ ಮೂಲಕ ಯಂತ್ರ ಮೇಳದ ಸಮಗ್ರ ಮಾಹಿತಿಯನ್ನು ಕೃಷಿಕರು ಪಡೆಯಬಹುದಾಗಿದೆ. ಯಂತ್ರ ಮೇಳದ ಬಳಿಕವೂ ಯಂತ್ರಗಳ ತಯಾರಕರ, ಮಾರಾಟಗಾರರ ಸಂಪರ್ಕ ಸಂಖ್ಯೆ ಲಭ್ಯವಾಗುವಂತಹ ವ್ಯವಸ್ಥೆ ಮಾಡಲಾಗುತ್ತಿದೆ.

ಪುತ್ತೂರಿನ ನೆಹರುನಗರದ ವಿವೇಕಾನಂದ ಕಾಲೇಜು ಆವರಣದಲ್ಲಿ ಕ್ಯಾಂಪ್ಕೋ, ಎಆರ್‌ಡಿಎಫ್‌ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಗ , ವಿವೇಕಾನಂದ  ಇಂಜಿನಿಯರಿಂಗ್‌ ಕಾಲೇಜು ಸಹಯೋಗದೊಂದಿಗೆ ನಡೆಯುವ 5 ನೇ ಕೃಷಿಯಂತ್ರ ಮೇಳಕ್ಕೆ ಸಿದ್ಧತೆ ನಡೆಯುತ್ತಿದೆ. ಫೆ.10 ರಿಂದ 12 ವರೆಗೆ ಮೇಳ ನಡೆಯುತ್ತದೆ. ಯಂತ್ರ ಮೇಳದಲ್ಲಿ ಸುಮಾರು 140 ಮಳಿಗೆಗಳು ಕೃಷಿ ಯಂತ್ರಗಳು, ಸುಮಾರು 75 ಕನಸಿನ ಮನೆಗೆ ಸಂಬಂಧಿಸಿದ್ದು, 5 ನರ್ಸರಿ, 45 ವಾಣಿಜ್ಯ, 11 ಅಟೋ ಮೊಬೈಲ್‌, 20 ಸಾವಯವ, 15 ಕ್ಯಾಂಪ್ಕೋ ಮಳಿಗೆಗಳು , ಕೆಎಂಎಫ್‌ ಸೇರಿದಂತೆ ವಿವಿಧ ಮಳಿಗೆಗಳು ಇರಲಿದೆ.

ಈ ಬಾರಿ ವಿಶೇಷವಾಗಿ ಕೃಷಿ ಯಂತ್ರ ಅನ್ವೇಷಕರಿಗೆ ಅವಕಾಶ ನೀಡಲಾಗಿದ್ದು,  ವಿಶೇಷ ಮಾದರಿಯ ಡ್ರೈಯರ್‌ ತಯಾರು ಮಾಡಿದ ಶಿರಸಿಯ ಕೃಷಿಕರೊಬ್ಬರು ಆಗಮಿಸುವರು. ಡ್ರೋನ್‌ ,ಟ್ರೀ ಬೈಕ್‌, ಲೋಡರ್‌ ಸೇರಿದಂತೆ ವಿಶೇಷ ಯಂತ್ರಗಳ ಗಮನ ಸೆಳೆಯಲಿದೆ.  ಸಣ್ಣ ಸಣ್ಣ ಯಂತ್ರಗಳ ಕಡೆಗೇ ಈ ಬಾರಿ ಹೆಚ್ಚು ಗಮನಹರಿಸಲಾಗಿದ್ದು, ಕೃಷಿಕರಿಗೆ ದಿನ ಬಳಕೆಗೆ ಅಗತ್ಯ ಇರುವ ಯಂತ್ರಗಳೇ ಹೆಚ್ಚಾಗಿ ಆಗಮಿಸಲಿದೆ. ಕನಸಿನ ಮನೆಯಲ್ಲೂ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ, ಪೈಂಟ್‌ ಸೇರಿದಂತೆ ಇತರ ಆಕರ್ಷಣೆಗಳೂ ಇಲ್ಲಿದೆ.  ಇಲೆಕ್ಟ್ರಿಕ್‌ ವಾಹನಗಳಿಗಾಗಿ ವಿಶೇಷ ಅವಕಾಶ ಇದೆ.

ವರ್ಚುವಲ್‌ ಟೂರಿಂಗ್‌ ವ್ಯವಸ್ಥೆ...!
ಈ ಯಂತ್ರಮೇಳದಲ್ಲಿ ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ವಿಶೇಷವಾಗಿ ಈ ಮೇಳಕ್ಕಾಗಿಯೇ ವೆಬ್‌ ಸೈಟ್‌ ಮೂಲಕ ಮೇಳದ ಎಲ್ಲಾ ಮಾಹಿತಿಯನ್ನು ನೀಡಲು ವ್ಯವಸ್ಥೆ ಮಾಡಿದ್ದಾರೆ. ಫೆ.9 ರಂದು ಈ ವೆಬ್‌ ಸೈಟ್‌ ಸಮಗ್ರ ಮಾಹಿತಿಯೊಂದಿಗೆ ಜನರಿಗೆ ತೆರೆದುಕೊಳ್ಳಲಿದೆ. ವರ್ಚುವಲ್‌ ರಿಯಾಲಿಟಿ ಟೂರಿಂಗ್‌ ವ್ಯವಸ್ಥೆಯ ಮೂಲಕ ಮೇಳದ ಆವರಣಕ್ಕೆ ಆಗಮಿಸುವ ದಾರಿಯಿಂದ ತೊಡಗಿ ಮೇಳದಲ್ಲಿರುವ ಸ್ಟಾಲ್‌ ವಿಭಾಗಗಳು, ಶೌಚಾಲಯ, ಪಾರ್ಕಿಂಗ್‌ ವ್ಯವಸ್ಥೆ ಹೀಗೆ ಎಲ್ಲಾ ವಿವರಗಳನ್ನು ಈ ವ್ಯವಸ್ಥೆಯ ಮೂಲಕ ನೀಡಲಾಗುತ್ತಿದೆ.  ಮೇಳದ ಬಳಿಕ ಇದೇ ವೆಬ್‌ ಸೈಟ್‌ ಮೂಲಕ ಯಂತ್ರ ಮೇಳದ ಪ್ರತೀ ಸ್ಟಾಲ್‌ ವಿವರ ದಾಖಲಿಸಿ, ಅವರ ಸಂಪರ್ಕ ಸಂಖ್ಯೆಯ ಸಹಿತ ಎಲ್ಲಾ ವಿವರವನ್ನು ದಾಖಲಿಸಲಾಗುತ್ತದೆ. ಈ ಮೂಲಕ ಮುಂದೆಯೂ ಕೃಷಿಕರಿಗೆ ಅನುಕೂಲವಾಗುವ ವ್ಯವಸ್ಥೆಯನ್ನು ಕಾಲೇಜು ವಿದ್ಯಾರ್ಥಿಗಳು ಪ್ರಾಜೆಕ್ಟ್‌ ರೂಪದಲ್ಲಿ ಮಾಡುತ್ತಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮೋಹಿತ್‌ ನಗರ್‌ ಅಡಿಕೆ ಗಿಡ ಏಕೆ ರೈತರ ಫೇವರಿಟ್‌..? ಹೆಚ್ಚು ಇಳುವರಿ, ವೇಗದ ಬೆಳವಣಿಗೆ ಇದರ ವಿಶೇಷತೆ..!

ಮೋಹಿತ್‌ನಗರ ಅಡಿಕೆ ತಳಿ ಹೆಚ್ಚು ಇಳುವರಿ, ವೇಗವಾದ ಬೆಳವಣಿಗೆ ಹಾಗೂ ಸಮಾನ ಗುಣಮಟ್ಟದ…

5 hours ago

ಹವಾಮಾನ ವರದಿ | 19-05-2026 | ಕರಾವಳಿಯಲ್ಲಿ ಮಳೆ ಕ್ಷೀಣಿಸುವ ಲಕ್ಷಣ – ಮೇ 27ರ ಸುಮಾರಿಗೆ ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ

ರಾಜ್ಯದಲ್ಲಿ ಮೇ 20ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿದ್ದು, ಮೇ 27ರ ಸುಮಾರಿಗೆ…

13 hours ago

“ಮೇ 26ಕ್ಕೇ ಮುಂಗಾರು ಎಂಟ್ರಿ!” ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌, ಮೀನುಗಾರರಿಗೆ ಎಚ್ಚರಿಕೆ

ನೈರುತ್ಯ ಮುಂಗಾರು ಮೇ 26ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು IMD…

1 day ago

ಕರ್ನಾಟಕಕ್ಕೆ ಭಾರೀ ಮಳೆ ಅಲರ್ಟ್‌ | ಬೆಂಗಳೂರಿನಲ್ಲಿ ಮಳೆ ಸಂಕಷ್ಟ, ಜಿಲ್ಲೆಗಳಲ್ಲಿ ಬೆಳೆಗಳು ಕೊಚ್ಚಿ ಹೋದವು…!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಬೆಂಗಳೂರಿನಲ್ಲಿ ಜಲಾವೃತ ಪರಿಸ್ಥಿತಿ…

1 day ago

ಅಡಿಕೆ ಮಾರುಕಟ್ಟೆ ಏಕೆ ನಿಂತಿತು..? ಸವಾಲು ಮತ್ತು ರೈತರ ಭವಿಷ್ಯದ ಪ್ರಶ್ನೆಗಳು ಏನು…?

ಅಡಿಕೆ ಇಳುವರಿ ಕಡಿಮೆಯಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಧಾರಣೆ ಏರಿಕೆಯಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.…

2 days ago