ಪುತ್ತೂರಿನಲ್ಲಿ ಫೆ.10 ರಿಂದ ಫೆ.12 ರ ವರೆಗೆ ಕೃಷಿಯಂತ್ರ ಮೇಳೆ ನಡೆಯಲಿದೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಸುಮಾರು 310 ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಕೃಷಿ, ವ್ಯಾಪಾರ, ವಾಣಿಜ್ಯ, ಗಿಡ ಹೀಗೇ ವಿವಿಧ ವಿಭಾಗಗಳಲ್ಲಿ ಮಳಿಗೆಗಳ ಸಿದ್ಧತೆಯಾಗಿದೆ. ವಿಶೇಷವಾಗಿ ಈ ಬಾರಿ ವರ್ಚುವಲ್ ಟೂರಿಂಗ್ ವ್ಯವಸ್ಥೆಯನ್ನು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ತಯಾರು ಮಾಡಿದ್ದಾರೆ. ಈ ಮೂಲಕ ಯಂತ್ರ ಮೇಳದ ಸಮಗ್ರ ಮಾಹಿತಿಯನ್ನು ಕೃಷಿಕರು ಪಡೆಯಬಹುದಾಗಿದೆ. ಯಂತ್ರ ಮೇಳದ ಬಳಿಕವೂ ಯಂತ್ರಗಳ ತಯಾರಕರ, ಮಾರಾಟಗಾರರ ಸಂಪರ್ಕ ಸಂಖ್ಯೆ ಲಭ್ಯವಾಗುವಂತಹ ವ್ಯವಸ್ಥೆ ಮಾಡಲಾಗುತ್ತಿದೆ.
ಪುತ್ತೂರಿನ ನೆಹರುನಗರದ ವಿವೇಕಾನಂದ ಕಾಲೇಜು ಆವರಣದಲ್ಲಿ ಕ್ಯಾಂಪ್ಕೋ, ಎಆರ್ಡಿಎಫ್ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಗ , ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಸಹಯೋಗದೊಂದಿಗೆ ನಡೆಯುವ 5 ನೇ ಕೃಷಿಯಂತ್ರ ಮೇಳಕ್ಕೆ ಸಿದ್ಧತೆ ನಡೆಯುತ್ತಿದೆ. ಫೆ.10 ರಿಂದ 12 ವರೆಗೆ ಮೇಳ ನಡೆಯುತ್ತದೆ. ಯಂತ್ರ ಮೇಳದಲ್ಲಿ ಸುಮಾರು 140 ಮಳಿಗೆಗಳು ಕೃಷಿ ಯಂತ್ರಗಳು, ಸುಮಾರು 75 ಕನಸಿನ ಮನೆಗೆ ಸಂಬಂಧಿಸಿದ್ದು, 5 ನರ್ಸರಿ, 45 ವಾಣಿಜ್ಯ, 11 ಅಟೋ ಮೊಬೈಲ್, 20 ಸಾವಯವ, 15 ಕ್ಯಾಂಪ್ಕೋ ಮಳಿಗೆಗಳು , ಕೆಎಂಎಫ್ ಸೇರಿದಂತೆ ವಿವಿಧ ಮಳಿಗೆಗಳು ಇರಲಿದೆ.
ಈ ಬಾರಿ ವಿಶೇಷವಾಗಿ ಕೃಷಿ ಯಂತ್ರ ಅನ್ವೇಷಕರಿಗೆ ಅವಕಾಶ ನೀಡಲಾಗಿದ್ದು, ವಿಶೇಷ ಮಾದರಿಯ ಡ್ರೈಯರ್ ತಯಾರು ಮಾಡಿದ ಶಿರಸಿಯ ಕೃಷಿಕರೊಬ್ಬರು ಆಗಮಿಸುವರು. ಡ್ರೋನ್ ,ಟ್ರೀ ಬೈಕ್, ಲೋಡರ್ ಸೇರಿದಂತೆ ವಿಶೇಷ ಯಂತ್ರಗಳ ಗಮನ ಸೆಳೆಯಲಿದೆ. ಸಣ್ಣ ಸಣ್ಣ ಯಂತ್ರಗಳ ಕಡೆಗೇ ಈ ಬಾರಿ ಹೆಚ್ಚು ಗಮನಹರಿಸಲಾಗಿದ್ದು, ಕೃಷಿಕರಿಗೆ ದಿನ ಬಳಕೆಗೆ ಅಗತ್ಯ ಇರುವ ಯಂತ್ರಗಳೇ ಹೆಚ್ಚಾಗಿ ಆಗಮಿಸಲಿದೆ. ಕನಸಿನ ಮನೆಯಲ್ಲೂ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ, ಪೈಂಟ್ ಸೇರಿದಂತೆ ಇತರ ಆಕರ್ಷಣೆಗಳೂ ಇಲ್ಲಿದೆ. ಇಲೆಕ್ಟ್ರಿಕ್ ವಾಹನಗಳಿಗಾಗಿ ವಿಶೇಷ ಅವಕಾಶ ಇದೆ.
ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…
ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…
ಕರ್ನಾಟಕದಲ್ಲಿ ಸದ್ಯ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10…
ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…
ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…
ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…