Advertisement
MIRROR FOCUS

ಪುತ್ತೂರಿನಲ್ಲಿ ಕೃಷಿಯಂತ್ರ ಮೇಳಕ್ಕೆ ಭರದ ಸಿದ್ಧತೆ | 310 ಕ್ಕೂ ಅಧಿಕ ಮಳಿಗೆಗಳು | ವರ್ಚುವಲ್‌ ಟೂರಿಂಗ್‌ ಮೂಲಕ ಮಾಹಿತಿಗೆ ವ್ಯವಸ್ಥೆ |

Share

ಪುತ್ತೂರಿನಲ್ಲಿ ಫೆ.10 ರಿಂದ ಫೆ.12 ರ ವರೆಗೆ ಕೃಷಿಯಂತ್ರ ಮೇಳೆ ನಡೆಯಲಿದೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಸುಮಾರು 310 ಮಳಿಗೆಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಕೃಷಿ, ವ್ಯಾಪಾರ, ವಾಣಿಜ್ಯ, ಗಿಡ ಹೀಗೇ ವಿವಿಧ ವಿಭಾಗಗಳಲ್ಲಿ ಮಳಿಗೆಗಳ ಸಿದ್ಧತೆಯಾಗಿದೆ. ವಿಶೇಷವಾಗಿ ಈ ಬಾರಿ ವರ್ಚುವಲ್‌ ಟೂರಿಂಗ್‌ ವ್ಯವಸ್ಥೆಯನ್ನು ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ತಯಾರು ಮಾಡಿದ್ದಾರೆ. ಈ ಮೂಲಕ ಯಂತ್ರ ಮೇಳದ ಸಮಗ್ರ ಮಾಹಿತಿಯನ್ನು ಕೃಷಿಕರು ಪಡೆಯಬಹುದಾಗಿದೆ. ಯಂತ್ರ ಮೇಳದ ಬಳಿಕವೂ ಯಂತ್ರಗಳ ತಯಾರಕರ, ಮಾರಾಟಗಾರರ ಸಂಪರ್ಕ ಸಂಖ್ಯೆ ಲಭ್ಯವಾಗುವಂತಹ ವ್ಯವಸ್ಥೆ ಮಾಡಲಾಗುತ್ತಿದೆ.

ಪುತ್ತೂರಿನ ನೆಹರುನಗರದ ವಿವೇಕಾನಂದ ಕಾಲೇಜು ಆವರಣದಲ್ಲಿ ಕ್ಯಾಂಪ್ಕೋ, ಎಆರ್‌ಡಿಎಫ್‌ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಗ , ವಿವೇಕಾನಂದ  ಇಂಜಿನಿಯರಿಂಗ್‌ ಕಾಲೇಜು ಸಹಯೋಗದೊಂದಿಗೆ ನಡೆಯುವ 5 ನೇ ಕೃಷಿಯಂತ್ರ ಮೇಳಕ್ಕೆ ಸಿದ್ಧತೆ ನಡೆಯುತ್ತಿದೆ. ಫೆ.10 ರಿಂದ 12 ವರೆಗೆ ಮೇಳ ನಡೆಯುತ್ತದೆ. ಯಂತ್ರ ಮೇಳದಲ್ಲಿ ಸುಮಾರು 140 ಮಳಿಗೆಗಳು ಕೃಷಿ ಯಂತ್ರಗಳು, ಸುಮಾರು 75 ಕನಸಿನ ಮನೆಗೆ ಸಂಬಂಧಿಸಿದ್ದು, 5 ನರ್ಸರಿ, 45 ವಾಣಿಜ್ಯ, 11 ಅಟೋ ಮೊಬೈಲ್‌, 20 ಸಾವಯವ, 15 ಕ್ಯಾಂಪ್ಕೋ ಮಳಿಗೆಗಳು , ಕೆಎಂಎಫ್‌ ಸೇರಿದಂತೆ ವಿವಿಧ ಮಳಿಗೆಗಳು ಇರಲಿದೆ.

ಈ ಬಾರಿ ವಿಶೇಷವಾಗಿ ಕೃಷಿ ಯಂತ್ರ ಅನ್ವೇಷಕರಿಗೆ ಅವಕಾಶ ನೀಡಲಾಗಿದ್ದು,  ವಿಶೇಷ ಮಾದರಿಯ ಡ್ರೈಯರ್‌ ತಯಾರು ಮಾಡಿದ ಶಿರಸಿಯ ಕೃಷಿಕರೊಬ್ಬರು ಆಗಮಿಸುವರು. ಡ್ರೋನ್‌ ,ಟ್ರೀ ಬೈಕ್‌, ಲೋಡರ್‌ ಸೇರಿದಂತೆ ವಿಶೇಷ ಯಂತ್ರಗಳ ಗಮನ ಸೆಳೆಯಲಿದೆ.  ಸಣ್ಣ ಸಣ್ಣ ಯಂತ್ರಗಳ ಕಡೆಗೇ ಈ ಬಾರಿ ಹೆಚ್ಚು ಗಮನಹರಿಸಲಾಗಿದ್ದು, ಕೃಷಿಕರಿಗೆ ದಿನ ಬಳಕೆಗೆ ಅಗತ್ಯ ಇರುವ ಯಂತ್ರಗಳೇ ಹೆಚ್ಚಾಗಿ ಆಗಮಿಸಲಿದೆ. ಕನಸಿನ ಮನೆಯಲ್ಲೂ ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ, ಪೈಂಟ್‌ ಸೇರಿದಂತೆ ಇತರ ಆಕರ್ಷಣೆಗಳೂ ಇಲ್ಲಿದೆ.  ಇಲೆಕ್ಟ್ರಿಕ್‌ ವಾಹನಗಳಿಗಾಗಿ ವಿಶೇಷ ಅವಕಾಶ ಇದೆ.

ವರ್ಚುವಲ್‌ ಟೂರಿಂಗ್‌ ವ್ಯವಸ್ಥೆ...!
ಈ ಯಂತ್ರಮೇಳದಲ್ಲಿ ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ವಿಶೇಷವಾಗಿ ಈ ಮೇಳಕ್ಕಾಗಿಯೇ ವೆಬ್‌ ಸೈಟ್‌ ಮೂಲಕ ಮೇಳದ ಎಲ್ಲಾ ಮಾಹಿತಿಯನ್ನು ನೀಡಲು ವ್ಯವಸ್ಥೆ ಮಾಡಿದ್ದಾರೆ. ಫೆ.9 ರಂದು ಈ ವೆಬ್‌ ಸೈಟ್‌ ಸಮಗ್ರ ಮಾಹಿತಿಯೊಂದಿಗೆ ಜನರಿಗೆ ತೆರೆದುಕೊಳ್ಳಲಿದೆ. ವರ್ಚುವಲ್‌ ರಿಯಾಲಿಟಿ ಟೂರಿಂಗ್‌ ವ್ಯವಸ್ಥೆಯ ಮೂಲಕ ಮೇಳದ ಆವರಣಕ್ಕೆ ಆಗಮಿಸುವ ದಾರಿಯಿಂದ ತೊಡಗಿ ಮೇಳದಲ್ಲಿರುವ ಸ್ಟಾಲ್‌ ವಿಭಾಗಗಳು, ಶೌಚಾಲಯ, ಪಾರ್ಕಿಂಗ್‌ ವ್ಯವಸ್ಥೆ ಹೀಗೆ ಎಲ್ಲಾ ವಿವರಗಳನ್ನು ಈ ವ್ಯವಸ್ಥೆಯ ಮೂಲಕ ನೀಡಲಾಗುತ್ತಿದೆ.  ಮೇಳದ ಬಳಿಕ ಇದೇ ವೆಬ್‌ ಸೈಟ್‌ ಮೂಲಕ ಯಂತ್ರ ಮೇಳದ ಪ್ರತೀ ಸ್ಟಾಲ್‌ ವಿವರ ದಾಖಲಿಸಿ, ಅವರ ಸಂಪರ್ಕ ಸಂಖ್ಯೆಯ ಸಹಿತ ಎಲ್ಲಾ ವಿವರವನ್ನು ದಾಖಲಿಸಲಾಗುತ್ತದೆ. ಈ ಮೂಲಕ ಮುಂದೆಯೂ ಕೃಷಿಕರಿಗೆ ಅನುಕೂಲವಾಗುವ ವ್ಯವಸ್ಥೆಯನ್ನು ಕಾಲೇಜು ವಿದ್ಯಾರ್ಥಿಗಳು ಪ್ರಾಜೆಕ್ಟ್‌ ರೂಪದಲ್ಲಿ ಮಾಡುತ್ತಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

2 hours ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

19 hours ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

1 day ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

2 days ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

2 days ago

ತೆಂಗಿನ ನಾಡಿನಲ್ಲಿ ಅಡಿಕೆ ಕ್ರಾಂತಿ….! ತುಮಕೂರಿನಲ್ಲಿ ಅಡಿಕೆ ಸಸಿಗಳಿಗೆ ಭಾರೀ ಬೇಡಿಕೆ

ಕೊಪ್ಪರ ಬೆಲೆಯ ಏರಿಳಿತದಿಂದ ತುಮಕೂರಿನಲ್ಲಿ ರೈತರು ಅಡಿಕೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇದರ…

2 days ago