Opinion

ಹೃದಯ-ಶ್ವಾಸ ಪ್ರಚೋದನೆ ಕ್ರಿಯೆ | ಆಸ್ಪತ್ರೆಯಲ್ಲಿ ಹೃದಯ ಬಡಿತ ನಿಂತುಹೋದ ರೋಗಿಯ ಎದೆಯನ್ನು ವೈದ್ಯರು ಪದೇ ಪದೇ ಏಕೆ ಒತ್ತುತ್ತಾರೆ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇದನ್ನು ನೀವು ಆಸ್ಪತ್ರೆಯಲ್ಲಿ(Hospital) ನೋಡಿರದಿದ್ದರೂ ಸಿನಿಮಾದಲ್ಲಿ(Cinema) ಖಂಡಿತಾ ನೋಡಿರುತ್ತೀರಿ. ಹೃದಯವು(Heart) ಹೇಗೆ ಕೆಲಸ ಮಾಡುತ್ತದೆ ಎಂದು ನಿಮಗೆ ತಿಳಿದಿದೆ. ಪಂಪ್‌ನಂತೆ, ಹೃದಯವು ದೇಹದಾದ್ಯಂತ ಒತ್ತಡದಲ್ಲಿ ರಕ್ತವನ್ನು(Blood) ಚಲಿಸುವಂತೆ ಮಾಡುತ್ತದೆ. ಒಂದು ನಿಮಿಷದಲ್ಲಿ, ಹೃದಯವು 72 ಬಾರಿ ಸಂಕುಚಿತಗೊಳ್ಳುತ್ತದೆ. ಸಂಕೋಚನವನ್ನು ಸೃಷ್ಟಿಸುವ ಮತ್ತು ಹರಡುವ ಪ್ರಚೋದನೆಯು ಹೃದಯ ಸ್ನಾಯುವಿನ (ಪೇಸ್‌ಮೇಕರ್ ಅಥವಾ ಸೈನೋ-ಹೃತ್ಕರ್ಣದ ನೋಡ್) ಪ್ರಚೋದನೆಯ ಮೂಲದಿಂದ ಬರುತ್ತದೆ.

Advertisement

ಸಂಕೇತಗಳನ್ನು ಸೃಷ್ಟಿಸುವ ಈ ನೋಡ್ ಕೆಟ್ಟು ಅದರ ಕಾರ್ಯ ನಿಂತು ಹೋದರೆ ಹೃದಯವು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಕೆಲವೊಮ್ಮೆ ಹೃದಯ ಸ್ನಾಯುಗಳಿಗೆ ರಕ್ತವನ್ನು ಪೂರೈಸುವ ನಾಳಗಳಲ್ಲಿನ ಅಸಮರ್ಪಕ ಕಾರ್ಯದಿಂದಾಗಿ, ಹೃದಯವು ಪೋಷಕಾಂಶಗಳಿಂದ ವಂಚಿತವಾಗುತ್ತದೆ ಮತ್ತು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಹೃದಯದ ಪ್ರಚೋದನೆಯ ಮೂಲದ ಕಾರ್ಯವು ಎಲೆಕ್ಟ್ರೋಕೆಮಿಕಲ್ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ. ನಿಲ್ಲಿಸಿದ ಹೃದಯವನ್ನು ಮರುಪ್ರಾರಂಭಿಸಲು ಹೊಸ ಪೇಸ್‌ಮೇಕರ್ ಅಥವಾ ಸ್ಫೂರ್ತಿಯ ಮೂಲವನ್ನು ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಬೇಕು. ಕೆಲವೊಮ್ಮೆ ವಿದ್ಯುತ್ ಆಘಾತ ನೀಡಿ ಹೃದಯವನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತದೆ.

ಎದೆಯ ಮೇಲೆ ಕೈಯಿಂದ ಬಲವಾಗಿ ಒತ್ತಿದಾಗ, ಹೃದಯದ ಮೇಲೆ ಒತ್ತಡ ಬರುತ್ತದೆ ಮತ್ತು ಅದು ಸಂಕುಚಿತಗೊಳ್ಳುತ್ತದೆ. ಇದರಿಂದ ದೇಹದಲ್ಲಿ ರಕ್ತವು ಹರಿಯುತ್ತದೆ. ಈ ರೀತಿಯ ಪುನರಾವರ್ತಿತ ಸಂಕೋಚನಗಳು ಕೆಲವೊಮ್ಮೆ ಸ್ಥಗಿತಗೊಂಡ ಹೃದಯವನ್ನು ಮರುಪ್ರಾರಂಭಿಸಬಹುದು. ಮುಖ್ಯ ವಿಷಯವೆಂದರೆ ಈ ಚಿಕಿತ್ಸೆಯನ್ನು ಎಲ್ಲಿ ಬೇಕಾದರೂ ಮಾಡಬಹುದು. ಏಕೆಂದರೆ, ಇದನ್ನು ಮಾಡಲು ಯಾವುದೇ ಉಪಕರಣಗಳು ಅಥವಾ ಔಷಧಿಗಳ ಅಗತ್ಯವಿಲ್ಲ.

ಡಾ. ಅಂಜಲಿ ದೀಕ್ಷಿತ್ ಮತ್ತು ಡಾ. ಜಗನ್ನಾಥ ದೀಕ್ಷಿತರ ಪುಸ್ತಕದಿಂದ ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಈ ರಾಶಿಯವರಿಗೆ ಒಂಟಿಯಾಗಿರುವುದೇ ಇಷ್ಟ, ಫ್ರೆಂಡ್ಸೂ ಬೇಡ, ಫ್ಯಾಮಿಲಿಯವ್ರೂ ಬೇಡ…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

7 hours ago

ಬದುಕು ಪುರಾಣ | ಮೂಡದಿರಲಿ, ಮಂಥರೆ ಮನಸ್ಸು

ಸಂಸ್ಕಾರದಿಂದ ಮೀಯದ ಮನಸ್ಸು, ತನ್ನ ಬಗ್ಗೆ ಯೋಚಿಸುವುದಿಲ್ಲ. ತನ್ನ ಭವಿಷ್ಯದತ್ತ ನೋಟ ಹರಿಸುವುದಿಲ್ಲ.…

7 hours ago

ಕದನ ವಿರಾಮ ಘೋಷಣೆ | ಭಾರತ ಮತ್ತು ಪಾಕಿಸ್ತಾನ ಗಡಿಯಾಚೆಗಿನ ದಾಳಿಯನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ

ಶನಿವಾರ ಸಂಜೆ 5 ಗಂಟೆಗೆ ಆರಂಭವಾದ ತೀವ್ರ ಘರ್ಷಣೆಗಳ ನಂತರ ಭಾರತ ಮತ್ತು…

19 hours ago

ಕೃಷಿಕರ ಸಂಸ್ಥೆ ಕ್ಯಾಂಪ್ಕೊ ವತಿಯಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ 5 ಕೋಟಿ ರೂಪಾಯಿ ದೇಣಿಗೆ

ಪೆಹಲ್ಗಾಮ್ ಭಯೋತ್ಪಾದಕರ ವಿರುದ್ಧ ಪ್ರಧಾನಿ ನರೇಂದ್ರಮೋದಿಯವರು ತೆಗೆದುಕೊಂಡಿರುವ ಕಠಿಣ ಕ್ರಮವನ್ನು ಸಂಪೂರ್ಣ ಬೆಂಬಲಿಸುವುದಾಗಿ…

20 hours ago

ಹವಾಮಾನ ವರದಿ | 09-05-2025 | ಮೇ14 ರಿಂದ ಉತ್ತಮ ಮಳೆಯ ನಿರೀಕ್ಷೆ ಇದೆ

ಒಂದೆರಡು ಕಡೆ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಮೇ14ರಿಂದ…

1 day ago

ಜೂನ್‌ನಿಂದ ಈ 6 ರಾಶಿಯವರ ಅದೃಷ್ಟ ಖುಲಾಯಿಸಲಿದೆ… ಕೋಟ್ಯಾಧಿಪತಿಗಳಾಗುವ ಯೋಗ!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

1 day ago