Advertisement
ಸುದ್ದಿಗಳು

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

Share

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ ಗಟ್ಟಿ ನಿರ್ಧಾರಗಳು ಈ ಗಾದೆ ಮಾತನ್ನು ನಿಜವಾಗಿಸುತ್ತಾರೆ. ಅಂತಹವರಲ್ಲಿ ಆಸಿಯಾ ಒಬ್ಬರು. ಉತ್ತರ ಕಾಶ್ಮೀರದಲ್ಲಿ ನಡೆದ ಗುಂಡಿನ ದಾಳಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪತಿಯನ್ನು ಕಳೆದುಕೊಂಡು. ಮುಂದೆ ಜೀವನ ಹೇಗೆ ಎಂಬ ಪ್ರಶ್ನೆಗೆ, ತಾನೇ ಕೃಷಿಯ ಮೂಲಕ ಉತ್ತರ ಕಂಡುಕೊಂಡಿದ್ದಾರೆ.

ಆಸಿಯಾ ಅವರ ಬದುಕಿನ  ಹೋರಾಟಗಳು ಅನೇಕರಿಗೆ ಧೈರ್ಯ ತಂದುಕೊಡುತ್ತವೆ.  ಮದುವೆಯಾದ ಕೆಲವೇ ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡರು.  ಇಬ್ಬರು ಮಕ್ಕಳನ್ನು ಒಂಟಿಯಾಗಿ ಬೆಳೆಸಬೇಕಾಯಿತು. 2019 ರಲ್ಲಿ ಬೆಂಕಿಯು ಅವರ ಮನೆಯನ್ನು ನಾಶಮಾಡಿದಾಗ ಅವರ ಸವಾಲುಗಳು ಮತ್ತಷ್ಟು ಹೆಚ್ಚಾದವು. ಸೀಮಿತ ಸಂಪನ್ಮೂಲಗಳು ಮತ್ತು ಕೃಷಿ ಮಾಡಲು ಭೂಮಿ ಇಲ್ಲದ ಕಾರಣ, ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳು ಮತ್ತು ಸ್ವಯಂ-ಕಲಿಸಿದ ತಂತ್ರಗಳಿಂದ ತಮ್ಮ ಮೇಲ್ಛಾವಣಿಯನ್ನು ಸಣ್ಣ ಪ್ರಮಾಣದ ಸಾವಯವ ಕೃಷಿಯನ್ನು ಪ್ರಾರಂಭಿಸಲು ಬಳಸಿದರು.

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಠದಿಂದ, ರೂಪ್ ಟಾಪ್ ತರಕಾರಿ ತೋಟ ಹಾಗೂ ಅಣಬೆ ಕೃಷಿಯನ್ನು ತಮ್ಮ ಬದುಕಿನ ಬಂಡಿಗೆ ಮೂಲಧಾರವಾಗಿಸಿಕೊಂಡಿದ್ದಾರೆ. ಇಂದು ಆಸಿಯಾ ತಿಂಗಳಿಗೆ ರೂ 35,000 ದಿಂದ 40,000 ಆದಾಯ ಗಳಿಸುತ್ತಿದ್ದಾರೆ. 10×10 ಅಡಿ ಕೋಣೆಯಲ್ಲಿ ಅಣಬೆ ಕೃಷಿ ಮಾಡಿದ ಅವರು ಅಣಬೆಗಳಿಂದ ತಯಾರಿಸಿದ ವರ್ಮಿಕಾಂಪೋಸ್ಟ್ ಬಳಸಿ ತರಕಾರಿಗಳನ್ನು ಬೆಳೆಯಲು ನಿರ್ಧರಿಸುತ್ತಾರೆ. ಇವರ ಬಳಿ ಕೃಷಿ ಮಾಡಲು ಬೇಕಾದಷ್ಟು ಭೂಮಿ ಇರದ ಕಾರಣ ಮನೆಯ ಮೇಲ್ಛಾವಣಿಯನ್ನೇ ಕೃಷಿ ಭೂಮಿಯನ್ನಾಗಿಸಿಕೊಂಡಿದ್ದಾರೆ.

ಆಸಿಯಾ ಮನೆಯ ಟೆರೇಸ್ ನಲ್ಲೇ ಅಣಬೆ ಗೊಬ್ಬರ ಬಳಸಿಕೊಂಡು ಕೃಷಿಯಲ್ಲಿ ಪ್ರಯೋಗ ನಡೆಸಲು ಮುಂದಾದರು. ಪ್ಲಾಸ್ಟಿಕ್ ಬುಟ್ಟಿಗಳನ್ನು ಖರೀದಿಸಿ ಅದರಲ್ಲಿ ತರಕಾರಿ ಬೆಳೆಯಲಾರಂಭಿಸಿದರು. ಹೀಗೆ ನಿಧಾನವಾಗಿ ಅವರ ಪ್ರಯೋಗ ಫಲ ನೀಡಿತು. ಮೇಲ್ಛಾವಣಿ ಉದ್ಯಾನ ಅವರ ಪರಿಶ್ರಮಕ್ಕೆ ತಕ್ಕ ಬಹುಮಾನ ತಂದಿತು. ಆರಂಭದಲ್ಲಿ ಕಷ್ಟಗಳು ಎದುರಾದರೂ ನಿಧಾನವಾಗಿ ಸ್ಥಳಿಯ ಬಂಡಿಪೋರಾ ಮಾರುಕಟ್ಟೆಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.

ಕೊಲ್ಲಾರ್ಡ್ ಗ್ರೀನ್ಸ್, ಈರುಳ್ಳಿ, ಆಲೂಗಡ್ಡೆ, ಬದನೆಕಾಯಿ, ಪಾಲಕ್, ಮೆಣಸಿಕಾಯಿಗಳು, ಟೊಮ್ಯಾಟಿ, ಬೀನ್ಸ್, ಕ್ಯಾರೆಟ್, ಎಲೆಗಳ ಸೊಪ್ಪುಗಳು ಮತ್ತು ವಿವಿಧ ರೀತಿಯ ಮೊಳಕೆಗಳನ್ನು ಒಳಗೊಂಡಂತೆ ವರ್ಷಪೂರ್ತಿ ತರಕಾರಿಗಳನ್ನು ಬೆಳೆಸುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

4 hours ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

16 hours ago

ಪುತ್ತೂರಿಗೆ ಪುತ್ತಿಲ? ಪುತ್ತೂರಿನ ರಾಜಕೀಯದ ಹೊಸ ವ್ಯಾಕರಣ

ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…

17 hours ago

ತೆಂಗಿನ ನಾಡಿನಲ್ಲಿ ಅಡಿಕೆ ಕ್ರಾಂತಿ….! ತುಮಕೂರಿನಲ್ಲಿ ಅಡಿಕೆ ಸಸಿಗಳಿಗೆ ಭಾರೀ ಬೇಡಿಕೆ

ಕೊಪ್ಪರ ಬೆಲೆಯ ಏರಿಳಿತದಿಂದ ತುಮಕೂರಿನಲ್ಲಿ ರೈತರು ಅಡಿಕೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇದರ…

18 hours ago

ಹವಾಮಾನ ವರದಿ | 19-07-2026 | ಜುಲೈ 20 ರಿಂದ ಮಳೆ ಇಳಿಮುಖ…! ಕರಾವಳಿ–ಮಲೆನಾಡಿನಲ್ಲಿ ಮಾತ್ರ ಅಲ್ಲಲ್ಲಿ ಮಳೆ ಮುಂದುವರಿಕೆ

ಜುಲೈ 20ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುವ ಲಕ್ಷಣಗಳಿವೆ. ಉತ್ತರ…

1 day ago

ಹಲಸಿನ ಬೀಜದ ಸಿಪ್ಪೆಯಿಂದ ಕೈಗಾರಿಕಾ ಬಳಕೆಯ ಸೆಲ್ಯುಲೋಸ್..! ರೈತರಿಗೆ ಮೌಲ್ಯವರ್ಧನೆಯ ಹೊಸ ಅವಕಾಶ

ಹಲಸಿನ ಬೀಜದ ಸಿಪ್ಪೆಯಿಂದ ಮೈಕ್ರೋಕ್ರಿಸ್ಟಲೈನ್ ಸೆಲ್ಯುಲೋಸ್ ಉತ್ಪಾದಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಕೃಷಿ ತ್ಯಾಜ್ಯವನ್ನು…

1 day ago