Advertisement
ಸುದ್ದಿಗಳು

ಕ್ಯಾಶ್ಯೂ ಫಾರ್ಮರ್ಸ್ ಟ್ರ್ಯಾಕಿಂಗ್ ಸಿಸ್ಟಮ್ | ರೈತರಿಗೆ ಇದು ಅನುಕೂಲ ಹೇಗೆ..?

Share

ಮಳೆಗಾಲದಲ್ಲಿ ಒಂದಷ್ಟು ಹೊಸ ಹಣ್ಣಿನ ಗಿಡಗಳನ್ನು ತರಲು ನರ್ಸರಿಗಳಿಗೆ ಹೋಗಿದ್ದೀರಿ. ಲೋಂಗಾನ್, ಬಾಕುಪಾರಿ, ಕೈಮಿತೋ, ಜಬೋಟಿಕಾಬಾ ಹೀಗೆ ಚಿತ್ರವಿಚಿತ್ರ ಹಾಗೂ ಆಕರ್ಷಕ ಹೆಸರುಗಳಿರುವ ಗಿಡಗಳನ್ನು ಕೊಳ್ಳುತ್ತೀರಿ. ಆದರೆ ಖರೀದಿಸುವಾಗ ನೆನಪಿರುವ ಈ ಗಿಡಗಳ ಹೆಸರು ನಂತರದ ದಿನಗಳಲ್ಲಿ ಮರೆತುಹೋಗುತ್ತದೆ!

ಹಲವು ಕೃಷಿಕರು ಈ ಸಮಸ್ಯೆಗೆ ಸಿಲುಕಿದ್ದನ್ನು ಸ್ವತ: ಕಂಡಿದ್ದೇನೆ. ಅದರಲ್ಲೂ ನೂರೆಂಟು ರೀತಿಯ, ಹೆಸರೇ ಕೇಳದ ಹಣ್ಣಿನ ಗಿಡಗಳಿರುವಾಗ ಹೀಗಾಗುವುದು ಬಹಳ ಸಹಜ. ಇನ್ನು, ಪರಿಚಿತ ಗಿಡಗಳಲ್ಲಿ ಇರುವ ವಿವಿಧ ತಳಿಗಳ ಹೆಸರು ಮರೆತುಹೋಗುವ ಸಂಭವ ಇದೆ. ದೀರ್ಘಾವಧಿ ಬೆಳೆಗಳಲ್ಲಿ ಹೂವು-ಹಣ್ಣು ಆಗದ ಹೊರತು ತಳಿಗಳ ಪತ್ತೆಹಚ್ಚುವುದು ಕಷ್ಟ. ಹಾಗಾಗಿ ಇವುಗಳ ಸಂಕ್ಷಿಪ್ತ ಮಾಹಿತಿ, ಕೃಷಿಕ್ರಮ ಹಾಗೂ ಫೋಟೋಗಳು ತಕ್ಷಣಕ್ಕೆ ಸಿಕ್ಕರೆ ಬಹಳ ಅನುಕೂಲ. ಇಲ್ಲಿ ತಂತ್ರಜ಼್ಞಾನ ಉಪಯೋಗಕ್ಕೆ ಬರಬಲ್ಲುದು. ಈಗಂತೂ ಮೊಬೈಲಿನಿಂದ ಸ್ಕ್ಯಾನ್ ಮಾಡುವ ಮಾಡುವ ಕ್ಯೂಆರ್ ಕೋಡ್ ಗಳು ಎಲ್ಲರಿಗೂ ಪರಿಚಿತ. ಇದನ್ನೇ ಗಿಡಗಳ ಮಾಹಿತಿ ನೀಡಲು ಬಳಸಿಕೊಂಡರೆ?

ಈ ನಿಟ್ಟಿನಲ್ಲಿ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರಿನ ವಿಜ್ನಾನಿ ಡಾ. ಮೋಹನ್ ತಲಕಾಲುಕೊಪ್ಪ ಮತ್ತವರ ತಂಡ ಗೇರು ತಳಿಗಳ ಗುರುತಿಸುವಿಕೆಗೆ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಅಲ್ಲಿನ ಗೇರು ನರ್ಸರಿಯಲ್ಲಿ ಗಿಡ ಕೊಂಡಾಗ ಬಿಲ್ ಮೇಲೆ ಕ್ಯೂಆರ್ ಕೋಡ್ ಬರುತ್ತದೆ. ಅದನ್ನು ಮೊಬೈಲಿನಲ್ಲಿ ಸ್ಕ್ಯಾನ್ ಮಾಡಿದರೆ ನೀವು ಖರೀದಿಸಿದ ತಳಿಗಳ ಸಂಕ್ಷಿಪ್ತ ಮಾಹಿತಿ, ಸಂಪರ್ಕ ಸಂಖ್ಯೆ ಹಾಗೂ ಕೆಲವು ಉಪಯುಕ್ತ ಕೊಂಡಿಗಳು ಸಿಗುತ್ತವೆ. ಹಿಮ್ಮಾಹಿತಿ ನೀಡುವ ಅವಕಾಶವೂ ಇದೆ. ಗಿಡಗಳಿಗೆ ಕ್ಯೂಆರ್ ಕೋಡ್ ಲೇಬಲ್ ಗಳನ್ನು ಹಾಕಿದರೆ ಮಳೆ, ಸಾಗಣೆ, ಮಣ್ಣಿನ ಸಂಪರ್ಕ ಇತ್ಯಾದಿಗಳಿಂದ ಹಾಳಾಗುವ ಸಾಧ್ಯತೆ. ಜೊತೆಗೆ ಕೆಲವು ಬೆಳೆಗಳಲ್ಲಿ ನೂರರ ಲೆಕ್ಕದಲ್ಲಿ ಗಿಡ ಕೊಳ್ಳುವಾಗ ಎಲ್ಲ ಗಿಡಗಳಿಗೂ ಲೇಬಲ್ ಹಾಕಿದರೆ ವೆಚ್ಚ ಜಾಸ್ತಿ. ಹಾಗಾಗಿ ಬಿಲ್ಲಿನಲ್ಲೇ ಕ್ಯೂಆರ್ ಕೋಡ್ ಬರುವ ಹಾಗೆ ವ್ಯವಸ್ಥೆ. ಈ ಕೋಡ್ ನ್ನು ನೀವು ನಿಮ್ಮ ಮೊಬೈಲಿನಲ್ಲಿಟ್ಟುಕೊಂಡು ಬೇಕೆಂದಾಗ ಮಾಹಿತಿ ಪಡೆಯಬಹುದು.‌

ಈ ತಂತ್ರಾಂಶ ಇಷ್ಟಕ್ಕೇ ಸೀಮಿತವಲ್ಲ. ದೇಶದಾದ್ಯಂತ ಸಾವಿರಾರು ಕೃಷಿಕರು ಗೇರು ಸಂಶೋಧನಾ ಕೇಂದ್ರದಿಂದ ಗಿಡಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇವರೆಲ್ಲರ ಮಾಹಿತಿಯನ್ನು ಪತ್ತೆಹಚ್ಚುವುದು ಕಷ್ಟಸಾಧ್ಯ. ಗಿಡಗಳು ಯಾವ್ಯಾವ ಜಿಲ್ಲೆ, ತಾಲೂಕು, ಹಳ್ಳಿಗಳಿಗೆ ಯಾವಾಗ ತಲುಪಿದೆ ಎಂಬ ವಿವರ ಸುಲಭಕ್ಕೆ ಸಿಗುವುದಿಲ್ಲ. ಇವೆಲ್ಲದರ ಜೊತೆಗೆ ಒಂದು ನಿರ್ದಿಷ್ಟ ಅವಧಿಗೆ ಎಷ್ಟು ಮಾರಾಟವಾಯಿತು ಅಥವಾ ನಿರ್ದಿಷ್ಟ ಸಂಖ್ಯೆಯ ಗಿಡ/ತಳಿ ಕೊಂಡುಹೋದ ಗೇರು ಕೃಷಿಕರನ್ನು ಪತ್ತೆಹಚ್ಚುವುದು, ವಿವಿಧ ತಿಂಗಳುಗಳ ಮಾರಾಟ ಇತ್ಯಾದಿ ವಿವರ ಪಡೆಯುವುದು ಈ ತಂತ್ರಾಂಶದಿಂದ ಚಿಟಿಕೆ ಹೊಡೆದಷ್ಟು ಸುಲಭ. ಇಷ್ಟಲ್ಲದೆ ತಂತ್ರಾಂಶದ ಮಾಹಿತಿಯಿಂದ ಗಿಡ/ತಳಿ ಹಂಚಿಕೆಯ ವಿವಿಧ ಪ್ರದೇಶಗಳ ನಕ್ಷೆ ತಯಾರಿಸಲು ಅನುಕೂಲ. ಅಂದರೆ ಇದು ಒಂದು ನರ್ಸರಿ ಅಥವಾ ಸಂಸ್ಥೆಯ ಕೆಲಸದ ಪ್ರಭಾವವನ್ನು ಪರೀಕ್ಷಿಸಲೂ ಅನುವಾಗುತ್ತದೆ.

ಇದಲ್ಲದೆ, ಗೇರು ಕೃಷಿಕರ ತೋಟಗಳಲ್ಲಿ ಎಷ್ಟು ಗಿಡ ಈಗ ಉಳಿದಿದೆ ಹಾಗೂ ಅವರು ಯಾವ ಅಂತರದಲ್ಲಿ ಗಿಡ ನೆಟ್ಟಿದ್ದಾರೆ ಅಂತ ವಿವರ ಪಡೆದು ದೇಶದ ಎಷ್ಟು ಎಕರೆ ಪ್ರದೇಶದಲ್ಲಿ ಸಂಸ್ಥೆಯ ಗಿಡಗಳಿವೆ ಎಂಬುದನ್ನು ಅಂದಾಜು ಮಾಡಬಹುದು! ಕೃಷಿಮಾಹಿತಿ ನಿಜವಾಗಿ ಯಾರಿಗೆ/ ಎಲ್ಲಿಗೆ ಅಗತ್ಯ ಎಂಬುದೂ ಗೊತ್ತಾಗುತ್ತದೆ. ಜೊತೆಗೆ ಹಲವು ವರ್ಷಗಳ ಗಿಡ/ತಳಿ ಬೇಡಿಕೆಯನ್ನು ವಿಶ್ಲೇಷಿಸಿ ಈ ವರ್ಷ ಎಷ್ಟು ಬೇಡಿಕೆ ಬರಬಹುದು ಎಂಬ ಮುನ್ಸೂಚನೆಯನ್ನೂ ಕೆಲಮಟ್ಟಿಗೆ ಪಡೆಯಲು ಸಾಧ್ಯ. ಇವು ಕೃಷಿ ಸಂಶೋಧಕರಿಗೆ/ನರ್ಸರಿ ಮಾಡುವವರಿಗೆ ಬಹು ಅಮೂಲ್ಯ ದತ್ತಾಂಶ. ಹಾಂ, ಗಿಡ ತೆಗೆದುಕೊಂಡು ಹೋದ ಕೃಷಿಕರ ವಿವರ ಪಡೆದು ವಾಟ್ಸಪ್ ಗುಂಪು ಮಾಡಿ ಅವರೊಡನೆ ನಿರಂತರ ಸಂಪರ್ಕದಲ್ಲಿರಲು ಸಾಧ್ಯ.

ಮೂಲತ: ಗೇರಿಗೆ ಅಭಿವೃದ್ಧಿಪಡಿಸಿದ್ದರೂ, ರೈತಸ್ನೇಹಿಯಾದ ಈ ತಂತ್ರಾಂಶವನ್ನು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನಡಿಯಲ್ಲಿ (ಐಸಿಎಆರ್) ಬರುವ ಹಲವು ಸಂಶೋಧನಾ ಸಂಸ್ಥೆಗಳು ಹಾಗೂ ಕೃಷಿ ವಿಶ್ವವಿದ್ಯಾಲಯಗಳೂ ತಮ್ಮ ಬೆಳೆಗಳಿಗೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಅಳವಡಿಸಿಕೊಳ್ಳಬಹುದು. ಅಂತೆಯೇ ವಿವಿಧ ರೀತಿಯ ಹೂ, ಹಣ್ಣಿನ ಗಿಡಗಳನ್ನು ಮಾರುವ ಖಾಸಗಿ ನರ್ಸರಿಯವರೂ ಲಾಭದಾಯಕವಾಗಿ ಇದನ್ನು ಬಳಸಿಕೊಳ್ಳಲು ಸಾಧ್ಯ.

ಬರಹ :
ಡಾ. ಮೋಹನ್ ತಲಕಾಲುಕೊಪ್ಪ

ಸಂಪರ್ಕ : 99022 73468

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

13 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

1 day ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

2 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

3 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

3 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago