MIRROR FOCUS

ವಿಶ್ವ ಪರಿಸರ ದಿನ | ನೆಲದ ನಡೆ ಅರ್ಥಮಾಡಿಕೊಂಡು ಮರ ಗಿಡ ಬೆಳೆಸುವ ಕಾಯಕ ಎಲ್ಲೆಡೆ ಆಗಲಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಾಡಿನ ಬೀಜ(Tree seeds) ಸಂಗ್ರಹಿಸಿ ಅರಣ್ಯ(Forest) ನರ್ಸರಿಗಳಲ್ಲಿ(Nursery) ಸಸಿ(Plant) ಬೆಳೆಸುವುದೇ ಜೀವ ಕಾಯಕದ ಭಾಗವಾಗಿ ಪ್ರತೀ ವರ್ಷ ಲಕ್ಷಾಂತರ ಸಸಿ ಬೆಳೆಸುವ ಎಲ್ಲ ಬಂಧುಗಳಿಗೆ ವಿಶ್ವ ಪರಿಸರ ದಿನದ ಮೊದಲ ಶುಭಾಶಯಗಳು(World Environment Day). ಇಡೀ ದೇಶಕ್ಕೆ ಮಾದರಿ ಆಗುವಂತೆ ಕೇವಲ 300ಮಿಲಿ ಮೀಟರ್ ಮಳೆ(Rain) ಸುರಿಯುವ ಚಿತ್ರದುರ್ಗ(Chitradurga) ರಾಂಪುರ ಬಾಂಡ್ರಾವಿಯಲ್ಲಿ ಸಾವಿರಾರು ಎಕರೆ ಕಲ್ಲು ಗುಡ್ಡವನ್ನು ಕಮರ ಸೇರಿದಂತೆ ವಿವಿಧ ಸಸ್ಯ ಸಂಕುಲಗಳನ್ನು ರಕ್ಷಣೆ ಮಾತ್ರದಿಂದ ಬೆಳೆಸಿದ ಫಾರೆಸ್ಟ್ ಗಾರ್ಡ್ ಶ್ರೀ ನಾಗಪ್ಪ ಜುಮ್ಮಣ್ಣ ಮೇಟಿಯವರಿಗೆ ಹಸಿರು ನಮನಗಳು.  ಈಗ ಇವರಿಲ್ಲ,. ಇವರ ಒಡನಾಟ, ಕಾಡು ಸುತ್ತಾಟದ ನೆನಪುಗಳು ಹಸಿರಾಗಿವೆ.

Advertisement

   

ಇಂದಿಗೆ ಸರಿಯಾಗಿ ಹತ್ತು ವರ್ಷಗಳ ಹಿಂದೆ ಪರಿಸರದ ದೇಸಿ ಜ್ಞಾನ ಹಂಚುವ ಕಾರ್ಯಕ್ಕೆ ನಮ್ಮ ಊರು ಕಳವೆಯಲ್ಲಿ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ ಗ್ರಾಮ ಅರಣ್ಯ ಸಮಿತಿ, ಕರ್ನಾಟಕ ಅರಣ್ಯ ಇಲಾಖೆ ಶಿರಸಿ ವಿಭಾಗ, ವಿವಿಧ ದಾನಿಗಳ ಸಹಾಯದಿಂದ ಆರಂಭವಾಯಿತು. ಈ ಹತ್ತು ವರ್ಷಗಳಲ್ಲಿ ಇಲ್ಲಿಗೆ ಬಂದು ಪರಿಸರದ ಮಾತು, ಪ್ರಾತ್ಯಕ್ಷಿಕೆ ವೀಕ್ಷಿಸಿದ ನಾಡಿನ ಲಕ್ಷಾಂತರ ಆಸಕ್ತರಿಗೆ, ನಿಮ್ಮ ಪರಿಸರ ಪ್ರೀತಿಗೆ ನಮನಗಳು. ಪರಿಸರ ಸಂರಕ್ಷಣೆ ಯಶಸ್ಸು ನಾವು ನೆಟ್ಟ ಗಿಡ ಮರವಾಗುವುದು ಮಾತ್ರವಲ್ಲ ಆ ಮರದ ಕೆಳಗಡೆ ನಾವು ನೆಟ್ಟ ಮರದ ಬೀಜಗಳಿಂದ ಸಸಿ ಜನಿಸುವುದು, ಆಗ ಅರಣ್ಯೀಕರಣದಲ್ಲಿ ಶಿಸ್ತಿನ ಸಾಲು ತಪ್ಪಿ ಕಾಡು ಕೂಡುವ ಕ್ರಿಯೆ ಮಹತ್ವ ಪಡೆಯುತ್ತದೆ.

ನಮ್ಮ ಕಳವೆ ಗ್ರಾಮದಲ್ಲಿ ಇಂದಿಗೆ 20ವರ್ಷಗಳ ಹಿಂದೆ ಹಾಗೂ ಈಗ ಕಾಡು ಹೇಗಿದೆ? ಶಿರಸಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಅಜ್ಜಯ್ಯ ಅವರು ಕಳಿಸಿದ ಅರಣ್ಯ ಅಭಿವೃದ್ಧಿಯ ದಾಖಲೆ ಚಿತ್ರ ಇಲ್ಲಿದೆ, ಹಸಿರು ವಿಸ್ತರಿಸಿದೆ. ಇದಕ್ಕೆ ಕಾರಣಕರ್ತರಾದ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ, ಕಾಡಿಗೆ ಬೆಂಕಿ ಬಿದ್ದರೆ ತಕ್ಷಣ ಜಾಗೃತರಾಗಿ ಸಂರಕ್ಷಣೆಯ ಜಾಗೃತಿಗೆ ಮುಖ್ಯ ಕಾರಣಕರ್ತರಾದ ಗ್ರಾಮಸ್ಥರಿಗೆ ವಂದನೆಗಳು.
ನೆಲದ ನಡೆ ಅರ್ಥಮಾಡಿಕೊಂಡು ಮರ ಗಿಡ ಬೆಳೆಸುವ ಕಾಯಕ ಎಲ್ಲೆಡೆ ಮಾಡೋಣ, ಅನುಭವಗಳಿಂದ ಪಾಠ ಕಲಿತು ಅದನ್ನು ಅಳವಡಿಸಿ ಮುಂದೆ ಸಾಗೋಣ. ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು
ಬರಹ :
ಶಿವಾನಂದ ಕಳವೆ,
ಪರಿಸರ ಲೇಖಕರು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ

ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…

2 hours ago

ಹವಾಮಾನ ವರದಿ | 23-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ | ರಾಜ್ಯದಲ್ಲಿ ಎ.27 ರ ನಂತರ ಮಳೆ ಹೆಚ್ಚಾಗುವ ಲಕ್ಷಣ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ.…

9 hours ago

ಅರ್ಧಕೇಂದ್ರ ಯೋಗದಿಂದ ಈ 3 ರಾಶಿಗೆ ಯಶಸ್ಸು | ಕೋಟ್ಯಾಧಿಪತಿ ಯೋಗ!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490

16 hours ago

ಹೊಸರುಚಿ | ಗುಜ್ಜೆ ಮೊಸರು ಗೊಜ್ಜು

ಗುಜ್ಜೆ ಮೊಸರು ಗೊಜ್ಜು ಬೇಕಾಗುವ ಸಾಮಾಗ್ರಿಗಳು :  ಗುಜ್ಜೆ 1 ಕಪ್ ಬೇಯಿಸಿ…

16 hours ago

ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ

ಜಮ್ಮು- ಕಾಶ್ಮೀರದ  ಪೆಹಲ್ಗಾಮ್ ನಲ್ಲಿಂದು ಪ್ರವಾಸಿಗರ ಮೇಲೆ  ಭಯೋತ್ಪಾದಕ ದಾಳಿ ನಡೆದಿದೆ. ಘಟನೆಯಲ್ಲಿ…

1 day ago