Advertisement
MIRROR FOCUS

ರೈತರನ್ನ ಸಂಕಷ್ಟಕ್ಕೆ ತಳ್ಳಿದ ಕೇಂದ್ರ ಸರ್ಕಾರ ನೀತಿ | ಈರುಳ್ಳಿ ದರ ನಿಯಂತ್ರಣ ನೀತಿಯಿಂದ ಮಾರ್ಕೆಟ್‌ನಲ್ಲೇ ಕೊಳೆಯುತ್ತಿದೆ ಲೋಡ್‌ಗಟ್ಟಲೆ ಈರುಳ್ಳಿ

Share

ಕಳೆದ ಕೆಲ ದಿನಗಳಿಂದ ಈರುಳ್ಳಿ ದರ(Onion Price) ಅತ್ತ ಆರಕ್ಕೂ ಏರದೇ ಇತ್ತ ಮೂರಕ್ಕೂ ಇಳಿಯದೆ ಗ್ರಾಹಕರ(customer) ಪಾಲಿಗೆ ಕೊಂಚ ತೃಪ್ತಿದಾಯಕವಾಗಿತ್ತು. ಆದರೆ ರೈತರು(Farmer) ದರ ಏರಬಹುದು ಅನ್ನುವ ನಿರೀಕ್ಷೆಯಲ್ಲಿದ್ರು.  ರೈತರ ಪಾಲಿಗೆ ಈಗ ಮತ್ತೆ ನಿರಾಸೆಯಾಗಿದೆ. ಈರುಳ್ಳಿ ದರ ಕುಸಿತಗೊಂಡಿದ್ದು ಗ್ರಾಹಕರಿಗೆ ಖುಷಿಯಾದರೆ ರೈತರಿಗೆ ಕಣ್ಣೀರು ತರಿಸ್ತಿದೆ.  ಮಳೆ‌ ಇಲ್ಲದೆ ಬಿತ್ತನೆ ಮಾಡಲಾಗದೇ ಸಂಕಷ್ಟ ಅನುಭವಿಸಿದ್ದ ಅನ್ನದಾತರಿಗೆ ಈಗ‌ ಮತ್ತೆ ಗಾಯದ ಮೇಲೆ‌ ಬರೆ ಎಳೆದಂತಾಗಿದೆ.

ಬೆಂಗಳೂರಿನ(Bengaluru) ಎಪಿಎಂಸಿ ಮಾರುಕಟ್ಟೆಯಲ್ಲಿ(APMC Market) ಕಣ್ಣು ಹಾಯಿಸಿದ ಕಡೆಯಲ್ಲ ಬರೀ ಈರುಳ್ಳಿ ಮೂಟೆಗಳ ರಾಶಿ. ಈರುಳ್ಳಿ ಲೋಡ್‌ ಜೊತೆಗೆ ಮಾರ್ಕೆಟ್‌ಗೆ ಎಂಟ್ರಿ ಕೊಡ್ತಿರೋ ಲಾರಿಗಳು. ಮಾರಾಟ ಆಗದೇ ಈರುಳ್ಳಿ ಉಳಿಯಲು ಕಾರಣ ಕೇಂದ್ರ ಸರ್ಕಾರದ ನಿರ್ಧಾರ. ಈರುಳ್ಳಿ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ(Central Govt) ಕಳೆದ ಅಕ್ಟೋಬರ್‌ನಲ್ಲಿ ಈರುಳ್ಳಿ ರಫ್ತು(Onion Export)ಮಾಡೋದನ್ನ ನಿಷೇಧ ಮಾಡಿತ್ತು. ಆ ಬಳಿಕ ಈರುಳ್ಳಿ ಕೊರತೆ ಕಾರಣಕ್ಕೆ ದರ ನಿಯಂತ್ರಣಕ್ಕೆ ರಫ್ತು ನಿಷೇಧವನ್ನು ಮಾರ್ಚ್ 31ರ ವರೆಗೂ ವಿಸ್ತರಿಸಿತ್ತು. ಇದೀಗ ನಿರೀಕ್ಷೆಗಿಂತ ಅಧಿಕ ಇಳುವರಿ ಈರುಳ್ಳಿ ಬಂದಿದೆ. ಕೊಳ್ಳುವರಿಲ್ಲದೇ ದರ ಇಳಿಕೆಯಾಗಿದೆ. ಅನ್ನದಾತರಿಗೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ಬೆಂಗಳೂರು ಎಪಿಎಂಸಿ ಮಾರುಕಟ್ಟೆಯಲ್ಲಿ ದಿನದ ಬೇಡಿಕೆ ಸರಾಸರಿ 30 ರಿಂದ 40 ಸಾವಿರ ಮೂಟೆ‌ಯಿದೆ. ಆದರೆ ಕಳೆದ ಎರಡು ವಾರದಿಂದ ಬೇಡಿಕೆಗಿಂತ ಹೆಚ್ಚಿನ ಈರುಳ್ಳಿ ಮಾರ್ಕೆಟ್ ಗೆ ಬರ್ತಿದ್ದು, 50 ರಿಂದ 70 ಸಾವಿರ ಮೂಟೆ ಈರುಳ್ಳಿ ಬರ್ತಿದೆ. ಕಳೆದ ಶನಿವಾರ 80 ಸಾವಿರ ಮೂಟೆ ಈರುಳ್ಳಿ ಬಂದಿತ್ತು. ಇದರಿಂದ ಬೆಲೆ ಕಮ್ಮಿಯಾಗ್ತಿದೆ ಅಂತಾರೆ ವರ್ತಕರು.

ರಾಜ್ಯದ 13 ಜಿಲ್ಲೆಗಳಲ್ಲಿ ಒಟ್ಟು 30 ಲಕ್ಷದಷ್ಟು ಈರುಳ್ಳಿ ಬೆಳೆಗಾರರಿದ್ದಾರೆ, ಗದಗ, ಹುಬ್ಬಳ್ಳಿ ಧಾರವಾಡ, ಬಾಗಲಕೋಟೆಯಲ್ಲಿ ಅಧಿಕವಾಗಿ ಈರುಳ್ಳಿ ಬೆಳೆಯಲಾಗುತ್ತೆ. ಆದರೆ ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಕ್ವಿಂಟಲ್‌ಗೆ ₹800 ರಿಂದ ₹1200 ಆಗಿದೆ. ರಫ್ತು ನಿಷೇಧ ತೆರವು ಮಾಡಿ ಅಂತ ರೈತರು ಆಗ್ರಹಿಸ್ತಿದ್ದಾರೆ. ಇನ್ನೂ ಮಹಾರಾಷ್ಟ್ರದ ನಾಸಿಕ್‌ನಿಂದಲೂ ಈರುಳ್ಳಿ ಬರ್ತಿರೋದು ಸಂಕಷ್ಟ ಎದುರಾಗಿದೆ. ಈರುಳ್ಳಿ ದರ ಕುಸಿತ ಗ್ರಾಹಕರಿಗೆ ಖುಷಿಯಾಗಿದ್ದರೆ ರೈತರಿಗೆ ಕಣ್ಣೀರು ತರಿಸ್ತಿದೆ. ಆದರೆ ಮಾರುಕಟ್ಟೆಯಲ್ಲಿ ಇಬ್ಬರ ಹಿತವೂ ಮುಖ್ಯ ಅನ್ನೋದು ಸತ್ಯ.

– ಅಂತರ್ಜಾಲ ಮಾಹಿತಿ

Onion prices have fallen, while the consumers are happy, the farmers are in tears. The rice farmers who had suffered because they could not sow without rain, now it is as if the wound has been drawn again.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

1 day ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

1 day ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

2 days ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

3 days ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

3 days ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

3 days ago