Opinion

ಕೋಳಿಗಳಿಗೆ ಮಳೆಗಾಲದಲ್ಲಿ ಕಾಡುವ ಕೋಳಿ ಹೇನು | ಈ ಸಮಸ್ಯೆ ತಡೆಯಲು ಇಲ್ಲಿದೆ ಸುಲಭ ಪರಿಹಾರ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕೇವಲ ಕೃಷಿಯನ್ನು ಮಾತ್ರ ನಂಬದೆ ಅನೇಕ ರೈತರು ಕೋಳಿ ಸಾಕಾಣಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  ಕೃಷಿಯಲ್ಲಿ ಯಾವುದು ಸುಲಭವಲ್ಲ. ಕಾರಣ ನಾವು ಮಾಡುವ ಕೆಲಸದಲ್ಲಿ ನೂರೆಂಟು ವಿಘ್ನಗಳು ಬರುತ್ತವೆ. ಅದೇ ರೀತಿ ಕೋಳಿ ಸಾಕಾಣಿಕೆ ಕೂಡ. ನೋಡುಗರಿಗೆ ಇದು ಸುಲಭದ ಕೆಲಸ ಅನ್ನಿಸಬಹುದು. ಲಾಭ ಜಾಸ್ತಿ ಬರುತ್ತೆ ಎಂದು ಅಂದುಕೊಳ್ಳುತ್ತಾರೆ. ಆದರೆ ಅದರಲ್ಲಿರುವ ಸವಾಲುಗಳು, ಕಷ್ಟಗಳು ಅದರ ಕೆಲಸಕ್ಕೆ ಇಳಿದವರಿಗೆ ಮಾತ್ರ ತಿಳಿಯುತ್ತದೆ.

Advertisement
Advertisement

ಕೋಳಿ ಸಾಕಾಣಿಕೆ ಈಗ ಬಹದೊಡ್ಡ ಉದ್ಯಮವಾಗಿ ಬೆಳೆದಿದೆ. ಆದರೆ ಅದನ್ನು ಸಾಕುವ ಕ್ರಮ, ಅದರ ಆಹಾರ, ಅದಕ್ಕೆ ಬರುವ ರೋಗಗಳ ಬಗ್ಗೆ ತೀವ್ರ ನಿಗ ಇಡಬೇಕಾಗುತ್ತದೆ. ಹೌದು ಈ ಕೋಳಿಗಳಿಗೆ ಅದರಲ್ಲೂ ಈ ಮಳೆಗಾಲದಲ್ಲಿ ಭಯಾನಕವಾಗಿ ಕಾಡುವುದು ಕೋಳಿ ಹೇನು. ಇದನ್ನು ನಿರ್ಮಮೂಲನೇ ಮಾಡಲು ಹರಸಾಹಸವೇ ಪಡಬೇಕಾಗುತ್ತದೆ. ಕೋಳಿ ಹೇನು(chicken Lice) ಮಳೆಗಾಲದಲ್ಲಿ ಮತ್ತು ಅತೀ ಹೆಚ್ಚು ತೇವಾಂಶ ಇರುವ ಗೂಡುಗಳಿದ್ದರೆ ಅದರ ಕಾಟ ಹೆಚ್ಚಿರುತ್ತದೆ. ಅದಕ್ಕೆ ಪರಿಣಾಮಕಾರಿಯಾಗಿ ಔಷಧ ಮಾಡಿದರೆ ಮಾತ್ರ ಅದರಿಂದ ಮುಕ್ತಿ ಸಿಗಬಹುದು. ಇದಕ್ಕೆ ಒಳ್ಳೆಯ ಪರಿಣಾಮಕಾರಿ ಮದ್ದು ಎಂದರೆ ಸೆವಿನ್ ಹೆಸರಿನ ಪೌಡರ್ ಮತ್ತು ಲಿಕ್ವಿಡ್ ಮದ್ದು..

ಇದನ್ನು ಅಂದಾಜು ನೀರಿನಲ್ಲಿ ಮಿಕ್ಸ್ ಮಾಡಿ ರಾತ್ರಿ ವೇಳೆ ಸ್ಪ್ರೇ ಮಾಡಬೇಕು. ಅದು ರಾತ್ರಿ ವೇಳೆಯೇ ಯಾಕೆಂದರೆ ಕೋಳಿಗಳಿಗೆ  ಹಗಲೆಲ್ಲಾ ವಿಪರೀತ ಮೈಕೊಡವಿಕೊಳ್ಳುವ ಅಭ್ಯಾಸ ಇರುತ್ತದೆ. ಆದ್ದರಿಂದ ನೀವು ಸ್ಪ್ರೇ ಮಾಡಿದ ಕೂಡಲೇ ಕೊಡವಿಕೊಳ್ಳುವುದರಿಂದ ಮುದ್ದಿನ ಒಳ್ಳೆಯ ಪರಿಣಾಮ ಬೀರುವುದಿಲ್ಲ.

ಹಾಗಾಗಿ ರಾತ್ರಿ ವೇಳೆಯೇ ಸ್ಪ್ರೇ ಮಾಡಬೇಕು. ಕೋಳಿಗಳ ಮೇಲೆ ಹಾಗೂ ಗೂಡಿನೊಳಗಡೆ ಗೋಡೆಗಳ ಮೇಲೆಯೂ ಸ್ಪ್ರೇ ಮಾಡಬೇಕು. ಸಾಧ್ಯವಾದರೆ ಗೂಡಿನ ಹೊರಗಡೆಯೂ ಬಾಗಿಲಿಗೆ ಮತ್ತು ಸಂದುಗಳಿಗೆ ಸ್ಪ್ರೇ ಮಾಡಬೇಕು. ಇದೇ ರೀತಿಯಲ್ಲಿ ನಿರಂತರ 3 ದಿನ ಒಳ್ಳೆಯ ರೀತಿಯಲ್ಲಿ ಸ್ಪ್ರೇ ಮಾಡಬೇಕು.. ಹೀಗೆ ಮಾಡಿದರೆ ಮಾತ್ರ ನೂರಕ್ಕೆ ನೂರರಷ್ಟು ಫಲಿತಾಂಶ ಸಿಗುತ್ತದೆ..

ಬರಹ :
ಸತೀಶ್‌ ಡಿ ಶೆಟ್ಟಿ
, ಕೋಳಿ ಸಾಕಾಣಿಕೆದಾರರು
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ

ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ "ಮಹಿಳಾ ಗ್ರಾಮಸಭೆ" ಯು ಸಂಪಾಜೆ ಗ್ರಾಮ ಪಂಚಾಯತ್…

4 hours ago

ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ

ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 852.6 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದ್ದು,…

5 hours ago

ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್

ಬೆಂಗಳೂರಿನಲ್ಲಿ  ಈ ಹಿಂದೆ  ಕಸ ವಿಲೇವಾರಿಗೆ 98 ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು. ಈ…

5 hours ago

ರಾಜ್ಯದ ಜೇನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ

ರಾಜ್ಯದ ಜೇನುತುಪ್ಪಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಹಾಗೂ ಮಾರುಕಟ್ಟೆ ಒದಗಿಸಲು ತೋಟಗಾರಿಕಾ ಇಲಾಖೆಯಿಂದ…

5 hours ago

ಬಿಬಿಎಂಪಿ ವ್ಯಾಪ್ತಿಯಲ್ಲಿ ಇತ್ತೀಚಿಗೆ ಸುರಿದ ಮಳೆಗೆ 63 ಕೆರೆಗಳು ಭರ್ತಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಶದಲ್ಲಿ 183 ಕೆರೆಗಳಿದ್ದು, ಕಳೆದ ಒಂದು ವಾರದಿಂದ…

5 hours ago

ವಿದ್ಯುತ್ ಮೇಲಿನ ಬಡ್ಡಿ ಮನ್ನಾ ಮಾಡಲು ನಿರ್ಧಾರ | ಸಂಪುಟ ಅನುಮೋದನೆ

ವಿದ್ಯುತ್ ಸರಬರಾಜು ಕಂಪನಿಗಳಿಗೆ  ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಪಾವತಿಸಬೇಕಾಗಿದ್ದ …

5 hours ago