Advertisement
ಅನುಕ್ರಮ

ಚಿಲಿಪಿಲಿ | ಕಿರೀಟದಂತಹ ಈ ಹಕ್ಕಿ “ಚಂದ್ರಮಕುಟ”

Share

ಚಂದ್ರಮಕುಟ, Common hoopoe.( Upupa epops)  ಈ ಹಕ್ಕಿಯನ್ನು ನೆಲಕುಟುಕ ಎಂಬ ಹೆಸರಿನಿಂದಲೂ ಕರೆಯುತ್ತಾರೆ.ಪ್ರತಿಯೊಂದು ಹಕ್ಕಿಯೂ ವಿಶಿಷ್ಟವೇ.

Advertisement
Advertisement

ಕೆಲವೊಂದು ಹಕ್ಕಿ ತನ್ನ ಚಿತ್ರ ವಿಚಿತ್ರ ಬಣ್ಣದಿಂದ, ಇನ್ನೊಂದು , ತನ್ನ ಆಕರ್ಷಕ ಆಕಾರದಿಂದ, ಅಥವಾ ಉದ್ದನೆಯ ಬಾಲದಂತ ಗರಿಗಳಿಂದ , ಅಥವಾ ‌ದಪ್ಪನೆಯ ಕೊಕ್ಕಿನಿಂದ , ಮೊನಚಾದ ಕಣ್ಣುಗಳಿಂದ ಗುರುತಿಸ್ಪಟ್ಟರೆ ಈಗ ನಾವು ನೋಡುತ್ತಿರುವ ಈ ಹಕ್ಕಿ ತನ್ನ ಇಡೀ ಚೆಂದದ ರೂಪಿನಿಂದಲೇ ತನ್ನತ್ತ ಸೆಳೆಯುತ್ತದೆ. ಮೈ ಬಣ್ಣವೇ ಚೆಂದ, ಅದರಲ್ಲೂ ತಲೆಯ ಮೇಲಿನ ಕಿರೀಟದಂತಹ ರಚನೆಯುಂಟಲ್ಲಾ ಇನ್ನೂ ಚೆಂದ. ಇದೇ ಹಕ್ಕಿ ನೋಡಿ ಚಂದ್ರಮಕುಟ.

ನವೆಂಬರ್ ತಿಂಗಳಿನಲ್ಲಿ ನಮ್ಮ ಬಾಳಿಲ ಪರಿಸರದಲ್ಲಿ ಕಂಡು ಬರುತ್ತದೆ. ಪ್ರಾದೇಶಿಕ ವಲಸೆ ಹಕ್ಕಿಯಾಗಿದೆ. ಮೊನ್ನೆ ನಮ್ಮ ಮನೆಯಂಗಳದಲ್ಲಿ ನಲಿಯುತ್ತಿದ್ದ ಮೈನಾ ಗಾತ್ರ( 31 cm)ದ ಹಕ್ಕಿ ಒಂದರೆಗಳಿಗೆ ನಮ್ಮನ್ನು ತನ್ನತ್ತ ಸೆಳೆದದ್ದಂತು ಹೌದು.
ಇದರ ಮೈ ಮೇಲೆಲ್ಲಾ ಜೀಬ್ರಾ ಪಟ್ಟಿಗಳಂತೆ ಕಪ್ಪು ಬಿಳಿ ಪಟ್ಟಿಗಳಿವೆ. ಕುತ್ತಿಗೆ ಹಾಗೂ ಎದೆ ತಿಳಿಯಾದ ಕಿತ್ತಳೆ ಬಣ್ಣದಲ್ಲಿದೆ. ತಲೆಯ ಮೇಲಿರುವ ಜುಟ್ಟು ಹಿಮ್ಮುಖವಾಗಿ ಇನ್ನೊಂದು ಕೊಕ್ಕಿದೆಯೇನೋ ಎಂಬ ಭ್ರಮೆಯನ್ನೇ ಹುಟ್ಟಿಸುವಂತಿದೆ.
ಇವುಗಳು ಒಂಟಿಯಾಗಿ ಅಥವಾ ಜೊತೆಯಾಗಿಯೂ ಕಂಡು ಬರುತ್ತವೆ.

ಸದಾ ಚಟುವಟಿಕೆಯಿಂದ ಇರುವ ಹಕ್ಕಿಯಾಗಿದೆ. ಕ್ಷಣಾರ್ಧದಲ್ಲಿ ಹುಳು, ಹುಪ್ಪಟೆ ಕೀಟಗಳನ್ನು ಹಿಡಿದು ತಿನ್ನುತ್ತವೆ. ಮರಿಗಳನ್ನು ಬಹಳ ಜತನದಿಂದ ಲಾಲನೆ , ಪಾಲನೆ ಮಾಡಿ ಕೊಳ್ಳುತ್ತದೆ. ಮೆಲು ದನಿಯ ಈ ಹಕ್ಕಿ ಫೆಬ್ರವರಿ ಯಿಂದ ಮೇ ವರೆಗೆ ಮರದ ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ: ಯು. ರಾಧಾಕೃಷ್ಣ ರಾವ್ ಬಾಳಿಲ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…

2 hours ago

ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ

ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…

2 hours ago

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

12 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

12 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

12 hours ago

ಮಾಯಾಮೃಗ ಮಾಯಾಮೃಗ….

ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…

12 hours ago