Advertisement
ಅನುಕ್ರಮ

ಚಿಲಿಪಿಲಿ | ಕಿರೀಟದಂತಹ ಈ ಹಕ್ಕಿ “ಚಂದ್ರಮಕುಟ”

Share

ಚಂದ್ರಮಕುಟ, Common hoopoe.( Upupa epops)  ಈ ಹಕ್ಕಿಯನ್ನು ನೆಲಕುಟುಕ ಎಂಬ ಹೆಸರಿನಿಂದಲೂ ಕರೆಯುತ್ತಾರೆ.ಪ್ರತಿಯೊಂದು ಹಕ್ಕಿಯೂ ವಿಶಿಷ್ಟವೇ.

ಕೆಲವೊಂದು ಹಕ್ಕಿ ತನ್ನ ಚಿತ್ರ ವಿಚಿತ್ರ ಬಣ್ಣದಿಂದ, ಇನ್ನೊಂದು , ತನ್ನ ಆಕರ್ಷಕ ಆಕಾರದಿಂದ, ಅಥವಾ ಉದ್ದನೆಯ ಬಾಲದಂತ ಗರಿಗಳಿಂದ , ಅಥವಾ ‌ದಪ್ಪನೆಯ ಕೊಕ್ಕಿನಿಂದ , ಮೊನಚಾದ ಕಣ್ಣುಗಳಿಂದ ಗುರುತಿಸ್ಪಟ್ಟರೆ ಈಗ ನಾವು ನೋಡುತ್ತಿರುವ ಈ ಹಕ್ಕಿ ತನ್ನ ಇಡೀ ಚೆಂದದ ರೂಪಿನಿಂದಲೇ ತನ್ನತ್ತ ಸೆಳೆಯುತ್ತದೆ. ಮೈ ಬಣ್ಣವೇ ಚೆಂದ, ಅದರಲ್ಲೂ ತಲೆಯ ಮೇಲಿನ ಕಿರೀಟದಂತಹ ರಚನೆಯುಂಟಲ್ಲಾ ಇನ್ನೂ ಚೆಂದ. ಇದೇ ಹಕ್ಕಿ ನೋಡಿ ಚಂದ್ರಮಕುಟ.

ನವೆಂಬರ್ ತಿಂಗಳಿನಲ್ಲಿ ನಮ್ಮ ಬಾಳಿಲ ಪರಿಸರದಲ್ಲಿ ಕಂಡು ಬರುತ್ತದೆ. ಪ್ರಾದೇಶಿಕ ವಲಸೆ ಹಕ್ಕಿಯಾಗಿದೆ. ಮೊನ್ನೆ ನಮ್ಮ ಮನೆಯಂಗಳದಲ್ಲಿ ನಲಿಯುತ್ತಿದ್ದ ಮೈನಾ ಗಾತ್ರ( 31 cm)ದ ಹಕ್ಕಿ ಒಂದರೆಗಳಿಗೆ ನಮ್ಮನ್ನು ತನ್ನತ್ತ ಸೆಳೆದದ್ದಂತು ಹೌದು.
ಇದರ ಮೈ ಮೇಲೆಲ್ಲಾ ಜೀಬ್ರಾ ಪಟ್ಟಿಗಳಂತೆ ಕಪ್ಪು ಬಿಳಿ ಪಟ್ಟಿಗಳಿವೆ. ಕುತ್ತಿಗೆ ಹಾಗೂ ಎದೆ ತಿಳಿಯಾದ ಕಿತ್ತಳೆ ಬಣ್ಣದಲ್ಲಿದೆ. ತಲೆಯ ಮೇಲಿರುವ ಜುಟ್ಟು ಹಿಮ್ಮುಖವಾಗಿ ಇನ್ನೊಂದು ಕೊಕ್ಕಿದೆಯೇನೋ ಎಂಬ ಭ್ರಮೆಯನ್ನೇ ಹುಟ್ಟಿಸುವಂತಿದೆ.
ಇವುಗಳು ಒಂಟಿಯಾಗಿ ಅಥವಾ ಜೊತೆಯಾಗಿಯೂ ಕಂಡು ಬರುತ್ತವೆ.

ಸದಾ ಚಟುವಟಿಕೆಯಿಂದ ಇರುವ ಹಕ್ಕಿಯಾಗಿದೆ. ಕ್ಷಣಾರ್ಧದಲ್ಲಿ ಹುಳು, ಹುಪ್ಪಟೆ ಕೀಟಗಳನ್ನು ಹಿಡಿದು ತಿನ್ನುತ್ತವೆ. ಮರಿಗಳನ್ನು ಬಹಳ ಜತನದಿಂದ ಲಾಲನೆ , ಪಾಲನೆ ಮಾಡಿ ಕೊಳ್ಳುತ್ತದೆ. ಮೆಲು ದನಿಯ ಈ ಹಕ್ಕಿ ಫೆಬ್ರವರಿ ಯಿಂದ ಮೇ ವರೆಗೆ ಮರದ ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ: ಯು. ರಾಧಾಕೃಷ್ಣ ರಾವ್ ಬಾಳಿಲ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!

ರಾಜ್ಯದಲ್ಲಿ ಇಂದಿನಿಂದ ಮಳೆಯ ಚಟುವಟಿಕೆ ಮತ್ತೆ ಆರಂಭವಾಗಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಗುಡುಗು…

6 hours ago

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ : ಕರಾವಳಿಯಲ್ಲಿ ಒಣಹವೆ ಮುಂದುವರಿಕೆ!

ದಕ್ಷಿಣ ಒಳನಾಡಿನಲ್ಲಿ ಗುಡುಗು ಮಳೆಯ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ…

12 hours ago

ಆಟೋ ಗ್ಯಾಸ್ ಕೊರತೆ ವದಂತಿ- ರಾಜ್ಯ ಸರ್ಕಾರದಿಂದ ಸ್ಪಷ್ಟನೆ..!

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಎಂಬುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.…

21 hours ago

ರಸ್ತೆ ಬದಿ ತ್ಯಾಜ್ಯ ಎಸೆತಕ್ಕೆ ಎಫ್‌ಐಆರ್ | ʼನಾನು ಎಸೆದಿಲ್ಲ’ ಎಂದರೂ ಸಿಕ್ಕ ಸಾಕ್ಷಿ…!

ರಸ್ತೆ ಬದಿ ತ್ಯಾಜ್ಯ ಎಸೆದ ಪ್ರಕರಣದಲ್ಲಿ ಅಂಗಡಿ ಮಾಲಿಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.…

21 hours ago

2026ರಲ್ಲಿ ಮಳೆ ಕಡಿಮೆ…? ಎಲ್‌ನಿನೊ ಪರಿಣಾಮದಿಂದ ಭಾರತಕ್ಕೆ ಸಾಮಾನ್ಯಕ್ಕಿಂತ ಕಡಿಮೆ ಮಳೆ…!

2026ರಲ್ಲಿ ಭಾರತದಲ್ಲಿ ಮಳೆಗಾಲ ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಮುನ್ಸೂಚನೆ…

1 day ago

ಭಾರತದ ಬಂದರುಗಳು ಚೇತರಿಕೆ..! 915 ಮಿಲಿಯನ್ ಟನ್ ಸರಕು ಸಾಗಣೆ – ಶೇ.7 ಹೆಚ್ಚಳ ದಾಖಲೆ

ದೇಶದ ಪ್ರಮುಖ ಬಂದರುಗಳು 915 ಮಿಲಿಯನ್ ಟನ್ ಸರಕು ಸಾಗಣೆ ಮಾಡಿ ಶೇ.7…

1 day ago