Advertisement
ಅನುಕ್ರಮ

ಚಿಲಿಪಿಲಿ | ಕಿರೀಟದಂತಹ ಈ ಹಕ್ಕಿ “ಚಂದ್ರಮಕುಟ”

Share

ಚಂದ್ರಮಕುಟ, Common hoopoe.( Upupa epops)  ಈ ಹಕ್ಕಿಯನ್ನು ನೆಲಕುಟುಕ ಎಂಬ ಹೆಸರಿನಿಂದಲೂ ಕರೆಯುತ್ತಾರೆ.ಪ್ರತಿಯೊಂದು ಹಕ್ಕಿಯೂ ವಿಶಿಷ್ಟವೇ.

ಕೆಲವೊಂದು ಹಕ್ಕಿ ತನ್ನ ಚಿತ್ರ ವಿಚಿತ್ರ ಬಣ್ಣದಿಂದ, ಇನ್ನೊಂದು , ತನ್ನ ಆಕರ್ಷಕ ಆಕಾರದಿಂದ, ಅಥವಾ ಉದ್ದನೆಯ ಬಾಲದಂತ ಗರಿಗಳಿಂದ , ಅಥವಾ ‌ದಪ್ಪನೆಯ ಕೊಕ್ಕಿನಿಂದ , ಮೊನಚಾದ ಕಣ್ಣುಗಳಿಂದ ಗುರುತಿಸ್ಪಟ್ಟರೆ ಈಗ ನಾವು ನೋಡುತ್ತಿರುವ ಈ ಹಕ್ಕಿ ತನ್ನ ಇಡೀ ಚೆಂದದ ರೂಪಿನಿಂದಲೇ ತನ್ನತ್ತ ಸೆಳೆಯುತ್ತದೆ. ಮೈ ಬಣ್ಣವೇ ಚೆಂದ, ಅದರಲ್ಲೂ ತಲೆಯ ಮೇಲಿನ ಕಿರೀಟದಂತಹ ರಚನೆಯುಂಟಲ್ಲಾ ಇನ್ನೂ ಚೆಂದ. ಇದೇ ಹಕ್ಕಿ ನೋಡಿ ಚಂದ್ರಮಕುಟ.

ನವೆಂಬರ್ ತಿಂಗಳಿನಲ್ಲಿ ನಮ್ಮ ಬಾಳಿಲ ಪರಿಸರದಲ್ಲಿ ಕಂಡು ಬರುತ್ತದೆ. ಪ್ರಾದೇಶಿಕ ವಲಸೆ ಹಕ್ಕಿಯಾಗಿದೆ. ಮೊನ್ನೆ ನಮ್ಮ ಮನೆಯಂಗಳದಲ್ಲಿ ನಲಿಯುತ್ತಿದ್ದ ಮೈನಾ ಗಾತ್ರ( 31 cm)ದ ಹಕ್ಕಿ ಒಂದರೆಗಳಿಗೆ ನಮ್ಮನ್ನು ತನ್ನತ್ತ ಸೆಳೆದದ್ದಂತು ಹೌದು.
ಇದರ ಮೈ ಮೇಲೆಲ್ಲಾ ಜೀಬ್ರಾ ಪಟ್ಟಿಗಳಂತೆ ಕಪ್ಪು ಬಿಳಿ ಪಟ್ಟಿಗಳಿವೆ. ಕುತ್ತಿಗೆ ಹಾಗೂ ಎದೆ ತಿಳಿಯಾದ ಕಿತ್ತಳೆ ಬಣ್ಣದಲ್ಲಿದೆ. ತಲೆಯ ಮೇಲಿರುವ ಜುಟ್ಟು ಹಿಮ್ಮುಖವಾಗಿ ಇನ್ನೊಂದು ಕೊಕ್ಕಿದೆಯೇನೋ ಎಂಬ ಭ್ರಮೆಯನ್ನೇ ಹುಟ್ಟಿಸುವಂತಿದೆ.
ಇವುಗಳು ಒಂಟಿಯಾಗಿ ಅಥವಾ ಜೊತೆಯಾಗಿಯೂ ಕಂಡು ಬರುತ್ತವೆ.

ಸದಾ ಚಟುವಟಿಕೆಯಿಂದ ಇರುವ ಹಕ್ಕಿಯಾಗಿದೆ. ಕ್ಷಣಾರ್ಧದಲ್ಲಿ ಹುಳು, ಹುಪ್ಪಟೆ ಕೀಟಗಳನ್ನು ಹಿಡಿದು ತಿನ್ನುತ್ತವೆ. ಮರಿಗಳನ್ನು ಬಹಳ ಜತನದಿಂದ ಲಾಲನೆ , ಪಾಲನೆ ಮಾಡಿ ಕೊಳ್ಳುತ್ತದೆ. ಮೆಲು ದನಿಯ ಈ ಹಕ್ಕಿ ಫೆಬ್ರವರಿ ಯಿಂದ ಮೇ ವರೆಗೆ ಮರದ ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ: ಯು. ರಾಧಾಕೃಷ್ಣ ರಾವ್ ಬಾಳಿಲ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?

ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.…

3 days ago

ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ

ಮಂಗಳೂರು ನಗರದಲ್ಲಿ ಮಳೆಗಾಲದ ಹಿನ್ನೆಲೆ ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗೆ ರಸ್ತೆ, ಗುಡ್ಡ…

3 days ago

ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ

ಈಶಾನ್ಯ ಭಾರತದಲ್ಲಿ ಡಿಆರ್‌ಐ ನಡೆಸಿದ ದಾಳಿಯಲ್ಲಿ ಸುಮಾರು 60 ಸಾವಿರ ಕೆಜಿ ಅಕ್ರಮ…

4 days ago

“ಒಂದು ದಿನ ಅಡಿಕೆ ಮಾರುಕಟ್ಟೆಗೆ ‘ಏಲಿಯನ್ಸ್’ ಬಂದರೆ?” ರೈತನ ಭವಿಷ್ಯದ ಬಗ್ಗೆ ಎಚ್ಚರಿಸುವ ಕಲ್ಪಿತ ಕಥೆ

ಅಡಿಕೆ ಮಾರುಕಟ್ಟೆಗೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಬಂದರೆ ರೈತರಿಗೆ ಆರಂಭದಲ್ಲಿ ಲಾಭದ ಅನುಭವ…

5 days ago

“ಕಾಕ್ರೋಚ್‌ ಜನತಾ ಪಾರ್ಟಿ”ಗೆ ಹೊಸ ಎದುರಾಳಿ..! ವೈರಲ್‌ ಆಗುತ್ತಿದೆ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌”

“ಕಾಕ್‌ರೋಚ್‌ ಜನತಾ ಪಾರ್ಟಿ” ಬಳಿಕ ಇದೀಗ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌” ಎಂಬ ಹೊಸ…

5 days ago