Advertisement
ಅನುಕ್ರಮ

ಚಿಲಿಪಿಲಿ | ಕಿರೀಟದಂತಹ ಈ ಹಕ್ಕಿ “ಚಂದ್ರಮಕುಟ”

Share

ಚಂದ್ರಮಕುಟ, Common hoopoe.( Upupa epops)  ಈ ಹಕ್ಕಿಯನ್ನು ನೆಲಕುಟುಕ ಎಂಬ ಹೆಸರಿನಿಂದಲೂ ಕರೆಯುತ್ತಾರೆ.ಪ್ರತಿಯೊಂದು ಹಕ್ಕಿಯೂ ವಿಶಿಷ್ಟವೇ.

ಕೆಲವೊಂದು ಹಕ್ಕಿ ತನ್ನ ಚಿತ್ರ ವಿಚಿತ್ರ ಬಣ್ಣದಿಂದ, ಇನ್ನೊಂದು , ತನ್ನ ಆಕರ್ಷಕ ಆಕಾರದಿಂದ, ಅಥವಾ ಉದ್ದನೆಯ ಬಾಲದಂತ ಗರಿಗಳಿಂದ , ಅಥವಾ ‌ದಪ್ಪನೆಯ ಕೊಕ್ಕಿನಿಂದ , ಮೊನಚಾದ ಕಣ್ಣುಗಳಿಂದ ಗುರುತಿಸ್ಪಟ್ಟರೆ ಈಗ ನಾವು ನೋಡುತ್ತಿರುವ ಈ ಹಕ್ಕಿ ತನ್ನ ಇಡೀ ಚೆಂದದ ರೂಪಿನಿಂದಲೇ ತನ್ನತ್ತ ಸೆಳೆಯುತ್ತದೆ. ಮೈ ಬಣ್ಣವೇ ಚೆಂದ, ಅದರಲ್ಲೂ ತಲೆಯ ಮೇಲಿನ ಕಿರೀಟದಂತಹ ರಚನೆಯುಂಟಲ್ಲಾ ಇನ್ನೂ ಚೆಂದ. ಇದೇ ಹಕ್ಕಿ ನೋಡಿ ಚಂದ್ರಮಕುಟ.

ನವೆಂಬರ್ ತಿಂಗಳಿನಲ್ಲಿ ನಮ್ಮ ಬಾಳಿಲ ಪರಿಸರದಲ್ಲಿ ಕಂಡು ಬರುತ್ತದೆ. ಪ್ರಾದೇಶಿಕ ವಲಸೆ ಹಕ್ಕಿಯಾಗಿದೆ. ಮೊನ್ನೆ ನಮ್ಮ ಮನೆಯಂಗಳದಲ್ಲಿ ನಲಿಯುತ್ತಿದ್ದ ಮೈನಾ ಗಾತ್ರ( 31 cm)ದ ಹಕ್ಕಿ ಒಂದರೆಗಳಿಗೆ ನಮ್ಮನ್ನು ತನ್ನತ್ತ ಸೆಳೆದದ್ದಂತು ಹೌದು.
ಇದರ ಮೈ ಮೇಲೆಲ್ಲಾ ಜೀಬ್ರಾ ಪಟ್ಟಿಗಳಂತೆ ಕಪ್ಪು ಬಿಳಿ ಪಟ್ಟಿಗಳಿವೆ. ಕುತ್ತಿಗೆ ಹಾಗೂ ಎದೆ ತಿಳಿಯಾದ ಕಿತ್ತಳೆ ಬಣ್ಣದಲ್ಲಿದೆ. ತಲೆಯ ಮೇಲಿರುವ ಜುಟ್ಟು ಹಿಮ್ಮುಖವಾಗಿ ಇನ್ನೊಂದು ಕೊಕ್ಕಿದೆಯೇನೋ ಎಂಬ ಭ್ರಮೆಯನ್ನೇ ಹುಟ್ಟಿಸುವಂತಿದೆ.
ಇವುಗಳು ಒಂಟಿಯಾಗಿ ಅಥವಾ ಜೊತೆಯಾಗಿಯೂ ಕಂಡು ಬರುತ್ತವೆ.

ಸದಾ ಚಟುವಟಿಕೆಯಿಂದ ಇರುವ ಹಕ್ಕಿಯಾಗಿದೆ. ಕ್ಷಣಾರ್ಧದಲ್ಲಿ ಹುಳು, ಹುಪ್ಪಟೆ ಕೀಟಗಳನ್ನು ಹಿಡಿದು ತಿನ್ನುತ್ತವೆ. ಮರಿಗಳನ್ನು ಬಹಳ ಜತನದಿಂದ ಲಾಲನೆ , ಪಾಲನೆ ಮಾಡಿ ಕೊಳ್ಳುತ್ತದೆ. ಮೆಲು ದನಿಯ ಈ ಹಕ್ಕಿ ಫೆಬ್ರವರಿ ಯಿಂದ ಮೇ ವರೆಗೆ ಮರದ ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ: ಯು. ರಾಧಾಕೃಷ್ಣ ರಾವ್ ಬಾಳಿಲ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಮಧ್ಯಪ್ರಾಚ್ಯ ಸಂಘರ್ಷ ಪರಿಣಾಮ – ಗೋಮಯ ಗೊಬ್ಬರದತ್ತ ಭಾರತದ ರೈತರು – ರಾಸಾಯನಿಕ ಗೊಬ್ಬರ ಕೊರತೆ ಭೀತಿ..!

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಾಗತಿಕ ಗೊಬ್ಬರ ಸರಬರಾಜು ವ್ಯವಸ್ಥೆಯಲ್ಲಿ ಅನಿಶ್ಚಿತತೆ ಉಂಟಾಗಿದ್ದು, ಭಾರತದಲ್ಲಿ…

5 hours ago

ಕೇರಳದಲ್ಲಿ ಕೊಬ್ಬರಿ ಬೆಲೆ MSP ಗಿಂತಲೂ ಕಡಿಮೆ – ₹130 ಕನಿಷ್ಠ ಬೆಂಬಲ ಬೆಲೆಗೆ ರೈತರ ಆಗ್ರಹ

ಕೇರಳದಲ್ಲಿ ಕೊಬ್ಬರಿ ದರ MSP ಗಿಂತ ಕೆಳಗೆ ಇಳಿದಿದ್ದು, ರೈತರು ಪ್ರತಿ ಕೆ.ಜಿಗೆ…

6 hours ago

ಎಲ್‌ ನಿನೋ ಈಗ ಮತ್ತಷ್ಟು ನಿಗೂಢ…! ಹವಾಮಾನ ಬದಲಾವಣೆ ಮಳೆ ಮುನ್ಸೂಚನೆಗಳನ್ನೇ ಗೊಂದಲಗೊಳಿಸುತ್ತಿದೆಯೇ..?

ಹವಾಮಾನ ಬದಲಾವಣೆಯಿಂದ ಎಲ್‌ ನಿನೋ ಮತ್ತು ಲಾ ನಿನಾ ಘಟನೆಗಳ ವರ್ತನೆ ಬದಲಾಗುತ್ತಿದ್ದು,…

8 hours ago

ಪ್ರತಿ ಜಿಲ್ಲೆಯಲ್ಲಿ ಒಂದು ಗೋಆಧಾರಿತ ಉದ್ಯಮ – ಉತ್ತರ ಪ್ರದೇಶದ ಹೊಸ ಮಾದರಿ ದೇಶದ ಗಮನ ಸೆಳೆಯುತ್ತಿದೆ

ಉತ್ತರ ಪ್ರದೇಶ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಒಂದು ಪ್ರಮುಖ ಗೋಆಧಾರಿತ ಉದ್ಯಮ ಅಭಿವೃದ್ಧಿಪಡಿಸಲು…

9 hours ago

ಅತಿವೃಷ್ಟಿ, ಬರ, ಹೀಟ್‌ ವೇವ್‌ಗಳಿಗೆ ಯಾರು ಕಾರಣ? ಐಐಟಿ ದೆಹಲಿ ಅಧ್ಯಯನದಿಂದ ಕುತೂಹಲಕಾರಿ ಮಾಹಿತಿ!

ಭಾರತದಲ್ಲಿ ಹೆಚ್ಚುತ್ತಿರುವ ಅತಿವೃಷ್ಟಿ, ಬರ ಮತ್ತು ಉಷ್ಣ ಅಲೆಗಳಂತಹ ತೀವ್ರ ಹವಾಮಾನ ಘಟನೆಗಳಿಗೆ…

1 day ago

ದಕ್ಷಿಣ ಕನ್ನಡಕ್ಕೆ ಕೈಗಾರಿಕಾ ಬಲ : ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿ ಪರಿಶೀಲಿಸಿದ ಸಂಸದ ಬ್ರಿಜೇಶ್ ಚೌಟ

ಗಂಜಿಮಠದ 104 ಎಕರೆ ಪ್ಲಾಸ್ಟಿಕ್ ಪಾರ್ಕ್ ಯೋಜನೆಗೆ ಮತ್ತೆ ವೇಗ ಸಿಕ್ಕಿದ್ದು, ಸಂಸದ…

2 days ago