Advertisement
ಅಂಕಣ

ಚಿಲಿಪಿಲಿ | ನೀಲಿಬಾಲದ ಜೇನ್ನೊಣ ಬಾಕ

Share
ನೀಲಿಬಾಲದ ಜೇನ್ನೋಣ ಬಾಕ  (Blue tailed bee eater)
ತನ್ನ ವರ್ಣಮಯ ಬಣ್ಣಗಳಿಂದಲೇ  ಗುರುತಿಸಲ್ಪಡುವ ಈ ಹಕ್ಕಿಯೇ ನೀಲಿಬಾಲದ ಜೇನ್ನೋಣ ಬಾಕ ಅಥವಾ ನೀಲಿ ಬಾಲದ ಕಳ್ಳಿಪೀರ.  ಹಸಿರು ಜೇನ್ನೋಣ ಬಾಕದಿಂದ ಗಾತ್ರದಲ್ಲಿ ದೊಡ್ಡದು(31 cm).  ಹಲವು ವರ್ಣಗಳಲ್ಲಿರುವ ಇವುಗಳ ಬಾಲದ ಭಾಗ ನೀಲಿಯಾಗಿರುತ್ತದೆ.
ಗುಂಪಾಗಿ ಇರುವ ಇವುಗಳು  ಬೇಟೆಯನ್ನು  ದೂರದಿಂದಲೇ ಗುರುತಿಸುತ್ತವೆ. ಎತ್ತರದ ಪ್ರದೇಶದಲ್ಲಿ, ವಿದ್ಯುತ್ ತಂತಿಗಳ ಮೇಲೆ ಹೆಚ್ಚಾಗಿ ಕಂಡು ಬರುತ್ತವೆ. ತಮ್ಮ ಬೇಟೆಯನ್ನು ಗುರುತಿಸುವ ಅನುಕೂಲತೆಗಾಗಿ ಈ ಪ್ರದೇಶಗಳ ನ್ನು ಆಯ್ದುಕೊಳ್ಳುತ್ತವೆ.
ಗಂಡು ಹೆಣ್ಣು ಹಕ್ಕಿಗಳೆರಡೂ ಗೂಡು ಕಟ್ಟುವುದರಲ್ಲಿ , ಮೊಟ್ಟೆ, ಮರಿಗಳ ರಕ್ಷಣೆಯಲ್ಲಿ , ಆಹಾರ ಸಂಗ್ರಹದಲ್ಲಿ  ಒಟ್ಟಿಗೆ ಪಾಲ್ಗೊಳ್ಳುತ್ತವೆ. ಮಾರ್ಚ್ ನಿಂದ ಜೂನ್ ವರೆಗೆ ಮೊಟ್ಟೆ ಇಡುವ ಕಾಲ. ಈಶಾನ್ಯ ಭಾರತ, ನೇಪಾಳ, ಬಾಂಗ್ಲಾ ದೇಶಗಳಲ್ಲಿ ಸಂತಾನಾಭಿವೃದ್ಧಿ ಮಾಡಿ  ಚಳಿಗಾಲದ ಹೊತ್ತಿಗೆ ನಮ್ಮಲ್ಲಿಗೆ  ಬರುತ್ತವೆ.  ಹೆಚ್ಚಾಗಿ ನೀರಿನ ಆಶ್ರಯದ ಪಕ್ಕದಲ್ಲಿರಲು ಇಷ್ಟ ಪಡುತ್ತವೆ.
ಚಿತ್ರ : ರಾಧಾಕೃಷ್ಣ ರಾವ್‌ ಯು  ಬಾಳಿಲ
ರಾಧಾಕೃಷ್ಣ ರಾವ್‌ ಯು , ಬಾಳಿಲ
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |

ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…

6 hours ago

ನಾಳೆ ಶಿವರಾತ್ರಿ | ಎಲ್ಲೆಲ್ಲೂ “ಶಿವೋಹಂ…ಶಿವೋಹಂ..” |

ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ…

7 hours ago

ಧರ್ಮಸ್ಥಳದಲ್ಲಿ ಪಾದಯಾತ್ರಿಗಳಿಗೆ ಸನ್ಮಾನ | ಪರಿಶುದ್ಧ ಭಕ್ತಿ ಮತ್ತು ದೃಢನಂಬಿಕೆಯಿಂದ ದೇವರ ಅನುಗ್ರಹ ಪ್ರಾಪ್ತಿ: ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ…

7 hours ago

ತುಂಬೆಯಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ | ಅಣೆಕಟ್ಟಿನಲ್ಲಿ 6 ಮೀ ಆಳದವರೆಗೆ  ನೀರು ಸಂಗ್ರಹ |

ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ…

8 hours ago

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ

ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…

21 hours ago

ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…

21 hours ago