ಪ್ರಸಿದ್ಧ ಪಾರಂಪರಿಕ ಕೇಂದ್ರ ತಲಕಾಡು ಬಳಿಯ ಐತಿಹಾಸಿಕ ದೇವಾಲಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಚೋಳರ ಕಾಲಕ್ಕೆ ಸೇರಿದ ದೇವಾಲಯಗಳು ಡಿಸೆಂಬರ್ನಲ್ಲಿ ನಿರ್ಲಕ್ಷಿಸಲ್ಟಟ್ಟು ಶಿಥಿಲಗೊಂಡಿರುವುದು ಕಂಡುಬಂದಿದ್ದು, ಅವುಗಳನ್ನು ಸಂಪೂರ್ಣ ನಾಶವಾಗದಂತೆ ರಕ್ಷಿಸಬೇಕು ಎಂದು ಆರೋಪಿಸಿ ಪ್ರವಾಸಿಗರು, ಸ್ಥಳೀಯರು ಮತ್ತು ಇತಿಹಾಸ ಆಸಕ್ತರು ರಾಜ್ಯ ಸರ್ಕಾರ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪುರಾತತ್ವ ಇಲಾಖೆಗಳ ಗಮನಕ್ಕೆ ತಂದಿದ್ದಾರೆ.
ತಲಕಾಡಿನಿಂದ ಸುಮಾರು 10ಕಿ.ಮೀ ಮತ್ತು ಮೈಸೂರಿನಿಂದ 60 ಕಿ.ಮೀ ದೂರದಲ್ಲಿರುವ ತಡಿಮಲಂಗಿ ಮತ್ತು ಕಲಿಯೂರು ಗ್ರಾಮಗಳಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಲಾದ ದೇವಾಲಯಗಳು ಈಗ ಧೂಳಿಪಟವಾಗುತ್ತಿದೆ. ಈ ದೇವಾಲಯಗಳ ಬಗ್ಗೆ ಹಳ್ಳಿಗರಿಗೂ ಈ ರಚನೆಗಳ ಬಗ್ಗೆ ಕಡಿಮೆ ಮಾಹಿತಿ ತಿಳಿದಿದೆ. ಇನ್ನು ಕಲಿಯೂರು ಗ್ರಾಮದಲ್ಲಿ ವೀರಗಲ್ಲು ಪಾಳು ಬಿದ್ದಿದೆ, ಪುರಾತತ್ವ ಪ್ರಮುಖ್ಯತೆಯನ್ನು ಅರಿತು ಬೆಂಗಳೂರು ವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಬೇಕು ಎಂದು ಮೈಸೂರಿನ ಇತಿಹಾಸ ಪ್ರೇಮಿ ಗೋಪಾಲ್ ಬಾಲಕೃಷ್ಣನ್ ಹೇಳಿದ್ದಾರೆ.
ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಯಾವುದೇ ಆಸ್ತಿಯನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಸಂರಕ್ಷರಣೆಗಾಗಿ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಪಟ್ಟಿಮಾಡಲಾಗುತ್ತದೆ. ಈ ಸಂದರ್ಭದಲ್ಲಿಯೂ ಇದನ್ನು ಮಾಡಬಹುದು, ಕೇಂದ್ರದಿಂದ ಹಣದ ಲಭ್ಯತೆಗೆ ಒಳಪಟ್ಟಿರುತ್ತದೆ ಎಂದು ಐಎಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
23.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ರಾಸಾಯನಿಕ ನೀಡಿಯೇ ಇದುವರೆಗೆ ಕೃಷಿ ಮಾಡುವ ವಿಧಾನವಿತ್ತು. ಇದೀಗ ಕೀಟಗಳ ನಿಯಂತ್ರಣಕ್ಕೆ ಹಾಗೂ…
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಟ 1 ಮೀಟರ್…
ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಕೃಷಿಯಲ್ಲಿ ಎಐ, ಡ್ರೋನ್ಗಳು ಮತ್ತು…
ಎತ್ತಿನ ಹೊಳೆ ಯೋಜನೆಯ ಮೂಲಕ ಬರಪೀಡಿತ ಜಿಲ್ಲೆಗಳಾದ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ…
ಹೆಚ್ಚಿನ ಮಾಹಿತಿ ಬೇಕಾದರೆ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490