ಹವಾಮಾನ ಬದಲಾವಣೆಗೆ ತಡೆಗಟ್ಟುವ ಗಂಭೀರ ನೀತಿಗಳನ್ನು ತಕ್ಷಣ ಜಾರಿಗೊಳಿಸದಿದ್ದರೆ, 2100 ರೊಳಗೆ ವಿಶ್ವದಾದ್ಯಂತ 1.1 ಬಿಲಿಯನ್ (110 ಕೋಟಿ) ಜನರು ತೀವ್ರ ಆಹಾರ ಸಂಕಟಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಯುರೋಪಿಯನ್ ಯೂನಿಯನ್ನ ರೀಸರ್ಚ್ ಸೆಂಟರ್ EU Science Hub) ಪ್ರಕಟಿಸಿರುವ ಮಹತ್ವದ ಸಂಶೋಧನಾ ವರದಿ ಎಚ್ಚರಿಸಿದೆ.
ಈ ಅಧ್ಯಯನವು ಪ್ರತಿಷ್ಠಿತ Scientific Reports ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದರಲ್ಲಿ ಕಂಡುಬಂದಿರುವ ಮುಖ್ಯ ಅಂಶಗಳು, ಹವಾಮಾನದ ಬದಲಾವಣೆಗಳು ಮಾತ್ರವಲ್ಲದೆ ಹವಾಮಾನ ಸಂಘರ್ಷ (Conflict) ಮತ್ತು ಇದರಿಂದ ಸಾಮಾಜಿಕ–ಆರ್ಥಿಕ ಅಸಮಾನತಯು ಆಹಾರ ಭದ್ರತೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ ಎಂದು ಸೂಚಿಸಿವೆ.
ಸಂಶೋಧನಾ ಮಾದರಿಯ ಪ್ರಕಾರ, 1.16 ಬಿಲಿಯನ್ ಜನರು ಕನಿಷ್ಠ ಒಂದು ಬಾರಿ ತೀವ್ರ ಆಹಾರ ಸಂಕಟ ಎದುರಿಸಬಹುದು. ಇವರಲ್ಲಿ 600 ಮಿಲಿಯನ್ಗೂ ಹೆಚ್ಚು ಮಕ್ಕಳು ಸೇರಿರಬಹುದು, ಬಹುತೇಕ ಸಂಕಟಗ್ರಸ್ತರು ಆಫ್ರಿಕಾ ಮತ್ತು ಏಷ್ಯಾ ಪ್ರದೇಶಗಳಲ್ಲಿ ವಾಸಿಸುವವರು ಎಂದು ಎಚ್ಚರಿಸಿದೆ.
ಹೀಗಾಗಿ ಭವಿಷ್ಯದ ಎರಡು ದಾರಿಗಳನ್ನು ಕೂಡಾ ಈ ವರದಿ ಹೇಳಿದೆ. ಮೊದಲನೆಯದು ಸುಸ್ಥಿರ ಕೃಷಿ ಬೆಳವಣಿಗೆ. ಎರಡನೆಯದು, ಹಸಿರು ಬೆಳವಣಿಗೆ, ಪರಿಸರ –ಸಹಕಾರಿ ಕೃಷಿ, ನೀರು ನಿರ್ವಹಣೆ ಮತ್ತು ಹವಾಮಾನ ಸ್ನೇಹಿ ನೀತಿಗಳನ್ನು ಅನುಸರಿಸಿದರೆ, ಆಹಾರ ಸಂಕಟ ಎದುರಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಈ ಸಮಸ್ಯೆಗೆ ಮೂಲ ಕಾರಣಗಳನ್ನು ಕೂಡಾ ಈ ವರದಿ ಹೇಳಿದೆ. ಹವಾಮಾನ ಬದಲಾವಣೆ ಒಂದು ಪ್ರತ್ಯೇಕ ಸಮಸ್ಯೆಯಲ್ಲ; ಅದು ಹಲವು ಸಂಕಷ್ಟಗಳಿಗೆ ಹೆಚ್ಚು ಕಾರಣವಾಗುತ್ತದೆ. ತಾಪಮಾನ ಏರಿಕೆ, ನೀರಿನ ತೀವ್ರ ಕೊರತೆ, ಬೆಳೆ ಉತ್ಪಾದನೆಯಲ್ಲಿ ಕುಸಿತ, ಸಾಮಾಜಿಕ ಅಸಮಾನತೆ ಮತ್ತು ರಾಜಕೀಯ ಅಸ್ಥಿರತೆ ಈ ಎಲ್ಲ ಅಂಶಗಳು ಸೇರಿ ವಿಶ್ವ ಆಹಾರ ಭದ್ರತೆಯನ್ನು ಅಪಾಯದ ಅಂಚಿಗೆ ತಳ್ಳುತ್ತಿವೆ.
ಈ ವರದಿಯು ನೀಡಿದ ಸಂದೇಶಗಳಲ್ಲಿ ಹವಾಮಾನ ಬದಲಾವಣೆ , ಸಾಮಾಜಿಕ ಅಸಮಾನತೆಯು ಭವಿಷ್ಯದಲ್ಲಿ ಆಹಾರ ಸಮಸ್ಯೆಗೆ ಕಾರಣವಾಗಬಹುದು. ಆದರೆ, ಸಮತೋಲನಯುತ ನೀತಿಗಳು, ಹವಾಮಾನ ಸ್ನೇಹಿ ಕ್ರಮಗಳು ಮತ್ತು ಸಾಮಾಜಿಕ ನ್ಯಾಯವನ್ನು ಮಾಡಿಕೊಳ್ಳುವ ಅಭಿವೃದ್ಧಿ ಮಾರ್ಗ ಅನುಸರಿಸಿದರೆ, ವಿಶ್ವದಲ್ಲಿ ಸಾವಿರಕೋಟಿ ಜನರನ್ನು ಆಹಾರ ಸಂಕಟದಿಂದ ರಕ್ಷಿಸಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ….
ನಿಮ್ಮ ಅಭಿಪ್ರಾಯಗಳಿಗೆ…
ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ನೀಡಬೇಕೆಂದು…
ಅಡಿಕೆ ಜಗಿಯುವುದು ಕೇವಲ ಸಾಂಪ್ರದಾಯಿಕ ಅಭ್ಯಾಸ ಮಾತ್ರವಲ್ಲ, ಅದು ಗಂಭೀರ ಆರೋಗ್ಯ ಅಪಾಯಗಳಿಗೆ…
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ ಹಾಗೂ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು…
ದಾವಣಗೆರೆ ಜಿಲ್ಲೆಯಲ್ಲಿ 5 ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರು 87,258 ಕ್ವಿಂಟಲ್…
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್…
ಕರಾವಳಿ ಕರ್ನಾಟಕದ ಅಡಿಕೆ ತೋಟಗಳು ಕಾಡುಪ್ರಾಣಿಗಳ ಹಾವಳಿಯಿಂದ ಭಾರೀ ನಷ್ಟ ಅನುಭವಿಸುತ್ತಿವೆ. ಮಾನವ–ವನ್ಯಜೀವಿ…