Advertisement
ಸುದ್ದಿಗಳು

5 ಗಂಟೆಗಳಲ್ಲಿ 12,000 ಲೀಟರ್ ತೆಂಗಿನ ಹಾಲು ‘ಸೋಲ್ಡ್ ಔಟ್’..!

Share

ಒಂದು ಮಾರುಕಟ್ಟೆಯಲ್ಲಿ ಕೇವಲ ಐದು ಗಂಟೆಗಳಲ್ಲಿ 12,000 ಲೀಟರ್ ತೆಂಗಿನ ಹಾಲು ಸಂಪೂರ್ಣ ಮಾರಾಟವಾಗಿರುವ ಘಟನೆ ಗಮನ ಸೆಳೆದಿದೆ. ಹೆಚ್ಚಿನ ಗ್ರಾಹಕರು ಖರೀದಿಗೆ ಮುಗಿಬಿದ್ದ ಪರಿಣಾಮ, ಹಲವರಿಗೆ ತೆಂಗಿನ ಹಾಲು ಸಿಗದೆ ಪೂರ್ಣ ತೆಂಗು ಅಥವಾ ತುರಿದ ತೆಂಗಿನಕಾಯಿ ಖರೀದಿಸಲು ಮುಂದಾಗಿದ್ದರು. ಈ ಘಟನೆ ನಡೆದದ್ದು ಮಲೇಶಿಯಾದಲ್ಲಿ. ಇಷ್ಟೂ ಬೇಡಿಕೆ ಬಂದದ್ದು ಹಬ್ಬದ ಕಾರಣದಿಂದ..!

ಮಲೇಶಿಯಾದ ಕೌಲಾ ತೆರೇಂಗಾನು ಪ್ರದೇಶದ ಪಾಸರ್‌ ಕಾಬಾಂಗ್‌ ತಿಗಾ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಹಬ್ಬದ ತಯಾರಿ ಹಿನ್ನೆಲೆ ತೆಂಗಿನ ಹಾಲಿನ ಬೇಡಿಕೆ ಅತಿಯಾಗಿ ಏರಿಕೆ ಕಂಡಿದೆ. ಸುಮಾರು 20 ಟನ್‌ ತೆಂಗಿನಿಂದ ತಯಾರಿಸಲಾದ 12,000 ಲೀಟರ್ ತೆಂಗಿನ ಹಾಲು ಕೆಲವೇ ಗಂಟೆಗಳಲ್ಲಿ ಮಾರಾಟವಾಗಿದ್ದು, ಮಾರುಕಟ್ಟೆಯಲ್ಲಿ ಸರಬರಾಜು ಕೊರತೆ ಕಂಡಿತ್ತು.

ಬೇಡಿಕೆ ಹೆಚ್ಚಾಗಿದ್ದರಿಂದ, ವ್ಯಾಪಾರಿಗಳು ಪ್ರತಿ ಗ್ರಾಹಕರಿಗೆ ಗರಿಷ್ಠ 2 ಕೆ.ಜಿ. ಮಾತ್ರ ಮಾರಾಟ ಮಾಡಿದರು. ಈ ಕ್ರಮದಿಂದ ಗೊಂದಲ ನಿಯಂತ್ರಣ ಸಾಧ್ಯವಾದರೂ, ಮಾರುಕಟ್ಟೆಯಲ್ಲಿ ತೆಂಗು ಉತ್ಪನ್ನಗಳ ಕೊರತೆ ಕುರಿತು ಆತಂಕ ಮೂಡಿದೆ.

ಕೃಷಿ ಮತ್ತು ಮೌಲ್ಯವರ್ಧನೆಗೆ ಸಂದೇಶ : ಈ ಘಟನೆ ತೆಂಗಿನಕಾಯಿ ಮೌಲ್ಯವರ್ಧಿತ ಉತ್ಪನ್ನಗಳಾದ ತೆಂಗಿನ ಹಾಲು, ಕೊಕೊನಟ್‌ ಕ್ರೀಮ್‌, ವರ್ಜಿನ್‌ ತೆಂಗಿನೆಣ್ಣೆಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.  ತಜ್ಞರ ಪ್ರಕಾರ, ತೆಂಗಿನ ಉತ್ಪನ್ನ ಸಂಸ್ಕರಣೆ ಮತ್ತು ಸರಬರಾಜು  ಬಲಪಡಿಸಿದರೆ ರೈತರಿಗೆ ಹೆಚ್ಚಿನ ಆದಾಯದ ಅವಕಾಶಗಳು ಸೃಷ್ಟಿಯಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

About 12,000 litres of coconut milk produced from 20 tonnes of coconuts were sold out within five hours at a market in Kuala Terengganu, Malaysia, due to festive demand. Traders imposed purchase limits per customer to manage shortages, highlighting the growing demand for coconut-based value-added products.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಮುಂಗಾರು ಮತ್ತಷ್ಟು ಚುರುಕು- ವಾಯುಭಾರ ಕುಸಿತದ ಲಕ್ಷಣ | ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ IMD ಎಚ್ಚರಿಕೆ ನೀಡಿ

ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…

2 hours ago

ಅಡಿಕೆ ಕಳ್ಳಸಾಗಣೆ ಪ್ರಕರಣ – ಸಿಲ್ಚಾರ್ ಉದ್ಯಮಿಯ ಮನೆ ಮೇಲೆ ಇ.ಡಿ. ದಾಳಿ, ಹಣ ಅಕ್ರಮ ವರ್ಗಾವಣೆ ತನಿಖೆ ತೀವ್ರ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…

2 hours ago

ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ

ಈ ವಾರದ ಚಿಂತನೆ - "ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ"

5 hours ago

ಮುಂಬೈನಲ್ಲಿ ಭಾರೀ ಮಳೆ ಅಬ್ಬರ – ರೆಡ್ ಅಲರ್ಟ್ ಮುಂದುವರಿಕೆ, ಜನಜೀವನ ಅಸ್ತವ್ಯಸ್ತ

ಮುಂಬೈನಲ್ಲಿ ನಿರಂತರ ಭಾರೀ ಮಳೆಯಿಂದ ನಗರದಲ್ಲಿ ಜಲಾವೃತ ಮತ್ತು ಸಂಚಾರ ಅಸ್ತವ್ಯಸ್ತವಾಗಿದೆ. IMD…

14 hours ago

ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ತಡೆಗೆ BIS ಮಾನದಂಡ ಕಾರಣವೇ ? ಯಾವ ಅಡಿಕೆ ಉತ್ತಮ? ಗ್ರೇಡ್ ಹೇಗೆ ನಿರ್ಧಾರ?

ಭಾರತೀಯ BIS ಮಾನದಂಡದ ಪ್ರಕಾರ ಅಡಿಕೆಯ ಗುಣಮಟ್ಟವನ್ನು ತೇವಾಂಶ, ಅಫ್ಲಾಟಾಕ್ಸಿನ್, ಕೀಟ ಹಾನಿ,…

15 hours ago

ಜಾಕ್‌ಫ್ರೂಟ್ ಸ್ಪೈಸಿ – ಹಲಸಿನ ಕಾಯಿಯಿಂದ 5 ನಿಮಿಷದಲ್ಲಿ ರುಚಿಕರ ಸ್ನ್ಯಾಕ್..!

ಸ್ವಲ್ಪ ಸಿಹಿ ರುಚಿಯ ಹಲಸಿನ ಕಾಯಿಗೆ ವಿವಿಧ ಮಸಾಲೆಗಳನ್ನು ಸೇರಿಸಿ ಕೆಲವೇ ನಿಮಿಷಗಳಲ್ಲಿ…

21 hours ago