Advertisement
ಸುದ್ದಿಗಳು

5 ಗಂಟೆಗಳಲ್ಲಿ 12,000 ಲೀಟರ್ ತೆಂಗಿನ ಹಾಲು ‘ಸೋಲ್ಡ್ ಔಟ್’..!

Share

ಒಂದು ಮಾರುಕಟ್ಟೆಯಲ್ಲಿ ಕೇವಲ ಐದು ಗಂಟೆಗಳಲ್ಲಿ 12,000 ಲೀಟರ್ ತೆಂಗಿನ ಹಾಲು ಸಂಪೂರ್ಣ ಮಾರಾಟವಾಗಿರುವ ಘಟನೆ ಗಮನ ಸೆಳೆದಿದೆ. ಹೆಚ್ಚಿನ ಗ್ರಾಹಕರು ಖರೀದಿಗೆ ಮುಗಿಬಿದ್ದ ಪರಿಣಾಮ, ಹಲವರಿಗೆ ತೆಂಗಿನ ಹಾಲು ಸಿಗದೆ ಪೂರ್ಣ ತೆಂಗು ಅಥವಾ ತುರಿದ ತೆಂಗಿನಕಾಯಿ ಖರೀದಿಸಲು ಮುಂದಾಗಿದ್ದರು. ಈ ಘಟನೆ ನಡೆದದ್ದು ಮಲೇಶಿಯಾದಲ್ಲಿ. ಇಷ್ಟೂ ಬೇಡಿಕೆ ಬಂದದ್ದು ಹಬ್ಬದ ಕಾರಣದಿಂದ..!

ಮಲೇಶಿಯಾದ ಕೌಲಾ ತೆರೇಂಗಾನು ಪ್ರದೇಶದ ಪಾಸರ್‌ ಕಾಬಾಂಗ್‌ ತಿಗಾ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಹಬ್ಬದ ತಯಾರಿ ಹಿನ್ನೆಲೆ ತೆಂಗಿನ ಹಾಲಿನ ಬೇಡಿಕೆ ಅತಿಯಾಗಿ ಏರಿಕೆ ಕಂಡಿದೆ. ಸುಮಾರು 20 ಟನ್‌ ತೆಂಗಿನಿಂದ ತಯಾರಿಸಲಾದ 12,000 ಲೀಟರ್ ತೆಂಗಿನ ಹಾಲು ಕೆಲವೇ ಗಂಟೆಗಳಲ್ಲಿ ಮಾರಾಟವಾಗಿದ್ದು, ಮಾರುಕಟ್ಟೆಯಲ್ಲಿ ಸರಬರಾಜು ಕೊರತೆ ಕಂಡಿತ್ತು.

ಬೇಡಿಕೆ ಹೆಚ್ಚಾಗಿದ್ದರಿಂದ, ವ್ಯಾಪಾರಿಗಳು ಪ್ರತಿ ಗ್ರಾಹಕರಿಗೆ ಗರಿಷ್ಠ 2 ಕೆ.ಜಿ. ಮಾತ್ರ ಮಾರಾಟ ಮಾಡಿದರು. ಈ ಕ್ರಮದಿಂದ ಗೊಂದಲ ನಿಯಂತ್ರಣ ಸಾಧ್ಯವಾದರೂ, ಮಾರುಕಟ್ಟೆಯಲ್ಲಿ ತೆಂಗು ಉತ್ಪನ್ನಗಳ ಕೊರತೆ ಕುರಿತು ಆತಂಕ ಮೂಡಿದೆ.

ಕೃಷಿ ಮತ್ತು ಮೌಲ್ಯವರ್ಧನೆಗೆ ಸಂದೇಶ : ಈ ಘಟನೆ ತೆಂಗಿನಕಾಯಿ ಮೌಲ್ಯವರ್ಧಿತ ಉತ್ಪನ್ನಗಳಾದ ತೆಂಗಿನ ಹಾಲು, ಕೊಕೊನಟ್‌ ಕ್ರೀಮ್‌, ವರ್ಜಿನ್‌ ತೆಂಗಿನೆಣ್ಣೆಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.  ತಜ್ಞರ ಪ್ರಕಾರ, ತೆಂಗಿನ ಉತ್ಪನ್ನ ಸಂಸ್ಕರಣೆ ಮತ್ತು ಸರಬರಾಜು  ಬಲಪಡಿಸಿದರೆ ರೈತರಿಗೆ ಹೆಚ್ಚಿನ ಆದಾಯದ ಅವಕಾಶಗಳು ಸೃಷ್ಟಿಯಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

About 12,000 litres of coconut milk produced from 20 tonnes of coconuts were sold out within five hours at a market in Kuala Terengganu, Malaysia, due to festive demand. Traders imposed purchase limits per customer to manage shortages, highlighting the growing demand for coconut-based value-added products.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?

ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.…

34 minutes ago

ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ

ಮಂಗಳೂರು ನಗರದಲ್ಲಿ ಮಳೆಗಾಲದ ಹಿನ್ನೆಲೆ ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗೆ ರಸ್ತೆ, ಗುಡ್ಡ…

1 hour ago

ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ

ಈಶಾನ್ಯ ಭಾರತದಲ್ಲಿ ಡಿಆರ್‌ಐ ನಡೆಸಿದ ದಾಳಿಯಲ್ಲಿ ಸುಮಾರು 60 ಸಾವಿರ ಕೆಜಿ ಅಕ್ರಮ…

11 hours ago

“ಒಂದು ದಿನ ಅಡಿಕೆ ಮಾರುಕಟ್ಟೆಗೆ ‘ಏಲಿಯನ್ಸ್’ ಬಂದರೆ?” ರೈತನ ಭವಿಷ್ಯದ ಬಗ್ಗೆ ಎಚ್ಚರಿಸುವ ಕಲ್ಪಿತ ಕಥೆ

ಅಡಿಕೆ ಮಾರುಕಟ್ಟೆಗೆ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಬಂದರೆ ರೈತರಿಗೆ ಆರಂಭದಲ್ಲಿ ಲಾಭದ ಅನುಭವ…

1 day ago

“ಕಾಕ್ರೋಚ್‌ ಜನತಾ ಪಾರ್ಟಿ”ಗೆ ಹೊಸ ಎದುರಾಳಿ..! ವೈರಲ್‌ ಆಗುತ್ತಿದೆ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌”

“ಕಾಕ್‌ರೋಚ್‌ ಜನತಾ ಪಾರ್ಟಿ” ಬಳಿಕ ಇದೀಗ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌” ಎಂಬ ಹೊಸ…

2 days ago