Advertisement
ಸುದ್ದಿಗಳು

5 ಗಂಟೆಗಳಲ್ಲಿ 12,000 ಲೀಟರ್ ತೆಂಗಿನ ಹಾಲು ‘ಸೋಲ್ಡ್ ಔಟ್’..!

Share

ಒಂದು ಮಾರುಕಟ್ಟೆಯಲ್ಲಿ ಕೇವಲ ಐದು ಗಂಟೆಗಳಲ್ಲಿ 12,000 ಲೀಟರ್ ತೆಂಗಿನ ಹಾಲು ಸಂಪೂರ್ಣ ಮಾರಾಟವಾಗಿರುವ ಘಟನೆ ಗಮನ ಸೆಳೆದಿದೆ. ಹೆಚ್ಚಿನ ಗ್ರಾಹಕರು ಖರೀದಿಗೆ ಮುಗಿಬಿದ್ದ ಪರಿಣಾಮ, ಹಲವರಿಗೆ ತೆಂಗಿನ ಹಾಲು ಸಿಗದೆ ಪೂರ್ಣ ತೆಂಗು ಅಥವಾ ತುರಿದ ತೆಂಗಿನಕಾಯಿ ಖರೀದಿಸಲು ಮುಂದಾಗಿದ್ದರು. ಈ ಘಟನೆ ನಡೆದದ್ದು ಮಲೇಶಿಯಾದಲ್ಲಿ. ಇಷ್ಟೂ ಬೇಡಿಕೆ ಬಂದದ್ದು ಹಬ್ಬದ ಕಾರಣದಿಂದ..!

ಮಲೇಶಿಯಾದ ಕೌಲಾ ತೆರೇಂಗಾನು ಪ್ರದೇಶದ ಪಾಸರ್‌ ಕಾಬಾಂಗ್‌ ತಿಗಾ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಹಬ್ಬದ ತಯಾರಿ ಹಿನ್ನೆಲೆ ತೆಂಗಿನ ಹಾಲಿನ ಬೇಡಿಕೆ ಅತಿಯಾಗಿ ಏರಿಕೆ ಕಂಡಿದೆ. ಸುಮಾರು 20 ಟನ್‌ ತೆಂಗಿನಿಂದ ತಯಾರಿಸಲಾದ 12,000 ಲೀಟರ್ ತೆಂಗಿನ ಹಾಲು ಕೆಲವೇ ಗಂಟೆಗಳಲ್ಲಿ ಮಾರಾಟವಾಗಿದ್ದು, ಮಾರುಕಟ್ಟೆಯಲ್ಲಿ ಸರಬರಾಜು ಕೊರತೆ ಕಂಡಿತ್ತು.

ಬೇಡಿಕೆ ಹೆಚ್ಚಾಗಿದ್ದರಿಂದ, ವ್ಯಾಪಾರಿಗಳು ಪ್ರತಿ ಗ್ರಾಹಕರಿಗೆ ಗರಿಷ್ಠ 2 ಕೆ.ಜಿ. ಮಾತ್ರ ಮಾರಾಟ ಮಾಡಿದರು. ಈ ಕ್ರಮದಿಂದ ಗೊಂದಲ ನಿಯಂತ್ರಣ ಸಾಧ್ಯವಾದರೂ, ಮಾರುಕಟ್ಟೆಯಲ್ಲಿ ತೆಂಗು ಉತ್ಪನ್ನಗಳ ಕೊರತೆ ಕುರಿತು ಆತಂಕ ಮೂಡಿದೆ.

ಕೃಷಿ ಮತ್ತು ಮೌಲ್ಯವರ್ಧನೆಗೆ ಸಂದೇಶ : ಈ ಘಟನೆ ತೆಂಗಿನಕಾಯಿ ಮೌಲ್ಯವರ್ಧಿತ ಉತ್ಪನ್ನಗಳಾದ ತೆಂಗಿನ ಹಾಲು, ಕೊಕೊನಟ್‌ ಕ್ರೀಮ್‌, ವರ್ಜಿನ್‌ ತೆಂಗಿನೆಣ್ಣೆಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ.  ತಜ್ಞರ ಪ್ರಕಾರ, ತೆಂಗಿನ ಉತ್ಪನ್ನ ಸಂಸ್ಕರಣೆ ಮತ್ತು ಸರಬರಾಜು  ಬಲಪಡಿಸಿದರೆ ರೈತರಿಗೆ ಹೆಚ್ಚಿನ ಆದಾಯದ ಅವಕಾಶಗಳು ಸೃಷ್ಟಿಯಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

About 12,000 litres of coconut milk produced from 20 tonnes of coconuts were sold out within five hours at a market in Kuala Terengganu, Malaysia, due to festive demand. Traders imposed purchase limits per customer to manage shortages, highlighting the growing demand for coconut-based value-added products.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಹವಾಮಾನ ವರದಿ | 08-09-2026 | ಕರಾವಳಿಯಲ್ಲಿ ಮೋಡ ಹೆಚ್ಚಳ – ಸೆ.12ರ ಬಳಿಕ ಬಂಗಾಳಕೊಲ್ಲಿ ಬದಲಾವಣೆ?

ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…

2 hours ago

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?

“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…

8 hours ago

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

20 hours ago

ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?

ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…

20 hours ago

ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?

ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…

1 day ago

ಹೆಬ್ರಿಯ ಗೋಡಂಬಿ ತ್ಯಾಜ್ಯದಿಂದ ಹಡಗುಗಳಿಗೆ ಇಂಧನ..!

ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…

1 day ago