ರಾಜ್ಯದಲ್ಲಿ ಮತ್ತೆ ಆರಂಭವಾಗುತ್ತದೆ ಚಳಿ | ಹಾಗಾದರೆ ಏನು ಹೇಳಿದೆ ಹವಮಾನ ಇಲಾಖೆ..?

January 29, 2024
1:13 PM
ತಡವಾಗಿಯಾದರೂ ಚಳಿಯ ವಾತಾವರಣ ಕಂಡುಬಂದಿದೆ.

ಪ್ರಕೃತಿಯ(Nature) ಆಟ ಬಲ್ಲವರಾರು. ಅದ್ಯಾವಗ ಮಳೆ(Rain) ಬರುತ್ತೋ.. ಯಾವಾಗ ಚಳಿ(Winter) ಆರಂಭ ಆಗುತ್ತೋ.. ಒಂದು ತಿಳಿಯದು. ಕಾಲವಲ್ಲದ ಕಾಲದಲ್ಲಿ ಮಳೆ, ಚಳಿ, ಬಿಸಿಲು ಆರಂಭವಾಗುತ್ತದೆ. ಈ ಬಾರಿ ಮುಂಗಾರು ಹಾಗೂ ಹಿಂಗಾರು ಎರಡೂ ಕೈಕೊಟ್ಟಿದೆ. ಹೇಳುವಂತ ಚಳಿಯೂ ಈ ಬಾರಿ ಇಲ್ಲ. ಕಳೆದ 15 ದಿನಗಳ ಹಿಂದೆ ಕೊಂಚ ಚಳಿಯ ವಾತಾವರಣ ಇತ್ತು. ಆಮೇಲೆ ಎಲ್ಲಿ ಹೋಯ್ತು ಅನ್ನೋದೆ ತಿಳಿಯಲಿಲ್ಲ. ಇದೀಗ ಮತ್ತೆ ಬೆಂಗಳೂರು(Bengaluru) ಸೇರಿ ರಾಜ್ಯದಲ್ಲಿ ಮತ್ತೆ ಚಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ(IMD) ಮುನ್ಸೂಚನೆ ನೀಡಿದೆ. ಆದರೆ ಸದ್ಯ ಮಳೆಯ ಮುನ್ಸೂಚನೆ ಇಲ್ಲ.

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೆಯುವ ಚಳಿ ಇರಲಿದೆ ಎಂದು ಸೂಚನೆ ನೀಡಿದೆ ಹವಮಾನ ಇಲಾಖೆ. ಅಂತೆಯೇ ಎರಡು ದಿನಗಳಿಂದ  ಚಳಿ ಇತ್ತು. ಇನ್ನು ಬೆಂಗಳೂರಿನಲ್ಲಿ ಮುಂಜಾನೆ ಚಳಿ ಜೊತೆ ಮಂಜು ಮುಸುಕಿದ ವಾತಾವರಣ ಇರಲಿದೆ. ಮಧ್ಯಾಹ್ನ ಬಿಸಿಲಿನ ವಾತಾವರಣ ಇರಲಿದೆ. ದಕ್ಷಿಣ ಒಳನಾಡಿನಲ್ಲಿ ಚಳಿ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೇರೆ ಕೆಲ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.

ಜನವರಿ ಅಂತ್ಯಕ್ಕೆ ಬಿಸಿಲು ಶುರುವಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಚಳಿಯ ಪ್ರಮಾಣ ಕಡಿಮೆಯಾಗಲು ಶುರು ಮಾಡಿತ್ತು. ಆದ್ರೆ ಮತ್ತೆ ಚಳಿ ಆರಂಭವಾಗಿದೆ. ರಾಜ್ಯದಲ್ಲಿ ಸದ್ಯ ಮಳೆಯ ಮುನ್ಸೂಚನೆ ಇಲ್ಲ. ಭಾರತೀಯ ಹವಾಮಾನ ಇಲಾಖೆ ಮಾರ್ಚ್ ಒಳಗೆ ಉತ್ತಮ ಮಳೆಯಾಗುತ್ತೆ ಎಂದು ಸೂಚನೆ ನೀಡಿದೆ. ಚಳಿಯ ಪ್ರಮಾಣದ ಜೊತೆ ಉಷ್ಣಾಂಶವೂ ಹೆಚ್ಚಾಗಲಿದೆ. ಸದ್ಯ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

– ಅಂತರ್ಜಾಲ ಮಾಹಿತಿ

The Meteorological Department (IMD) has predicted that the state, including Bengaluru, will get cold again. But currently there is no forecast of rain. The weather department has informed that there will be bitter cold in some districts of the state. Similarly, it was cold yesterday too. From now on, there will be cold and foggy weather in Bengaluru in the morning. It will be sunny in the afternoon. The weather department said that it will be cold in the southern interior.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ
July 14, 2026
7:12 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ
July 14, 2026
7:01 AM
by: ದ ರೂರಲ್ ಮಿರರ್.ಕಾಂ
ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ
July 14, 2026
6:53 AM
by: ದ ರೂರಲ್ ಮಿರರ್.ಕಾಂ
ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ
July 14, 2026
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror