Advertisement
Opinion

ಬೇಸಾಯಕ್ಕೆ ಸಗಣಿ ಗೊಬ್ಬರ ಬಳಸುವ ಮನಸು ಮಾಡಿ | ಹಸುಗಳು ಸ್ವಾಭಿಮಾನದಿಂದ ಉಳಿಯಲು ಸಾಧ್ಯ |

Share

ಪ್ರತಿ ಒಂದು ಲಕ್ಷ ಎಕರೆಗೆ ಕೊಟ್ಟಿಗೆ ಗೊಬ್ಬರ(cow dung manure) ಸಿಗುವುದು ಕೇವಲ ಹತ್ತು ಸಾವಿರ ಎಕರೆಗಿಂತ ಕಡಿಮೆ ಕೃಷಿ ಪ್ರದೇಶಕ್ಕೆ(Agricultural Field) ಮಾತ್ರ. ಉಳಿದ ತೊಂಬತ್ತು ಸಾವಿರ ಎಕರೆಗೆ ಕೊಟ್ಟಿಗೆ ಗೊಬ್ಬರ ಇಲ್ಲ. ರೈತರು(Farmer) ನ್ಯಾಯಯುತ ಬೆಲೆಗೆ ಕೊಟ್ಟಿಗೆ ಗೊಬ್ಬರ ಬಳಸುವ ಮನಸು ಮಾಡಿದರೆ ಗೊಬ್ಬರನ ವಿದೇಶದಿಂದ( abroad) ಆಮದು(Import) ಮಾಡಿಕೊಳ್ಳಬೇಕು. ಅಷ್ಟು ಅವಶ್ಯಕವಾಗಬಹುದು.

ಆದರೆ ರೈತರು ಈಗೀಗ ಕೊಟ್ಟಿಗೆ ಗೊಬ್ಬರವನ್ನು ಬಳಸೋದು ಕಡಿಮೆ ಮಾಡಿದಾರೆ. ಈಗ ಗೋವು ಹಾಲಿಗಾಗಿ ಮಾತ್ರ ಸಾಕಣೆ ಎನ್ನುವಂತಾಗಿದೆ. ಸಗಣಿ ಬೇಡಿಕೆ ಇಲ್ಲವಾದರೆ ಹಾಲು ಕೊಡದ ಹಸು ಮತ್ತು ಹೋರಿ ಇನ್ಯಾತಕ್ಕೆ ಸಾಕ್ತಾರೆ..?
ಇದು ವಾಸ್ತವ…

ಸಗಣಿ ಗೊಬ್ಬರ ಬಳಸದು ಬಿಟ್ಟ ಮೇಲೆ ನಮ್ಮ ಭಾಗದ ಪ್ರಮುಖ ಬೆಳೆ ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೇ ಬರ್ತಿಲ್ಲ. ಈಗ ಬಹಳಷ್ಟು ಅಡಿಕೆ ಬೆಳೆಗಾರರು ಅಡಿಕೆ ಬೇಸಾಯಕ್ಕೆ ಸಗಣಿ ಗೊಬ್ಬರ ಬಳಸುವ ಮನಸು ಮಾಡ್ತಿದ್ದಾರೆ. ಕೊಟ್ಟಿಗೆ ಗೊಬ್ಬರ ಬಳಸುವ ರೈತರು ಹೆಚ್ಚಾದರೆ ಖಂಡಿತವಾಗಿಯೂ ಎಲ್ಲಾ ಹಸುಗಳು ಸ್ವಾಭಿಮಾನದಿಂದ ಉಳಿಯಲು ಸಾದ್ಯ. ಕೃಷಿಗೆ ಸಗಣಿ ಗೊಬ್ಬರ ವ್ಯಾಪಕವಾಗಿ ಬಳಕೆಯಾಗುವುದು ಹಸುಗಳ ಉಳಿಯಲು ಪೂರಕವಾದ ವಾತಾವರಣ ಸೃಷ್ಟಿಸುತ್ತದೆ.

ರೈತರು ಕೊಟ್ಟಿಗೆ ಗೊಬ್ಬರ ಕೃಷಿ ಗೆ ಬಳಸಲು ಸರ್ಕಾರವೂ ಪ್ರೋತ್ಸಾಹ ನೀಡಬೇಕು. ಸಮಾಜ ರೈತರು ಗೋವುಗಳು ಉಳಿಸುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವ ಮನಸು ಮಾಡಿದರೆ ಗೋವುಳಿಯುತ್ತದೆ. ಗೋವು ಹೊರೆಯಲ್ಲ…

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

3 hours ago

ಗ್ರಾಮೀಣ ಭಾರತದ ಆದಾಯಕ್ಕೆ ಹಿನ್ನಡೆ – ಕಳೆದ ವರ್ಷ ಅರ್ಧದಷ್ಟು ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿಲ್ಲ

ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…

9 hours ago

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

18 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

18 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

20 hours ago