Advertisement
ರಾಷ್ಟ್ರೀಯ

ಕ್ಯಾನ್ಸರ್ ಗುಣಪಡಿಸಲು ಗೋವಿನ ಉತ್ಪನ್ನಗಳು | ಮಧ್ಯಪ್ರದೇಶ ಸರ್ಕಾರ ಸಂಶೋಧನೆಗೆ 3.5 ಕೋಟಿ ಖರ್ಚು ಮಾಡಿದ ಹಣ ಎಲ್ಲಿ?

Share

ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು ಕ್ಯಾನ್ಸರ್ ಚಿಕಿತ್ಸೆಯನ್ನು ಅಭಿವೃದ್ಧಪಡಿಸುವ ಆಶಯದೊಂದಿಗೆ, ಸುಮಾರು ಒಂದು ದಶಕದಿಂದ ಆರ್ಥಿಕ ಆಕ್ರಮಗಳು ಮತ್ತು ಪ್ರಶ್ನಾರ್ಹ ಖರ್ಚು ಮಾದರಿಗಳ ಆರೋಪಗಳು ಹೊರಹೊಮ್ಮಿದ ನಂತರ ವಿವಾದಕ್ಕೆ ಸಿಲುಕಿದೆ.

ಜಬಲ್ಬುರದ ನಾನಾಜಿ ದೇಶಮುಖ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 2011 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು, ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಸಂಭ್ಯಾವ್ಯ ಚಿಕಿತ್ಸೆಯಾಗಿ ಹಸುವಿನ ಸಗಣಿ, ಹಸುವಿನ ಮೂತ್ರ ಮತ್ತು ಡೈರಿ ಉತ್ಪನ್ನಗಳನ್ನು ಸಂಯೋಜಿಸುವ ಸಾಂಪ್ರದಾಯಿಕ ತಯಾರಿಕೆಯಾದ ಪಂಚಗವ್ಯ ವನ್ನು ಕೇಂದ್ರಿಕರಿಸಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳು ಆರಂಭದಲ್ಲಿ ಸರಿಸುಮಾರು 8 ಕೋಟಿ ರೂಪಾಯಿಗಳ ಹಣವನ್ನು ಪ್ರಸ್ತಾಪಿಸಿದಾಗ, ರಾಜ್ಯ ಸರ್ಕಾರದವು ಸಂಶೋಧನ ಪ್ರಯತ್ನಕ್ಕಾಗಿ 3.5 ಕೋಟಿ ರೂಪಾಯಗಳನ್ನು ಮಂಜೂರು ಮಾಡಿತು.
ಜಿಲ್ಲಾ ಅಧಿಕಾರಿಗಳಿಗೆ ಬಂದ ಔಪಚಾರಿಕ ದೂರಿನ ನಂತರ, ವಿಭಾಗೀ ಆಯುಕ್ತರು ಯೋಜನೆಯ ಅನುಷ್ಠನವನ್ನು ಪರಿಶೀಲಿಸಲು ಆದೇಶಿಸಿದರು. ನಂತರ ಜಿಲ್ಲಾಧಿಕಾರಿಗಳು ದೀರ್ಘಾವಧಿಯ ಉಪಕ್ರಮದ ಖರ್ಚು ಮಾದರಿಗಳು ಮತ್ತು ಫಲಿತಾಂಶಗಳನ್ನು ಪರಿಶೀಲಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡವನ್ನು ಸ್ಥಾಪಿಸಿದರು.

ತನಿಖಾ ತಂಡದ ಸಂಶೋಧನೆಗಳನ್ನು ಈಗ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದ್ದು, ಯೋಜನೆಯ ಹಣಕಾಸು ನಿರ್ವಹಣೆ ಮತ್ತು ವೈಜ್ಞಾನಿಕ ಉತ್ಪಾದಕತೆಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ವರದಿಯೊಂದಿಗೆ ಪರಿಚಿತವಾಗಿರುವ ಮೂಲಗಳ ಪ್ರಕಾರ ತನಿಖಾಧಿಕಾರಿಗಳು ಮಾರುಕಟ್ಟೆ ದರಗಳಿಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಿರುವಂತೆ ಕಾಣುವ ವೆಚ್ಚಗಳನ್ನು ಗುರುತಿಸಿದ್ದಾರೆ ಮತ್ತು ಅನುಮೋದಿತ ಸಂಶೋಧನಾ ಉದ್ದೇಶಗಳಿಗೆ ಸಂಬಂಧವಿಲ್ಲದ ವಸ್ತುಗಳನ್ನು ಒಳಗೊಂಡಿದೆ.

2011 ಮತ್ತು 2018 ರ ನಡುವೆ ಗೋಮಯ, ಗೋಮೂತ್ರ, ಶೇಖರಣಾ ಪಾತ್ರೆಗಳು, ಕಚ್ಚಾ ವಸ್ತುಗಳು ಮತ್ತು ಯಂತ್ರೋಪಕರಣಗಳು ಸೇರಿದಂತೆ ಮೂಲ ಸಾಮಾಗ್ರಿಗಳಿಗಾಗಿ ಸುಮಾರು 1.92 ಕೋಟಿ ರೂ. ಗಳನ್ನು ಖರ್ಚು ಮಾಡಲಾಗಿದೆ ಎಂದು ತನಿಖೆಯು ಆರೋಪಿಸಿದೆ- ತನಿಖಾಧಿಕಾರಿಗಳು ಹೇಳುವಂತೆ ಚಾಲ್ತಿಯಲ್ಲಿರುವ ಮಾರಕಟ್ಟೆ ದರದಲ್ಲಿ ರೂ 15-20 ಲಕ್ಷ ವೆಚ್ಚವಾಗಬೇಕಿತ್ತು. ವಿಶ್ವವಿದ್ಯಾನಿಲಯದ ತಂಡವು ಸಂಶೋಧನಾ ಉದ್ದೇಶಗಳಿಗಾಗಿ ವಿವಿಧ ನಗರಗಳಿಗೆ 23ರಿಂದ 24 ವಿಮಾನ ಪ್ರವಾಸಗಳನ್ನು ಕೈಗೊಂಡಿತು. ಆದರೂ ತನಿಖೆಯ ಅಂತಹ ಪ್ರಯಾಣದ ಅಗತ್ಯತೆ ಮತ್ತು ಔಚಿತ್ಯವನ್ನು ಪ್ರಶ್ನಿಸುತ್ತದೆ.
ವರದಿಯಲ್ಲಿ ಉಲ್ಲೇಖಿಸಲಾದ ಹೆಚ್ಚುವರಿ ಪ್ರಶ್ನಾರ್ಹ ವೆಚ್ಚಗಳಲ್ಲಿ ಸರಿಸುಮಾರು ರೂ 7.5 ಲಕ್ಷ ಮೌಲ್ಯದ ವಾಹನದ ಖರೀದಿ ಸೇರಿದೆ, ಇದನ್ನು ತನಿಖಾಧಿಕಾರಿಗಳು ಮೂಲ ಅನುಮೋದಿತ ಅಂದಾಜಿನಲ್ಲಿ ಸೇರಿಸಲಾಗಲ್ಲ ಎಂದು ಹೇಳುತ್ತಾರೆ. ಈ ಯೋಜನೆಯು ಇಂದನ ಮತ್ತು ವಾಹನ ನಿರ್ವಹಣೆಗಾಗಿ ರೂ 7.5 ಲಕ್ಷಕ್ಕೂ ಹೆಚ್ಚು ಕಾರ್ಮಿಕ ಪಾವತಿಗಳಿಗಾಗಿ ರೂ 3.5ಲಕ್ಷ ಮತ್ತು ಪೀಠೀಪಕರಣಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಿಗಾಗಿ ಸುಮಾರು ರೂ 15 ಲಕ್ಷ ಖರ್ಚು ಮಾಡಿದೆ ಎಂದು ದಾಖಲಿಸಲಾಗಿದೆ, ಇವೆಲ್ಲವೂ ತನಿಖೆಯು ಹೇಳಲಾದ ಸಂಶೋಧನಾ ಗುರಿಗಳಿಗೆ ಅನಿವಾರ್ಯವಲ್ಲ ಎಂದು ನಿರೂಪಿಸಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

2 days ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

3 days ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

3 days ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

4 days ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

4 days ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

4 days ago