Advertisement
ರಾಷ್ಟ್ರೀಯ

ಕ್ಯಾನ್ಸರ್ ಗುಣಪಡಿಸಲು ಗೋವಿನ ಉತ್ಪನ್ನಗಳು | ಮಧ್ಯಪ್ರದೇಶ ಸರ್ಕಾರ ಸಂಶೋಧನೆಗೆ 3.5 ಕೋಟಿ ಖರ್ಚು ಮಾಡಿದ ಹಣ ಎಲ್ಲಿ?

Share

ಮಧ್ಯಪ್ರದೇಶ ಸರ್ಕಾರದಿಂದ ಅನುದಾನಿತ ಸಂಶೋಧನಾ ಉಪಕ್ರಮವು, ಸಾಂಪ್ರದಾಯಿಕ ಹಸು ಆಧಾರಿತ ಸಿದ್ಧತೆಗಳನ್ನು ಬಳಸಿಕೊಂಡು ಕ್ಯಾನ್ಸರ್ ಚಿಕಿತ್ಸೆಯನ್ನು ಅಭಿವೃದ್ಧಪಡಿಸುವ ಆಶಯದೊಂದಿಗೆ, ಸುಮಾರು ಒಂದು ದಶಕದಿಂದ ಆರ್ಥಿಕ ಆಕ್ರಮಗಳು ಮತ್ತು ಪ್ರಶ್ನಾರ್ಹ ಖರ್ಚು ಮಾದರಿಗಳ ಆರೋಪಗಳು ಹೊರಹೊಮ್ಮಿದ ನಂತರ ವಿವಾದಕ್ಕೆ ಸಿಲುಕಿದೆ.

ಜಬಲ್ಬುರದ ನಾನಾಜಿ ದೇಶಮುಖ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 2011 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು, ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಸಂಭ್ಯಾವ್ಯ ಚಿಕಿತ್ಸೆಯಾಗಿ ಹಸುವಿನ ಸಗಣಿ, ಹಸುವಿನ ಮೂತ್ರ ಮತ್ತು ಡೈರಿ ಉತ್ಪನ್ನಗಳನ್ನು ಸಂಯೋಜಿಸುವ ಸಾಂಪ್ರದಾಯಿಕ ತಯಾರಿಕೆಯಾದ ಪಂಚಗವ್ಯ ವನ್ನು ಕೇಂದ್ರಿಕರಿಸಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳು ಆರಂಭದಲ್ಲಿ ಸರಿಸುಮಾರು 8 ಕೋಟಿ ರೂಪಾಯಿಗಳ ಹಣವನ್ನು ಪ್ರಸ್ತಾಪಿಸಿದಾಗ, ರಾಜ್ಯ ಸರ್ಕಾರದವು ಸಂಶೋಧನ ಪ್ರಯತ್ನಕ್ಕಾಗಿ 3.5 ಕೋಟಿ ರೂಪಾಯಗಳನ್ನು ಮಂಜೂರು ಮಾಡಿತು.
ಜಿಲ್ಲಾ ಅಧಿಕಾರಿಗಳಿಗೆ ಬಂದ ಔಪಚಾರಿಕ ದೂರಿನ ನಂತರ, ವಿಭಾಗೀ ಆಯುಕ್ತರು ಯೋಜನೆಯ ಅನುಷ್ಠನವನ್ನು ಪರಿಶೀಲಿಸಲು ಆದೇಶಿಸಿದರು. ನಂತರ ಜಿಲ್ಲಾಧಿಕಾರಿಗಳು ದೀರ್ಘಾವಧಿಯ ಉಪಕ್ರಮದ ಖರ್ಚು ಮಾದರಿಗಳು ಮತ್ತು ಫಲಿತಾಂಶಗಳನ್ನು ಪರಿಶೀಲಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖಾ ತಂಡವನ್ನು ಸ್ಥಾಪಿಸಿದರು.

ತನಿಖಾ ತಂಡದ ಸಂಶೋಧನೆಗಳನ್ನು ಈಗ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದ್ದು, ಯೋಜನೆಯ ಹಣಕಾಸು ನಿರ್ವಹಣೆ ಮತ್ತು ವೈಜ್ಞಾನಿಕ ಉತ್ಪಾದಕತೆಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ವರದಿಯೊಂದಿಗೆ ಪರಿಚಿತವಾಗಿರುವ ಮೂಲಗಳ ಪ್ರಕಾರ ತನಿಖಾಧಿಕಾರಿಗಳು ಮಾರುಕಟ್ಟೆ ದರಗಳಿಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಿರುವಂತೆ ಕಾಣುವ ವೆಚ್ಚಗಳನ್ನು ಗುರುತಿಸಿದ್ದಾರೆ ಮತ್ತು ಅನುಮೋದಿತ ಸಂಶೋಧನಾ ಉದ್ದೇಶಗಳಿಗೆ ಸಂಬಂಧವಿಲ್ಲದ ವಸ್ತುಗಳನ್ನು ಒಳಗೊಂಡಿದೆ.

2011 ಮತ್ತು 2018 ರ ನಡುವೆ ಗೋಮಯ, ಗೋಮೂತ್ರ, ಶೇಖರಣಾ ಪಾತ್ರೆಗಳು, ಕಚ್ಚಾ ವಸ್ತುಗಳು ಮತ್ತು ಯಂತ್ರೋಪಕರಣಗಳು ಸೇರಿದಂತೆ ಮೂಲ ಸಾಮಾಗ್ರಿಗಳಿಗಾಗಿ ಸುಮಾರು 1.92 ಕೋಟಿ ರೂ. ಗಳನ್ನು ಖರ್ಚು ಮಾಡಲಾಗಿದೆ ಎಂದು ತನಿಖೆಯು ಆರೋಪಿಸಿದೆ- ತನಿಖಾಧಿಕಾರಿಗಳು ಹೇಳುವಂತೆ ಚಾಲ್ತಿಯಲ್ಲಿರುವ ಮಾರಕಟ್ಟೆ ದರದಲ್ಲಿ ರೂ 15-20 ಲಕ್ಷ ವೆಚ್ಚವಾಗಬೇಕಿತ್ತು. ವಿಶ್ವವಿದ್ಯಾನಿಲಯದ ತಂಡವು ಸಂಶೋಧನಾ ಉದ್ದೇಶಗಳಿಗಾಗಿ ವಿವಿಧ ನಗರಗಳಿಗೆ 23ರಿಂದ 24 ವಿಮಾನ ಪ್ರವಾಸಗಳನ್ನು ಕೈಗೊಂಡಿತು. ಆದರೂ ತನಿಖೆಯ ಅಂತಹ ಪ್ರಯಾಣದ ಅಗತ್ಯತೆ ಮತ್ತು ಔಚಿತ್ಯವನ್ನು ಪ್ರಶ್ನಿಸುತ್ತದೆ.
ವರದಿಯಲ್ಲಿ ಉಲ್ಲೇಖಿಸಲಾದ ಹೆಚ್ಚುವರಿ ಪ್ರಶ್ನಾರ್ಹ ವೆಚ್ಚಗಳಲ್ಲಿ ಸರಿಸುಮಾರು ರೂ 7.5 ಲಕ್ಷ ಮೌಲ್ಯದ ವಾಹನದ ಖರೀದಿ ಸೇರಿದೆ, ಇದನ್ನು ತನಿಖಾಧಿಕಾರಿಗಳು ಮೂಲ ಅನುಮೋದಿತ ಅಂದಾಜಿನಲ್ಲಿ ಸೇರಿಸಲಾಗಲ್ಲ ಎಂದು ಹೇಳುತ್ತಾರೆ. ಈ ಯೋಜನೆಯು ಇಂದನ ಮತ್ತು ವಾಹನ ನಿರ್ವಹಣೆಗಾಗಿ ರೂ 7.5 ಲಕ್ಷಕ್ಕೂ ಹೆಚ್ಚು ಕಾರ್ಮಿಕ ಪಾವತಿಗಳಿಗಾಗಿ ರೂ 3.5ಲಕ್ಷ ಮತ್ತು ಪೀಠೀಪಕರಣಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಿಗಾಗಿ ಸುಮಾರು ರೂ 15 ಲಕ್ಷ ಖರ್ಚು ಮಾಡಿದೆ ಎಂದು ದಾಖಲಿಸಲಾಗಿದೆ, ಇವೆಲ್ಲವೂ ತನಿಖೆಯು ಹೇಳಲಾದ ಸಂಶೋಧನಾ ಗುರಿಗಳಿಗೆ ಅನಿವಾರ್ಯವಲ್ಲ ಎಂದು ನಿರೂಪಿಸಲಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

22 hours ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

1 day ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

1 day ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

2 days ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

2 days ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

2 days ago