ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ದಿಕ್ಕಿನಲ್ಲಿ ಸಿಪಿಸಿಆರ್ಐ ವಿಜ್ಞಾನಿಗಳ ತಂಡ ಪ್ರಯತ್ನ ಮಾಡುತ್ತಿದೆ. ರೋಗ ನಿರೋಧಕ ಅಡಿಕೆ ತಳಿಯನ್ನು ಟಿಶ್ಯೂ ಕಲ್ಚರ್ ಮೂಲಕ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತೊಡಗಿರುವ ವಿಜ್ಞಾನಿಗಳ ಪ್ರಯತ್ನದಲ್ಲಿ ಇದೀಗ ಮೊದಲ ಹಂತದ ಅಡಿಕೆ ಗಿಡಗಳು ನಾಟಿಗೆ ಸಿದ್ಧವಾಗಿದೆ. ಮುಂದೆಯೂ ಅಧ್ಯಯನ ನಡೆಯಲಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಸಿಪಿಸಿಆರ್ಐ ವಿಜ್ಞಾನಿಗಳ ತಂಡ ಅಡಿಕೆ ಹಳದಿ ಎಲೆ ರೋಗ ನಿರೋಧಕ ತಳಿ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿದೆ. ವಿಶೇಷವಾಗಿ ಹಳದಿ ಎಲೆ ರೋಗದ ಹಾಟ್ಸ್ಫಾಟ್ ಪ್ರದೇಶಗಳಾದ ಸಂಪಾಜೆ, ಅರಂತೋಡು, ಚೆಂಬು ಹಾಗೂ ಶೃಂಗೇರಿ ಭಾಗಗಳಿಂದ ರೋಗಬಾಧೆ ಕಾಣದ ಅಡಿಕೆ ಮರಗಳ ಎಳೆ ಹಿಂಗಾರಗಳನ್ನು ಸಂಗ್ರಹಿಸಿ ಟಿಶ್ಯೂ ಕಲ್ಚರ್ ವಿಧಾನದಲ್ಲಿ ಅಭಿವೃದ್ಧಿಪಡಿಸುವ ಪ್ರಯತ್ನ ಕೈಗೊಳ್ಳಲಾಗಿದೆ. ಇದರ ಜೊತೆಗೆ ಗಿಡ್ಡ ತಳಿಯ ಹೈಬ್ರೀಡ್ ಟಿಶ್ಯೂ ಕಲ್ಚರ್ ಕೂಡಾ ನಾಟಿಯ ಹಂತಕ್ಕೆ ಬಂದಿದೆ.
ಪ್ರಯೋಗಾಲಯದಲ್ಲಿ ಆರಂಭಿಕ ಹಂತದ ಬೆಳವಣಿಗೆ ಕಾಣಿಸಿಕೊಂಡು ಗಿಡದ ಬೆಳವಣಿಗೆ ಹಂತಕ್ಕೆ ಬಂದು ಇದೀಗ ಮೊದಲ ಹಂತದ ನಾಟಿಗೆ ಸುಮಾರು 25 ಗಿಡಗಳು ಸಿದ್ಧವಾಗಿದೆ. ಇದರ ಜೊತೆಗೇ ಮತ್ತಷ್ಟು ಗಿಡಗಳು ಪ್ರಯೋಗಾಲಯದಲ್ಲಿ ಬೆಳವಣಿಗೆಯಾಗುತ್ತಿದೆ. ಪ್ರಯೋಗಾಲಯದ ಮೊದಲ ಹಂತದಿಂದಲೇ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳಿಂದಲೇ ಪ್ರಯತ್ನ ನಡೆದಿದ್ದು ಬೇರು ಹಾಗೂ ಎಲೆಗಳ ಬೆಳವಣಿಗೆಗಳ ಬಗ್ಗೆ ಆರಂಭದಲ್ಲಿ ಸಮಸ್ಯೆ ಇತ್ತು. ಅದರ ನಿವಾರಣೆಗೆ ವಿಜ್ಞಾನಿಗಳು ಪ್ರಯತ್ನ ಮಾಡಿದ್ದರು. ಅಲ್ಲಿ ಯಶಸ್ಸು ಕಂಡಿದ್ದು ಮುಂದಿನ ಬೆಳವಣಿಗೆಯ ನಂತರ ಈಗ ಗಿಡ ನಾಟಿಯ ಹಂತಕ್ಕೆ ಸಿದ್ಧವಾಗಿದೆ.
ಟಿಶ್ಯೂ ಕಲ್ಚರ್ ತಂತ್ರಜ್ಞಾನವನ್ನು ಈ ಹಿಂದೆ ಹಲವು ಕೃಷಿ ಬೆಳೆಗಳಲ್ಲಿ ಯಶಸ್ವಿಯಾಗಿ ಬಳಸಲಾಗಿದ್ದರೂ, ಅಡಿಕೆ ಹಾಗೂ ತೆಂಗಿನ ಬೆಳೆಯಲ್ಲಿ ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವುದು ಕಷ್ಟಕರವಾಗಿತ್ತು. ಆದರೂ ಇದೀಗ ಸಿಪಿಸಿಆರ್ಐ ವಿಜ್ಞಾನಿಗಳು ಧನಾತ್ಮಕ ಫಲಿತಾಂಶದ ನಿರೀಕ್ಷೆಯಲ್ಲಿ ಕಾರ್ಯ ಮುಂದುವರಿಸಿದ್ದರ ಪರಿಣಾಮ ಅಡಿಕೆ ಗಿಡ ಸಿದ್ಧವಾಗಿದೆ. ಈಗ ಗಿಡದ ಪೂರ್ಣ ಅಭಿವೃದ್ಧಿ ಸಾಧ್ಯವಾದರೂ, ನಂತರ ಅದರ ಬೆಳವಣಿಗೆ, ಕ್ಷೇತ್ರ ಅಧ್ಯಯನ ಹಾಗೂ ಪರಿಣಾಮಕಾರಿತ್ವ ಪರಿಶೀಲನೆಯ ಬಳಿಕವಷ್ಟೇ ಕೃಷಿಕರಿಗೆ ಗಿಡ ಲಭ್ಯವಾಗುವ ಸಾಧ್ಯತೆ ಇದೆ.
ಪ್ರಯೋಗಾಲಯದಲ್ಲಿ ಬೆಳೆಯುತ್ತಿರುವ ಟಿಶ್ಯೂ ಕಲ್ಚರ್ ಗಿಡಗಳ ಬೆಳವಣಿಗೆಯ ಹಂತಗಳನ್ನು ವೀಕ್ಷಿಸಲು ಕೃಷಿಕರ ತಂಡ ಸಿಪಿಸಿಆರ್ಐ ಕೇಂದ್ರಕ್ಕೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ವಿಜ್ಞಾನಿಗಳು ಟಿಶ್ಯೂ ಕಲ್ಚರ್ ಗಿಡಗಳ ಬೆಳವಣಿಗೆ ವಿಧಾನ, ಸವಾಲುಗಳು ಹಾಗೂ ಮುಂದಿನ ಸಂಶೋಧನಾ ಹಂತಗಳ ಕುರಿತು ಮಾಹಿತಿ ನೀಡಿದರು.
ಕಾಸರಗೋಡು ಸಿಪಿಸಿಆರ್ಐ ನಿರ್ದೇಶಕ ಡಾ. ಬಾಲಚಂದ್ರ ಹೆಬ್ಬಾರ್, ಹಿರಿಯ ವಿಜ್ಞಾನಿಗಳಾದ ಡಾ. ವಿನಾಯಕ ಹೆಗ್ಡೆ, ಪ್ರಯೋಗಾಲಯದ ತಾಂತ್ರಿಕ ವಿಜ್ಞಾನಿ ಮುರಳಿಕೃಷ್ಣ ಹಾಗೂ ತಂಡ ಕೃಷಿಕರಿಗೆ ಟಿಶ್ಯೂ ಕಲ್ಚರ್ ತಳಿಯ ಕುರಿತು ಮಾಹಿತಿ ನೀಡಿದರು. ಕೃಷಿಕರ ತಂಡದಲ್ಲಿ ಸುಳ್ಯ ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಅಖಿಲಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಕೃಷಿಕ ಅರುಣ್ ಕುಮಾರ್ ಕಾಂಚೋಡು ಇದ್ದರು.
CPCRI Kasaragod scientists have achieved a major breakthrough in developing Yellow Leaf Disease resistant arecanut plants through tissue culture technology. Around 25 first-stage tissue culture plants are now ready for planting, while more plants continue to grow in the laboratory. Scientists say further field studies and observation will be conducted before making the plants available to farmers.
ಐಎಂಡಿ ಬಿಡುಗಡೆ ಮಾಡಿದ ಎರಡನೇ ಮುಂಗಾರು ಮುನ್ಸೂಚನೆಯಲ್ಲಿ ದೇಶದಲ್ಲಿ ಕೇವಲ 90% ಮಳೆಯ…
ಕರ್ನಾಟಕದಲ್ಲಿ ಮುಂಗಾರು ಪ್ರವೇಶದ ನಿರೀಕ್ಷೆ ಹೆಚ್ಚಾಗುತ್ತಿದ್ದು, ಸದ್ಯ ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು…
ಭಾರತದಲ್ಲಿ 191 ಜಾತಿಯ ಜಿರಳೆಗಳು ದಾಖಲಾಗಿದ್ದು, ZSI ವಿಜ್ಞಾನಿಗಳು ದೇಶದ ಮೊದಲ ದೊಡ್ಡ…
ಜೈಸಲ್ಮೇರ್ನಲ್ಲಿ ಬಯಲಿನಲ್ಲಿ ಪತ್ತೆಯಾಗಿದ್ದ ನೂರಾರು ಹಸುಗಳ ಶವಗಳ ಘಟನೆ ಬಳಿಕ ನಗರಸಭೆ ಶವಗಳನ್ನು…
2026 ರ ಜನವರಿ–ಏಪ್ರಿಲ್ ಅವಧಿಯಲ್ಲಿ ಭಾರತವು ಶ್ರೀಲಂಕಾದ ಎರಡನೇ ಅತಿದೊಡ್ಡ ರಫ್ತು ಗಮ್ಯಸ್ಥಾನವಾಗಿ…
ಉತ್ತರ ಭಾರತದಲ್ಲಿ ಮಂಗಳೂರು ಚಾಲಿ ಅಡಿಕೆಯ ಬೇಡಿಕೆ ಯಾವ ತಿಂಗಳಲ್ಲಿ ಹೆಚ್ಚು ಗೊತ್ತಾ?…