Advertisement
MIRROR FOCUS

ಬೆಳೆ ವಿಮೆ – ಪರದಾಟಕ್ಕೆ ಸಿಗದ ಮುಕ್ತಿ | ಸರಳ ಪ್ರಕ್ರಿಯೆಗೆ ಸರಕಾರ ಏಕೆ ಸಜ್ಜಾಗುತ್ತಿಲ್ಲ ? |

Share

ಒಂದೇ ಸಾಲಿನ ವಿವರ ಹೀಗಿದೆ, 

ಬೆಳೆ ವಿಮೆಯಲ್ಲಿ ರಾಜ್ಯ ಸರಕಾರ 3ನೇ ಆಪ್ಷನ್‌ ತಕ್ಷಣವೇ ಮಾಡಿಕೊಟ್ಟರೆ ಅನೇಕ ರೈತರಿಗೆ ಅನುಕೂಲವಾದೀತು. ಜೂ.30 ರ ಒಳಗಾಗಿ ಬೆಳೆ ವಿಮೆ ನೋಂದಣಿಯಾಗಬೇಕಿದೆ. ಹೀಗಾಗಿ ತಕ್ಷಣವೇ ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಿದೆ.

 

ಬೆಳೆ ವಿಮೆ ಕಡ್ಡಾಯವಾಗುತ್ತಿದೆ. ಹಳ್ಳಿಯ ಕೃಷಿಕರೂ ಈಗ ಬೆಳೆ ವಿಮೆ ಮಾಡಿಸುತ್ತಿದ್ದಾರೆ. ಅದು ಅಗತ್ಯವಾಗಿತ್ತಿದೆ. ಇದೀಗ  ಜೂನ್‌ ಅಂತ್ಯದ ಒಳಗೆ ಎಲ್ಲಾ ಬೆಳೆ ವಿಮೆ ಮಾಡಿಸಬೇಕು. ಹೀಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ತುರ್ತು ಕೆಲಸದಲ್ಲಿವೆ. ಅದರ ಜೊತೆ ಜೊತೆಗೇ ನೆಟ್ವರ್ಕ್‌ ಸಮಸ್ಯೆ, ಸರ್ವರ್‌ ಸಮಸ್ಯೆ. ಹೀಗಿದ್ದರೂ ಇಂದಿನ ಆನ್‌ ಲೈನ್‌ ವ್ಯವಸ್ಥೆಯಲ್ಲಿ ಸರಳ ವ್ಯವಸ್ಥೆಗೆ ಏಕೆ ಸರಕಾರ ಮುಂದಾಗುತ್ತಿಲ್ಲ.?

ಬೆಳೆ ವಿಮೆಯ ದಾಖಲಾತಿ ಮಾಡುವ ವಿಧಾನದಲ್ಲಿ  ರಾಜ್ಯದ ವೆಬ್‌ ಪೋರ್ಟಲ್‌ ನ್ಯಾಶನಲ್‌ ಪೋರ್ಟಲ್‌ ಗೆ ಸೇರಿಲ್ಲ  , ಹೀಗಾಗಿ ಸದ್ಯ ಕರ್ನಾಟಕದ ರೈತರು ಪ್ರಾಥಮಿಕ ಸಹಕಾರಿ ಸಂಘಗಗಳು ಅಥವಾ ಸಿ ಎಸ್‌ ಸೆಂಟರ್‌ ಗಳಲ್ಲಿ  ಮಾತ್ರವೇ ಬೆಳೆ ವಿಮೆ ಮಾಡಿಸಬಹುದಾಗಿದೆ. ಇದೇ ವೆಬ್ಸೈಟ್‌ ನಲ್ಲಿ  ಸ್ವತ: ರೈತರೇ ಮನೆಯಿಂದ ಅಥವಾ ಸೈಬರ್‌ ಸೆಂಟರ್ ಗಳಿಂದ ಬೆಳೆ ವಿಮೆ ಮಾಡಿಸುವ ಅವಕಾಶ ಇದೆ. ಆದರೆ ಈ ಅವಕಾಶವನ್ನು  ಈಗ ಮಾಡಲಾಗಿಲ್ಲ. ಇದರಿಂದಾಗಿ ನೇರವಾಗಿ ರೈತರಿಗೆ ಬೆಳೆವಿಮೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ಸಹಕಾರಿ ಸಂಘಗಳು ಪರದಾಟ ನಡೆಸುತ್ತಿವೆ, ಈ ಪರದಾಟ ತಪ್ಪಿಸಲು ಸರಕಾರ ಮನಸು ಮಾಡಬಹುದಾಗಿದೆ. ಸದ್ಯ ಕರ್ನಾಟಕ ಹಾಗೂ ಗುಜರಾತ್‌ ಮಾತ್ರವೇ ಈ ಅವಕಾಶದಿಂದ ವಂಚಿತವಾಗಿದೆ, ಉಳಿದ ಎಲ್ಲಾ ರಾಜ್ಯಗಳಲ್ಲಿ ನೇರವಾಗಿ ರೈತರೇ ಬೆಳೆವಿಮೆ ಪಾವತಿ ಮಾಡುವ ಅವಕಾಶ ಕೊಡಲಾಗಿದೆ.

ಈಗ ಸಹಕಾರಿ ಸಂಘಗಳಿಂದ ಡಿಸಿಸಿ ಬ್ಯಾಂಕ್‌ ಮೂಲಕ ರಾಜ್ಯಕ್ಕೆ  ಲಭ್ಯವಾಗಿ ನಂತರ ಕೇಂದ್ರದ ಪೋರ್ಟಲ್‌ ಗೆ ಬೆಳೆವಿಮೆ ದಾಖಲಾಗುತ್ತದೆ. ಒಂದು ವೇಳೆ ರೈತರಿಗೇ ಅವಕಾಶ ನೀಡಿದರೆ ನೇರವಾಗಿ ಕೇಂದ್ರದ ಪೋರ್ಟಲ್‌ ಗೆ ಬೆಳೆವಿಮೆ ಪಾವತಿ ಮಾಡಲು ಸಾಧ್ಯವಾಗುತ್ತದೆ. ಆಗ ಬಹುಪಾಲು ಗೊಂದಲ ನಿವಾರಣೆಯಾಗಲು ಸಾಧ್ಯವಿದೆ, ಜೂನ್.‌30  ರ ಗೊಂದಲವೂ ದೂರವಾಗಲಿದೆ. ಈ ಬಗ್ಗೆ ತಕ್ಷಣವೇ ಗಮನಹರಿಸಬೇಕಿದೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ

ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…

8 hours ago

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…

10 hours ago

ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ

ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್‌ನ…

11 hours ago

ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…

1 day ago