ಕೇವಲ ಬಡವರ ಪಾಲಿನ ಹಸಿವು ನೀಗಿಸುತ್ತಿದ್ದ ಹಲಸಿಗೆ ಈಗ ಅಂತರಾಷ್ಟ್ರೀಯ ಮನ್ನಣೆ. ಹಲಸು ಯಥೇಚ್ಚವಾಗಿ ಬೆಳೆಯುವ ಹಣ್ಣಾಗಿ, ವಾಣಿಜ್ಯ ಬೆಳೆಯಾಗಿ ಪರಿವರ್ತಿತವಾಗುತ್ತಿರುವುದು ಖುಷಿಯ ವಿಚಾರ. ಇದಕ್ಕೆ ಮೂಲ ಕಾರಣ ಅಲ್ಲಲ್ಲಿ ಆಯೋಜನೆಗೊಳ್ಳುತ್ತಿರುವ ಹಲಸಿನ ಮೇಳಗಳು.
ಚಂದ್ರ, ಭೈರಸಂದ್ರ, ಲಾಲ್ ಬಾಗ್ ಮಧುರ, ರುದ್ರಾಕ್ಷಿ, ಸರ್ವಋತು ಅಷ್ಟೇ ಅಲ್ಲ ಅಂಟು ರಹಿತ ಹಲಸಿನ ಸಾಲುಗಳು. ಇನ್ನೇನು ಅಲ್ಲೇ ಬಿಸಿ ಬಿಸಿಯಾಗಿ ಎಣ್ಣೆಯಲ್ಲಿ ತಯಾರಾಗೋ ಹಲಸಿನ ತಿಂಡಿ ತಿನಿಸುಗಳು. ಇದೆಲ್ಲವನ್ನೂ ಕಂಡು ಖರೀದಿಗೆ ಮುಗಿಬಿದ್ದ ಗ್ರಾಹಕರು. ಈ ಎಲ್ಲ ದೃಶ್ಯ ಕಂಡುಬಂದಿದ್ದು ಸಾಂಸ್ಕೃತಿಕ ನಗರಿ ಮೈಸೂರುನಲ್ಲಿ ನಡೆದ ಹಲಸಿನ ಮೇಳದಲ್ಲಿ.
ಚಂದ್ರ ಹಲಸು ಆಕರ್ಷಣೆ: ಇನ್ನು ವಿವಿಧ ತಳಿಯ ಹಲಸಿನ ಹಣ್ಣಿನ ಮಾರಾಟವೂ ನಡೆಯಿತು. ರಾಜ್ಯದ ಅನೇಕ ಜಿಲ್ಲೆಗಳಿಂದ ಮೈಸೂರಿಗೆ ಬಂದಿದ್ದ ರೈತರು, ಮಹಿಳಾ ಗುಂಪುಗಳು ಹಲಸಿನ ಪದಾರ್ಥ, ಸಿರಿಧಾನ್ಯ, ಕರಕುಶಲ ವಸ್ತುಗಳು, ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಿದರು.
ಇದರ ಜೊತೆಗೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ವಿಶೇಷವಾದ ಚಂದ್ರ ಹಲಸು ಹಬ್ಬಕ್ಕೆ ಬಂದಂತಹ ಜನರನ್ನು ತನ್ನತ್ತ ಆಕರ್ಷಿಸುತ್ತಿತ್ತು. ಹೀಗೆ ಮೈಸೂರಿನಲ್ಲಿ ನಡೆದ ಹಲಸು ಹಬ್ಬವು ಆಹಾರ ಪ್ರಿಯರ ಬಾಯಿ ರುಚಿ ಹೆಚ್ಚಿಸಿತ್ತು.
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…
ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…
ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…
ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…
ಮುಂಗಾರು ಮಳೆಯ ಅಬ್ಬರ ಮುಂದುವರಿದಿದೆ. ಇಂದು ರಾಜ್ಯದಾದ್ಯಂತ ಗುಡುಗು ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ…
ಮುಂಗಾರು ಮಳೆ ಆರಂಭವಾಯಿತು. ಈ ಬಾರಿ ನಿರೀಕ್ಷೆಗೂ ಮುನ್ನವೇ ಮುಂಗಾರು ಬಂದಿದೆ. ಮುಂಗಾರು…