ಸುದ್ದಿಗಳು

#JackfruitFestival | ಮೇಣ ಇಲ್ಲದ ಹಲಸಿಗೆ ಮಾರು ಹೋದ ಹಲಸು ಪ್ರಿಯರು…! | ಮೈಸೂರಿನ ಹಲಸಿನ ಮೇಳಕ್ಕೆ ಜನ ಸಾಗರ |

Share

ಕೇವಲ ಬಡವರ ಪಾಲಿನ ಹಸಿವು ನೀಗಿಸುತ್ತಿದ್ದ ಹಲಸಿಗೆ ಈಗ ಅಂತರಾಷ್ಟ್ರೀಯ ಮನ್ನಣೆ. ಹಲಸು ಯಥೇಚ್ಚವಾಗಿ ಬೆಳೆಯುವ ಹಣ್ಣಾಗಿ, ವಾಣಿಜ್ಯ ಬೆಳೆಯಾಗಿ ಪರಿವರ್ತಿತವಾಗುತ್ತಿರುವುದು ಖುಷಿಯ ವಿಚಾರ. ಇದಕ್ಕೆ ಮೂಲ ಕಾರಣ ಅಲ್ಲಲ್ಲಿ ಆಯೋಜನೆಗೊಳ್ಳುತ್ತಿರುವ ಹಲಸಿನ ಮೇಳಗಳು.

Advertisement

ಚಂದ್ರ, ಭೈರಸಂದ್ರ, ಲಾಲ್‌ ಬಾಗ್‌ ಮಧುರ, ರುದ್ರಾಕ್ಷಿ, ಸರ್ವಋತು ಅಷ್ಟೇ ಅಲ್ಲ ಅಂಟು ರಹಿತ ಹಲಸಿನ ಸಾಲುಗಳು. ಇನ್ನೇನು ಅಲ್ಲೇ ಬಿಸಿ ಬಿಸಿಯಾಗಿ ಎಣ್ಣೆಯಲ್ಲಿ ತಯಾರಾಗೋ ಹಲಸಿನ ತಿಂಡಿ ತಿನಿಸುಗಳು. ಇದೆಲ್ಲವನ್ನೂ ಕಂಡು ಖರೀದಿಗೆ ಮುಗಿಬಿದ್ದ ಗ್ರಾಹಕರು. ಈ ಎಲ್ಲ ದೃಶ್ಯ ಕಂಡುಬಂದಿದ್ದು  ಸಾಂಸ್ಕೃತಿಕ ನಗರಿ ಮೈಸೂರುನಲ್ಲಿ ನಡೆದ ಹಲಸಿನ ಮೇಳದಲ್ಲಿ.

ಫುಡ್‌ ಪ್ರಿಯರು ಹಲಸಿನ ತರಹೇವಾರಿ ತಿಂಡಿಗೆ ಫಿದಾ ಆದ್ರು. ವೆರೈಟಿ ಹಲಸಿನ ಹಣ್ಣುಗಳ ಜೊತೆಗೆ ಹಲಸಿನ ಹೋಳಿಗೆ, ಹಲಸಿನ ಚಿಪ್ಸು, ಹಲಸಿನಕಾಯಿ ಕಬಾಬು, ಹಲಸಿನ ಬಿರಿಯಾನಿ ಹೀಗೆ ಅನೇಕ ಹಲಸಿನ ಖಾದ್ಯಗಳನ್ನು ಸವಿಯೋ ಅವಕಾಶ ಆಹಾರ ಪ್ರಿಯರಿಗೆ ಸಿಕ್ಕಿತು. ಮೈಸೂರು ನಗರದ ನೆಕ್ಸಸ್ ಸೆಂಟರ್ ಸಿಟಿ ಮಾಲ್ ಇಂತಹದ್ದೊಂದು ಕಾರ್ಯಕ್ರಮ ಕಂಡು ಸಾಂಸ್ಕೃತಿಕ ನಗರಿಯ ಫುಡ್‌ ಪ್ರಿಯರಂತೂ ಫುಲ್‌ ಫಿದಾ ಆದ್ರು. ತಮ್ಮಿಷ್ಟದ ತಿಂಡಿ ತಿನಿಸುಗಳನ್ನ ಸವಿದು ಬಾಯಿ ಚಪ್ಪರಿಸಿಕೊಂಡರು.

ಚಂದ್ರ ಹಲಸು ಆಕರ್ಷಣೆ: ಇನ್ನು ವಿವಿಧ ತಳಿಯ ಹಲಸಿನ ಹಣ್ಣಿನ ಮಾರಾಟವೂ ನಡೆಯಿತು. ರಾಜ್ಯದ ಅನೇಕ ಜಿಲ್ಲೆಗಳಿಂದ ಮೈಸೂರಿಗೆ ಬಂದಿದ್ದ ರೈತರು, ಮಹಿಳಾ ಗುಂಪುಗಳು ಹಲಸಿನ ಪದಾರ್ಥ, ಸಿರಿಧಾನ್ಯ, ಕರಕುಶಲ ವಸ್ತುಗಳು, ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಿದರು.

ಇದರ ಜೊತೆಗೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ವಿಶೇಷವಾದ ಚಂದ್ರ ಹಲಸು ಹಬ್ಬಕ್ಕೆ ಬಂದಂತಹ ಜನರನ್ನು ತನ್ನತ್ತ ಆಕರ್ಷಿಸುತ್ತಿತ್ತು. ಹೀಗೆ ಮೈಸೂರಿನಲ್ಲಿ ನಡೆದ ಹಲಸು ಹಬ್ಬವು ಆಹಾರ ಪ್ರಿಯರ ಬಾಯಿ ರುಚಿ ಹೆಚ್ಚಿಸಿತ್ತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು

ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…

12 hours ago

ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?

ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…

13 hours ago

ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |

ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…

14 hours ago

ಹೊಸರುಚಿ | ಗುಜ್ಜೆ ಕಡಲೆ ಗಸಿ

ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…

14 hours ago

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …

14 hours ago

ರೆಪೋ ದರದಲ್ಲಿ ಶೇಕಡ  0.25ರಷ್ಟು  ಕಡಿತ | ಶೇಕಡ 6.25ರಿಂದ ಶೇಕಡ 6ಕ್ಕೆ  ಇಳಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ನ  ಹಣಕಾಸು ನೀತಿ ಸಮಿತಿ ಹಲವು  ಮಹತ್ವದ ನಿರ್ಧಾರಗಳನ್ನು…

14 hours ago