Advertisement
Opinion

ಹಿರಿಯರ ಕಾಲಿಗೆ ಬಿದ್ದು ನಮಿಸುವಂತಹ ಸಂಪ್ರದಾಯ ಬೆಳೆಸಿಕೊಳ್ಳಿ | ಎಲ್ಲಾ ರೀತಿಯ ಅಹಂ ದೂರವಾಗುತ್ತದೆ |

Share

ಸಾಮಾನ್ಯವಾಗಿ ನಾವು ಹಿರಿಯರ ಕಾಲಿಗೆ ಬಿದ್ದು ನಮಿಸುವಂತಹ ಸಂಪ್ರದಾಯವನ್ನು, ಪಾಲಿಸುವುದು ನಮ್ಮ ಸಂಸ್ಕೃತಿಯ ವಿಶೇಷ, ನಾವು ಯೋಗ್ಯರ ಪಾದ ಸ್ಪರ್ಶಿಸಿ ನಮಸ್ಕರಿಸಿದರೆ ಆಗ ಎಲ್ಲಾ ರೀತಿಯ ಅಹಂ ದೂರವಾಗುತ್ತದೆ, ಮತ್ತು ಎದುರಿನ ವ್ಯಕ್ತಿಯ ವರ್ಚಸ್ಸು ಅನುಭವ ಸಾಧನೆ ಮತ್ತು ಜ್ಞಾನವನ್ನು ನಾವು ಗೌರವಿಸಿದಂತೆ ಅನ್ನೋದು ಇದರ ಅರ್ಥ, ಇದಕ್ಕೆ ಪ್ರತಿಯಾಗಿ ಹಿರಿಯರು, ಕೂಡ ನಮಗೆ ಆಶೀರ್ವಾದ ನೀಡುತ್ತಾರೆ.

ಆದ್ದರಿಂದ ಹಿಂದಿನ ಕಾಲದಿಂದಲೂ ಹಿರಿಯರನ್ನು ಕಂಡ ತಕ್ಷಣ ಮೊದಲು ಕಾಲಿಗೆ ನಮಸ್ಕರಿಸಿದ ನಂತರವೇ ಯೋಗ ಕ್ಷೇಮ, ಸಮಾಚಾರವನ್ನು, ವಿಚಾರಿಸುವ ಪದ್ಧತಿಯನ್ನು ರೂಡಿಸಿಕೊಂಡು ಬಂದಿದ್ದೇವೆ, ಅಷ್ಟೇ ಅಲ್ಲದೆ ಯಾವುದಾದರೂ, ಶುಭಕಾರ್ಯಗಳಿಗೆ ಹೋದಾಗ ಅಥವಾ ಸಮಾರಂಭಗಳಲ್ಲಿ, ಮನೆಯಲ್ಲಿ ಹಬ್ಬ ಇರುವಾಗ ದೇವರ ಪೂಜೆಯ ನಂತರ ಹಿರಿಯರ ಪಾದಸ್ಪರ್ಶ ಮಾಡಿ ಆಶೀರ್ವಾದವನ್ನು, ಪಡೆದುಕೊಳ್ಳುವುದು ನಮ್ಮ ಸಂಪ್ರದಾಯವಾಗಿದೆ. ಆದರೆ ಇಂದಿನ ಕಾಲದಲ್ಲಿ ವಯಸ್ಸಿನ ಭೇದವಿಲ್ಲದೆಎಲ್ಲರೂ ಕೂಡ ಹಾಯ್ ಬಾಯ್ ಎನ್ನುವುದರಲ್ಲಿಯೇ ಮಾತುಕತೆ ಮುಗಿಸಿ ಬಿಡುತ್ತಾರೆ. ಹಿರಿಯರ ಆಶೀರ್ವಾದವನ್ನು ತೆಗೆದುಕೊಳ್ಳುವುದಕ್ಕೆ ಹಿಂದು ಮುಂದೆ ನೋಡುತ್ತಾರೆ.

ಈ ರೀತಿ ಪಾದಸ್ಪರ್ಶಮಾಡಿ ಆಶೀರ್ವಾದ ಪಡೆದುಕೊಳ್ಳುವುದರಿಂದ, ಆಗುವ ಲಾಭಗಳು : ಹಿರಿಯರ ಪಾದಮಟ್ಟಿ ನಮಸ್ಕರಿಸಿದರೆ ಆ ವ್ಯಕ್ತಿಗೆ ಶಕ್ತಿ, ಜ್ಞಾನ, ವಿದ್ಯೆ ಮತ್ತು ಪ್ರಸಿದ್ಧಿ ಪ್ರಾಪ್ತಿಯಾಗುತ್ತದೆ ಎಂದು ಇದರ ಅರ್ಥ. ಹಿರಿಯರು ಈ ಜಗತ್ತಿನಲ್ಲಿ ನಮಗಿಂತಲೂ ಅನುಭವಸ್ಥರಾಗಿರುತ್ತಾರೆ ಹಾಗೂ ಹೆಚ್ಚಿನ ಜ್ಞಾನ ಸಂಪಾದನೆ ಮಾಡಿರುತ್ತಾರೆ. ಹಾಗೂ ಅವರು ಕ್ರಮಿಸಿರುವಂತಹ, ದೂರವು ದೀರ್ಘವಾಗಿದೆ. ಹಿರಿಯರ ಕಾಲಿನಲ್ಲಿರುವ ಧೂಳಿನಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು ಅಂತ ಹೇಳಲಾಗುತ್ತದೆ. ಹಿರಿಯರು ಅಥವಾ ಗೌರವಾನ್ವಿತ ವ್ಯಕ್ತಿಯ ಪಾದಮುಟ್ಟಿ ನಮಸ್ಕರಿಸುವದರಿಂದ, ನಮ್ಮ ದೇಹದ ಮೇಲಿನ ಭಾಗವನ್ನು ಬಾಗಿಸಬೇಕು, ಮೊಣಕಾಲನ್ನು ಬಗ್ಗಿಸದೆ ನೇರವಾಗಿ ಪಾದಗಳನ್ನು ಕೈಗಳಿಂದ ಮುಟ್ಟಬೇಕು, ಕೈಗಳು ನೇರವಾಗಿ ಇರಬೇಕು ಹಾಗೆ ನಮಸ್ಕಾರ ಮಾಡುವಾಗ ಮುಖ್ಯವಾಗಿ ನೆನಪಿಡಬೇಕಾದದ್ದು, ಬಲಗೈಯಲ್ಲಿ ಬಲಪಾದವನ್ನು ಹಾಗೂ ಎಡಗೈಯಲ್ಲಿ ಎಡಪಾದವನ್ನು ಮುಟ್ಟಿ ನಮಸ್ಕಾರ ಮಾಡಬೇಕು.

ನೆನಪಿಡಬೇಕಾದ ವಿಷಯ: ಹಿರಿಯ ವ್ಯಕ್ತಿಗಳು ಮತ್ತು ಗೌರವಾನ್ವಿತ ವ್ಯಕ್ತಿಗಳ ಪಾದ ಸ್ಪರ್ಶ ಮಾತ್ರ ಮಾಡಬೇಕು ಯಾಕೆಂದರೆ ಇವರು ಜೀವನಪೂರ್ತಿ ಹೆಚ್ಚು ಜ್ಞಾನ ಅನುಭವ ಮತ್ತು ಸದ್ಗುಣಗಳನ್ನು ಪಡೆದಿರುತ್ತಾರೆ. ಇವರ ಆಶೀರ್ವಾದ ತುಂಬಾ ಶಕ್ತಿಶಾಲಿ ಆಗಿರುತ್ತದೆ. ಇದರಿಂದ ನಮಗೆ ಹೆಚ್ಚಿನ ಜ್ಞಾನ ಸುಖ ಸಂತೋಷ ದೊರಕುತ್ತದೆ. ಇನ್ನು ವಿಜ್ಞಾನದ ಪ್ರಕಾರ ಈ ರೀತಿ ಬಾಗಿ ಪಾದಗಳಿಗೆ, ನಮಸ್ಕರಿಸದಾಗ ದೇಹದಲ್ಲಿ ರಕ್ತದ ಸಂಚಲನೆ ಸರಾಗವಾಗಿ ನಡೆಯುತ್ತದೆ. ಇದೇ ಕಾರಣದಿಂದ ಹುದ್ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ, ಹಾಗೂ ಹಿರಿಯರ ಕೈಗೆ ಅಕ್ಷತೆಯನ್ನು ಕೊಟ್ಟು ನಮಸ್ಕಾರ ಮಾಡಿ ಅವರಿಂದ ಆಶೀರ್ವಾದ ಪಡೆಯುವುದರಿಂದ, ಅಷ್ಟೈಶ್ವರ್ಯ, ಭಾಗ್ಯ, ನೆಮ್ಮದಿ ಸಿಗುತ್ತದೆ. ಸಮಾಜದ ಒಳಿತಿಗಾಗಿ ಇರೋರಿಗೆ ನಮಿಸೋದ್ರಲ್ಲಿ ಅರ್ಥವಿದೆ. ತಿಳುವಳಿಕೆ ಇಲ್ಲದೆ ಮೂರ್ಖತನದಿಂದ ವರ್ತಿಸುವ ವ್ಯಕ್ತಿಗಳು ಸಮಾಜಘಾತಕರು ಕೇವಲ ಹಣದಿಂದಲೇ ಶ್ರೀಮಂತರಾದವರು ಕೆಟ್ಟ ಗುಣ ಹೊಂದಿರುವ ವ್ಯಕ್ತಿಗಳು ಬೇರೆಯವರಿಗೆ ಕೆಡುಕು ಬಯಸುವ ವ್ಯಕ್ತಿಗಳಿಗೆ ಜೀವನದಲ್ಲಿ ಎಂದಿಗೂ ತಲೆಬಾಗಬಾರದು ಹಾಗೂ ನಮಸ್ಕರಿಸಬಾರದು. ಒಂದು ವೇಳೆ ನೀವು ಅವರ ಕಾಲಿಗೆ ನಮಸ್ಕಾರ ಮಾಡಿದರೆ ನಿಮ್ಮ ದುರಾದೃಷ್ಟವನ್ನು ನಿಮ್ಮ ಮೈ ಮೇಲೆ ಎಳೆದುಕೊಂಡು ಹಾಗೆ ಆಗುತ್ತದೆ.

ಬರಹ :
L  ವಿವೇಕಾನಂದ ಆಚಾರ್ಯ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

3 hours ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

6 hours ago

ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್‌ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…

13 hours ago

ಗ್ರಾಮೀಣ ಭಾರತದ ಆದಾಯಕ್ಕೆ ಹಿನ್ನಡೆ – ಕಳೆದ ವರ್ಷ ಅರ್ಧದಷ್ಟು ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿಲ್ಲ

ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…

19 hours ago

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

1 day ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

1 day ago