ಶಿವಮಯವಾದ ಜಗವು | ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿ ದಾರಿದ್ರ್ಯ- ದುಃಖದಹನ ಶಿವಸ್ತೋತ್ರ | ಇಲ್ಲಿದೆ ಕೇಳಿ ಈ ಸ್ತೋತ್ರ…

March 11, 2021
6:18 PM
ಶಿವರಾತ್ರಿ. ಈ ದಿನ ಜಗವೆಲ್ಲಾ ಶಿವಮಯವಾಗಿದೆ. ರಾತ್ರಿ ಇಡೀ ಜಾಗರಣೆ ಸಹಿತ ಶಿವಾರ್ಚನೆ ನಡೆಯುತ್ತದೆ. ಈ ಸಂದರ್ಭ ವಸಿಷ್ಠರಿಂದ ರಚಿಸಲ್ಪಟ್ಟ ದಾರಿದ್ರ್ಯ ದುಃಖದಹನ ಶಿವಸ್ತೋತ್ರ ಕೇಳುವುದರಿಂದ ಮತ್ತು ಪಠಿಸುವುದರಿಂದ  ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿಯಾಗುತ್ತದೆ ಎನ್ನುವುದು  ನಂಬಿಕೆ. ಇದೀಗ ಈ ಸ್ತೋತ್ರ ಗಮನ ಸೆಳೆದಿದೆ. ಸತ್ಯನಾರಾಯಣ ಭಟ್ರಕೋಡಿ ಅವರು ಹಾಡಿರುವ ಈ ಸ್ತೋತ್ರ ಶಿವ ಭಕ್ತಿಗೆ ಬೆಳಕಾಗಿದೆ.
ಸತ್ಯನಾರಾಯಣ ಭಟ್ರಕೋಡಿ

ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಯೂ ಬಯಸುವುದು ಆನಂದ ಮತ್ತು ಸುಖವನ್ನು. ಮಾನವನೂ ಅಷ್ಟೆ, ತನ್ನ ಐಹಿಕ ಬದುಕಿಗಾಗಿ ಸಂಪತ್ತನ್ನು ಗಳಿಸುವುದಕ್ಕಾಗಿ ದುಡಿಯುತ್ತಾನಾದರೂ ಆತನ ಅಂತಿಮ ಉದ್ದೇಶ ಆನಂದ ಮತ್ತು ಸುಖಮಯ ಬದುಕು. ಆದರೆ ನಾವು ಗಳಿಸುವ ಆಸ್ತಿ ಅಂತಸ್ತು ಸಂಪತ್ತುಗಳು ನಿಜವಾದ ಸುಖವನ್ನು ನೀಡಲಾರವು. ಈ ಲೌಕಿಕ ಜೀವನದಲ್ಲಿ ನಮ್ಮ ಕರ್ಮಗಳ ಫಲವಾಗಿ ದುಃಖ, ದಾರಿದ್ರ್ಯಗಳು ನಮ್ಮನ್ನು ಅಂಟಿಕೊಳ್ಳುತ್ತವೆ. ಇವುಗಳಿಂದ ಪಾರಾಗಬೇಕಾದರೆ ಪರಮೇಶ್ವನ ಮೊರೆಹೋಗುವುದೊಂದೇ ದಾರಿ.

‘ಶಿವ’ ಎಂದರೆ ಆನಂದ. ಮಹಾಶಿವರಾತ್ರಿಯಂದು ಮುಕ್ತೇಶ್ವರನಾದ ಮಹಾಶಿವನನ್ನು ಪ್ರಾರ್ಥಿಸಿಕೊಂಡರೆ ಕರುಣಾಮಯನಾದ ಮುಕ್ಕಣ್ಣ ನಮ್ಮೆಲ್ಲ ಪಾಪಗಳನ್ನು ಪರಿಹರಿಸಿ, ದುಃಖ ದಾರಿದ್ರ್ಯಗಳಿಂದ ನಮ್ಮನ್ನು ಮುಕ್ತನಾಗಿಸುವನು.

ಮಾಯೆಯ ಪ್ರಭಾವದಿಂದ ಮಾನವನು ಯಾವುದನ್ನು ಸುಖವೆಂದು ಭ್ರಮಿಸುತ್ತಾನೋ ಮತ್ತು ಅದರ ಪ್ರಾಪ್ತಿಗಾಗಿ ಆತನು ಏನೆಲ್ಲ ವ್ಯವಹಾರಗಳನ್ನು ಮಾಡುತ್ತಾನೋ, ಅವುಗಳ ಮೂಲಕ ಉಂಟಾಗುವ ಕರ್ಮಲೇಪದಿಂದ ದುಃಖ ಮತ್ತು ದಾರಿದ್ರ್ಯಗಳಿಂದ ಪೀಡಿತನಾಗುತ್ತಾನೆ.  ವಸಿಷ್ಠರಿಂದ ರಚಿಸಲ್ಪಟ್ಟ ಈ ದಾರಿದ್ರ್ಯ ದುಃಖದಹನ ಶಿವಸ್ತೋತ್ರವು ದುಃಖ, ದಾರಿದ್ರ್ಯಗಳಿಂದ ಮುಕ್ತನಾಗುವುದಕ್ಕೆ ಸಹಕಾರಿ.
ಸರ್ವಪಾಪಗಳಿಂದ ವಿಶುದ್ಧಾತ್ಮರಾಗಿಸಿ, ಶಿವಸಾಯುಜ್ಯವನ್ನು ನೀಡಬಲ್ಲ ದಾರಿದ್ರ್ಯ ದುಃಖದಹನ ಶಿವಸ್ತೋತ್ರವು ಶಿವರಾತ್ರಿಯ ಉಪಾಸನೆಗೆ ಅತ್ಯಂತ ಪ್ರಶಸ್ತವಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಭಜನಾ ಮಂಡಳಿ ಉದ್ಘಾಟನೆ
February 24, 2026
6:51 AM
by: ಮಿರರ್‌ ಡೆಸ್ಕ್
ಅಡಿಕೆ ನಿಷೇಧ ಇಲ್ಲ – ಈಗ ಅಡಿಕೆ ಬಳಕೆಯ ನಿಯಂತ್ರಣದತ್ತ ಫೋಕಸ್
January 30, 2026
10:42 PM
by: ಮಹೇಶ್ ಪುಚ್ಚಪ್ಪಾಡಿ
ಧರ್ಮದ ಮಾರ್ಗಕ್ಕೆ ಸೂತ್ರ ಅಗತ್ಯ : ರಾಘವೇಶ್ವರ ಶ್ರೀ
January 21, 2026
7:32 AM
by: ಮಿರರ್‌ ಡೆಸ್ಕ್
ಬಟಾಟೆಯಂತೆ ಅಡಿಕೆಗೆ ವಿಕಿರಣ ಬಳಕೆ ಸಾಧ್ಯವೇ? ಹೇಗೆ ಬಳಸಬಹುದು?
January 12, 2026
7:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror