Advertisement
MIRROR FOCUS

ಅಡಿಕೆ ಮಾರುಕಟ್ಟೆ ಸುದ್ದಿ | ಅಡಿಕೆ ಧಾರಣೆ ಇಳಿಕೆಯಿಂದ ಸ್ಥಿರತೆಯತ್ತ ಮುಂದುವರಿಕೆ

Share

ದಕ್ಷಿಣ ಕನ್ನಡ ಮತ್ತು ಮಲೆನಾಡು ಭಾಗದ ಕೃಷಿ ಮಾರುಕಟ್ಟೆಯಲ್ಲಿ ಸಹಜ ಸ್ಥಿತಿಯಲ್ಲಿ ಕಂಡುಬಂದಿದೆ. ಆದರೆ, ಅಡಿಕೆ ಪ್ರೀಮಿಯಂ ಕ್ವಾಲಿಟಿಗೆ ಸ್ಪರ್ಧಾತ್ಮಕ ಖರೀದಿ ಮುಂದುವರಿದಿದೆ. ಮಾಸ್‌ ಸಂಸ್ಥೆಯು ಖರೀದಿಯಲ್ಲಿ ಆಸಕ್ತಿ ತೋರಿದೆ. ರಬ್ಬರ್ ಮಾರುಕಟ್ಟೆ ಎರಡು ದಿನಗಳಿಂದ ಸ್ಥಿರವಾಗಿದೆ. ಕಾಳುಮೆಣಸು ದರದಲ್ಲಿ ಸಣ್ಣ ಬದಲಾವಣೆ ದಾಖಲಾಗಿದೆ.ಕಳೆದ ಎರಡು ವಾರಗಳಿಂದ ಧಾರಣೆ ಇಳಿಕೆಯ ಹಾದಿಯಲ್ಲಿತ್ತು. ಇದೀಗ ಇಳಿಕೆಯಲ್ಲಿ ಸ್ಥಿರತೆ ಕಂಡುಬಂದಿದೆ.

ಅಡಿಕೆ ಮಾರುಕಟ್ಟೆಯಲ್ಲಿ ಕ್ಯಾಂಪ್ಕೊ

  • ಹೊಸ ಅಡಿಕೆ: ₹260–₹475

  • ಚೋಲ್: ₹410–₹530

  • ಡಬಲ್ ಚೋಲ್: ₹460–₹530 ಖರೀದಿ ನಡೆಸುತ್ತಿದೆ.  ದರದಲ್ಲಿ ನಿನ್ನೆಯ ಹೋಲಿಕೆಗೆ ಬದಲಾವಣೆ ಕಾಣಿಸಿಲ್ಲ. ಉತ್ತಮ ಗುಣಮಟ್ಟದ ಅಡಿಕೆಗೆ  ₹530 ಗರಿಷ್ಠ ಮಟ್ಟ ಮುಂದುವರಿದಿದೆ.

ಮಾಸ್‌(MASS) ಸಂಸ್ಥೆಯು ಖರೀದಿಯಲ್ಲು ಆಸಕ್ತಿ ತೋರಿಸಿದೆ.

  • ಹೊಸ ಅಡಿಕೆ ₹300–₹475 (Best ₹480 )

  • ಹಳೆ ಅಡಿಕೆ  ₹440–₹530 (Best ₹533 )

  • ಚೋಲ್‌ : ₹505–₹530 ಖರೀದಿ ನಡೆಸುತ್ತಿದೆ.  MASS ನಲ್ಲಿ ಪ್ರೀಮಿಯಂ ಫ್ರೆಶ್‌ ಚೋಲ್ ₹533 ತಲುಪಿದ್ದು, ಸ್ಪರ್ಧಾತ್ಮಕ ಖರೀದಿ ನಡೆಯುತ್ತಿದೆ.

ಮ್ಯಾಮ್ಕೋಸ್‌ ಕೂಡಾ ಸ್ಥಿರ ಧಾರಣೆಯಲ್ಲಿ ಖರೀದಿ ಮುಂದುವರಿಸಿದೆ. ವಿವಿಧ ಕಡೆಗಳಲ್ಲಿನ ಧಾರಣೆ ವ್ಯತ್ಯಾಸ ಇದೆ.

  • ರಾಶಿ ಇಡೀ: ₹560+

  • ಚಾಲಿ : ₹388–₹437

  • ಸಿಪ್ಪೆ ಗೋಟು: ₹105–₹230

MAMCOS ಕೇಂದ್ರಗಳಲ್ಲಿ ಪ್ರೀಮಿಯಂ ರಾಶೀಇಡೀ ವರ್ಗ ₹560 ಮೇಲ್ಪಟ್ಟು ವಹಿವಾಟು ಕಂಡುಬಂದಿದೆ.

ಒಟ್ಟಾರೆ ಅಡಿಕೆ ಮಾರುಕಟ್ಟೆ ಸ್ಥಿರವಾಗಿದ್ದರೂ, ಉತ್ತಮ ಗುಣಮಟ್ಟದ ವರ್ಗಗಳಿಗೆ ಬೇಡಿಕೆ ಹೆಚ್ಚಾಗಿದೆ. MASS ಹಾಗೂ MAMCOS ಪ್ರೀಮಿಯಂ ವರ್ಗಗಳಲ್ಲಿ ಕ್ಯಾಂಪ್ಕೊಗಿಂತ  ಆಸಕ್ತಿ ತೋರಿಸುತ್ತಿವೆ.

ರಬ್ಬರ್ ಮಾರುಕಟ್ಟೆ : 

ರಬ್ಬರ್‌ ಮಾರುಕಟ್ಟೆಯಲ್ಲಿ ಎರಡು ದಿನಗಳಿಂದ ಯಾವುದೇ ಬದಲಾವಣೆಗಳು ಇಲ್ಲ. ಗುತ್ತಿಗಾರು ರಬ್ಬರ್‌ ಸೊಸೈಟಿ ಧಾರಣೆ ಪ್ರಕಾರ,

  • RSS-4: ₹214.50

  • LOT: ₹195.50

  • Scrap 1st: ₹139.00

  • Scrap 2nd: ₹129.00

ಎರಡು ದಿನಗಳಿಂದ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ₹215 ಮಟ್ಟದಲ್ಲಿದ್ದು ಸದ್ಯ ಏರಿಕೆಯ ಬಗ್ಗೆ ಮಾಹಿತಿ ಇಲ್ಲ.

 ಕಾಳುಮೆಣಸು ಮಾರುಕಟ್ಟೆ

  • ಸರಾಸರಿ ದರ: ₹610–₹660 (ಗುಣಮಟ್ಟ ಆಧಾರಿತ).

ನಿನ್ನೆಯ ಧಾರಣೆಗೆ  ಹೋಲಿಕೆ ಮಾಡಿದರೆ ₹5–₹10 ಸಣ್ಣ ಮಟ್ಟದ ವ್ಯತ್ಯಾಸ.  ರಫ್ತು ಬೇಡಿಕೆಯ ಮೇಲೆ ಅವಲಂಬಿತವಾಗಿ ಮುಂದಿನ ದಿನಗಳಲ್ಲಿ ದರ ಏರಿಳಿತ ಸಾಧ್ಯತೆ ಇದೆ.

ಅಡಿಕೆ ಮಾರುಕಟ್ಟೆಯಲ್ಲಿ ಪ್ರೀಮಿಯಂ ವರ್ಗಗಳಿಗೆ ಸ್ಪರ್ಧಾತ್ಮಕ ಖರೀದಿ ಮುಂದುವರಿದಿದ್ದು, ರಬ್ಬರ್ ದರ ಎರಡು ದಿನಗಳಿಂದ ಸ್ಥಿರವಾಗಿದೆ. ಕಾಳುಮೆಣಸು ದರದಲ್ಲಿ ಸಣ್ಣ ಮಟ್ಟದ ಬದಲಾವಣೆ ಕಂಡುಬಂದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

The arecanut market remained largely stable across CAMPCO, MASS, and MAMCOS centers, with strong demand continuing for premium grades such as Fresh Choll and Rashiedi varieties. While CAMPCO prices stayed steady, MASS and MAMCOS recorded slightly higher peak rates in premium segments.

Rubber prices remained unchanged for the second consecutive day, indicating a flat market trend. Meanwhile, black pepper prices showed minor fluctuations of ₹5–₹10 depending on quality, with future movement likely influenced by export demand.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

2030ರೊಳಗೆ 5 ಟ್ರಿಲಿಯನ್ ಆರ್ಥಿಕತೆ ಮೀರಿದ ರಾಷ್ಟ್ರವಾಗಲಿದೆ ಭಾರತ

2030ರೊಳಗೆ ಭಾರತ 5 ಟ್ರಿಲಿಯನ್ ಆರ್ಥಿಕತೆಯನ್ನು ಮೀರುತ್ತದೆ ಎಂದು ಪ್ರಲ್ಹಾದ ಜೋಶಿ ವಿಶ್ವಾಸ…

6 hours ago

ರೈತರ ಹಿತಕ್ಕಾಗಿ ಎರಡು ಮಹತ್ವದ ಸುಧಾರಣೆಗಳು | ಹೊಸ ಬೀಜ ಕಾಯ್ದೆ, ಪರಿಷ್ಕೃತ ಕೀಟನಾಶಕ ಕಾಯ್ದೆ ಜಾರಿಗೆ ಕೇಂದ್ರ ಸಿದ್ಧತೆ

ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಹೊಸ ಬೀಜ ಕಾಯ್ದೆ ಮತ್ತು ಪರಿಷ್ಕೃತ ಕೀಟನಾಶಕ…

6 hours ago

ಇನ್ನೆರಡು ದಿನಗಳಲ್ಲಿ ತಂಬಾಕು ಬೆಳೆಗಾರರ ಸಮಸ್ಯೆಗೆ ಪರಿಹಾರ : ಕುಮಾರಸ್ವಾಮಿ ಭರವಸೆ

ಮೈಸೂರು ವಿಭಾಗದ ತಂಬಾಕು ರೈತರು ಖರೀದಿ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದು, ಈ ಬಗ್ಗೆ ಕೇಂದ್ರ…

7 hours ago

ಅಡಿಕೆ ತೋಟದ ಹಳದಿ ಎಲೆ ರೋಗ ಚೀನಾದಲ್ಲೂ ಮದ್ದಿಲ್ಲ…! | ಮಣ್ಣಿನೊಳಗಿನ ಡಿಎನ್‌ಎ ನೀಡುತ್ತಿದೆ ಎಚ್ಚರಿಕೆ

ಅಡಿಕೆಯ ಹಳದಿ ಎಲೆ ರೋಗವು(YLD) ಕೇವಲ ಎಲೆಯ ಸಮಸ್ಯೆಯಲ್ಲ, ಮಣ್ಣಿನೊಳಗಿನ ಸೂಕ್ಷ್ಮಜೀವಿಗಳ ಸಮತೋಲನ…

18 hours ago

ಹವಾಮಾನ ವರದಿ | 02-03-2026 | ರಾಜ್ಯದಲ್ಲಿ ಮೋಡ ಕವಿದ ವಾತಾವರಣ… ಆದರೆ, ಮಳೆ ಇದೆಯೋ..? ಇಲ್ವೋ..?!

ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಾರ್ಚ್‌ 3 ರವರೆಗೆ ಮಳೆಯ ಸಾಧ್ಯತೆ…

1 day ago

ಜಲಾಶಯ ಪಕ್ಕದಲ್ಲೇ ಟ್ಯಾಂಕರ್ ನೀರು | ಅಡಿಕೆ ತೋಟ ಉಳಿಸಿಕೊಳ್ಳಲು ರೈತರ ಹೋರಾಟ

ವಾಣಿ ವಿಲಾಸ ಸಾಗರ ಜಲಾಶಯದ ಸಮೀಪದಲ್ಲೇ ಹಿರಿಯೂರಿನ ಅಡಿಕೆ ರೈತರು ನೀರಿನ ಕೊರತೆಯಿಂದ…

1 day ago