Opinion

ಇತಿಹಾಸದ ಪುಟ ಸೇರುತ್ತಿರುವ ದನದ ಬಯಲು ದೇವಸ್ಥಾನ | ಕಾಲನ ಹೊಡೆತಕ್ಕೆ ನಿಂತ ಜಾನುವಾರು ವ್ಯಾಪಾರ ವಹಿವಾಟು |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇದು ತೀರ್ಥಹಳ್ಳಿ(Theerthahalli) ತಾಲ್ಲೂಕಿನ ಗುಡ್ಡೇಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿ ಯ ಶ್ರೀ ಕಪಿಲೇಶ್ವರ ದೇವಸ್ಥಾನ(Kapileshwara temple). ಈ ದೇವಸ್ಥಾನ ಇರುವ ಸ್ಥಳಕ್ಕೆ ದಾವಣೆಬೈಲು ಎಂಬ ಹೆಸರು. ಇದು 1200 ವರ್ಷದ ಹಿಂದಿನ ದೇವಸ್ಥಾನ. ಈ ದೇವಸ್ಥಾನದ ಸುತ್ತಲಿನ ಬಯಲಿನಲ್ಲಿ ನೂರಾರು ವರ್ಷಗಳ ಹಿಂದೆ ದೊಡ್ಡ ಪ್ರಮಾಣದ ದನದ ಜಾತ್ರೆ(Cattle fair) ಅಥವಾ ವ್ಯಾಪಾರ ನೆಡೆಯುತ್ತಿತ್ತಂತೆ. ಆದ ಕಾರಣ ಈ ದೇವಸ್ಥಾನದ ಇರುವ ಊರಿಗೆ “ದನದ ಬಯಲು” ಎನ್ನುತ್ತಿದ್ದರು.

Advertisement
Advertisement

ಮುಂದೆ ಈ ದನದ ಬಯಲು “ದಾವಣೆ ಬೈಲು ” ಎಂದಾಯಿತು. ಈ ದೇವಸ್ಥಾನದ ಮುಖ್ಯ ದೇವರು “ಕಪಿಲೇಶ್ವರ ದೇವರು” , ಮಲೆನಾಡು ಗಿಡ್ಡ ತಳಿಯ. ಕಪಿಲ ಹಸುವಿನ‌ ಹೆಸರನ್ನೇ ಈ ದೇವರಿಗೆ ಇಟ್ಟಿದ್ದಾರೆ. ವಿಪರ್ಯಾಸವೆಂದರೆ ಇಲ್ಲೀಗ ಹಾಲಿನ ಅಭಿಷೇಕ ಮಾಡಿದಾಗ “ಕಪಿಲ ವರ್ಣಕ್ಕೆ ” ತಿರುತ್ತಿದ್ದ ಮುಖ್ಯ ಲಿಂಗ ಇಲ್ಲ…..‌ !!. ಒಂದು ಕಾಲದಲ್ಲಿ ಈ ಕ್ಷೇತ್ರ ಸುತ್ತಲಿನ ಜಾಗದಲ್ಲಿ ಅಪಾರ ಸಂಖ್ಯೆಯ ಜಾನುವಾರಗಳ ವ್ಯಾಪಾರ ವಹಿವಾಟು ಆಗುತ್ತಿದ್ದದ್ದು ವಿಶೇಷ. ಆದರೆ ಕಾಲನ ಹೊಡತದಲ್ಲಿ ಈಗ ಹಸುಗಳೂ ಇಲ್ಲ ಈ ದೇವಸ್ಥಾನವೂ ಫುನಃ ಪ್ರತಿಷ್ಠಾಪನೆಯಾಗದೆ ಖಾಲಿಯಾಗಿದೆ.

ಮಲೆನಾಡಿನ ಪ್ರತಿ ಊರೂ ಇಂತಹ ವಿಶೇಷ ಗಳ ಆಗರವಾಗಿದೆ. ಈ ದೇವಸ್ಥಾನದ ಆವರಣದಲ್ಲಿ ದೂರದಿಂದ ಆಗಮಿಸಿದ ದನದ ವ್ಯಾಪಾರಿಗಳಿಗೆ ಆಟ ಆಡಲು ಚೆನ್ನೆ ಮಣೆ ಕೆತ್ತಿರುವುದೂ ವಿಶೇಷ.

This is Sri Kapileshwara temple under Guddekoppa village panchayat of Theerthahalli taluk. The place where this temple is located is called Dawanbailu. This is a 1200 year old temple. Hundreds of years ago, a large-scale cattle fair or trade was held in the plains around this temple. That’s why the town where this temple is located was called “Danada Bayalu”.

 
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ನಿಮ್ಮಲ್ಲಿ ಎಳೆ ಅಡಿಕೆ ಬೀಳ್ತಾ ಇದೆಯಾ…? ಕೇಳಲು ಶುರು ಮಾಡಿದ್ದಾರೆ ಅಡಿಕೆ ಬೆಳೆಗಾರರು..!

ಈ ಬಾರಿ ಮೇ ತಿಂಗಳಿನಿಂದಲೇ ಮಳೆ ಆರಂಭವಾಗಿದೆ. ಜೂನ್.‌10 ಕಳೆಯುವ ಹೊತ್ತಿಗೆ ವಾತಾವರಣ…

1 hour ago

ಹವಾಮಾನ ವರದಿ | 11-06-2025 | ಮುಂದಿನ 2 ದಿವಸಗಳ ಕಾಲ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆ | ಮುನ್ಸೂಚನೆಯಂತೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಇಲ್ಲ |

ಈಗಿನಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ…

2 hours ago

ಒಂದೇ ರಾಶಿಯಲ್ಲಿ 3 ಗ್ರಹ…..| ತ್ರಿಗ್ರಾಹಿ ಯೋಗವು 50 ವರ್ಷಗಳ ನಂತರ ಸಂಭವಿಸುತ್ತಿದೆ | 5 ರಾಶಿಯವರಿಗೆ ಬಂಪರ್‌ ಲಾಟರಿ..!

ಜೂನ್ 2025ರಲ್ಲಿ ಮಿಥುನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ಗುರು ಗ್ರಹಗಳ ತ್ರಿಗ್ರಾಹಿ…

9 hours ago

ಕೋಲಾರ ಜಿಲ್ಲೆಯಲ್ಲಿ ನಾಳೆ ಮಾವು ಬೆಳೆಗಾರರಿಂದ ಬಂದ್ ಕರೆ |

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಅಂದಾಜು 800 ರಿಂದ 900…

18 hours ago

ಕೃಷಿ ಜೊತೆಗೆ ತೋಟಗಾರಿಕಾ ಬೆಳೆಗಳಿಗೆ ಆದ್ಯತೆ ನೀಡಿ

ದೇಶದ ಆರ್ಥಿಕತೆಯಲ್ಲಿ ತೋಟಗಾರಿಕೆಯಿಂದ ಹೆಚ್ಚಿನ ಜಿಡಿಪಿ ಬರುತ್ತಿದ್ದು, ಹೂ ಮತ್ತು ಔಷಧಿ ಸಸ್ಯಗಳಿಗೆ…

19 hours ago

ಚಾಮರಾಜನಗರದ ಬೇಡುಗುಳಿ ಬಳಿ ಹುಲಿ ದಾಳಿಗೆ ಮೃತಪಟ್ಟ ಮಹಿಳೆ

ಚಾಮರಾಜನಗರ ತಾಲೂಕು ಬೇಡುಗುಳಿ ಸಮೀಪದ ರಾಮಯ್ಯನ ಪೋಡುವಿನಲ್ಲಿ ಹುಲಿ ದಾಳಿಗೆ ರಂಗಮ್ಮ ಎಂಬ…

19 hours ago