ಇತಿಹಾಸದ ಪುಟ ಸೇರುತ್ತಿರುವ ದನದ ಬಯಲು ದೇವಸ್ಥಾನ | ಕಾಲನ ಹೊಡೆತಕ್ಕೆ ನಿಂತ ಜಾನುವಾರು ವ್ಯಾಪಾರ ವಹಿವಾಟು |

November 29, 2023
11:54 AM
ಕೆಲವು ಸಮಯಗಳ ಹಿಂದೆ ದನದ ಜಾತ್ರೆ ಅಲ್ಲಲ್ಲಿ ನಡೆಯುತ್ತಿತ್ತು. ದನಗಳ ವ್ಯಾಪಾರ ವಹಿವಾಟು ಇಲ್ಲಿ ನಡೆಯುತ್ತಿತ್ತು. ಆದರೆ ಈಗ ಎಲ್ಲಾ ಕಡೆಯೂ ಇಂತಹ ಆಚರಣೆ ಸ್ಥಗಿತವಾಗಿದೆ.

ಇದು ತೀರ್ಥಹಳ್ಳಿ(Theerthahalli) ತಾಲ್ಲೂಕಿನ ಗುಡ್ಡೇಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿ ಯ ಶ್ರೀ ಕಪಿಲೇಶ್ವರ ದೇವಸ್ಥಾನ(Kapileshwara temple). ಈ ದೇವಸ್ಥಾನ ಇರುವ ಸ್ಥಳಕ್ಕೆ ದಾವಣೆಬೈಲು ಎಂಬ ಹೆಸರು. ಇದು 1200 ವರ್ಷದ ಹಿಂದಿನ ದೇವಸ್ಥಾನ. ಈ ದೇವಸ್ಥಾನದ ಸುತ್ತಲಿನ ಬಯಲಿನಲ್ಲಿ ನೂರಾರು ವರ್ಷಗಳ ಹಿಂದೆ ದೊಡ್ಡ ಪ್ರಮಾಣದ ದನದ ಜಾತ್ರೆ(Cattle fair) ಅಥವಾ ವ್ಯಾಪಾರ ನೆಡೆಯುತ್ತಿತ್ತಂತೆ. ಆದ ಕಾರಣ ಈ ದೇವಸ್ಥಾನದ ಇರುವ ಊರಿಗೆ “ದನದ ಬಯಲು” ಎನ್ನುತ್ತಿದ್ದರು.

Advertisement
Advertisement

ಮುಂದೆ ಈ ದನದ ಬಯಲು “ದಾವಣೆ ಬೈಲು ” ಎಂದಾಯಿತು. ಈ ದೇವಸ್ಥಾನದ ಮುಖ್ಯ ದೇವರು “ಕಪಿಲೇಶ್ವರ ದೇವರು” , ಮಲೆನಾಡು ಗಿಡ್ಡ ತಳಿಯ. ಕಪಿಲ ಹಸುವಿನ‌ ಹೆಸರನ್ನೇ ಈ ದೇವರಿಗೆ ಇಟ್ಟಿದ್ದಾರೆ. ವಿಪರ್ಯಾಸವೆಂದರೆ ಇಲ್ಲೀಗ ಹಾಲಿನ ಅಭಿಷೇಕ ಮಾಡಿದಾಗ “ಕಪಿಲ ವರ್ಣಕ್ಕೆ ” ತಿರುತ್ತಿದ್ದ ಮುಖ್ಯ ಲಿಂಗ ಇಲ್ಲ…..‌ !!. ಒಂದು ಕಾಲದಲ್ಲಿ ಈ ಕ್ಷೇತ್ರ ಸುತ್ತಲಿನ ಜಾಗದಲ್ಲಿ ಅಪಾರ ಸಂಖ್ಯೆಯ ಜಾನುವಾರಗಳ ವ್ಯಾಪಾರ ವಹಿವಾಟು ಆಗುತ್ತಿದ್ದದ್ದು ವಿಶೇಷ. ಆದರೆ ಕಾಲನ ಹೊಡತದಲ್ಲಿ ಈಗ ಹಸುಗಳೂ ಇಲ್ಲ ಈ ದೇವಸ್ಥಾನವೂ ಫುನಃ ಪ್ರತಿಷ್ಠಾಪನೆಯಾಗದೆ ಖಾಲಿಯಾಗಿದೆ.

Advertisement

ಮಲೆನಾಡಿನ ಪ್ರತಿ ಊರೂ ಇಂತಹ ವಿಶೇಷ ಗಳ ಆಗರವಾಗಿದೆ. ಈ ದೇವಸ್ಥಾನದ ಆವರಣದಲ್ಲಿ ದೂರದಿಂದ ಆಗಮಿಸಿದ ದನದ ವ್ಯಾಪಾರಿಗಳಿಗೆ ಆಟ ಆಡಲು ಚೆನ್ನೆ ಮಣೆ ಕೆತ್ತಿರುವುದೂ ವಿಶೇಷ.

This is Sri Kapileshwara temple under Guddekoppa village panchayat of Theerthahalli taluk. The place where this temple is located is called Dawanbailu. This is a 1200 year old temple. Hundreds of years ago, a large-scale cattle fair or trade was held in the plains around this temple. That’s why the town where this temple is located was called “Danada Bayalu”.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಇಂದು ಕಾರ್ಗಿಲ್ ವಿಜಯೋತ್ಸವ ದಿನ : ನೂರಾರು ಸೈನಿಕರ ಪ್ರಾಣ ತ್ಯಾಗಕ್ಕೊಂದು ನಮನ
July 26, 2024
11:51 PM
by: The Rural Mirror ಸುದ್ದಿಜಾಲ
ನಮ್ಮ ಪ್ರಧಾನಿಯವರು ಹೇಳಿದಂತೆ ಅಟಕ್ ನಾ, ಲಟ್ ಕಾನಾ, ಬಟ್ ಕಾನಾ ಮಾತು ನಡೆಯುತ್ತಿಲ್ಲ : ರೈತರು ಇಂತ ಕಡೆ ಪ್ರಶ್ನಿಸುವಂತಾಗಬೇಕು
July 26, 2024
11:35 PM
by: The Rural Mirror ಸುದ್ದಿಜಾಲ
ತಂದೆಗೆ ಉಡುಗೊರೆ | ಮಕ್ಕಳೆಂದರೆ ಹೀಗಿರಬೇಕು… ಇಷ್ಟು ಸಾಕು ವೃದ್ದ ತಂದೆ ತಾಯಿಯರಿಗೆ |
July 26, 2024
4:53 PM
by: The Rural Mirror ಸುದ್ದಿಜಾಲ
ಸುಡಾನ್ ದೇಶದ ರಕ್ಕಸ ಅಂತರ್ಯುದ್ಧದ ಭೀಕರ ಘಟನೆಗಳು
July 26, 2024
4:01 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror